ವಿಜ್ಞಾನ ಕಂಡಂತೆ ಯುಗಾದಿ


Team Udayavani, Mar 21, 2020, 6:03 AM IST

vijanana-ugadi

ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ…

ವರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣುತ್ತೇನೆ ಎಂಬ ಮನಸ್ಸಿನಲ್ಲಿ ವರ್ಷವನ್ನು ಆರಂಭಮಾಡುವ ದಿನವೇ ಯುಗಾದಿ. ಇಂದು ಹೊಸ ಸಂಕಲ್ಪಗಳನ್ನು ಪ್ರಾರಂಭಿಸಲು ಯೋಗ್ಯವಾದ ದಿನ. ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ, “ಇವತ್ತು ಬೇಗನೆ ಏಳು. ತಡವಾಗಿ ಎದ್ದರೆ ವರ್ಷವಿಡೀ ತಡವಾಗಿ ಏಳುತ್ತೀಯ’ ಎಂದು, “ಇವತ್ತು ಕೋಪ, ಹಠ ಮಾಡಬಾರದು, ಅಳಬಾರದು, ನಗುನಗುತ್ತಾ ಸಂತೋಷದಿಂದಿರು. ಆಗ ವರ್ಷವಿಡೀ ಸಂತೋಷದಿಂದ, ಸಮಾಧಾನದಿಂದ ಇರುತ್ತೀಯ’ ಎಂದು. ಈ ವಿಚಾರಗಳು ಮನೆಮನೆಗಳಲ್ಲಿ, ಸಂಸ್ಕಾರ ರೂಪದಲ್ಲಿ ಬಂದಿರುವುದು

ಎಲ್ಲರಿಗೂ ತಿಳಿದಿರುವ ವಿಚಾರಗಳು: ಬೆಂಗಳೂರಿನಂಥ ಮಹಾನಗರದಲ್ಲಿ ನಿಂತು ನೋಡಿದಾಗ, ಇವೆಲ್ಲವೂ ಕಾಲಬಾಹಿರ ವಿಷಯಗಳು ಎನ್ನಿಸಬಹುದು. ವರ್ಷದ ಮೊದಲ ರಜೆಯಂದು ಹೊಸತಿಂಡಿ, ಮನೆಕೆಲಸ ಅಂತ ಮತ್ತೆ ಮತ್ತೆ ಆಯಾಸ ಮಾಡಿಕೊಳ್ಳುವುದಕ್ಕಿಂತ, ಹಾಯಾಗಿ ಸ್ವಿಗ್ಗಿಯಲ್ಲಿ ಸುಗ್ಗಿಯ ಅಡುಗೆ ಆರ್ಡರ್‌ ಮಾಡಬಹುದಲ್ಲ? ಎಂಬ ಯೋಚನೆ ಬರಬಹುದು. ಅಥವಾ ಫ್ಯಾಮಿಲಿ ಔಟಿಂಗ್‌ ಪ್ರವಾಸಕ್ಕೆ ಹೋಗಿ ಶ್ರಮವನ್ನು ಕಳೆದುಕೊಂಡು ಬರಬಹುದಲ್ಲ ಎಂಬ ಚಿಂತನೆಗಳೂ ಈಗ ಸಹಜವಾಗಿವೆ. ಈ ಹಬ್ಬದ ಪರಿಪೂರ್ಣ ಉಪಯೋಗ ಏನು? ಪ್ರಯೋಜನ ಏನು? ಎಂಬ ಶಿಕ್ಷಣ ಇಲ್ಲದಿರುವುದರಿಂದ, ಈ ರೀತಿಯಾದ ಬಗೆ ಬಗೆ ಯೋಚನೆಗಳು ಸಹಜ.

ಬದಲಾವಣೆಗಳ ಕಾಲ: ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ. ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ- ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ.

ಅಭ್ಯಂಗದ ಲಾಭ: ಯುಗಾದಿಯ ಆಚರಣೆ- ಪ್ರಾತಃಕಾಲದಲ್ಲಿ ಎಳ್ಳೆಣ್ಣೆಯಿಂದ ಅಭ್ಯಂಗ ಮಾಡಿಕೊಳ್ಳಬೇಕು. “ಅಭ್ಯಂಗವು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು. ದೃಷ್ಟಿಪಾಟವನ್ನು ಕೂಡುವುದು. ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ, ಮನಸ್ಸನ್ನು ಹಗುರಗೊಳಿಸಿ, ಪುಷ್ಟಿ ಆಯುಸ್ಸು, ನಿದ್ರೆಯ ಸೌಖ್ಯವನ್ನುಂಟು­ಮಾಡುವುದು’ ಎಂದು ಆಯುರ್ವೇದವು ಹೇಳುತ್ತದೆ. ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ.

ಯುಗಾದಿ ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನಗಳ ಜೊತೆಗೆ, ವಿಶೇಷವಾಗಿ ಪಂಚಾಂಗ ಮತ್ತು ವಸ್ತ್ರಭೂಷಣಗಳನ್ನು ದಾನಮಾಡುತ್ತಾರೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ.

