ಸ್ಕೋಲಿಯೋಸಿಸ್‌:ವಕ್ರ ಬೆನ್ನುಮೂಳೆ ತೊಂದರೆಯ ಬಗ್ಗೆ ತಿಳಿಯಿರಿ


Team Udayavani, Jul 4, 2021, 11:57 AM IST

Scoliosis

ಬೆನ್ನುಮೂಳೆಯು ಒಂದು ಬದಿಗೆ ಬಾಗುವ ಸಮಸ್ಯೆಯನ್ನು ಸ್ಕೋಲಿಯೋಸಿಸ್‌ ಎಂದು ಕರೆಯಲಾಗುತ್ತದೆ. ಬೆನ್ನುಮೂಳೆಯ ರೇಡಿಯೋಗ್ರಾಫ್ನಲ್ಲಿ ಈ ಬಾಗುವಿಕೆಯು ಶೇ. 10ಕ್ಕಿಂತ ಹೆಚ್ಚು ಇರುವುದು ಕಂಡುಬಂದರೆ ಅದನ್ನು ಸ್ಕೋಲಿಯೋಸಿಸ್‌ ಎನ್ನಲಾಗುತ್ತದೆ. ಇಂಗ್ಲಿಷ್‌ ವರ್ಣಮಾಲೆಯ “ಸಿ’ ಅಕ್ಷರದಂತೆ ಬೆನ್ನುಮೂಳೆ ಬಾಗಿರುವುದು ಕಂಡುಬರುತ್ತದೆ. ಸ್ಕೋಲಿಯೋಸಿಸ್‌ ಹೊಂದಿರುವ ಮಕ್ಕಳಲ್ಲಿ ಪಕ್ಕೆಲುಬುಗಳು ಒಂದು ಬದಿಗೆ ಉಬ್ಬಿರುವುದು ಅಥವಾ ಒಂದು ಪೃಷ್ಠ ಅಸಹಜವಾಗಿ ಉಬ್ಬಿರುವುದು ಅಥವಾ ಒಂದು ಭುಜವು ಇನ್ನೊಂದಕ್ಕಿಂತ ಎತ್ತರವಾಗಿರುವುದು ಕಂಡುಬರುತ್ತದೆ. ಬಹುತೇಕ ಸ್ಕೋಲಿಯೋಸಿಸ್‌ ಪ್ರಕರಣಗಳಲ್ಲಿ (ಶೇ. 80ಕ್ಕಿಂತ ಅಧಿಕ) ಸಮಸ್ಯೆಗೆ ನಿರ್ದಿಷ್ಟ ಕಾರಣ ತಿಳಿದುಬರುವುದಿಲ್ಲ. ಇಂತಹ ಪ್ರಕರಣಗಳನ್ನು ಸ್ವಯಂಜನ್ಯ (ಈಡಿಯೋಪಥಿಕ್‌) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇಂತಹ ಸ್ಕೋಲಿಯೋಸಿಸ್‌ ಪ್ರಕರಣಗಳು ಹದಿಹರಯದ ಹುಡುಗಿಯರಲ್ಲಿ ಕಂಡುಬರುತ್ತವೆ.

ಮಗುವಿಗೆ ಸ್ಕೋಲಿಯೋಸಿಸ್‌ ಇದೆಯೇ  ಇಲ್ಲವೇ ಎಂದು ತಿಳಿಯುವುದು ಹೇಗೆ?

 ಒಂದು ಭುಜವು ಇನ್ನೊಂದಕ್ಕಿಂತ ಎತ್ತರವಾಗಿರುವುದು

 ತಲೆಯು ಒಂದು ಬದಿಗೆ ಸ್ವಲ್ಪ ಬಾಗಿರುವುದು

 ಮಗು ಒಂದು ಬದಿಗೆ ಬಾಗುವುದು

 ಒಂದು ಕಾಲು ಇನ್ನೊಂದಕ್ಕಿಂತ ಉದ್ದವಾಗಿರುವಂತೆ ಕಂಡುಬರುವುದು

 ಒಂದು ಪೃಷ್ಠವು ಇನ್ನೊಂದಕ್ಕಿಂತ ಮುಂದಿರುವಂತೆ ಕಾಣಿಸುವುದು

 ಪಕ್ಕೆಲುಬುಗಳು ಅಸಮಾನವಾಗಿರುವಂತೆ ಅಥವಾ ತಿರುಚಿರುವಂತೆ ಕಾಣಿಸುವುದು – ಒಂದು ಬದಿಯದು ಇನ್ನೊಂದಕ್ಕಿಂತ ಉಬ್ಬಿರುವಂತೆ ಕಂಡುಬರುವುದು. ಇದನ್ನು ರಿಬ್‌ ಹಂಪ್‌ ಎಂದೂ ಕರೆಯುತ್ತಾರೆ.

