ಗೋಬರ್‌ ಗ್ಯಾಸ್‌ ಗೀಸರ್‌


Team Udayavani, Jan 27, 2020, 6:09 AM IST

gobar-gas

ಗ್ರಾಮೀಣ ಪ್ರದೇಶದಲ್ಲಿ ಉರುವಲಿನ ಸಮಸ್ಯೆ ಸಾಮಾನ್ಯವಾದುದು. ಕೆಲವು ಪ್ರದೇಶಗಳಲ್ಲಂತೂ ಮಹಿಳೆಯರಿಗೆ ಕಟ್ಟಿಗೆ ಸಂಗ್ರಹಿಸುವುದರಲ್ಲೇ ದಿನದ ಬಹುತೇಕ ಸಮಯ ಕಳೆದುಹೋಗಿರುತ್ತದೆ. ಈಗೀಗ ಬಹುತೇಕ ಕಡೆ ಎಲ್‌ಪಿಜಿ ಬಳಕೆ ಆರಂಭವಾಗಿದೆಯಾದರೂ ಅದಕ್ಕೂ ಸಾಕಷ್ಟು ಅಡೆತಡೆಗಳಿವೆ. ಸೀಮೆಎಣ್ಣೆ ಪಡೆಯುವುದೂ ಸುಲಭವಲ್ಲ.

ಸಿಕ್ಕಾಗ ದೂರದಿಂದ ಹೊತ್ತುಕೊಂಡು ಬಂದು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಅದೂ ಸಹ ಎಲ್ಲರಿಗೂ ಸುಲಭದಲ್ಲಿ ದಕ್ಕುವುದಿಲ್ಲ. ಮಲೆನಾಡಿನಲ್ಲಿ ಕಟ್ಟಿಗೆ ಸುಲಭವಾಗಿ ಸಿಗುತ್ತದೆಯಾದರೂ ಸಂಗ್ರಹ ಮಾಡಿಟ್ಟುಕೊಳ್ಳಲೇಬೇಕಾಗುತ್ತದೆ. ಇಷ್ಟೆಲ್ಲಾ ತೊಂದರೆಗಳ ನಿವಾರಣೆಗೆ ಮಾರ್ಗೋಪಾಯ ಕಂಡುಹಿಡಿದಿದ್ದಾರೆ ಸಾಗರದ ರಾಮಚಂದ್ರ ಹೆಗಡೆಯವರು. ಅವರು ಗೋಬರ್‌ ಗ್ಯಾಸ್‌ನಿಂದ ಕಾರ್ಯನಿರ್ವಹಿಸುವ ಪರಿಸರಸ್ನೇಹಿ ಗೀಸರ್‌ಅನ್ನು ಆವಿಷ್ಕರಿಸಿದ್ದಾರೆ.

ಸ್ಪೆಷಲ್‌ ಬರ್ನರ್‌: ಎಲ್‌ಪಿಜಿಯಲ್ಲಿ ಸಂಕುಚಿತ ಉರಿ ಹೊರಸೂಸಲ್ಪಡುತ್ತದೆ. ಆದರೆ, ಗೋಬರ್‌ ಗ್ಯಾಸ್‌ ಗೀಸರ್‌, ವಿಶಾಲ ಉರಿಯನ್ನು ಹೊರಸೂಸುತ್ತದೆ. ಅದಕ್ಕೆ ಕಾರಣ, ಅವರೇ ಕಂಡುಹಿಡಿದ ವಿಶೇಷ ಬರ್ನರ್‌ ತಂತ್ರಜ್ಞಾನ. ಈ ಗ್ಯಾಸ್‌ ಗೀಸರ್‌ ಅನ್ನು ಗೊಬ್ಬರ ಗುಂಡಿಯಿಂದ 350ರಿಂದ 400 ಮೀ. ದೂರದವರೆಗೂ ಪೈಪ್‌ ಲೈನ್‌ ಅಳವಡಿಸಿ ಕೂರಿಸಬಹುದು.

