ಕೋವಿಡ್ ಕಾಲದಲ್ಲಿ ಕಡಿಮೆ ಖರ್ಚಲ್ಲಿ ಬದುಕೋಣ…


Team Udayavani, Apr 5, 2021, 6:36 PM IST

ಕೋವಿಡ್ ಕಾಲದಲ್ಲಿ ಕಡಿಮೆ ಖರ್ಚಲ್ಲಿ ಬದುಕೋಣ…

ಕೋವಿಡ್ ಕುರಿತ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ. ಭಾರತದಲ್ಲಿ ಕೊರೋನಾದ ಎರಡನೇ ಅಲೆಶುರು ವಾಗುವ ಎಲ್ಲಾ ಸೂಚನೆಗಳೂ ಸಿಗುತ್ತಿವೆ.ಕರ್ನಾಟಕದಲ್ಲಿ ದಿನಕ್ಕೆ 200-300 ಪ್ರಕರಣಗಳಿಗೆಸೀಮಿತವಾಗಿದ್ದ ಸಂಖ್ಯೆ, ಈಗ ಮತ್ತೆ ಏಪ್ರಿಲ್‌ನಲ್ಲಿ ಏರುಗತಿ ಕಂಡಿದೆ.

ಕೋವಿಡ್ 2ನೇ ಅಲೆ ಮೊದಲನೆಯದಕ್ಕಿಂತ ತೀವ್ರವಾಗುವ ಸಾಧ್ಯತೆಗಳಿವೆ ಎಂಬ ಮಾತನ್ನು ತಜ್ಞ

ವೈದ್ಯರೂ ಹೇಳುತ್ತಿದ್ದಾರೆ. ಈ ನಡುವೆ, ಕೊರೊನಾದ ಹೊಡೆತದಿಂದ ನೆಲ ಕಚ್ಚಿದ್ದ ಆರ್ಥಿಕತೆಯಿಂದ ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರ ಗ್ಯಾಸ್‌, ಪೆಟ್ರೋಲ್‌ ಮತ್ತಿತರ ಅಗತ್ಯ ವಸ್ತುಗಳ ಬೆಲೆಯನ್ನೂ ಏರಿಸಿದೆ.

ಕೋವಿಡ್ ಜೊತೆಗೆ ಇತರ ಖಾಯಿಲೆಗಳೂ ಬಾಧಿಸುವುದರಿಂದ ಆರೋಗ್ಯ ಮತ್ತು ಆಸ್ಪತ್ರೆ ಖರ್ಚುಗಳೂ ದುಬಾರಿಯಾಗುತ್ತಿವೆ. ಮೊದಲು ಆಗುತ್ತಿದ್ದ ಖರ್ಚಿಗಿಂತ ಎರಡು ಪಟ್ಟುಹೆಚ್ಚು ಖರ್ಚಾಗುತ್ತಿರುವುದರಿಂದ ಸಾಮಾನ್ಯ ಜನರಜೇಬಿಗೂ ದುಬಾರಿಯಾಗಿದೆ. ಈಗ ಸಮಸ್ಯೆಗಳುಯಾವ ರೂಪದಲ್ಲಿ ಬರುತ್ತವೆ ಎಂದು ಹೇಳಲು ಆಗುತ್ತಿಲ್ಲ. ಪರಿಚಯದವರೊಬ್ಬರಿಗೆ ಮೊದಲಿಂದಲೂ ಹೃದಯ ಸಂಬಂಧಿ ಖಾಯಿಲೆಯಿತ್ತು. ಕೋವಿಡ್ ಸಮಯದಲ್ಲಿ ಸಮಸ್ಯೆ ಮತ್ತೆ ಬಂದಿದ್ದರಿಂದ ಅವರು ಆಸ್ಪತ್ರೆಗೆ ಅಡ್ಮಿಟ್‌ ಆಗಬೇಕಾಗಿ ಬಂತು. ಕೋವಿಡ್ ನೆಗೆಟಿವ್‌ ರಿಪೋರ್ಟ್‌ ಇಲ್ಲದೆ ಅಡ್ಮಿಟ್‌ ಮಾಡಿಕೊಳ್ಳ  ಬಾರದು ಅಂತ ಸರ್ಕಾರದ ಆದೇಶವಿತ್ತು. ಹಾಗಾಗಿ ಟೆಸ್ಟ್ ಆಗಿ ರಿಪೋರ್ಟ್‌ ಬರುವವರೆಗೂ, ಸಸ್ಪೆಕr…ವಾರ್ಡ್‌ ನಲ್ಲಿ ಇರಬೇಕಾಯ್ತು. ಅದಕ್ಕೂ ಹೆಚ್ಚು ಖರ್ಚು, ಕೋವಿಡ್ ನೆಗಟಿವ್‌ ಬಂದ ನಂತರ ಮಾಮೂಲಿ ಆಸ್ಪತ್ರೆ ಖರ್ಚುಗಳು. ಹೀಗಾಗಿ ಖರ್ಚಿನ ವಿಷಯ ದಲ್ಲಿ ಪೆಟ್ಟಿನ ಮೇಲೆ ಪೆಟ್ಟು ಬೀಳತೊಡಗಿದೆ.

