ನಾಟ್ಯ ಜಯಂತೀಯ ನೃತ್ಯೋಲ್ಲಾಸ

ವಿ| ಲಕ್ಷ್ಮೀ ಗುರುರಾಜ…ಪ್ರಸ್ತುತಿ

Team Udayavani, Oct 18, 2019, 5:00 AM IST

f-51

ಜಯತಿ ಎಂದರೆ “ಸರ್ವದಾ ಜಯಶೀಲವಾಗುತ್ತ ಇರುವ’ಎಂಬರ್ಥ ಬಿಂಬಿಸುವ ಇದು ಈ ಮಣ್ಣಿನ ನಾಟ್ಯಪ್ರಕಾರಗಳ “ಜಯತಿ’ಯಾಗಿ ನಾಟ್ಯ ಜಯಂತೀಯ ಸಂಭ್ರಮ ಆಚರಣೆಯಾಯಿತು .

ಭರತಮುನಿ ಪ್ರಣೀತವೆಂದು ಹೇಳಲಾಗುವ ನಾಟ್ಯಶಾಸ್ತ್ರದ ಪ್ರಕಾರ ವಿಶ್ವದ ಪ್ರಥಮ ನಾಟ್ಯಪ್ರದರ್ಶನವು ಅಮೃತಮಂಥನವೆಂಬ ಶಿರೋನಾಮೆಯೊಂದಿಗೆ ದೇವೇಂದ್ರನ ವಿಜಯ ಸೂಚಕವಾಗಿ ಭಾದ್ರಪದ ಶುದ್ಧ ದ್ವಾದಶಿಯ ಧ್ವಜಮಹದ ದಿನದಂದು ನಡೆಯಿತೆನ್ನುವುದೊಂದು ಅಭಿಮತ.ಅರ್ವಾಚೀನ ದಿನಗಳಲ್ಲಿ ಭಾರತೀಯ ನಾಟ್ಯಕಲೆಯನ್ನು ಔನತ್ಯಕ್ಕೇರಿಸುವ ಯತ್ನದಲ್ಲಿ ಕಲಾವಿದರುಗಳೆಲ್ಲಾ ಆ ತಿಥಿಯನ್ನು “ನಾಟ್ಯಜಯಂತೀ’ಯನ್ನಾಗಿ ಆಚರಿಸಿಕೊಡು ಬಂದರೆನ್ನಬಹುದು. ಜಯತಿ ಎಂದರೆ “ಸರ್ವದಾ ಜಯಶೀಲವಾಗುತ್ತ ಇರುವ’ಎಂಬರ್ಥ ಬಿಂಬಿಸುವ ಇದು ಈ ಮಣ್ಣಿನ ನಾಟ್ಯಪ್ರಕಾರಗಳ “ಜಯತಿ’ಯಾಗಿ ನಾಟ್ಯಜಯಂತೀಯ ಸಂಭ್ರಮದಾಚಾರಣೆಯಾಯಿತು.

ಇಂಥದ್ದೊಂದು ಆಚರಣೆಯ ಪರಿಪಾಠವನ್ನು ಬೆಳೆಸಿಕೊಂಡು ಬಂದವರು ನೃತ್ಯನಿಕೇತನ ಉಡುಪಿಯ ವಿ| ಲಕ್ಷ್ಮೀ ಗುರುರಾಜ…. ಇತ್ತೀಚೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಾಟ್ಯಜಯಂತೀ ಮತ್ತು ನೃತ್ಯೋತ್ಸವವನ್ನು ನಡೆಸಿದರು. ಪಲಿಮಾರು ಹಿರಿಯ ಯತಿವರ್ಯರಿಂದ ಉದ್ಘಾಟನೆಗೊಂಡ ನೃತ್ಯಸಂಜೆಯ ಪ್ರಥಮಾರ್ಧದಲ್ಲಿ ಮಂಗಳೂರಿನ ಭರತನಾಟ್ಯ ಕಲಾವಿದೆ ವಿ| ಪ್ರತಿಮಾ ಶ್ರೀಧರ್‌ ನೃತ್ಯ ಪ್ರಸ್ತುತಿಗೈದರು. ಮೊದಲಿಗೆ ದಂಡಾಯುಧಪಾಣಿ ಪಿಳ್ಳೆ„ಯವರ ಖರಹರಪ್ರಿಯ ರಾಗದ ಪದವರ್ಣಂ ಅನ್ನು ಆರಿಸಿಕೊಂಡು ಅದನ್ನು ಹದವಾಗಿ ನಿಭಾಯಿಸಿದರು. ಶಿವೆಯು ತನ್ನ ದೇವನಾದ ಸದಾಶಿವನು ಯೋಗಿಯಾಗಿ ಸ್ವರ್ಣಮಂಟಪದಲ್ಲಿ ನರ್ತಿಸುವುದನ್ನು ಕಂಡು ತನ್ನ ಸಖೀಯಲ್ಲಿ ಮನದ ವಿರಹ ಬೇಗೆಯನ್ನು ಪರಿಪರಿಯಾಗಿ ಬಣ್ಣಿಸುವ ಈ ವರ್ಣದ ನೃತ್ತ-ನೃತ್ಯದಲ್ಲಿ ಕಲಾವಿದೆ ಇನ್ನೊಂದಿನಿತು ಬಣ್ಣಗಳನ್ನು ಹರಡಬಹುದಿತ್ತೇನೋ.ಅನಂತರದ ಪ್ರಸ್ತುತಿಯಾಗಿ ಸಂತ ತುಳಸೀದಾಸರ ಅಭಿನಯಪ್ರಧಾನ ರಚನೆ ಶ್ರೀ ರಾಮಚಂದ್ರ ಕೃಪಾಲು ಭಜ್ಮನ್‌…’ನ್ನು ಪ್ರತಿಮಾ ಸಾಂಗಗೊಳಿಸಿದರು. ಬಹುಕಾಲ ನೆನಪಲ್ಲುಳಿಯುವಂಥ ಹಾಡುಗಾರಿಕೆಯ ವಿ. ಸುರಾಗ್‌ ಮಾಹೆ, ಪ್ರೌಢಿಮೆ ಮೆರೆದ ಮೃದಂಗದ ವಿ. ಸುರೇಶ ಬಾಬು ಕಣ್ಣೂರು ಮತ್ತು ಕೊಳಲಿನ ವಿ.ರಾಹುಲ್‌ ಕಣ್ಣೂರು ಹಾಗೂ ನಟ್ಟುವಾಂಗದಲ್ಲಿ ಪಕ್ವತೆ ತೋರಿದ ಗುರು ವಿ| ಮೋಹನ ಕುಮಾರ್‌ ಉಳ್ಳಾಲ ಉತ್ತಮ ಹಿನ್ನೆಲೆಯ ತಂಡಕ್ಕೆ ನಿದರ್ಶನವಾದರು.