ಸ್ಕೋಲಿಯೋಸಿಸ್‌ ಸಾಮಾನ್ಯವಾಗಿ ಬೆನ್ನು ನೋವಿಗೆ ಕಾರಣವಾಗುವುದಿಲ್ಲ. ಅಲ್ಲದೆ, ಹದಿಹರಯದವರಲ್ಲಿ ಅನೇಕ ಬಾರಿ ಅರ್ಧಾಂಶದಷ್ಟು ಮಂದಿ ಲಂಬೊ-ಸೇಕ್ರಲ್‌ ಸ್ಟ್ರೈನ್‌ನಂತಹ ಇತರ ಕಾರಣಗಳಿಂದ ಬೆನ್ನುನೋವು ಅನುಭವಿಸುತ್ತಾರೆ.

ವೈದ್ಯರು ಬೆನ್ನಿನ ಪರೀಕ್ಷೆಯನ್ನು ನಡೆಸುವ ಮೂಲಕ ಸ್ಕೋಲಿಯೋಸಿಸ್‌ ಇರುವುದನ್ನು ಪತ್ತೆಹಚ್ಚುತ್ತಾರೆ.

 ವೈದ್ಯರು ಬೆನ್ನಿನ ಭಾಗದಲ್ಲಿ ಬೆನ್ನುಮೂಳೆಯ ಬಾಗುವಿಕೆಯನ್ನು ಪರೀಕ್ಷಿಸುತ್ತಾರೆ. ವ್ಯಕ್ತಿಯನ್ನು ಅನು ಕೂಲಕರ ಭಂಗಿಯಲ್ಲಿ ಇರಿಸಿ ಭುಜಗಳ ಅಸಮಾನತೆ, ಸೊಂಟ ರೇಖೆಯ ಅಸಮಾನತೆ ಮತ್ತು ಕುತ್ತಿಗೆಯಿಂದ ಸೊಂಟದ ತನಕದ ಭಾಗದ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇದೆಯೇ ಎಂದು ಪರೀಕ್ಷಿಸುತ್ತಾರೆ.

 “ಫಾರ್ವರ್ಡ್‌ ಬೆಂಡಿಂಗ್‌ ಟೆಸ್ಟ್‌’ ಎಂಬ ಪರೀಕ್ಷೆಯಿದೆ. ಇದರಲ್ಲಿ ಮಗು ಸೊಂಟವನ್ನು ಬಾಗಿಸಿ ಮುಂದಕ್ಕೆ ಬಾಗುವಂತೆ ಹೇಳಲಾಗುತ್ತದೆ. ಬೆನ್ನುಮೂಳೆಯಲ್ಲಿ ವಕ್ರತೆ ಇದ್ದರೆ ಬೆನ್ನಿನ ಮೇಲ್ಭಾಗದಲ್ಲಿ ಪಕ್ಕೆಲುಬುಗಳು ಉಬ್ಬಿಕೊಂಡು ಕಾಣಿಸುತ್ತವೆ ಮತ್ತು/ ಅಥವಾ ಕೆಳಬೆನ್ನಿನಲ್ಲಿ ಸೊಂಟ ಉಬ್ಬಿರುವುದು ಕಾಣಿಸುತ್ತದೆ.

 ಸೊಸಿಯೊಮೀಟರ್‌. ಈ ಉಪಕರಣವನ್ನು ಶಂಕಿತ ಸ್ಕೋಲಿಯೋಸಿಸ್‌ ಇರುವ ಭಾಗದಲ್ಲಿ ಮಾಪನಕ್ಕಾಗಿ ಇರಿಸಲಾಗುತ್ತದೆ. ಇದು ಬೆನ್ನುಮೂಳೆಯ ಬಾಗುವಿಕೆಯ ಮಾಪನವನ್ನು ನೀಡುತ್ತದೆ.

 ಸ್ಕೋಲಿಯೋಸಿಸ್‌ ಇದೆ ಎಂದು ಶಂಕಿಸಲಾದರೆ ಕುತ್ತಿಗೆಯಿಂದ ಪೆಲ್ವಿಸ್‌ ತನಕದ ಸಂಪೂರ್ಣ ಬೆನ್ನುಮೂಳೆಯ ಎಕ್ಸ್‌ರೇಯನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ.

