ಪದೇ ಪದೇ ಭುಜದ ಕೀಲುಗಳು ಜಾರುವುದು


Team Udayavani, Feb 19, 2017, 3:45 AM IST

Key-hole-surgery.jpg

ಹಿಂದಿನ ವಾರದಿಂದ –  2) ಶಸ್ತ್ರಚಿಕಿತ್ಸೆ: ಹೆಚ್ಚಿನ ಯುವ ರೋಗಿಗಳು ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿರುವವರು ತಮ್ಮ ಭುಜಗಳನ್ನು ಸ್ಥಿರಗೊಳಿಸಲು ಅಥವಾ ಭುಜಗಳಿಗೆ ಸಾಮರ್ಥ್ಯ ತುಂಬಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುವುದು.  ಹೆಚ್ಚಾಗಿ ಅನುಸರಿಸುವ ಶಸ್ತ್ರಚಿಕಿತ್ಸಾ ಕ್ರಮಗಳು ಅಂದರೆ:
 
1. ಆಥ್ರೋìಸ್ಕೋಪಿಕ್‌ 
ಬ್ಯಾಂಕಾರ್ಟ್‌ ರಿಪ್ಯಾರ್‌ 
(ಕೀ-ಹೋಲ್‌ ಶಸ್ತ್ರಚಿಕಿತ್ಸೆ) 

ಮೂರು ಸಣ್ಣ ರಂಧ್ರಗಳ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ. ಬ್ಯಾಂಕಾರ್ಟ್‌ ರಿಪ್ಯಾರ್‌ನಲ್ಲಿ ಕಳಚಿಕೊಂಡ ಕ್ಯಾಪುÕಲೋ-ಲ್ಯಾಬ್ರಲ್‌ ಭಾಗವನ್ನು ಗ್ಲೆನಾಯ್ಡಗೆ ಜೋಡಿಸುತ್ತಾರೆ. ಅದೇ ಸಮಯದಲ್ಲಿ ಕ್ಯಾಪುÕಲಾರ್‌ ಶಿಫ್ಟ್ (ಸಡಿಲ ಕ್ಯಾಪುÕಲ್‌ ಅನ್ನು ಬಿಗಿಗೊಳಿಸುವುದು) ಪ್ರಕ್ರಿಯೆಯನ್ನು ನಡೆಸುವುದೂ ಸಹ ಸಾಧ್ಯವಿದೆ. ಆಥ್ರೋìಸ್ಕೋಪಿಕ್‌ ತಂತ್ರಜಾnನದ ಪ್ರಯೋಜನ ಅಂದರೆ ಅದರ ಕಡಿಮೆ ಛೇದನಕಾರಿ ಸ್ವರೂಪ. ಇದರಿಂದಾಗಿ ಶಸ್ತ್ರಚಿಕಿತ್ಸೆಯ ತೊಂದರೆ ಮತ್ತು ಆಸ್ಪತ್ರೆವಾಸದ ಅವಧಿಯೂ ಕಡಿಮೆ. ಇಷ್ಟು ಮಾತ್ರ ಅಲ್ಲದೆ ಈ ಶಸ್ತ್ರಚಿಕಿತ್ಸೆಯಲ್ಲಿ ಭುಜದ ಕೀಲುಗಳನ್ನು ಸಂಪೂರ್ಣವಾಗಿ ನೋಡಬಹುದು ಮತ್ತು ಈ ಮೂಲಕ ಜಾರುವಿಕೆಗೆ ಕಾರಣ ಆಗಬಹುದಾದ ಇನ್ನಿತರ ಕಾರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು. 

2. ತೆರೆದ  ಬ್ಯಾಂಕಾರ್ಟ್‌ ರಿಪ್ಯಾರ್‌
ತೆರೆದ ಶಸ್ತ್ರಚಿಕಿತ್ಸೆಯ ಮೂಲಕ ಬ್ಯಾಂಕಾರ್ಟ್‌ ರಿಪ್ಯಾರ್‌ ಮತ್ತು ಕ್ಯಾಪುÕಲಾರ್‌ ಶಿಫ್ಟ್ ಪ್ರಕ್ರಿಯೆಗಳನ್ನೂ ಸಹ ನಡೆಸಬಹುದು, ಇಲ್ಲಿ ಭುಜದ ಮುಂಭಾಗದಲ್ಲಿ 3 -5 ಸೆಂ .ಮೀ ಉದ್ದದ ಒಂದು ಛೇದನ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಕೊನೆಯ ಹಂತದಲ್ಲಿ ಸರಿಪಡಿಸಬೇಕಿರುವ ಸಬ್‌-ಕ್ಯಾಪ್ಯುಲರಿ ಸ್ನಾಯುವಿನ ಉದ್ದಕ್ಕೂ ಛೇದನವನ್ನು ಮಾಡುತ್ತಾರೆ. 

