ಹಲ್ಲಿನ ಸೋಂಕು; ಸಂಧಿ ನೋವಿಗೆ ಕಾರಣವಾದೀತೇ ?


Team Udayavani, Jan 15, 2023, 3:28 PM IST

8–tooth-ache

ಆರ್ಥೈಟಿಸ್‌ ಫೌಂಡೇಶನ್‌ನವರು ಹೇಳುವ ಪ್ರಕಾರ, ಹಲ್ಲಿನ ಸೋಂಕು ಅಥವಾ ವಸಡಿನ ಕಾಯಿಲೆಯಿಂದಾಗಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ದೇಹದಲ್ಲಿ ರೋಗ ಪ್ರತಿರೋಧಕ ಪ್ರತಿಕ್ರಿಯೆಗಳನ್ನು ಉಂಟುಮಾಡಬಲ್ಲವು ಎಂಬುದಾಗಿ ಹೇಳಿದೆ.

ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾಗಳು ಆಟೋ ಆ್ಯಂಟಿ ಬಾಡಿಗಳ ಉತ್ಪಾದನೆಗೆ ಕಾರಣವಾಗಬಲ್ಲವು, ಇದರಿಂದಾಗಿ ದೇಹದ ಪ್ರೊಟೀನ್‌ಗಳಲ್ಲಿ ಬದಲಾವಣೆ ಕಂಡುಬರಬಹುದು. ಇದರಿಂದಾಗಿ ಸಂಧಿಗಳ ಜೋಡಣೆಯ ಭಾಗದಲ್ಲಿ ದೇಹವು ಕೆಲವು ಪ್ರೊಟೀನ್‌ಗಳನ್ನು ಅಪಾಯವೆಂಬಂತೆ ಪರಿಗಣಿಸುವ ಪರಿಸ್ಥಿತಿ ಮತ್ತು ಇದಕ್ಕೆ ಪ್ರತಿಕ್ರಿಯೆಯಾಗಿ ಈ ಪ್ರೊಟೀನ್‌ಗಳ ವಿರುದ್ಧ ರಕ್ಷಣೆಗಾಗಿ ಆ್ಯಂಟಿಬಾಡಿಗಳನ್ನು ಉತ್ಪಾದಿಸುವಂತೆ ಆಗಬಹುದು.

ಬ್ಯಾಕ್ಟೀರಿಯಾಗಳು ರಕ್ತಪ್ರವಾಹದಲ್ಲಿ ಸೇರಿಕೊಂಡು ಸಂಧಿಗಳ ಮೆತ್ತೆಭಾಗದಲ್ಲಿರುವ ದಪ್ಪನೆಯ ಸಿನೊವಯಲ್‌ ದ್ರವವನ್ನೂ ಪ್ರವೇಶಿಸಬಹುದಾಗಿದೆ. ರುಮಟಾಯಿಡ್‌ ಆರ್ಥೈಟಿಸ್‌ ಮತ್ತು ಓಸ್ಟಿಯೋ ಆರ್ಥೈಟಿಸ್‌ ಹೊಂದಿರುವವರ ಸಿನೊವಯಲ್‌ ದ್ರವದಲ್ಲಿ ಬಾಯಿಯ ಬ್ಯಾಕ್ಟೀರಿಯಾಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಹಲ್ಲು ಸೋಂಕು ಮತ್ತು ಸಂಧಿನೋವುಗಳ ನಡುವಣ ಸಂಬಂಧ

ಬಾಯಿಯಲ್ಲಿ ಉಂಟಾಗಿರುವ ಬ್ಯಾಕ್ಟೀರಿಯಾ ಸೋಂಕುಗಳು, ನಿರ್ದಿಷ್ಟವಾಗಿ ಅಗ್ರೆಗೇಟಿಬ್ಯಾಕ್ಟರ್‌ ಆ್ಯಕ್ಟಿನೊಮೈಸೆಟೆಮ್‌ ಕೊಮೈಟನ್ಸ್‌ (ಎಎ) ಎಂಬ ಬ್ಯಾಕ್ಟೀರಿಯಮ್‌ ರುಮಟಾಯಿಡ್‌ ಉಂಟಾಗಲು ಕಾರಣವಾಗಬಲ್ಲುದು.

ಎಎಯು ಬಿಳಿ ರಕ್ತಕಣಗಳಲ್ಲಿ ಇದು ರುಮಟಾಯಿಡ್‌ ಆರ್ಥೈಟಿಸ್‌ ಹೊಂದಿರುವವರ ಸಂಧಿಗಳಲ್ಲಿ ಕಂಡುಬರುವ ಬದಲಾವಣೆಯಂತಹುದೇ ಬದಲಾವಣೆಯನ್ನು ಉಂಟು ಮಾಡಬಹುದಾಗಿದೆ.