ಖರ್ಚುಗಳಿಂದ ದೂರ ಇರೋಣ:

ಸಾಲ ಮಾಡಿ ತುಪ್ಪ ತಿನ್ನು ಅನ್ನುವುದು ಹಳೆಯ ಮಾತು. ಆ ಮಾತಿನಂತೆ ಬದುಕುವುದರಲ್ಲಿ ಅರ್ಥವಿಲ್ಲ. ಇವತ್ತಿನ ಸಂದರ್ಭದಲ್ಲಿ ಖರ್ಚುಗಳನ್ನು ಕಡಿಮೆ ಮಾಡಿ ಕೊಂಡು ಬದುಕುವುದೇ ಜಾಣತನ. ಈಗಒಂದು ಮದುವೆ, ನಾಮಕರಣ, ಶುಭ ಸಮಾ ರಂಭ ಅಂತ ಮಾಡಿದರೂ ಲಕ್ಷಾಂತರ ರುಪಾಯಿಗಳ ಖರ್ಚು ಬೀಳುತ್ತದೆ. ಒಂದು ಸಮಾರಂಭಕ್ಕೆ ಹೋಗಿ ಬರುತ್ತೇವೆ ಅಂದರೂ 800-1000 ರುಪಾಯಿ ಕೈ ಬಿಡುತ್ತದೆ. ಇಂಥ ಖರ್ಚುಗಳಿಂದ ದೂರ ಉಳಿಯುವುದೇ ಎಲ್ಲರ ಕೆಲಸ ಮತ್ತು ಕರ್ತವ್ಯ ಆಗಬೇಕು. ಮುಂಬರುವ ದಿನಗಳಲ್ಲಿ ಹೆಚ್ಚಿನ ನೌಕರಿಗಳು ಸೃಷ್ಟಿಯಾಗುತ್ತವಾ? ಎಲ್ಲರ ನೌಕರಿಗಳು ಉಳಿಯುತ್ತವಾ? ಸಂಬಳದಲ್ಲಿ ಹೆಚ್ಚಳ ಆಗುತ್ತದಾ?- ಈ ಪ್ರಶ್ನೆಗಳಿಗೆ ಖಚಿತವಾಗಿ ಉತ್ತರಿಸುವವರಿಲ್ಲ. ಆದರೆ, ಬದುಕು ದುಬಾರಿಯಾಗುತ್ತದೆ ಎಂಬುದು ಸುಳ್ಳಲ್ಲ.