ಸ್ಕೋಲಿಯೋಸಿಸ್‌ಗೆ ಚಿಕಿತ್ಸೆಯ ಆಯ್ಕೆಗಳು

ನಿರೀಕ್ಷಣೆ

ಬೆನ್ನುಮೂಳೆಯ ಕೆಲವು ವ್ಯಾಯಾಮಗಳು, ಆರು ತಿಂಗಳುಗಳಿಗೆ ಒಮ್ಮೆ ವೈದ್ಯರಿಂದ ನಿಯಮಿತ ಚೆಕ್‌-ಅಪ್‌ಗ್ಳನ್ನು ನಡೆಸಿ ಬೆನ್ನುಮೂಳೆಯ ಬಾಗುವಿಕೆ ಹೆಚ್ಚಿದೆಯೇ ಎಂದು ಪತ್ತೆಹಚ್ಚುವುದು. ಬೆನ್ನುಮೂಳೆಯ ಬಾಗುವಿಕೆ 25 ಡಿಗ್ರಿಗಳಿಂದ 30 ಡಿಗ್ರಿ ವರೆಗೆ ಇದ್ದ ಸಂದರ್ಭಗಳಲ್ಲಿ ಇದನ್ನು ನಡೆಸಲಾಗುತ್ತದೆ.

ಸ್ಪೈನಲ್‌ ಬ್ರೇಸಿಂಗ್‌

ಬೆಳೆಯುತ್ತಿರುವ ಮಗುವಿನಲ್ಲಿ ಬೆನ್ನುಮೂಳೆಯ ಬಾಗುವಿಕೆ 25 ಡಿಗ್ರಿಗಳಿಗಿಂತ ಹೆಚ್ಚು, ಆದರೆ 45 ಡಿಗ್ರಿಗಳಿಗಿಂತ ಕಡಿಮೆ ಇದ್ದ ಸಂದರ್ಭದಲ್ಲಿ ಬೆನ್ನುಮೂಳೆಗೆ ಕವಚ (ಸ್ಪೈನಲ್‌ ಬ್ರೇಸಿಂಗ್‌) ತೊಡಿಸಲಾಗುತ್ತದೆ. ಕವಚವು ಬಾಗುವಿಕೆ ಹೆಚ್ಚುವುದನ್ನು ತಡೆಯಬಹುದಾಗಿ ಮತ್ತು ಪರಿಣಾಮವಾಗಿ, ಸ್ಪೈನಲ್‌ ಫ್ಯೂಶನ್‌ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳದೆ ಹೋಗಬಹುದು.

ಶಸ್ತ್ರಚಿಕಿತ್ಸೆ

ಬೆನ್ನುಮೂಳೆಯ ಬಾಗುವಿಕೆ 45 ಡಿಗ್ರಿ ಅಥವಾ 50 ಡಿಗ್ರಿಗಳಿಗಿಂತ ಹೆಚ್ಚು ಇದ್ದ ಸಂದರ್ಭಗಳಲ್ಲಿ ಮತ್ತು/ ಅಥವಾ ವ್ಯಕ್ತಿಯ ಬೆಳೆಯುವಿಕೆ ನಿಂತ ಬಳಿಕವೂ ಬಾಗುವಿಕೆ ತೀವ್ರಗೊಳ್ಳುವ ಅಪಾಯ ಹೆಚ್ಚಿದ್ದರೆ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.

ಪರ್ಯಾಯ ಚಿಕಿತ್ಸೆಗಳು?

ಯೋಗ, ಫಿಸಿಕಲ್‌ ಥೆರಪಿ ಮತ್ತು ಚಿರೊಪ್ರ್ಯಾಕ್ಟಿಕ್‌ ಚಿಕಿತ್ಸೆಗಳು ಸ್ಕೊಲಿಯೊಸಿಸ್‌ನ ಬಾಗುವಿಕೆಯ ಬೆಳವಣಿಗೆಯನ್ನು ತಡೆಯುವುದು ವೈದ್ಯಕೀಯವಾಗಿ ಸಾಬೀತಾಗಿಲ್ಲ. ಆದರೆ ಇವು ಪ್ರಧಾನ ಸ್ನಾಯುಗಳು ಬಲಗೊಳ್ಳಲು ಸಹಾಯಕವಾಗಬಹುದು.