ಪೆರಿಯೋಡೊಂಟೈಟಿಸ್‌ ವಸಡುಗಳು ಮತ್ತು ಹಲ್ಲುಗಳ ಸುತ್ತಲು ಇರುವ ಎಲುಬುಗಳನ್ನು ಬಾಧಿಸುವ ಒಂದು ಅನಾರೋಗ್ಯ ಸ್ಥಿತಿ. ಇದರ ತೀವ್ರತರಹದ ಪ್ರಕರಣಗಳಲ್ಲಿ ಇದರಿಂದಾಗಿ ಎಲುಬು ಅಥವಾ ಹಲ್ಲು ನಷ್ಟವಾಗಬಹುದು. ಪೆರಿಯೊಡೊಂಟೈಟಿಸ್‌ ರುಮಟಾಯಿಡ್‌ ಆರ್ಥೈಟಿಸ್‌ ಉಂಟಾಗಬಲ್ಲಂತಹ ಆಟೊಇಮ್ಯೂನ್‌ ಪ್ರತಿಕ್ರಿಯೆಗೆ ಕಾರಣವಾಗಬಲ್ಲುದಾಗಿದೆ.

ರುಮಟಾಯಿಡ್‌ನ‌ ಆರಂಭಿಕ ಹಂತಗಳಲ್ಲಿ ಸಂಧಿಗಳು ಮೃದುವಾಗುವುದು ಅಥವಾ ಸಂಧಿನೋವು ಉಂಟಾಗಬಹುದು. ರುಮಟಾಯಿಡ್‌ ಆರ್ಥೈಟಿಸ್‌ನ ಇತರ ಲಕ್ಷಣಗಳೆಂದರೆ ­

-6 ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಧಿಗಳು ಊದಿಕೊಳ್ಳುವುದು ಅಥವಾ ಗಡುಸಾಗುವುದು ­

-ಬೆಳಗ್ಗೆ 30 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಧಿಗಳು ಗಡುಸಾಗುವುದು ­

-ಒಂದಕ್ಕಿಂತ ಹೆಚ್ಚು ಸಂಧಿಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವುದು ­

-ಲಕ್ಷಣಗಳು ಆರಂಧಿಕವಾಗಿ ಮಣಿಕಟ್ಟು, ಪಾದ ಅಥವಾ ಹಸ್ತಗಳಂತಹ ಸಣ್ಣ ಸಂಧಿಗಳಲ್ಲಿ ಕಾಣಿಸಿಕೊಳ್ಳುವುದು

-ದೇಹದ ಎರಡೂ ಪಾರ್ಶ್ವಗಳಲ್ಲಿ ಲಕ್ಷಣಗಳು ಅವೇ ಸಂಧಿಗಳಲ್ಲಿ ಕಂಡುಬರುತ್ತವೆ ­

-ದಣಿವು ­

-ಕಡಿಮೆ ಪ್ರಮಾಣದಲ್ಲಿ ಜ್ವರ ­

-ಲಕ್ಷಣಗಳು ಒಮ್ಮೆ ಕಾಣಿಸಿಕೊಂಡು ಮಾಯವಾಗುವುದು, ಮತ್ತೆ ತಲೆದೋರುವುದು

ಚಿಕಿತ್ಸೆ

ಹಲ್ಲು ಸೋಂಕಿಗೆ ಈ ಕೆಳಗಿನ ಚಿಕಿತ್ಸೆಗಳನ್ನು ನಡೆಸಬಹುದು ­

-ಕೀವನ್ನು ಹೊರತೆಗೆಯುವುದು ­

-ಆ್ಯಂಟಿಬಯೋಟಿಕ್‌ ಚಿಕಿತ್ಸೆ ­

-ನೋವು ನಿವಾರಕ ಔಷಧಗಳು

-ಜ್ವರ ಅಥವಾ ತೀವ್ರ ಬಾವಿನಂತಹ ಸಮಸ್ಯೆಗಳಿಗೆ ಚಿಕಿತ್ಸೆ

-ರೂಟ್‌ ಕೆನಲ್‌ ಚಿಕಿತ್ಸೆ ­

-ದಂತ ವೈದ್ಯರಿಗೆ ಹಲ್ಲನ್ನು ಉಳಿಸಿಕೊಳ್ಳುವುದು ಸಾಧ್ಯವಾಗದೆ ಇದ್ದರೆ ಬಾಧಿತ ಹಲ್ಲನ್ನು ತೆಗೆಯುವುದು

ಪೆರಿಯೊಡೊಂಟೈಟಿಸ್‌ಗೆ ಚಿಕಿತ್ಸೆ-

-ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು

-ಬಾಯಿಯ ವೃತ್ತಿಪರ ಶುಚಿತ್ವ ಪ್ರಾವೀಣ್ಯವನ್ನು ಹೊಂದಿರುವ ದಂತವೈದ್ಯರಿಂದ ನಿಯಮಿತವಾಗಿ ಚೆಕ್‌ಅಪ್‌ ಮಾಡಿಸಿಕೊಳ್ಳುವುದು

