ಟೇಸ್ಟ್‌ ಆಫ್ ದಾವಣಗೆರೆ


Team Udayavani, Mar 21, 2020, 6:04 AM IST

taste-of

ಹದವಾದ ಉರಿಯಲ್ಲಿ, ಸಾಕಷ್ಟು ನಂದಿನಿ ಬೆಣ್ಣೆ ತಯಾರಾಗುವ ಗರಿಗರಿಯಾದ ದೋಸೆಯನ್ನು ಏಲಕ್ಕಿ, ಲವಂಗ ಬೆರೆಸಿದ ಖಾರವಾದ ತೆಂಗಿನಕಾಯಿ ಚಟ್ನಿ ಜೊತೆ ಅರಿಶಿನ ಹಾಗೂ ಒಗ್ಗರಣೆ ಇಲ್ಲದ ಆಲೂ ಪಲ್ಯದ ಸಾಂಗತ್ಯದಲ್ಲಿ ಹೊರಳಾಡಿಸುತ್ತಾ ತಿನ್ನುತ್ತಿದ್ರೆ, ಅರ್ಧ ಗಂಟೆ ಕಾದಿದ್ದೆಲ್ಲಾ ಮರೆತು ಹೋಗ್ಬಿಡುತ್ತೆ…

ದಾವಣಗೆರೆ ಅಂದ ತಕ್ಷಣ ನೆನಪಿಗೆ ಬರೋದು ಅಲ್ಲಿನ ನರ್ಗೀಸ್‌ ಮಂಡಕ್ಕಿ, ಮೆಣಸಿನಕಾಯಿ ಮತ್ತು ಬೆಣ್ಣೆ ದೋಸೆ. ಬೆಂಗಳೂರಿನಲ್ಲಿ ಅಲ್ಲಲ್ಲಿ ಈಗ ಸಾಕಷ್ಟು ಬೆಣ್ಣೆದೋಸೆ ಹೋಟೆಲ್‌ಗ‌ಳಿದ್ದರೂ, ಎಲ್ಲಾ ಕಡೆ ತಿನ್ನಲು ಸಾಧ್ಯವಿಲ್ಲ. ಅದರ ಅರ್ಧ ರುಚಿ ಅದಕ್ಕೆ ಬಳಸುವ ಬೆಣ್ಣೆಯಿಂದಲೇ ಬರುವುದರಿಂದ. ದಾವಣಗೆರೆಯವಳೇ ಆದ ನನಗೆ ಅದರ ಘಮಲಿನಿಂದಲೇ ಬಳಸಿರುವ ಬೆಣ್ಣೆ ಎಂಥದ್ದು ಎಂದು ಗೊತ್ತಾಗಿ ಹೋಗುತ್ತದೆ.

ಹಾಗಾಗಿ, ಕೆಲವೇ ಹೋಟೆಲ್‌ಗ‌ಳಲ್ಲಿ ಮಾತ್ರವೇ ನಾನು ಬೆಣ್ಣೆದೋಸೆ ತಿನ್ನೋದು. ಅಂಥ ಒಳ್ಳೆಯ (ನಂದಿನಿ) ಬೆಣ್ಣೆ ಬಳಸುವ ಹೋಟೆಲ್‌ಗ‌ಳ ಲಿಸ್ಟ್‌ನಲ್ಲಿ ರಾಜರಾಜೇಶ್ವರಿ ನಗರದ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ ಸೇರಿಸಬಹುದು. ಕಳೆದ ಹತ್ತು ವರ್ಷದಿಂದ ಹೋಟೆಲ್‌ ನಡೆಸುತ್ತಿರುವ ವಿ. ನಾಗರಾಜ್‌ ಮೂಲತಃ ದಾವಣಗೆರೆಯವರೇ.

ಅಲ್ಲಿ ಅವರ ಅಪ್ಪ, ಚಿಕ್ಕಪ್ಪ ಎಲ್ಲರೂ ಇದೇ ಉದ್ಯಮದಲ್ಲಿರುವುದರಿಂದ ಬೆಣ್ಣೆ ದೋಸೆಗೆ ಪಕ್ಕಾ ದಾವಣಗೆರೆಯ ರುಚಿ ಬಂದಿರುವುದರಲ್ಲಿ ಆಶ್ಚರ್ಯವಿಲ್ಲ. ಹದವಾದ ಉರಿಯಲ್ಲಿ, ಸಾಕಷ್ಟು ನಂದಿನಿ ಬೆಣ್ಣೆ ಹಾಕಿಸಿಕೊಂಡು, ತಯಾರಾಗುವ ಗರಿಗರಿಯಾದ ದೋಸೆಯನ್ನು ಏಲಕ್ಕಿ, ಲವಂಗ ಬೆರೆಸಿದ ಖಾರವಾದ ತೆಂಗಿನಕಾಯಿ ಚಟ್ನಿ ಜೊತೆ ಅರಿಶಿನ ಹಾಗೂ ಒಗ್ಗರಣೆ ಇಲ್ಲದ ಆಲೂ ಪಲ್ಯದ ಸಾಂಗತ್ಯದಲ್ಲಿ ಹೊರಳಾಡಿಸುತ್ತಾ ತಿನ್ನುತ್ತಿದ್ರೆ,

ಅರ್ಧ ಗಂಟೆ ಕಾಕಾದಿದ್ದೆಲ್ಲಾ ಮರೆತು ಹೋಗ್ಬಿಡುತ್ತೆ. ಬೆಳಗಿನ ಉಪಾಹಾರಕ್ಕೆ ಬೆಣ್ಣೆ ದೋಸೆ ಜೊತೆ ಬೆಣ್ಣೆ ಖಾಲಿ, ತಟ್ಟೆ ಇಡ್ಲಿ, ವಡಾ ಸಾಥ್‌ ಕೊಟ್ಟರೆ, ಸಂಜೆ ಪಡ್ಡು, ಈರುಳ್ಳಿ ದೋಸೆ, ಮಿರ್ಚಿ, ಒಗ್ಗರಣೆ ಮಂಡಕ್ಕಿ, ಗಿರ್ಮಿಟ್ಟು, ಗುಲಾಬ್‌ ಜಾಮೂನು ಸಿದ್ಧವಾಗಿರುತ್ತವೆ. ನೂರು ರೂಪಾಯಿ ಒಳಗೆ, ಒಂದು ಬೆಣ್ಣೆ ದೋಸೆ, ಒಂದು ತಟ್ಟೆ ಇಡ್ಲಿ- ವಡಾ ತಿಂದು ಕಾಫಿ ಕುಡಿಯಬಹುದು.

ಎಲ್ಲಿದೆ?: ದಾವಣಗೆರೆ ಬೆಣ್ಣೆ ದೋಸೆ, ನಂ.19, 3ನೇ ಮೇನ್‌, ಬಿಇಎಂಎಲ್‌ 5ನೇ ಹಂತ, ರಾಜರಾಜೇಶ್ವರಿ ನಗರ

ಸಮಯ: ಬೆಳಗ್ಗೆ 7ರಿಂದ ಮಧ್ಯಾಹ್ನ 12, ಸಂಜೆ 4.30- ರಾತ್ರಿ 9

ಬಿಡುವು: ಸೋಮವಾರ

* ಗಾಯತ್ರಿ ರಾಜ್‌

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.