ಶಸ್ತ್ರಚಿಕಿತ್ಸೆ

ವಯಸ್ಕರ ಈಡಿಯೋಪಥಿಕ್‌ ಸ್ಕೊಲಿಯೋಸಿಸ್‌ಗೆ ಫ್ಯೂಶನ್‌ ಶಸ್ತ್ರಚಿಕಿತ್ಸೆಯು ಬಹಳ ಸಾಮಾನ್ಯವಾಗಿ ಅನುಸರಿಸುವ ಚಿಕಿತ್ಸಾ ವಿಧಾನವಾಗಿದೆ. ಬಹುತೇಕ ಪ್ರಕರಣಗಳಲ್ಲಿ ರೋಗಿಯ ಬೆನ್ನುಭಾಗದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಬಾಗುವಿಕೆಯನ್ನು ಸರಿಪಡಿಸಲು ಬೆನ್ನುಮೂಳೆಯಲ್ಲಿ ಲೋಹದ ಇಂಪ್ಲಾಂಟ್‌ಗಳನ್ನು ಇರಿಸಿ ಅವುಗಳನ್ನು ಎರಡು ಲೋಹದ ಸರಳುಗಳಿಗೆ ಜೋಡಿಸಲಾಗುತ್ತದೆ. ಪಕ್ಕೆಲುಬುಗಳು ಸರಿಯಾದ ಸ್ಥಾನದಲ್ಲಿ ಹೊಂದಿಕೊಳ್ಳುವವರೆಗೆ ಈ ವ್ಯವಸ್ಥೆಯು ಬೆನ್ನುಮೂಳೆಯನ್ನು ಸರಿಯಾದ ಭಂಗಿಯಲ್ಲಿ ಇರಿಸುತ್ತದೆ. ಬೆನ್ನುಮೂಳೆ ಫ್ಯೂಶನ್‌ ಶಸ್ತ್ರಚಿಕಿತ್ಸೆಯು ಬೆನ್ನುಮೂಳೆಯು ಇನ್ನಷ್ಟು ಬಾಗುವುದನ್ನು ತಡೆಯುತ್ತದೆ. ಸಾಮಾನ್ಯವಾಗಿ ಈ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳು ಬೇಗನೆ ಚೇತರಿಸಿಕೊಳ್ಳುತ್ತಾರೆ. ಈ ಶಸ್ತ್ರಚಿಕಿತ್ಸೆಯ ಬಳಿಕ ಸಾಮಾನ್ಯವಾಗಿ 6-7 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ ಮತ್ತು 3 ವಾರಗಳ ಬಳಿಕ ಶಾಲೆಗೆ ಹೋಗುವುದನ್ನು ಪುನರಾರಂಭಿಸಬಹುದಾಗಿದೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಆರು ತಿಂಗಳುಗಳ ಬಳಿಕ ಮಗು ರೂಢಿಗತ ಎಲ್ಲ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ.

