ದೇಶಾಭಿಮಾನ ಸಾರುವ ಮಾನಸಗಂಗಾ

ಪೆರ್ಡೂರು ಮೇಳದ ಪ್ರಸಂಗ

Team Udayavani, Mar 20, 2020, 10:26 AM IST

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಕ್ಕಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡುವ ಕಥಾನಾಯಕಿ, ಭ್ರಾತೃಪ್ರೇಮದ ಸಾಕಾರ ಮೂರ್ತಿಯಾದ ಸಹ ಕಥಾನಾಯಕ , ಮುಗ್ಧನಾದರೂ ದೇಶಪ್ರೇಮಕ್ಕೆ ಬದ್ಧನಾದ ಯುವಕ , ದೇಶದೊಳಗಿದ್ದೇ ದೇಶದ್ರೋಹದಲ್ಲಿ ನಿರತನಾದ ಮಂತ್ರಿ ಹೀಗೆ ಮಾನಸಗಂಗಾ
ಕುತೂಹಲ ಮೂಡಿಸುತ್ತದೆ .

ಪ್ರೊ| ಪವನ್‌ ಕಿರಣಕೆರೆಯವರ ನೂತನ ಪ್ರಸಂಗ ಮಾನಸಗಂಗಾ ಈ ವರ್ಷದ ಪೆರ್ಡೂರು ಮೇಳದವರ ತಿರುಗಾಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಸಫ‌ಲವಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ . ಪ್ರೇಮ ವೈಫ‌ಲ್ಯಗೊಂಡ ಹತಾಶಾ ಭಾವನೆಯಿಂದ ಸ್ತ್ರೀ ದ್ವೇಷಿಯಾಗಿ ಪರಿವರ್ತನೆಗೊಂಡ ಕಥಾನಾಯಕ , ದೇಶಕ್ಕಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡುವ ಕಥಾನಾಯಕಿ , ಭ್ರಾತೃಪ್ರೇಮದ ಸಾಕಾರ ಮೂರ್ತಿಯಾದ ಸಹ ಕಥಾನಾಯಕ , ಮುಗ್ಧನಾದರೂ ದೇಶಪ್ರೇಮಕ್ಕೆ ಬದ್ಧನಾದ ಯುವಕ , ದೇಶದೊಳಗಿದ್ದೇ ದೇಶದ್ರೋಹದಲ್ಲಿ ನಿರತನಾದ ಮಂತ್ರಿ , ಆ ಮಂತ್ರಿಯ ತಂತ್ರ ಅರಿಯದೆ ಆತನ ಹೆಜ್ಜೆಗೆ ತಾಳ ಹಾಕಿ ದುರಂತಕ್ಕೆ ಕಾರಣಳಾಗುವ ಮುಗೆœ ಮಹಾರಾಣಿಯರ ಸುತ್ತ ಹೆಣೆದ ಮಾನಸಗಂಗಾ ಕುತೂಹಲ ಮೂಡಿಸುತ್ತದೆ .

ಗಂಗೋತ್ರಿ ಎಂಬ ದೇಶಕ್ಕೂ ವಜ್ರಗಿರಿಗೂ ಪೂರ್ವದ್ವೇಷ ಬೆಳೆದು ಗಂಗೋತ್ರಿಯ ಅರಸನ ಕೊನೆಯಾದಾಗ ಆತನ ಪತ್ನಿ ಭಾಗೀರಥಿ ದೇವಿಯು ಮಹಾರಾಣಿಯಾಗುತ್ತಾಳೆ .ಮಹಾರಾಣಿಯ ಅಣ್ಣನಾದ ಭುಜಂಗರಾಯನು ರಾಜ್ಯ ಕಬಳಿಸಲು ಸಮಯ ಸಾಧಿಸುತ್ತಾನೆ . ಗಂಗೋತ್ರಿಯ ಗಡಿಭಾಗದಲ್ಲಿರುವ ಗೋಮಾಂಸ ಭಕ್ಷಣೆ , ಭಯೋತ್ಪಾದನೆ ಮುಂತಾದ ಅಸುರಿ ಪ್ರವೃತ್ತಿಯನ್ನೇ ಹೊಂದಿರುವ ರಕ್ತವರ್ಣಿ ಜನಾಂಗದ ತಾರಾಕ್ಷ ಎಂಬ ದುಷ್ಟ ವಜ್ರಗಿರಿಯ ರಾಜಕುಮಾರಿ ಶರಾವತಿಯನ್ನು ಬಲಾತ್ಕರಿಸಲು ಬಂದಾಗ ಅವಳು ಗಂಗಾನದಿಗೆ ಹಾರುತ್ತಾಳೆ .

