ಬಡವನ ಭಾಗ್ಯ ಹರಿಕಥಾ ಕಲಾಕ್ಷೇಪ


Team Udayavani, Mar 20, 2020, 10:15 AM IST

ಬಡವನ ಭಾಗ್ಯ ಹರಿಕಥಾ ಕಲಾಕ್ಷೇಪ

ಶ್ರೀ ಕೃಷ್ಣನ ಬಾಲ್ಯದ ಗೆಳೆಯ ಸುಧಾಮನ ಕಥೆಯಾಧಾರಿತ “ಬಡವನ ಭಾಗ್ಯ’ ಎಂಬ ಹರಿಕಥಾ ಪ್ರಸಂಗ ಕಾರ್ಕಳದ ಹರಿಕಥಾ ಕೀರ್ತನಾಗ್ರೇಸರ ವೈ. ಅನಂತಪದ್ಮನಾಭ ಭಟ್‌ರವರಿಂದ ಯಶಸ್ವಿಯಾಗಿ ಸಾಕಾರಗೊಂಡಿತು.

ಬಡತನದಿಂದ ಬೆಂದು ಬೆಂಡಾಗಿದ್ದ ಶ್ರೀಕೃಷ್ಣನ ಬಾಲ್ಯ ಸ್ನೇಹಿತ ಸುಧಾಮ ಪತ್ನಿಯು ಕೃಷ್ಣನಲ್ಲಿ ಸಹಾಯ ಯಾಚಿಸುವಂತೆ ಮಾಡಿದ ಒತ್ತಾಸೆಯ ಮೇರೆಗೆ ಕಷ್ಟದಿಂದ ಸಂಪಾದಿಸಿದ ಒಂದು ಹಿಡಿ ಅವಲಕ್ಕಿಯನ್ನು ಹರಕು ಬಟ್ಟೆಯಲ್ಲಿ ಕಟ್ಟಿಕೊಂಡು ದ್ವಾರಕೆಗೆ ಬರುತ್ತಾನೆ.ಅರಮನೆಯ ದ್ವಾರದಲ್ಲಿ ದ್ವಾರಪಾಲಕರಿಂದ ದಬ್ಬಿಸಿ ಹೊರಹಾಕಲ್ಪಟ್ಟ ಸುಧಾಮನ ಆರ್ತನಾದ ಕೃಷ್ಣನಿಗೆ ತಲುಪುತ್ತದೆ.ಕೃಷ್ಣನ ಆಜ್ಞಾ ಪ್ರಕಾರ ಸೇವಕರು ಸುಧಾಮನನ್ನು ಚಿನ್ನದ ಪಲ್ಲಕಿಯಲ್ಲಿ ಹೊತ್ತು ತಂದ ಸಂದರ್ಭ,ಕೃಷ್ಣನ ಅರಮನೆಯ ವೈಭವ,ರಾಜ ಸಭೆಯನ್ನು ಕಂಡು ಬೆರಗಾದ ಸುಧಾಮ ತನ್ನನ್ನು ಗುರುತಿಸಿ ಸಿಂಹಾಸನದಿಂದ ಕೆಳಗಿಳಿದು ಓಡೋಡಿ ಬಂದ ಶ್ರೀಕೃಷ್ಣನನ್ನು ಅಪ್ಪಿ ಆಲಿಂಗಿಸುತ್ತಾನೆ. ಶ್ರೀಕೃಷ್ಣನ ಪ್ರೀತಿಯಲ್ಲಿ ಕಳೆದ ಸುಧಾಮ ಬಂದ ಉದ್ದೇಶವನ್ನು ಮರೆತು ವಾಪಾಸಾಗುತ್ತಾನೆ.

ಆದರೆ ತನ್ನ ಗುಡಿಸಲ್ಲಿದ್ದ ಸ್ಥಳದಲ್ಲಿ ಅರಮನೆ,ಮೈ ತುಂಬಾ ಆಭರಣಗಳಿಂದ ಕಂಗೊಳಿಸಿ ರೇಷ್ಮೆ ಸೀರೆಯನ್ನುಟ್ಟು ತನ್ನನ್ನು ಸ್ವಾಗತಿಸಿದ ಪತ್ನಿ,ಸಂತುಷ್ಟಿ, ಸಂತೃಪ್ತಿ ಯಿಂದ ಕುಣಿದಾಡುತ್ತಿರುವ ತನ್ನ ಮಕ್ಕಳನ್ನು ನೋಡಿದಾಗ ಇವೆಲ್ಲ ಶ್ರೀಕೃಷ್ಣ ಲೀಲೆ ಎಂದು ಸ್ಪಷ್ಟವಾಗಿ ಸುಧಾಮನಿಗೆ ಅರಿವಾಗುತ್ತದೆ. ನಿಷ್ಕಲ್ಮಶ ಸ್ನೇಹಕ್ಕೆ ಶ್ರೀಕೃಷ್ಣ ಸುಧಾಮರು ಮಾದರಿ ಎಂಬುದು ಈ ಕಥಾನಕದ ತಾತ್ಪರ್ಯ.

ಮನೋಜ್ಞವಾಗಿ ಕುಚೇಲನ ಕಥೆಯನ್ನು ಸಾದರ ಪಡಿಸಿದ ಹರಿದಾಸ ವೈ. ಅನಂತಪದ್ಮನಾಭ ಭಟ್ಟರ ನಿರೂಪಣೆ ಶ್ಲಾಘನೀಯ.ಶ್ರೀಕೃಷ್ಣನು ಅವಲಕ್ಕಿಯನ್ನು ತಾನೂ ತಿಂದದ್ದಲ್ಲದೆ ಅಲ್ಲಿದ್ದ ಇತರರಿಗೂ ನೀಡಿದ್ದು,ಈ ಸಹಕಾರಿ ತತ್ವ ನಮ್ಮ ಪುರಾಣ ಕಾಲದಲ್ಲೇ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ.

ಸಮಪಾಲು ಸಮಬಾಳ್ವೆಯ ಚಿಂತನೆ ಪರಮಾತ್ಮನಿಂದಲೇ ನಮಗೆ ಮಾದರಿಯಾದದ್ದು ಎನ್ನುವ ಹರಿದಾಸರ ನುಡಿ ಮನಮುಟ್ಟಿಸುವ ಚಿಂತನೆಯಾದದ್ದು ಪ್ರಸಂಶನೀಯ.

ಎಂ.ರಾಘವೇಂದ್ರ ಭಂಡಾರ್ಕರ್‌

ಟಾಪ್ ನ್ಯೂಸ್

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.