ಮಕ್ಕಳು ಪ್ರದರ್ಶಿಸಿದ ಯಕ್ಷಗಾನ ಸ್ತುತಿ ಪದ್ಯ- ಬಯಲಾಟ


Team Udayavani, Jan 10, 2020, 6:50 PM IST

10

ಕೈಕಂಬದ ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕಧಿಮಿ ತಂಡವು ದ್ವಿತೀಯ ವಸಂತದ ಸಂಭ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಸ್ತುತಿ ಪದ್ಯ, ಭಕ್ತಿ ಕುಸುಮ, ಕುಣಿತ ಭಜನೆ ಮತ್ತು ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಪ್ರಾರಂಭದಲ್ಲಿ ಭಾಗವತಿಕೆ ಕಲಿಯುತ್ತಿರುವ 12 ವಿದ್ಯಾರ್ಥಿಗಳು ಹಾಡಿದ ಪರಂಪರೆಯ ಪೂರ್ವರಂಗದ ಹಾಡುಗಳು ಮುಕ್ತ ಪ್ರಶಂಸೆಗೆ ಪಾತ್ರವಾದವು. ವಿದ್ಯಾರ್ಥಿಗಳು ಅಂದು ತಮ್ಮ ಪ್ರಥಮ ರಂಗಪ್ರವೇಶದಲ್ಲೇ ಪೂರ್ವರಂಗದ ಹಾಡುಗಳನ್ನು ಸುಶ್ರಾವ್ಯವಾಗಿ ಸರದಿ ಪ್ರಕಾರ ಹಾಡಿ ಬಾಲಗೋಪಾಲ ವೇಷಗಳನ್ನು ರಂಗದಲ್ಲಿ ಕುಣಿಸಿದ ರೀತಿ ಅಚ್ಚರಿಯನ್ನುಂಟು ಮಾಡಿತು.

ಇದಾದ ಬಳಿಕ ಪುಟಾಣಿ, ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ “ಕುಮಾರ ಸಂಭವ- ಶ್ವೇತ ಕುಮಾರ – ರಕ್ತರಾತ್ರಿ’ ಬಯಲಾಟ ನಡೆಯಿತು. ಮೊದಲ ಬಾರಿ ಗೆಜ್ಜೆ ಕಟ್ಟಿ ರಂಗವೇರಿದ ವಿದ್ಯಾರ್ಥಿಗಳ ಹಾಗೂ ಅನುಭವವಿದ್ದ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಪ್ರದರ್ಶನಗೊಂಡ ಈ ತ್ರಿವಳಿ ಪ್ರಸಂಗಗಳು ಹೃನ್ಮನ ತಣಿಸುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲಿ ನಡೆದ ಕುಮಾರ ಸಂಭವ ಪ್ರಸಂಗದಲ್ಲಿ ಆರು ಬಲಗಳೊಂದಿಗೆ ದೇವೇಂದ್ರನ ಪರಂಪರೆಯ ತೆರೆಮರೆ ಕುಣಿತದ ಒಡ್ಡೋಲಗವು “ಓ ದೇವ ದೇವಾ …’ ಪದ್ಯದಲ್ಲಿ ಸೊಗಸಾಗಿ ಮೂಡಿಬಂತು.

ಉತ್ತರಾರ್ಧದಲ್ಲಿ ಅಸುರ ಹಾಗೂ ದೇವೇಂದ್ರನ ಬಲಗಳ ಪಾತ್ರ ಮಾಡಿದ ಪುಟ್ಟ ಮಕ್ಕಳ ಸುಂದರ ವೇಷ, ಕುಣಿತ, ದಿಗಿಣ, ಸಂಭಾಷಣೆ ಮುದ ನೀಡಿತು. ಶಿವ-ಪಾರ್ವತಿಯರ ನಾಟ್ಯ ಕರತಾಡನಕ್ಕೆ ಪಾತ್ರವಾಯಿತು. ತಾರಕಾಸುರ, ಕಾರ್ತಿಕೇಯ ಹಾಗೂ ಪೋಷಕ ಪಾತ್ರಗಳ ನಿರ್ವಹಣೆಯೂ ಅಚ್ಚುಕಟ್ಟಾಗಿತ್ತು.