ಶರಾವತಿಯನ್ನು ರಕ್ಷಿಸಿದ ಯಕ್ಷಗಾನ ಮೇಳದ ಯಜಮಾನ ಚಿಕ್ಕನು ಅವಳಿಗೆ ಹಂಸಿನಿ ಎಂಬ ಹೆಸರಿಟ್ಟು ಸಾಕುತ್ತಾನೆ . ವಿದ್ಯಾಭ್ಯಾಸ ಮುಗಿಸಿ ಬಂದ ಭಾಗೀರಥಿಯ ಮಗ ಕಂಠೀರವ ಹಾಗೂ ಸಾಕುಮಗ ಶರ್ವ ಹಂಸಿನಿಯನ್ನು ನೋಡುತ್ತಾರೆ . ಕಂಠೀರವನು ಹಂಸಿನಿಯನ್ನು ವಿವಾಹವಾಗಬೇಕೆಂದು ಆಶಿಸಿದರೂ ಅವಳು ಶರ್ವನಲ್ಲಿ ಅನುರಕ್ತಳಾದಾಗ ಶರ್ವನೇ ಅವಳಿಗೆ ಕಂಠೀರವನನ್ನೇ ವಿವಾಹವಾಗಬೇಕೆಂದು ತಿಳಿ ಹೇಳಿ ಒಪ್ಪಿಸುತ್ತಾನೆ . ತಾನು ಬ್ರಹ್ಮಚಾರಿ ಎಂದು ಎಲ್ಲರನ್ನೂ ನಂಬಿಸಿದ ಭುಜಂಗರಾಯನು , ಗುಟ್ಟಾಗಿ ಪಡೆದ ತನ್ನ ಮಕ್ಕಳಾದ ಪನ್ನಗಭೂಷಣ ಹಾಗೂ ಪ್ರಿಯದರ್ಶಿನಿಯರನ್ನು ಕುಶಸ್ಥಲಿಯ ಅರಸು ಮಕ್ಕಳು ಎಂದೂ , ಪ್ರಿಯದರ್ಶಿನಿಯನ್ನು ಕಂಠೀರವನು ವಿವಾಹವಾದರೆ , ರಾಜ್ಯ ಸುಭದ್ರವಾಗುತ್ತದೆ ಎಂದೂ ಭಾಗೀರಥಿಗೆ ಸೂಚಿಸುತ್ತಾನೆ . ಕುತಂತ್ರಕ್ಕೆ ಬಲಿಯಾದ ಭಾಗೀರಥಿಯು ಹಂಸಿನಿಗೆ ಕಂಠೀರವನನ್ನು ವಿವಾಹವಾಗಬಾರದು ಎಂದು ಕೇಳಿಕೊಂಡಾಗ ಹಂಸಿನಿಯು