ಕಲೆಕ್ಟರ್ ಎಡಿಷನ್‌ ಹೆಬ್ಬಾಳ ಶಾಸನ


Team Udayavani, Oct 13, 2018, 2:55 PM IST

300.jpg

ಬೆಂಗಳೂರಿನ ಇತಿಹಾಸ ಸಾರುವ ಶಾಸನ ಕಲ್ಲುಗಳ ಬಗ್ಗೆ ಹಿಂದೊಮ್ಮೆ ವಿಸ್ತಾರವಾಗಿ ಬರೆದಿದ್ದೆವು. ಈ ಕುರಿತು ಬೆಂಗಳೂರಿಗರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿರುವವರು ಉದಯ್‌ಕುಮಾರ್‌ ಮತ್ತು ವಿನಯ್‌ಕುಮಾರ್‌.

ಕನ್ನಡನಾಡಿನ ಹಿರಿಮೆಯನ್ನು  ಸಾರುವ ಉದ್ದೇಶದಿಂದ ಹೇಗೆಲ್ಲಾ ಶಾಸನಕಲ್ಲುಗಳನ್ನು ಪುನರುಜ್ಜೀವಗೊಳಿಸಬಹುದು ಎನ್ನುವುದಕ್ಕೆ ಅವರ ಕಾರ್ಯ ಒಳ್ಳೆಯ ಉದಾಹರಣೆ. ಅತ್ಯಂತ ಹಳೆಯದು ಎನ್ನಲಾದ ಕ್ರಿ.ಶ 750 ಇಸವಿಯ ಹೆಬ್ಬಾಳದ ಶಾಸನದ ತದ್ರೂಪನ್ನು ಅತ್ಯಾಧುನಿಕ 3ಡಿ ಪ್ರಿಂಟಿಂಗ್‌ ಮತ್ತಿತರ ತಂತ್ರಜ್ಞಾನಗಳನ್ನು ಬಳಸಿ ಮರು ಸೃಷ್ಟಿಸಿದ್ದಾರೆ.

ಹಿತ್ತಾಳೆಯಲ್ಲಿ ಮಾಡಲ್ಪಟ್ಟಿರುವ ಈ ಶಾಸನ ಪ್ರತಿಯನ್ನು ಸಂಗ್ರಹಕಾರರು ಜತನದಿಂದ ಕಾಪಾಡಿಕೊಳ್ಳುವ (ಕಲೆಕ್ಟರ್ ಎಡಿಷನ್‌) ಮಾದರಿಯಲ್ಲಿ ರೂಪಿಸಲಾಗಿರುವುದು ವಿಶೇಷ. ಈ ಕೆಲಸದಲ್ಲಿ ಹೆರಿಟೇಜ್‌ ರಿವೈವಲ್‌ ಟ್ರಸ್ಟ್‌, ಆಲ್ಟೆಮ್‌ ಟೆಕ್ನಾಲಜೀಸ್‌, ಆರ್ಟೆಕ್‌ 3ಡಿ ಮತ್ತು ಟಾಟಾ ಎಲಿಕ್ಸಿ ಕಂಪನಿಯೂ ಕೈಜೋಡಿಸಿದೆ. ಇದು ಖರೀದಿಗೆ ಲಭ್ಯವಿದೆ.

ಹೆಬ್ಬಾಳ ಶಾಸನ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಶಿಲಾಶಾಸನಗಳಲ್ಲೇ ಹಳೆಯದು. ಅದನ್ನು ಹೆಬ್ಬಾಳದಲ್ಲಿ ಪ್ರತಿಷ್ಠಾಪಿಸುವ ಕೆಲಸದಲ್ಲಿ ಉದಯ್‌ ಮತ್ತು ವಿನಯ್‌ ಅವರ ತಂಡ ಶ್ರಮಿಸುತ್ತಿದೆ. ಈ ಶಿಲಾಶಾಸನವನ್ನು ಇಡುವ ಸಲುವಾಗಿ ಕಲ್ಲಿನ ಮಂಟಪವನ್ನು ರೂಪಿಸಲಾಗಿದೆ. ಮಂಟಪವನ್ನು ಆರ್ಕಿಟೆಕ್ಟ್ ಯಶಸ್ವಿನಿ ಶರ್ಮಾವರು ವಿನ್ಯಾಸಗೊಳಿಸಿದ್ದು, ಶಿಲ್ಪಿ ಗಣೇಶ್ ಎಲ್. ಭಟ್ ಅವರ ಮಾರ್ಗದರ್ಶನದಲ್ಲಿ ಮಂಟಪ  ಮೂಡಿ ಬರುತ್ತಿದೆ.

ಇದರ ವೈಶಿಷ್ಟ್ಯವೆಂದರೆ ಈ ಶಿಲಾಶಾಸನವನ್ನು ರೂಪಿಸಿದ ಗಂಗರ ವಾಸ್ತುಶೈಲಿಯಲ್ಲೇ ಮಂಟಪವನ್ನು ರೂಪಿಸಲಾಗಿದೆ. ಶಾಸನದ ಹಿತ್ತಾಳೆ ಪ್ರತಿ ಮತ್ತು ಮಂಟಪದ ಕೆಲಸದಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ನೆರವಾಗುತ್ತಿವೆ. ಈ ಕುರಿತು ಟೀಪಾಯ್‌ ಫಿಲಂಸ್‌ನವರು ನಿರ್ಮಿಸಿರುವ ಸಾಕ್ಷ್ಯಚಿತ್ರವೊಂದು ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಹೆಚ್ಚಿನ ಮಾಹಿತಿಗೆ: 9845204268

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.