3. ಮೂಳೆಗಳ ಶಸ್ತ್ರಚಿಕಿತ್ಸೆ  
(Bony operations)

ವಿಶೇಷವಾಗಿ ಮೂಳೆ ನಷ್ಟವಾಗಿರುವ ಪ್ರಕರಣಗಳಲ್ಲಿ ಅಥವಾ ವಿಶೇಷ ಹಿಲ್‌- ಸ್ಯಾಶಸ್‌ ಹಾನಿಯ ಪ್ರಕರಣಗಳಲ್ಲಿ ಬ್ಯಾಂಕರ್ಟ್‌ ರಿಪ್ಯಾರ್‌ ಒಂದನ್ನೇ ಮಾಡಿದರೆ ಅದು ಸಂಪೂರ್ಣ ಪ್ರಯೋಜನಕಾರಿ ಆಗದು. ಇಂತಹ ಸಂದರ್ಭದಲ್ಲಿ ಬ್ರಿಸ್ಟೋ-ಲತರ್ಜೆಟ್‌ ಪ್ರಕ್ರಿಯೆಯನ್ನು ( ಗ್ಲೆನಾಯ್ಡ ವೈಕಲ್ಯಕ್ಕೆ ಕಾರ್ಕಾಯ್ಡ ಪ್ರಕ್ರಿಯೆಯನ್ನು ವರ್ಗಾಯಿಸುವುದು) ಅಥವಾ ಹಿಲ್‌- ಸ್ಯಾಶಸ್‌ ಹಾನಿಗೆ ಮೂಳೆ ಕಸಿಯ ಪ್ರಕ್ರಿಯೆಯನ್ನು ನಡೆಸಬೇಕಾಗುವುದು. ಈ ಪ್ರಕ್ರಿಯೆಗಳಿಗೆ ತೆರೆದ ಶಸ್ತ್ರಚಿಕಿತ್ಸೆ ಆವಶ್ಯಕ. 

ಶಸ್ತ್ರಚಿಕಿತ್ಸಾ ನಂತರದ ಕ್ರಮಗಳು
ಆಥ್ರೋìಸ್ಕೋಪಿಕ್‌ ಬ್ಯಾಂಕಾರ್ಟ್‌ ರಿಪ್ಯಾರ್‌ ಸಂದರ್ಭದಲ್ಲಿ ರೋಗಿಯು ಶಸ್ತ್ರಚಿಕಿತ್ಸೆಯಾದ ದಿನವೇ ಅಥವಾ ಮಾರನೆಯ ದಿನ ಆಸ್ಪತ್ರೆಯನ್ನು ಬಿಡಬಹುದು. ತೆರೆದ ಶಸ್ತ್ರಚಿಕಿತ್ಸೆ ಆಗಿದ್ದರೆ ಶಸ್ತ್ರಚಿಕಿತ್ಸೆ ಆದ 2-3 ದಿನಗಳ ಅನಂತರ ಆಸ್ಪತ್ರೆಯನ್ನು ಬಿಡಬಹುದು. ಭುಜವನ್ನು ಚಲನರಹಿತಗೊಳಿಸಬೇಕು. ದಬ್ಬೆಯ ಮೂಲಕ ತೋಳನ್ನು ಮೇಲೆ, ಕೆಳಗೆ ಮತ್ತು ಅತ್ತಿತ್ತ ಆಡದಂತೆ  ಚಲನರಹಿತ ಸ್ಥಿತಿಯಲ್ಲಿ ಇರಿಸಬೇಕು. ಶಸ್ತ್ರಚಿಕಿತ್ಸೆಯ ವಿವಿಧ ಮತ್ತು ಸರಿಪಡಿಸುವಿಕೆಯಿಂದ ಗಳಿಸಿದ ಸಾಮರ್ಥ್ಯವನ್ನು ಅವಲಂಬಿಸಿಕೊಂಡು 3-6 ವಾರಗಳ ವರೆಗೆ ತೋಳನ್ನು ದಬ್ಬೆಯ ಮೂಲಕ ಚಲನರಹಿತ ಸ್ಥಿತಿಯಲ್ಲಿ ಇರಿಸಬೇಕಾಗುವುದು. ಶಸ್ತ್ರಚಿಕಿತ್ಸೆ ಆದ 2-3 ವಾರಗಳ ಅನಂತರ ಪೆಂಡ್ಯುಲಮ್‌ ವ್ಯಾಯಾಮವನ್ನು ಅರಂಭಿಸುತ್ತಾರೆ. ಶಸ್ತ್ರಚಿಕಿತ್ಸೆಯಾದ 6 ವಾರಗಳ ಅನಂತರ ಸಂಪೂರ್ಣ ರೀತಿಯ ಚಲನೆಯ ವ್ಯಾಯಾಮ ಮತ್ತು ಭುಜಕ್ಕೆ ಸಾಮರ್ಥ್ಯವನ್ನು ಕೊಡುವ ವ್ಯಾಯಾಮವನ್ನು ಆರಂಭಿಸಲಾಗುವುದು. 