ತಾನು ಬೇರೊಬ್ಬರನ್ನು ಪ್ರೇಮಿಸಿದ್ದೇನೆ ಎಂದು ಸುಳ್ಳು ಹೇಳಿ ಕಂಠೀರವನನ್ನು ತೊರೆದು , ದೇಶದ ಗಡಿಭಾಗದಲ್ಲಿ ನೆಲೆಸುತ್ತಾಳೆ  ತನಗೆ ಮೋಸ ಮಾಡಿದ ಹಂಸಿನಿಯ ಮೇಲಿನ ದ್ವೇಷದಿಂದಾಗಿ ಕಂಠೀರವನು ಸ್ತ್ರೀ ದ್ವೇಷಿಯಾಗಿ ಪರಿವರ್ತನೆಗೊಳ್ಳುತ್ತಾನೆ . ಗಡಿ ಪ್ರದೇಶದಲ್ಲಿ ಹಂಸಿನಿಯನ್ನು ಕಂಡ ಶರ್ವನು ಹಂಸಿನಿಯನ್ನು ಕರೆ ತಂದಾಗ , ಭುಜಂಗಯ್ಯನ ಕುತಂತ್ರ ಅರಿತ ಭಾಗೀರಥಿಯು ಹಂಸಿನಿಯೇ ಕಂಠೀರವನನ್ನು ವರಿಸಬೇಕೆಂದರೂ , ಕಂಠೀರವನು ಹಂಸಿನಿಯ ಮೇಲೆ ಸೇಡು ತೀರಿಸುವ ದ್ವೇಷದಲ್ಲಿ ತಾನು ಪ್ರಿಯದರ್ಶಿನಿಯನ್ನು ವಿವಾಹವಾಗುವುದಾಗಿ ಹೇಳಿ ನಿರಾಕರಿಸುತ್ತಾನೆ . ತಾರಾಕ್ಷನ ಸಂಚಿನಿಂದ , ಹಂಸಿನಿಯಿಂದಲೇ ಗಂಗಾಭವಾನಿ ದೇವಸ್ಥಾನ ಧ್ವಂಸ ಮಾಡಲು ಸಂಚು ಹೂಡಿದರೂ , ಹಂಸಿನಿಯ ಧರ್ಮಬುದ್ಧಿ ಜಾಗೃತಗೊಂಡು , ತಾರಾಕ್ಷನ ಬೆಂಬಲಿಗರನ್ನೇ ಸುಡುತ್ತಾಳೆ . ಹಂಸಿನಿಯ ತ್ಯಾಗ ಗುಣ ಅರಿತು ಕಂಠೀರವನು ವಿವಾಹವಾಗಿ ಸುಖಾಂತವಾಗುತ್ತದೆ.

