ದಂತ ವೈದ್ಯ ಮತ್ತು ಸುದಂತಯೋಜನ ತಜ್ಞ ವ್ಯತ್ಯಾಸಗಳೇನು ?


Team Udayavani, Feb 25, 2018, 6:00 AM IST

Dentist-750110.jpg

ನೀವು ಏಕೆ ಸುದಂತ ಯೋಜನ 
ಚಿಕಿತ್ಸೆ ಪಡೆಯಬೇಕು?

ಸುದಂತ ಯೋಜನ ಚಿಕಿತ್ಸೆಯ ಗುರಿ ಎಂದರೆ ಸುಂದರ ನಗು ಮತ್ತು ಉತ್ತಮ ಜಗಿತ – ಅರ್ಥಾತ್‌ ಎದುರು ದವಡೆಯ ಹಲ್ಲುಗಳೊಂದಿಗೆ ಸರಿಯಾಗಿ ಸಂಯೋಜನೆ ಹೊಂದುವ ನೇರ, ಸುಂದರವಾದ ಹಲ್ಲುಗಳು. ಉತ್ತಮ ಜಗಿತವು ನಿಮಗೆ ಜಗಿಯುವುದಕ್ಕೆ, ಚೀಪುವುದಕ್ಕೆ ಮತ್ತು ಮಾತನಾಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಸುಂದರ ನಗು ಆತ್ಮ ಗೌರವ, ಆತ್ಮವಿಶ್ವಾಸಕ್ಕೆ ಕೊಡುಗೆಯಾಗುವ ಮೂಲಕ ಅನೇಕರಿಗೆ ಒಳ್ಳೆಯ ಭವಿಷ್ಯರೂಪಕವಾಗುತ್ತದೆ. ನಾವು ಇಂದು ಹೆಚ್ಚು ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಬದುಕುತ್ತಿದ್ದೇವೆ, ಒಳ್ಳೆಯ ನಗು ನಮ್ಮ ವ್ಯಕ್ತಿತ್ವಕ್ಕೊಂದು ಹೊಸ ಹೊಳಪನ್ನು ನೀಡುತ್ತದೆ. 
ಬಹಳಷ್ಟು ಬಾರಿ ಸುದಂತ ಯೋಜನ ಚಿಕಿತ್ಸೆಯು ಸಮಗ್ರ ದಂತ ಆರೈಕೆ ಯೋಜನೆಯ ಭಾಗವಾಗಿರುತ್ತದೆ. ಅಗತ್ಯವಾದಾಗ ಸುದಂತ ಯೋಜನ ಚಿಕಿತ್ಸೆಯೊಂದಿಗೆ ಉತ್ತಮ ಆರೈಕೆಯಿಂದ ಹಲ್ಲುಗಳು ಜೀವನಪರ್ಯಂತ ಚೆನ್ನಾಗಿರುತ್ತವೆ.
 
ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳು ಅಥವಾ ಹದಿವಯಸ್ಕರಲ್ಲಿ ಚಿಕಿತ್ಸೆಯು ಈಗಾಗಲೇ ಮುಖ ಮತ್ತು ದವಡೆಗಳು ಸಂಪೂರ್ಣ ಬೆಳವಣಿಗೆ ಹೊಂದಿದವರಿಗಿಂತ ಹೆಚ್ಚು ಒಳ್ಳೆಯ ಫ‌ಲಿತಾಂಶವನ್ನು ನೀಡುತ್ತವೆ. 

ನೀವು ಚಿಕಿತ್ಸೆ ಪಡೆಯುತ್ತಿರುವಾಗ ಎಷ್ಟು ಸಮಯಕ್ಕೊಮ್ಮೆ 
ಸುದಂತ ಯೋಜನ ತಜ್ಞ ವೈದ್ಯರನ್ನು ಕಾಣಬೇಕು?