ಇದರಲ್ಲಿ 40ರಿಂದ 70 ಡಿಗ್ರಿ ಸೆಲ್ಸಿಯಸ್‌ನಷ್ಟು ನೀರು ಬಿಸಿಯಾಗುತ್ತದೆ. “ಸ್ನಾನಕ್ಕೆ 45 ಡಿಗ್ರಿ ಬಿಸಿ ನೀರು ಯೋಗ್ಯ’ ಎನ್ನುತ್ತಾರೆ ಹೆಗಡೆಯವರು. ಈ ಗೀಸರ್‌ ಮೂಲಕ 100 ಲೀ. ನೀರನ್ನು 25 ನಿಮಿಷದಲ್ಲಿ ಕಾಯಿಸಬಹುದು. 100 ಲೀಟರ್‌ ಬಿಸಿನೀರು, ಏನಿಲ್ಲವೆಂದರೂ ಐದು ಮಂದಿಯ ಸ್ನಾನಕ್ಕೆ ಸಾಕಾಗುತ್ತದೆ.

ಸಾವಿರ ಮಂದಿ ಗ್ರಾಹಕರು: ಗೋಬರ್‌ ಗ್ಯಾಸ್‌ ಗೀಸರ್‌ನಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಸ್ನಾನಕ್ಕೆಂದೇ ವರ್ಷವಿಡೀ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿಗೆ ಸಂಗ್ರಹಿಸುವ ಅಗತ್ಯವಿಲ್ಲ. ಹೊಗೆ ಸೇವನೆ, ಕಣ್ಣುರಿಯ ಪ್ರಶ್ನೆಯೂ ಬರುವುದಿಲ್ಲ. ಮಳೆಗಾಲ, ಚಳಿಗಾಲದಲ್ಲೂ ಈ ಗೀಸರ್‌ ಬೆಚ್ಚನೆಯ ನೀರನ್ನು ಕೊಡುತ್ತದೆ. ಈಗಾಗಲೇ ಮಲೆನಾಡಿನ ಸಾವಿರಕ್ಕೂ ಹೆಚ್ಚು ಮಂದಿ ರಾಮಚಂದ್ರ ಅವರು ತಯಾರಿಸುವ ಗೋಬರ್‌ ಗ್ಯಾಸ್‌ ಗೀಸರನ್ನು ಅಳವಡಿಸಿಕೊಂಡಿದ್ದಾರೆ.

ಸೊರಬ, ಸಾಗರ, ಹೊಸನಗರ, ಶಿಕಾರಿಪುರದಲ್ಲಷ್ಟೇ ಅಲ್ಲ, ದೂರದ ಕುಂದಾಪುರ, ಹೊನ್ನಾವರ, ಬೆಂಗಳೂರು ತನಕವೂ ಗೋಬರ್‌ ಗೀಸರ್‌ನ ಕೀರ್ತಿ ವಿಸ್ತರಿಸಿದೆ. “ಸರ್ಕಾರ, ಸ್ವಸಹಾಯ ಸಂಘಗಳಿಂದ ಏನಾದರೂ ನೆರವು ಸಿಕ್ಕಲ್ಲಿ, ಈ ಪರಿಸರಸ್ನೇಹಿ ಗೀಸರ್‌ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಜನರಿಗೆ ಮಾರಾಟಮಾಡಬಹುದು. ಇದರಿಂದ ಹಳ್ಳಿಗರ ಸಮಯ, ದುಡ್ಡು ಎರಡೂ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ.’ ಎನ್ನುತ್ತಾರೆ ರಾಮಚಂದ್ರ ಹೆಗಡೆ.

ಸಂಪರ್ಕ: 9449400159

* ಎಂ. ಎಸ್‌. ಎಸ್‌, ಹೊನ್ನಾವರ

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.