ಸ್ಕೊಲಿಯೋಸಿಸ್‌ ಜತೆಗೆ ಜೀವನ

ಸ್ಕೋಲಿಯೋಸಿಸ್‌ ರೋಗಿಗಳಿಗೆ ದೈಹಿಕ ಚಟುವಟಿಕೆಗಳು ಸಹಾಯ ಮಾಡುತ್ತವೆ. ಹೀಗಾಗಿ ತೊಂದರೆ ಇಲ್ಲದೆ ಇದ್ದರೆ ಅಥವಾ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ನಿರ್ದಿಷ್ಟ ಸೂಚನೆ ಇಲ್ಲದೆ ಇದ್ದರೆ ಸ್ಕೋಲಿಯೋಸಿಸ್‌ ರೋಗಿಗಳು ಇಷ್ಟದ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ. ಸ್ಪೈನಲ್‌ ಬ್ರೇಸ್‌ ಅಳವಡಿಸಿದ್ದರೂ ಮಗು ಆಟಗಳಲ್ಲಿ ಅಥವಾ ದಿನನಿತ್ಯದ ಚಟುವಟಿಕೆಗಳನ್ನು ಮಾಡಬಹುದು. ಪ್ರಧಾನ ಸ್ನಾಯುಗಳ ಬಲವರ್ಧನೆ ಬೆನ್ನಿಗೆ ಪ್ರಯೋಜನಕಾರಿಯಾಗುತ್ತದೆ. ಭಾರವಾದ ಬೆನ್ನುಚೀಲವನ್ನು ಧರಿಸುವುದು ತೊಂದರೆದಾಯಕವಾಗಿರುತ್ತದೆ. ಸಾಮಾನ್ಯವಾಗಿ ಭಾರೀ ತೂಕದ ಚೀಲವನ್ನು ಬೆನ್ನಿನಲ್ಲಿ ಹೊರುವುದು ಬೆನ್ನಿಗೆ ಮತ್ತು ಸರಿಯಾದ ಭಂಗಿಗೆ ತೊಂದರೆ ಉಂಟುಮಾಡುತ್ತದೆ. ಆದರೆ ಇದರಿಂದ ಸ್ಕೋಲಿಯೋಸಿಸ್‌ ಉಲ್ಬಣವಾಗುವುದಿಲ್ಲ. ಆದರೆ ಮಕ್ಕಳು ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.
ಸ್ಕೋಲಿಯೋಸಿಸ್‌ ಎಂಬುದು ತಡೆಗಟ್ಟಬಹುದಾದ ಮತ್ತು ಸುಲಭವಾಗಿ ಚಿಕಿತ್ಸೆಗೆ ಒಳಪಡಿಸಿ ಸರಿಪಡಿಸಬಹುದಾದ ಒಂದು ಸಮಸ್ಯೆ ಎಂಬುದನ್ನು ಎಲ್ಲರೂ ಅರಿತುಕೊಳ್ಳುವುದು ಬಹಳ ಮುಖ್ಯ. ಬೇಗನೆ ಪತ್ತೆಹಚ್ಚುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಒದಗಿಸುವುದು ಸ್ಕೋಲಿಯೋಸಿಸ್‌ ತೊಂದರೆ ಹೊಂದಿರುವ ಮಕ್ಕಳು ಚಿಕಿತ್ಸೆಗೆ ಒಳಪಟ್ಟು ಯಶಸ್ವಿಯಾಗಲು ಪ್ರಾಮುಖ್ಯವಾಗಿವೆ. ಸ್ಕೋಲಿಯೋಸಿಸ್‌ಗೆ ತುತ್ತಾಗಿರುವ ಮಕ್ಕಳು ಇತರರಂತೆಯೇ ಸಹಜ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ.

ತನಗೆ ಸ್ಕೋಲಿಯೋಸಿಸ್‌ ಇದೆ ಎನ್ನುವುದು ಗೊತ್ತಾದರೆ ಸಹಾಯ ಮಾಡಬಲ್ಲ ಮತ್ತು ಹೆಚ್ಚುವರಿ ಮಾಹಿತಿ ಒದಗಿಸಬಲ್ಲ ಜನರನ್ನು ಸಂಪರ್ಕಿಸಬೇಕು. ಈ ನೆರವನ್ನು ಪಡೆದ ಬಳಿಕ ಸ್ಕೋಲಿಯೋಸಿಸ್‌ ತೊಂದರೆ ಹೊಂದಿರುವ ಇತರ ಜನರನ್ನು ಸಂಪರ್ಕಿಸಿ ಅವರಿಂದ ಮಾಹಿತಿ, ಸಲಹೆ ಪಡೆಯಬಹುದು. ಇದರಿಂದ ಮಗುವಿಗೆ ಆತ್ಮವಿಶ್ವಾಸ ವೃದ್ಧಿಸುತ್ತದೆ. ಮಗುವನ್ನು ಆದಷ್ಟು ಬೇಗನೆ ಕುಟುಂಬ ವೈದ್ಯರು ಅಥವಾ ತಜ್ಞ ವೈದ್ಯರಲ್ಲಿಗೆ ಕರೆದೊಯ್ದು ಅದರ ನಿರ್ವಹಣೆಯ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಬೇಕು. ಬೇಗನೆ ಪತ್ತೆ ಮಾಡಲಾದ ಸ್ಕೋಲಿಯೋಸಿಸ್‌ ತೊಂದರೆಯನ್ನು ಸರಳ ವಿಧಾನಗಳಿಂದ ಸರಿಪಡಿಸಬಹುದು; ಮುಂದುವರಿದ ಹಂತಗಳಲ್ಲಿ ಪತ್ತೆಯಾದರೆ ನಿರ್ವಹಣೆ ಕ್ಲಿಷ್ಟವಾಗುತ್ತದೆ.

 

ಡಾ| ಈಶ್ವರಕೀರ್ತಿ ಸಿ.

 ಕನ್ಸಲ್ಟಂಟ್‌ ಸ್ಪೈನ್‌ ಸರ್ಜನ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.