ಉತ್ತರಾರ್ಧದಲ್ಲಿ ಉಡುಪಿಯವರೆ ಆದ ವಿ| ಶ್ರೀವಿದ್ಯಾ ಸಂದೇಶ್‌ ಆರಂಭದಲ್ಲಿ ಆಯ್ದುಕೊಂಡದ್ದು ವಿ.ಲಲಿತಾ ಶಿವಕುಮಾರ್‌ ಅವರ ಕೃತಿ ಕಪಾಲಿನಿ.ಕಪಾಲಿ ರಾಗದ ಈ ಪ್ರಸ್ತುತಿಯು ಶಂಕರನನ್ನು ಕಪಾಲಧರನನ್ನಾಗಿ ಬಿಂಬಿಸಿ ಆತನನ್ನು ಬಹುನಾಮ -ರೂಪಗಳಿಂದ ಕೊಂಡಾಡುತ್ತದೆ .ಇದನ್ನು ನಿರ್ವಹಿಸಿದ ಶ್ರೀವಿದ್ಯಾ ಅನಂತರ ಕೈಗೆತ್ತಿಕೊಂಡದ್ದು ವಾದಿರಾಜ ವಿರಚಿತ ಜಯತು ಭಕೊ¤àದ್ಧಾರವೆನ್ನುವ ಸಂಚಾರಿಪ್ರಧಾನ ನೃತ್ಯವನ್ನು. ರಾಮಾಯಣದ ಎರಡು ಪ್ರಸಂಗಗಳನ್ನು, ಅದರಲ್ಲೂ$ ವಿಶೇಷವಾಗಿ ಶಬರಿಯ ಪಾತ್ರದೊಳಗೆ ಸಂಚಾರಿಯ ಮೂಲಕ ಸಂಚರಿಸಿದ್ದು ಬಹುತೇಕವಾಗಿ ಯಶಸ್ವಿಯೆನಿಸಿತು. ಗುರುಗಳಾದ ವಿ| ಲಕ್ಷೀ ಗುರುರಾಜ್‌ ಅವರ ಸಮರ್ಥ ನಟ್ಟುವಾಂಗ ವಿ| ಚೈತನ್ಯ ಕೃಷ್ಣ ಅವರ ಮೃದಂಗ , ವಿ| ಶ್ರೀಧರ್‌ ಆಚಾರ್‌ ಅವರ ಹದವರಿತ ಕೊಳಲು ಮತ್ತು ವಿ| ಸಂಗೀತ ಬಾಲಚಂದ್ರರ ಸಲಿಲ ಶಾರೀರ ಕಲಾವಿದೆಗೆ ಉತ್ತಮ ಸಾಥ್‌ ಒದಗಿಸಿತು. ಶ್ರೀ ಹೃಷಿಕೇಶ ಪೀಠ ಪಲಿಮಾರು ಮಠ , ಶ್ರೀ ಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಭಾಗಿತ್ವದಲ್ಲಿ ನಾಟ್ಯಜಯಂತೀಯ ನೃತ್ಯಸಂಧ್ಯೆ ಮೂಡಿಬಂತು.

ಸುಧಾ ಭಟ್‌

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.