ಒಬ್ಬ ವ್ಯಕ್ತಿಯು ಯಾವಾಗ 
ತನ್ನ ದೈನಂದಿನ ಚಟುವಟಿಕೆ 
ಮತ್ತು ಕ್ರೀಡಾ ಚಟುವಟಿಕೆಗಳಿಗೆ 
ಮರಳಬಹುದು?

ಶಸ್ತ್ರಚಿಕಿತ್ಸೆಯಾದ ಅನಂತರ ಯಾವುದೇ ವ್ಯಕ್ತಿಯು ಶಸ್ತ್ರಚಿಕಿತ್ಸಾ ಪೂರ್ವ ಸ್ಥಿತಿಯನ್ನು ಗಳಿಸಲು ಅಥವಾ ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಲು ಒಟ್ಟಾರೆ 2-3 ತಿಂಗಳುಗಳ ಸಮಯ ಬೇಕಾಗುತ್ತದೆ. ಕ್ರೀಡಾಳುಗಳಿಗೆ ಅವರು ನಿರ್ವಹಿಸುವ ಮತ್ತು ಭಾಗವ ಹಿಸುವ ಕ್ರೀಡೆಗಳನ್ನು ಮತ್ತು ಸ್ಪರ್ಧಾ ಮಟ್ಟವನ್ನು ಅವಲಂಬಿಸಿಕೊಂಡು ತಮ್ಮ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು 3-4 ತಿಂಗಳು ಮತ್ತು ಅದಕ್ಕಿಂತಲೂ ಹೆಚ್ಚು ಸಮಯ ಬೇಕಾಗಬಹುದು. 

Ad

ಟಾಪ್ ನ್ಯೂಸ್

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-thyroid

Thyroid: ನಮ್ಮ ಮನೋಭಾವ, ಚೈತನ್ಯ, ದೇಹತೂಕಗಳ ಮೇಲೆ ಥೈರಾಯ್ಡ್ ನ ಪರಿಣಾಮಗಳು

3-lifestyle

Lifestyle-related Cancers: ಜೀವನಶೈಲಿ ಸಂಬಂಧಿ ಕ್ಯಾನ್ಸರ್‌ಗಳು

8-sinus

Allergic Rhinitis:ನಿರಂತರ ಸೀನು,ಉಸಿರಾಟಕ್ಕೆ ಅಡಚಣೆ;ನಿಮಗೆ ಅಲರ್ಜಿಕ್‌ ರೈನೈಟಿಸ್‌ಇರಬಹುದು

2-health

Health Tests: ವಿವಿಧ ಆರೋಗ್ಯ ಪರೀಕ್ಷೆಗೆ ಹೇಗೆ ತೆರಳಬೇಕು?

7–Endometrial

Endometrial Cancer: ಮಹಿಳೆಯರು ನಿರ್ಲಕ್ಷಿಸಬಾರದ ನಿಶ್ಶಬ್ದ ಅಪಾಯ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

suicide (2)

Mangaluru:ಕಾರು ಪಲ್ಟಿಯಾಗಿ ಗಂಭೀರ ಗಾಯಗೊಂಡ ಯುವಕ ಸಾ*ವು

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

1-aa-aa-RSS

ಗುರುದಕ್ಷಿಣೆ ಸಮರ್ಪಿಸಿ ಕೊನೆಯುಸಿರೆಳೆದ ಆರೆಸ್ಸೆಸ್‌ ಕಾರ್ಯಕರ್ತ ಬಾಬು ದೇವಾಡಿಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.