ಕಫ‌ ಕರಗಿಸುವ ಬೇವು: ಯುಗಾದಿಯಂದು ದೇವರಿಗೆ ಸಮರ್ಪಿಸಿ, ಸೇವಿಸುವ ನೈವೇದ್ಯ- ಬೇವು- ಬೆಲ್ಲ. ಹೂವಿನೊಡನೆ ಕೂಡಿದ ಚಿಗುರಬೇವು, ಕಫ‌ ಮತ್ತು ಪಿತ್ತವನ್ನು ಕಡಿಮೆ ಮಾಡುತ್ತದೆ. ಕಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖನ್ನತೆ ಸಹಜ. ಹಾಗಾಗಿ, ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮವಿದೆ.

* ಡಾ. ಯಶಸ್ವಿನಿ, ಆಯುರ್ವೇದ ತಜ್ಞೆ

Ad

ಟಾಪ್ ನ್ಯೂಸ್

Central government says warning labels on samosa, jalebi are false

No health warning: ಸಮೋಸಾ, ಜಿಲೇಬಿಗೆ ಎಚ್ಚರಿಕೆ ಲೇಬಲ್‌ ಸುಳ್ಳು ಎಂದ ಕೇಂದ್ರ ಸರ್ಕಾರ

Nabard–meet

ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 4.46 ಲಕ್ಷ ಕೋಟಿ ರೂ. ಸಾಲ: ನಬಾರ್ಡ್‌

ಅಳಿವೆ ಬಾಗಿಲು ಕಡೆ ಬಂದದ್ದೇ ಮುಳುವಾಯಿತೇ? ತೂಫಾನ್‌ಗೆ ಸಿಕ್ಕಿ ದೋಣಿ ಸಂಪೂರ್ಣ ದಿಕ್ಕಾಪಾಲು

ಅಳಿವೆ ಬಾಗಿಲು ಕಡೆ ಬಂದದ್ದೇ ಮುಳುವಾಯಿತೇ? ತೂಫಾನ್‌ಗೆ ಸಿಕ್ಕಿ ದೋಣಿ ಸಂಪೂರ್ಣ ದಿಕ್ಕಾಪಾಲು

Odisha harassment case: Student dies after 3 days

Odisha se*xual harassment case: 3 ದಿನ ಬಳಿಕ ವಿದ್ಯಾರ್ಥಿನಿ ಸಾವು

Udupi: ಫೈಬರ್‌ ಮೂರ್ತಿ ಎಂದಿದ್ದ ಕಾಂಗ್ರೆಸ್‌ ಆರೋಪ ಸುಳ್ಳು: ಸುನಿಲ್‌ ಕುಮಾರ್‌

Udupi: ಫೈಬರ್‌ ಮೂರ್ತಿ ಎಂದಿದ್ದ ಕಾಂಗ್ರೆಸ್‌ ಆರೋಪ ಸುಳ್ಳು: ಸುನಿಲ್‌ ಕುಮಾರ್‌

Cong-Dk-gurantee

ಪ್ರತಿ ವಾರ್ಡ್‌, ಪಂಚಾಯತ್‌ ಮಟ್ಟದಲ್ಲೂ ಗ್ಯಾರಂಟಿ ಸಮಾವೇಶ: ಡಿ.ಕೆ.ಶಿವಕುಮಾರ್‌

ಗಂಗೊಳ್ಳಿ ದೋಣಿ ದುರಂತ; ಶನಿವಾರ ಪರಿಹಾರ : ಸಚಿವರ ಭರವಸೆ

ಗಂಗೊಳ್ಳಿ ದೋಣಿ ದುರಂತ; ಶನಿವಾರ ಪರಿಹಾರ: ಸಚಿವರ ಭರವಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Central government says warning labels on samosa, jalebi are false

No health warning: ಸಮೋಸಾ, ಜಿಲೇಬಿಗೆ ಎಚ್ಚರಿಕೆ ಲೇಬಲ್‌ ಸುಳ್ಳು ಎಂದ ಕೇಂದ್ರ ಸರ್ಕಾರ

Nabard–meet

ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 4.46 ಲಕ್ಷ ಕೋಟಿ ರೂ. ಸಾಲ: ನಬಾರ್ಡ್‌

ಅಳಿವೆ ಬಾಗಿಲು ಕಡೆ ಬಂದದ್ದೇ ಮುಳುವಾಯಿತೇ? ತೂಫಾನ್‌ಗೆ ಸಿಕ್ಕಿ ದೋಣಿ ಸಂಪೂರ್ಣ ದಿಕ್ಕಾಪಾಲು

ಅಳಿವೆ ಬಾಗಿಲು ಕಡೆ ಬಂದದ್ದೇ ಮುಳುವಾಯಿತೇ? ತೂಫಾನ್‌ಗೆ ಸಿಕ್ಕಿ ದೋಣಿ ಸಂಪೂರ್ಣ ದಿಕ್ಕಾಪಾಲು

Odisha harassment case: Student dies after 3 days

Odisha se*xual harassment case: 3 ದಿನ ಬಳಿಕ ವಿದ್ಯಾರ್ಥಿನಿ ಸಾವು

Udupi: ಫೈಬರ್‌ ಮೂರ್ತಿ ಎಂದಿದ್ದ ಕಾಂಗ್ರೆಸ್‌ ಆರೋಪ ಸುಳ್ಳು: ಸುನಿಲ್‌ ಕುಮಾರ್‌

Udupi: ಫೈಬರ್‌ ಮೂರ್ತಿ ಎಂದಿದ್ದ ಕಾಂಗ್ರೆಸ್‌ ಆರೋಪ ಸುಳ್ಳು: ಸುನಿಲ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.