ಕೀರಿಕ್ಕಾಡು ವಿಷ್ಣುಭಟ್‌ ರಚಿಸಿದ ಶ್ವೇತಕುಮಾರ ಪ್ರಸಂಗದಲ್ಲಿ ಶ್ವೇತಕುಮಾರ ಹಾಗೂ ತ್ರೆçಲೋಕ ಸುಂದರಿ ಪಾತ್ರಧಾರಿಗಳ ವೈವಿಧ್ಯಮಯ ನೃತ್ಯ, ಅಭಿನಯ, ಮಾತುಗಾರಿಕೆ ಮೆಚ್ಚುಗೆಗಳಿಸಿತು. ದುರ್ಜಯ, ಲೋಹಿತನೇತ್ರ, ಮಂತ್ರಿ, ಚಿತಕೇತ, ಶಿವೆ, ರಂಭೆ, ಯಮ, ಚಿತ್ರಗುಪ್ತ ಹಾಗೂ ಈಶ್ವರ ಪಾತ್ರಧಾರಿಗಳ ಪಾತ್ರೋಚಿತವಾದ ನಿರ್ವಹಣೆ ಗಮನಸೆಳೆಯಿತು.ಚಿತ್ರಗುಪ್ತ, ರಂಭೆ ಹಾಗೂ ಶ್ವೇತಕುಮಾರನ ಪ್ರೇತದ ನಡುವಿನ ನವಿರು ಹಾಸ್ಯ ನಗೆಗಡಲಲ್ಲಿ ತೇಲಿಸಿತು.  ಶಿವಗಣ ಹಾಗೂ ಯಮಭಟರ ನಡುವಿನ ಕಾಳಗದಲ್ಲಿ ಪೈಪೋಟಿಯ ಕುಣಿತ, ದಿಗಿಣ, ಪ್ರದರ್ಶನದ ಅಬ್ಬರವನ್ನು ಹೆಚ್ಚಿಸಿತು.

ಕೊನೆಯಲ್ಲಿ ನಡೆದ ಪ್ರಸಂಗ ರಕ್ತರಾತ್ರಿ. ಗದಾಯುದ್ಧದಲ್ಲಿ ಭೀಮನಿಂದ ತೊಡೆ ಮುರಿಸಿಕೊಂಡು ಹತಾಶನಾಗಿ ರಣರಂಗದಲ್ಲಿ ಬಿದ್ದ ದುರ್ಯೋಧನನ ಕೊನೆಯಾಸೆಯಾನ್ನು ನೆರವೇರಿಸಲು ಅಶ್ವತ್ಥಾಮನು ರಾತ್ರಿ ಹೊತ್ತು ಪಾಂಡವರ ಶಿಬಿರಕ್ಕೆ ನುಗ್ಗಿ ಪಾಂಡವರ ಬದಲು ಉಪಪಾಂಡವರ ತಲೆಯನ್ನು ಕಡಿಯುತ್ತಾನೆ. ಶಿಶು ಹತ್ಯೆಯನ್ನು ಮಾಡಿದ್ದಕ್ಕಾಗಿ ಅಶ್ವತ್ಥಾಮನಿಗೆ ಕೃಷ್ಣನು ಮೈಯೆಲ್ಲಾ ವ್ರಣ ತುಂಬಿ ಸಾವಿರ ವರ್ಷಗಳ ಕಾಲ ಹೀನಾಯವಾಗಿ ಬದುಕುವ ಶಾಪ ಕೊಡುತ್ತಾನೆ. ಅಶ್ವತ್ಥಾಮ ಪಾತ್ರಧಾರಿಯ ಸ್ವಷ್ಟವಾದ ಮಾತುಗಾರಿಕೆ, ಹೆಜ್ಜೆಗಾರಿಕೆ, ಕುಣಿತ, ದಿಗಿಣ ರಂಗದಲ್ಲಿ ಮಿಂಚಿನ ಸಂಚಾರವನ್ನುಂಟುಮಾಡಿತು. ಅಷ್ಟಲಕ್ಷ್ಮೀಯರ ಪಾತ್ರ ನಿರ್ವಹಣೆಯೂ ಸೊಗಸಾಗಿತ್ತು.

ಶಿವಶಕ್ತಿ, ದೃಷ್ಟದ್ಯುಮನ, ಭೀಮ, ಕೃಷ್ಣ ಹಾಗೂ ಇತರ ಪೋಷಕ ಪಾತ್ರಧಾರಿಗಳು ಚಿಕ್ಕ ಪಾತ್ರಗಳನ್ನು ಚೊಕ್ಕದಾಗಿ ಅಭಿನಯಿಸಿದರು.

ಹಿಮ್ಮೇಳದಲ್ಲಿ ದಯಾನಂದ ಕೋಡಿಕ್ಕಲ್‌, ಅಮೃತಾ ಅಡಿಗ ಹಾಗೂ ಗಿರೀಶ್‌ ರೈ ಕಕ್ಯಪದವು ಮಾಧುರ್ಯದ ಭಾಗವತಿಕೆಯಿಂದ ಮನರಂಜಿಸಿದರು. ಕಕ್ಯಪದವು ಹಾಗೂ ಅಡಿಗರ ದ್ವಂದ್ವ ಗಾಯನ ಹೆಚ್ಚಿನ ಮೆರುಗನ್ನು ತಂದುಕೊಟ್ಟಿತು. ಚೆಂಡೆ-ಮದ್ದಳೆಗಳಲ್ಲಿ ಹರೀಶ್‌ ರಾವ್‌ ಅಡೂರು, ಪ್ರಶಾಂತ್‌ ಶೆಟ್ಟಿ ವಗೆನಾಡು, ಮಯೂರ್‌ ನಾಯ್ಕ ಸಹಕರಿಸಿದರು.

ನರಹರಿ ರಾವ್‌ ಕೈಕಂಬ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.