ಖಳನಾಯಕ ಭುಜಂಗರಾಯನಾಗಿ ಥಂಡಿಮನೆ ಶ್ರೀಪಾದ ಭಟ್ಟರು ಚೆನ್ನಾಗಿ ನಿರ್ವಹಿಸಿದ್ದಾರೆ . ಕಂಠೀರವನಾಗಿ ವಿದ್ಯಾಧರ ಜಲವಳ್ಳಿಯವರು ಇಡೀ ಪ್ರಸಂಗದಲ್ಲಿ ಎದ್ದು ಕಾಣುತ್ತಾರೆ . .ಶರ್ವನಾಗಿ ಕಿರಾಡಿ ಪ್ರಕಾಶ ಮೊಗವೀರರದ್ದು ನೆನಪಲ್ಲಿ ಉಳಿಯುವ ನಿರ್ವಹಣೆ . ಹಂಸಿನಿಗೆ ಹಿತೋಪದೇಶ ನೀಡುವ ಸಂದರ್ಭದಲ್ಲಿ ಮೂರಕ್ಷರದ ಪದಗಳನ್ನು ನಿರರ್ಗಳವಾಗಿ ಪೋಣಿಸಿ ಹೇಳಿದ ವಿಧಾನ ಮನ ಗೆದ್ದಿತು . ಹಂಸಿನಿಯಾಗಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು ಉತ್ತಮ ನಾಟ್ಯ , ಅಭಿನಯ , ಮಾತುಗಾರಿಕೆಯಿಂದ ಗಮನ ಸೆಳೆದರು .ಪನ್ನಗಭೂಷಣನಾಗಿ ಕಾರ್ತಿಕ ಚಿಟ್ಟಾಣಿಯವರು ತಾನು ಮುಗ್ಧನಾದರೂ ಗುಣಗಳಿಂದ ತಾನು ಪ್ರಬುದ್ಧ ಎಂಬ ಅಂಶವನ್ನು ಚೆನ್ನಾಗಿ ನಿರೂಪಿಸಿದರು . ಮಹಾರಾಣಿ ಭಾಗೀರಥಿಯಾಗಿ ವಿಜಯ ಗಾಣಿಗ ಬೀಜಮಕ್ಕಿಯವರು ಪಾತ್ರದ ಘನತೆ ಅರಿತು ನಿರ್ವಹಿಸಿದರು . ಹಾಸ್ಯ ಪಾತ್ರಗಳಲ್ಲಿ ರಮೇಶ್‌ ಭಂಡಾರಿ , ಪುರಂದರ ಮೂಡ್ಕಣಿ , ರವೀಂದ್ರ ದೇವಾಡಿಗರು ಹಾಸ್ಯವು ಅಪಹಾಸ್ಯವಾಗಕೂಡದು ಎಂಬ ಕಾಳಜಿಯೊಂದಿಗೆ ಸೃಜನಶೀಲ ಹಾಸ್ಯಕ್ಕೆ ಒತ್ತು ಕೊಟ್ಟದ್ದು ಕಂಡು ಬಂತು . ಉಳಿದಂತೆ ಜನಾರ್ದನ ಗುಡಿಗಾರ , ತೊಂಬಟ್ಟು ವಿಶ್ವನಾಥ ಆಚಾರ್ಯ , ಅಣ್ಣಪ್ಪ ಗೌಡ ಮಾಗೋಡು , ನಾಗರಾಜ ದೇವಲ್ಕುಂದ , ನಾಗರಾಜ ಭಟ್‌ ಕುಂಕಿಪಾಲು , ಸನ್ಮಯ , ಪ್ರಣವ್‌ , ವಿನಾಯಕ ಗುಂಡಬಾಳ ಸಹಿತ ಸರ್ವ ಕಲಾವಿದರ ಪ್ರಯತ್ನವೂ ಪ್ರಸಂಗ ಯಶಸ್ವಿಯಾಗಲು ಕಾರಣವಾಯಿತು . ಪೂರ್ವಾರ್ಧದ ಭಾಗವತಿಕೆಯಲ್ಲಿ ರತ್ನಾಕರ ಗೌಡ , ಪ್ರಸನ್ನ ಭಟ್‌ ಬಾಳ್ಕಲ್‌ , ಚೆಂಡೆ – ಮದ್ದಲೆಯಲ್ಲಿ ಸುಜನ್‌ ಕುಮಾರ್‌ , ಶಶಿಕುಮಾರ್‌ ಆಚಾರ್ಯ ಉತ್ತಮ ಪ್ರಸ್ತುತಿ ನೀಡಿದರು .ಉತ್ತರಾರ್ಧದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯರ ಹಾಡುಗಳು ಮುದ ನೀಡಿತು .ಚೆಂಡೆ – ಮದ್ದಲೆಯಲ್ಲಿ ಸುನಿಲ್‌ ಭಂಡಾರಿ , ರವಿ ಕಾಡೂರು ಸಹಕರಿಸಿದರು