ನಿಮ್ಮ ಚಿಕಿತ್ಸೆಯ ಅವಧಿಯಲ್ಲಿ ಸರಾಸರಿ 5-6 ವಾರಗಳಿಗೆ ಒಮ್ಮೆ ನೀವು ಸುದಂತ ಯೋಜನ ತಜ್ಞ ವೈದ್ಯರನ್ನು ಕಾಣಬೇಕು. ಇದರಿಂದ ನಿಮ್ಮ ಸುದಂತ ಯೋಜನ ತಜ್ಞ ವೈದ್ಯರಿಗೆ ಚಿಕಿತ್ಸೆಯ ಅವಧಿಯಲ್ಲಿ ಅಗತ್ಯ ಬದಲಾವಣೆಗಳು ಪ್ರಗತಿ ಹೊಂದುವಂತೆ ಮಾಡುವುದಕ್ಕೆ, ನಿಮ್ಮ ಚಿಕಿತ್ಸಾ ಪ್ರಗತಿಯ ಮೇಲೆ ಗಮನವಿರಿಸುವುದಕ್ಕೆ ಹಾಗೂ ನಿಮ್ಮ ಹಲ್ಲುಗಳು ಮತ್ತು ವಸಡುಗಳ ಆರೋಗ್ಯದ ಮೇಲೆ ನಿಗಾ ಇರಿಸುವುದಕ್ಕೆ ಸಾಧ್ಯವಾಗುತ್ತದೆ. 

ಸುದಂತಯೋಜನ ತಜ್ಞ ಮಾತ್ರ ನಿಮ್ಮ ನಗುವನ್ನು ಅತ್ಯಂತ ಸುಂದರಗೊಳಿಸಬಲ್ಲ ತರಬೇತಿ, ಅನುಭವ ಮತ್ತು ಚಿಕಿತ್ಸಾ ಆಯ್ಕೆಗಳನ್ನು ಹೊಂದಿರುತ್ತಾನೆ. 

ಎಲ್ಲ ಸುದಂತ ಯೋಜನ ತಜ್ಞರು ದಂತ ವೈದ್ಯರಾಗಿರುತ್ತಾರೆ; ಆದರೆ ದಂತವೈದ್ಯರಲ್ಲಿ ಶೇ. 6 ಮಂದಿ ಮಾತ್ರ ಸುದಂತಯೋಜನ ತಜ್ಞರಾಗಿರುತ್ತಾರೆ. 

ಚಿಕಿತ್ಸೆ ಎಷ್ಟು ಸಮಯ ನಡೆಯುತ್ತದೆ?
ಚಿಕಿತ್ಸೆಯ ಅವಧಿ ನಿರ್ದಿಷ್ಟ ರೋಗಿಯ ವ್ಯಕ್ತಿಗತ ಸಮಸ್ಯೆಯನ್ನು ಅವಲಂಬಿಸಿರುತ್ತದೆ. ಸರಳ ಪ್ರಕರಣಗಳಿಗೆ ಚಿಕಿತ್ಸೆ ನೀಡುವುದಕ್ಕೆ ಕೆಲವು ತಿಂಗಳುಗಳ ಕಾಲಾವಕಾಶ ಸಾಕು; ಇದೇವೇಳೆ ಸಂಕೀರ್ಣ ಜಗಿತ ಸರಿಪಡಿಸುವಿಕೆಯಂತಹ ಚಿಕಿತ್ಸೆಗಳಿಗೆ 2-3 ವರ್ಷ ತಗಲಬಹುದು. ಅತ್ಯಂತ ಕನಿಷ್ಟ ಅವಧಿಯಲ್ಲಿ ನಿಮ್ಮ ಮುಖದಲ್ಲಿ ಆರೋಗ್ಯಯುತವಾದ ಸುಂದರ ನಗುವನ್ನು ಅರಳಿಸುವುದಕ್ಕೆ ಅಗತ್ಯವಾದಂತಹ ಕೌಶಲ ಮತ್ತು ಸಲಕರಣೆಗಳನ್ನು ನಿಮ್ಮ ಸುದಂತ ಯೋಜನ ತಜ್ಞ ವೈದ್ಯರು ಹೊಂದಿರುತ್ತಾರೆ.

ಡಾ| ರಿತೇಶ್‌ ಸಿಂಗ್ಲಾ ,
ಅಸೊಸಿಯೇಟ್‌ ಪ್ರೊಫೆಸರ್‌, ಆಥೊìಡಾಂಟಿಕ್ಸ್‌ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.