-ವಸಡುಗಳ ಕೆಳಗಿರುವ ಹಲ್ಲುಗಳ ಆಸನ ಭಾಗದ ಸಹಿತ ಹಲ್ಲು ಬೇರುಗಳ ಮೇಲ್ಮೈಗಳನ್ನು ಆಳವಾಗಿ ಶುಚಿಗೊಳಿಸುವುದು

-ವಸಡುಗಳ ಕೆಳಭಾಗಕ್ಕೆ ಅಥವಾ ಬಾಯಿಗೆ ಔಷಧ

-ಕೆಲವು ಪ್ರಕರಣಗಳಲ್ಲಿ ತೊಂದರೆಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ

ಸಾರಾಂಶ

ರುಮಟಾಯಿಡ್‌ ಆರ್ಥೈಟಿಸ್‌ನಂತಹ ಸಂಧಿನೋವುಗಳ ಜತೆಗೆ ಬಾಯಿಯ ಬ್ಯಾಕ್ಟೀರಿಯಾ ಸೋಂಕುಗಳು ಸಂಬಂಧ ಹೊಂದಿರಬಹುದು. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ರೋಗಪ್ರತಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಮೂಲಕ ರುಮಟಾಯಿಡ್‌ ಆರ್ಥೈಟಿಸ್‌ಗೆ ಕಾರಣವಾಗಬಲ್ಲುದು.

ಬ್ಯಾಕ್ಟೀರಿಯಾಗಳು ಬಾಯಿಯಿಂದ ರಕ್ತ ಪ್ರವಾಹದ ಮೂಲಕ ಸಂಚರಿಸಿ ಸಂಧಿಗಳನ್ನು ಮತ್ತು ಸಂಧಿ ಜೋಡಣೆಯ ಭಾಗವನ್ನು ಸೇರಿಕೊಳ್ಳಬಹುದು. ಇದನ್ನು ತಡೆಗಟ್ಟಲು ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು.

ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಪ್ರತೀ ದಿನ ಚೆನ್ನಾಗಿ ಹಲ್ಲುಜ್ಜುವುದು ಮತ್ತು ಫ್ಲಾಸ್‌ ಮಾಡಿ ಕೊಳ್ಳುವುದು ಅಗತ್ಯ. ಈ ಮೂಲಕ ಬಾಯಿಯ ಸೋಂಕನ್ನು ಮತ್ತು ಉರಿಯೂತವನ್ನು ಉಂಟುಮಾಡಬಹುದಾದ ಬ್ಯಾಕ್ಟೀರಿಯಾಗಳನ್ನು ನಿವಾರಿಸಿಕೊಳ್ಳಬಹುದು.

ನಿಯಮಿತವಾಗಿ ಬಾಯಿ, ಹಲ್ಲುಗಳ ತಪಾಸಣೆ ಮಾಡಿಸಿ ಕೊಳ್ಳುವುದು ಕೂಡ ಅಷ್ಟೇ ಮುಖ್ಯ. ವರ್ಷಕ್ಕೊಮ್ಮೆ ಅಥವಾ ಅಗತ್ಯಬಿದ್ದರೆ ಹೆಚ್ಚು ಬಾಯಿ ತಪಾಸಣೆ ಮಾಡಿಸಿಕೊಳ್ಳಬೇಕು.

ಸಂಧಿ ನೋವು ಅಥವಾ ಆರ್ಥೈಟಿಸ್‌ನ ಲಕ್ಷಣ ಇದ್ದರೆ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅದಕ್ಕೆ ಕಾರಣವಾಗಿರ ಬಹುದಾದ ಆಂತರಿಕ ಕಾರಣಗಳನ್ನು ಕಂಡುಕೊಳ್ಳಬೇಕು.

ಡಾ| ಆನಂದದೀಪ್‌ ಶುಕ್ಲಾ,

ಅಸೋಸಿಯೇಟ್‌ ಪ್ರೊಫೆಸರ್‌,

ಓರಲ್‌ ಸರ್ಜರಿ ವಿಭಾಗ,

ಎಂಸಿಒಡಿಎಸ್‌, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್‌ ಸರ್ಜರಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

Vachanananda Swamiji spoke about getting reservation to Panchmasali community

ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mental-health-of-children

ಸ್ವಲೀನತೆಯಿರುವ ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಲಕ್ಷಣಗಳು

large-intestine–health

ಆರೋಗ್ಯ: ದೊಡ್ಡ ಕರುಳಿನ ಕ್ಯಾನ್ಸರ್‌ ಬಗ್ಗೆ ಅರಿಯಿರಿ

4-health

ಮೂತ್ರಪಿಂಡ (ಕಿಡ್ನಿ); ಆರೋಗ್ಯ ಅಭಿಯಾನ

shopulder

ಆರೋಗ್ಯ ವಾಣಿ: ಭುಜನೋವೇ? ಕಾರಣವೇನು? ತಿಳಿಯೋಣ ಬನ್ನಿ

CANCER copy

ಆರೋಗ್ಯ ವಾಣಿ: ಬಾಲ್ಯಕಾಲದ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

Vachanananda Swamiji spoke about getting reservation to Panchmasali community

ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.