ಎಂ .ಶಾಂತರಾಮ ಕುಡ್ವ

ಟಾಪ್ ನ್ಯೂಸ್

Mumbai talent Prachi Sharma made her Kannada film debut with “Redrum” film

ಮುಂಬೈ ಬೆಡಗಿಯ ಕನ್ನಡ ಎಂಟ್ರಿ; ‘ರೆಡ್ರಮ್’ನಲ್ಲಿ ಬೋಲ್ಡ್ ಪ್ರಾಚಿ

Higher price fixed for buffalo milk by Kalaburgi-Yadagiri milk union

ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದಿಂದ ಎಮ್ಮೆ ಹಾಲಿಗೆ ಹೆಚ್ಚಿನ ದರ ನಿಗದಿ

tejasvi surya

ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಕಾನೂನು ಸಹಾಯವಾಣಿ: ತೇಜಸ್ವಿ ಸೂರ್ಯ

Saroornagar: ಪ್ರೇಯಸಿಯನ್ನು ಕೊಂದು ಚರಂಡಿಗೆ ಎಸೆದ ದೇವಸ್ಥಾನದ ಅರ್ಚಕ!

Saroornagar: ಪ್ರೇಯಸಿಯನ್ನು ಕೊಂದು ದೇವಸ್ಥಾನದ ಬಳಿ ಚರಂಡಿಗೆ ಎಸೆದ ಅರ್ಚಕ!

Partygate case: ಸಂಸತ್‌ ಸ್ಥಾನಕ್ಕೂ ರಾಜೀನಾಮೆ ನೀಡಿದ ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್

Partygate case: ಸಂಸತ್‌ ಸ್ಥಾನಕ್ಕೂ ರಾಜೀನಾಮೆ ನೀಡಿದ ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್

4 children found alive in Colombian Amazon rain forest

ವಿಮಾನ ಅಪಘಾತದಲ್ಲಿ ನಾಪತ್ತೆ: 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ 4 ಮಕ್ಕಳು

Balasore Tragedy; ಭೀಕರ ರೈಲ್ವೆ ದುರಂತದಲ್ಲಿ ಶವಾಗಾರವಾಗಿದ್ದ ಶಾಲೆ ನೆಲಸಮ

Balasore Tragedy; ಭೀಕರ ರೈಲ್ವೆ ದುರಂತದಲ್ಲಿ ಶವಾಗಾರವಾಗಿದ್ದ ಶಾಲೆ ನೆಲಸಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

MUST WATCH

udayavani youtube

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್‌ ಘೀ ರೋಸ್ಟ್‌

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

ಹೊಸ ಸೇರ್ಪಡೆ

Mumbai talent Prachi Sharma made her Kannada film debut with “Redrum” film

ಮುಂಬೈ ಬೆಡಗಿಯ ಕನ್ನಡ ಎಂಟ್ರಿ; ‘ರೆಡ್ರಮ್’ನಲ್ಲಿ ಬೋಲ್ಡ್ ಪ್ರಾಚಿ

Higher price fixed for buffalo milk by Kalaburgi-Yadagiri milk union

ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದಿಂದ ಎಮ್ಮೆ ಹಾಲಿಗೆ ಹೆಚ್ಚಿನ ದರ ನಿಗದಿ

tejasvi surya

ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಕಾನೂನು ಸಹಾಯವಾಣಿ: ತೇಜಸ್ವಿ ಸೂರ್ಯ

Saroornagar: ಪ್ರೇಯಸಿಯನ್ನು ಕೊಂದು ಚರಂಡಿಗೆ ಎಸೆದ ದೇವಸ್ಥಾನದ ಅರ್ಚಕ!

Saroornagar: ಪ್ರೇಯಸಿಯನ್ನು ಕೊಂದು ದೇವಸ್ಥಾನದ ಬಳಿ ಚರಂಡಿಗೆ ಎಸೆದ ಅರ್ಚಕ!

6-ifb-harsha-showrrom

Udupi Harsha Showroom: ‘ಐಎಫ್ ಬಿ ಡೀಪ್‌ ಕ್ಲೀನ್‌’ ವಾಷಿಂಗ್‌ ಮೆಷಿನ್‌ ಬಿಡುಗಡೆ