ಕಣ್ಮನ ಸೆಳೆದ ಕನಕ ಮೃಗ

ಗೀತ ರೂಪಕವಾದ ಕವನ

Team Udayavani, May 3, 2019, 6:03 AM IST

Kanakamruga-2

ಡಾ| ಉಪ್ಪಂಗಳ ರಾಮ ಭಟ್‌ ವಿರಚಿತ “ಹೊಂಗಿರಣ’ ದೀರ್ಘ‌ ಕವನವನ್ನು “ಕನಕ ಮೃಗ’ ಹೆಸರಿನಲ್ಲಿ ಉಡುಪಿಯ ನೃತ್ಯ ನಿಕೇತನದವರು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಗೀತ ರೂಪಕವಾಗಿ ಪ್ರದರ್ಶಿಸಿದರು.

ಶ್ರೀ ರಾಮನ ವನವಾಸದ ಕಾಲದಲ್ಲಿ ಪಂಚವಟಿಯಲ್ಲಿ ರಾವಣನು ಸೀತೆಯನ್ನು ಅಪಹರಿಸಲು ಮಾರೀಚ ಚಿನ್ನದ ಜಿಂಕೆಯಾಗಿ ಸೀತೆಯ ಮನಸೆಳೆದು ರಾಮ ಲಕ್ಷ್ಮಣರು ಹೊರಹೋಗುವಂತೆ ಮಾಡಿ ತನ್ನ ಕಾರ್ಯಸಾಧನೆ ಮಾಡಿಕೊಂಡ ಕತೆಯನ್ನೊಳಗೊಂಡ “ಕನಕ ಮೃಗ’ ಲಕ್ಷ್ಮೀಗುರುರಾಜ ಅವರ ನಿರ್ದೇಶನದಲ್ಲಿ ಮೂಡಿಬಂದು ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲಿನ ಪ್ರಕೃತಿ ವರ್ಣನೆ ಸ್ಪಷ್ಟ ಪಡಿಸಲು ಸಮೂಹ ನೃತ್ಯದಲ್ಲಿ ಸುಪ್ರಿಯಾ, ಸುಪ್ರೀತಾ, ಅನನ್ಯಾ, ಸುಶ್ಮಿತಾ, ನಿಹಾರಿಕಾಹಾಗೂ ಜಿಂಕೆಗಳಾಗಿ ಮೇದಿನಿ, ಪ್ರತಿಮಾ ಭರವಸೆ ಮೂಡಿಸಿದರು. ಶ್ರೀರಾಮನಾಗಿ ಲಕ್ಷ್ಮೀಗುರುರಾಜ್‌ ಎಲ್ಲಾ ದೃಶ್ಯಗಳಲ್ಲೂ ತಮ್ಮ ಪ್ರೌಢಿಮೆಯನ್ನು ಮನದಟ್ಟು ಮಾಡಿಸಿದರು. ಸೀತೆಯಾಗಿ ವಿ|ಮಿಥಿಲಾ ಉಪಾಧ್ಯ ಜಿಂಕೆಗೆ ಆಕರ್ಷಿತಳಾಗುವಾಗ ಹಾಗೂ ಲಕ್ಷ್ಮಣನನ್ನು ಅಪಾಯ ತಿಳಿದುಕೊಳ್ಳಲು ಕಳುಹಿಸುವಾಗ ವಿಶೇಷ ಮೆಚ್ಚುಗೆ ಪಡೆದರು. ಮಯೂರಿ ಗುರುರಾಜ್‌ ಲಕ್ಷ್ಮಣನಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಬೇಬಿ ಶ್ರೀಲಕ್ಷ್ಮಿಯ ಮಾಯಾ ಜಿಂಕೆ ಲವಲವಲವಿಕೆಯಿಂದ ನೆನಪಿನಲ್ಲುಳಿಯುವಂತೆ ಮಾಡಿತು. ವಿ| ವಿದ್ಯಾ ಸಂದೇಶ್‌ ಅವರ ರಾವಣ ರೂಪಕಕ್ಕೆ ಹೊಸ ರೂಪ ನೀಡಿತಲ್ಲದೆ ಮಾಯಾ ರಾವಣನಾಗಿಯೂ ಅವರೇ ಅಭಿನಯಿಸಿ ಸೀತೆಯನ್ನು ಅಪಹರಿಸುವಲ್ಲಿ ಪ್ರಭಾವ ಬೀರಿದರು.

ಸಂಗೀತಾ ಬಾಲಚಂದ್ರರವರ ಹಾಡುಗಾರಿಕೆ, ಲಕ್ಷ್ಮೀಗುರುರಾಜ್‌, ಶ್ರೀವಿದ್ಯಾ ಸಂದೇಶ್‌ರವರ ನಟುವಾಂಗಂ, ಬಾಲಚಂದ್ರ ಭಾಗವತರ ಮೃದಂಗ, ಶ್ರೀಧರ ಆಚಾರ್ಯರ ವಯೋಲಿನ್‌, ಮುರಳೀಧರ ಕೆ. ಅವರ ಕೊಳಲು “ಕನಕ ಮೃಗ’ ಮರೆಯದಂತೆ ಮಾಡಲು ಕಾರಣವಾಗಿತ್ತು. ಕೇವಲ ಒಂದು ತಾಸಿನ ಕಡಿಮೆ ಅವಧಿಯ ಈ ಗೀತರೂಪಕವು ಹಿಮ್ಮೇಳದವರ ಹಾಗೂ ಕಲಾವಿದೆಯರ ಶ್ರಮದಿಂದ ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡಿತು.

– ಬಾ. ಸಾಮಗ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.