ಪ್ರವಾಸ ಹೋಗುವುದೇ ಬೇಡ:

ತಿಂಗಳುಗಳನ್ನು ಖರ್ಚಿಲ್ಲದಂತೆ ನಿಭಾಯಿಸುವುದಂತೂ ಸಾಧ್ಯವಿಲ್ಲ. ಆದರೆ, ವಾರಾಂತ್ಯಗಳನ್ನು ಖರ್ಚಿಲ್ಲದಂತೆ ನಿಭಾಯಿಸಲು ಸಾಧ್ಯವಿದೆ. ಹೇಗೆದರೆ, ಶನಿವಾರ, ಭಾನುವಾರಗಳಲ್ಲಾಗುವ ಖರ್ಚುಗಳನ್ನು ಕಡಿಮೆ ಮಾಡುವುದು. ಕುಟುಂಬ ದೊಡನೆ ಕಾಲ ಕಳೆಯುವುದು. ಕೋವಿಡ್ ಎರಡನೆ ಅಲೆ ಬರುವ ಸಾಧ್ಯತೆ ಇರುವುದರಿಂದ, ಸದ್ಯಕ್ಕೆ ಪ್ರವಾಸ ಕೈಗೊಳ್ಳುವ ಯೋಚನೆಯನ್ನು ಕೈಬಿಡಿ. ಹಣ,ಆರೋಗ್ಯ ಮತ್ತು ನೆಮ್ಮದಿಯನ್ನು ಉಳಿಸಿಕೊಳ್ಳಲು ಇದೂ ಒಂದು ಒಳ್ಳೆಯ ಉಪಾಯ.

ಹೇಗೆಂದರೆ, ಕುಟುಂಬದೊಂದಿಗೆ ಮೂರು- 4ದಿನಗಳ ಒಂದು ಟ್ರಿಪ್‌ ಅಂದರೆ, ಅದಕ್ಕೆ ಸಾವಿ ರಾರುರೂಪಾಯಿಗಳನ್ನು ಎತ್ತಿಡಬೇಕು. ಆ ಪ್ರವಾಸದಲ್ಲಿ ಅಕಸ್ಮಾತ್‌ ಯಾರಿಗಾದರೂ ಆರೋಗ್ಯ ಕೈ ಕೊಟ್ಟರೆಅದಕ್ಕಾಗಿ ಮತ್ತಷ್ಟು ಹಣ ಖರ್ಚು ಮಾಡಬೇಕು. ನಾವು ಅಂದುಕೊಂಡಂತೆ ಪ್ರವಾಸ ನಡೆಯದಿದ್ದರೆ, ನೆಮ್ಮದಿಯನ್ನೂ ಕಳೆದುಕೊಳ್ಳಬೇಕು! ಟ್ರಿಪ್‌ ಹೋಗುವುದೇ ಬೇಡ ಅಂದುಬಿಟ್ಟರೆ, ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತರಾಗಬಹುದು.

ಖರ್ಚಿಲ್ಲದ ಬೇಸಿಗೆಯಾಗಲಿ:

ಹೌದಲ್ಲವಾ? ಮದುವೆ ಮಾಡುವವರು ಆ ಮೂಲಕ ತಮ್ಮ ಅಂತಸ್ತು ಪ್ರದರ್ಶನ ಮಾಡು ತ್ತಿದ್ದಂತೆಯೇ,ಮದುವೆಗೆ ಹೋಗುತ್ತಿದ್ದವರೂ ಕಾಣಿಕೆ ನೀಡುವಸಂದರ್ಭ ದಲ್ಲಿ ಪ್ರಸ್ಟೀಜ್‌ ತೋರಿಸಲು ಪ್ರಯತ್ನಿ  ಸುತ್ತಿದ್ದರು. ಆ ನೆಪದಲ್ಲಿ ಸುಕಷ್ಟು ಹಣ ಕಳೆದು ಕೊಳ್ಳುತ್ತಿದ್ದರು. ಅದರಿಂದ ಪಾರಾಗಲೂ ಈಗ ಒಂದು ಅವಕಾಶ ಸಿಕ್ಕಿದೆ. ಮದುವೆ ಕಾರ್ಯಕ್ರಮಗಳು ಸರಳವಾಗಿರಬೇಕು ಎನ್ನುವ ನಿಯಮ, ಕೋವಿಡ್ ನೆಪದಲ್ಲಿ ಬಂದಿದೆ. ಅಂತಹ ಸಮಾರಂಭಗಳಿಂದ ದೂರ ಉಳಿದರೆ, ಈ ಕಡೆ ಹಣವೂ ಉಳಿಯುತ್ತದೆ. ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಹೀಗೆ ನೋಡುವಾಗ ಕೊರೊನಾ ಕೇವಲ ತೊಂದರೆಗಳನ್ನಷ್ಟೇ ಸೃಷ್ಟಿಸದೆ, ಸರಳವಾಗಿ ಬದುಕುವ ಅವಕಾಶಗಳನ್ನೂ ಕಲ್ಪಿಸಿಕೊಟ್ಟಿದೆ. ಲಾಕ್‌ಡೌನ್‌, ಕೋವಿಡ್ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು ಮತ್ತು ತಮ್ಮ ಉತ್ಪಾದನೆಗೂ ತೊಡಕಾಗದಂತೆ ಕಂಪನಿಗಳು ವರ್ಕ್‌ ಫ್ರಂ ಹೋಮ್, ವರ್ಕ್‌ ಆನ್‌ ರೊಟೇಶನ್‌ ಪಾಲಿಸಿ, ಮತ್ತಿತರ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ.

ಸಾಮಾನ್ಯ ಜನರು ತಮ್ಮ ಜೀವನವನ್ನು ಆರೋಗ್ಯ ಪೂರ್ಣ, ಸತ್ವಪೂರ್ಣವಾಗಿಸಿಕೊಳ್ಳಲು ಮತ್ತು ಮನೆಯ ಆರ್ಥಿಕ ಮಟ್ಟವನ್ನು ಕಾಪಾಡಿಕೊಳ್ಳಲು ಈ ಸಂದರ್ಭವೊಂದು ಉತ್ತಮ ಅವಕಾಶವಾಗಲಿ, ವೇದಿಕೆಯಾಗಲಿ…

ಸಮ್ಮರ್‌ ಕ್ಯಾಂಪ್‌ನ ರಗಳೆ ಇಲ್ಲ…  :

ಮಕ್ಕಳನ್ನು ಸಮ್ಮರ್‌ ಕ್ಯಾಂಪ್‌ಗೆ ಕಳಿಸುವ ತಲೆನೋವಂತೂ ಈಗ ಇಲ್ಲ. ಅಂದರೆ,ಸಾವಿರಾರು ರೂಪಾಯಿ ಪೋಷಕರಿಗೆಉಳಿಯಿತು ಎಂದೇ ಅರ್ಥ. ಮಕ್ಕಳನ್ನು ಸಮ್ಮರ್‌ ಕ್ಯಾಂಪ್‌ಗೆ ಕಳಿಸುವಬದಲು ಮನೆಯಲ್ಲೇ ಅವರ ವ್ಯಕ್ತಿತ್ವ ವಿಕಸನಕ್ಕೆಸಹಕಾರಿಯಾಗುವ ಕಲೆ, ಸಾಹಿತ್ಯ, ಆಟಗಳು,ಪಾಠಗಳು ಹೀಗೆ ಏನಾದರೊಂದು ಹೊಸತನ್ನುಕಲಿಸಬಹುದು. ಮಕ್ಕಳೊಂದಿಗೆ ನಮಗೂ ಹೊಸತು ಕಲಿಯಲು ಅಥವಾ ಕಲಿತದ್ದನ್ನು ನೆನಪಿಸಿಕೊಂಡು ಬದುಕನ್ನು ಸೆಲೆಬ್ರೇಟ್‌ ಮಾಡಲು ಅವಕಾಶವಾಗುತ್ತದೆ.

 

– ಪ್ರಸಾದ್‌ ಡಿ. ವಿ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.