ಮಿಶ್ರಬೆಳೆ ; ಸಮ್ಮಿಶ್ರ ಆದಾಯ


Team Udayavani, Feb 13, 2017, 3:45 AM IST

mishra-bele.jpg

ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದಕ್ಕೆಲ್ಲಾ ಕಾರಣ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯದೇ ಇರುವುದು. ಜೊತೆಗೆ ಅದರಲ್ಲೇನು ಸಿಗುತ್ತೆ ಮಣ್ಣು, ಕೆಲಸ ಮಾಡಿದವರಿಗೆ ಕೂಲಿ ಕೊಡುವಷ್ಟು ಆದಾಯವೂ ಸಿಗುವುದಿಲ್ಲ ಎನ್ನುವವರು ಹಲವರು.  ಎಲ್ಲದಕ್ಕೂ ಅಪವಾದದಂತೆ ಬದುಕುತ್ತಿರುವವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೊಮ್ಮಿನಾಳ ಗ್ರಾಮದ ಈ ರೈತ ಮಲ್ಲಿಕಾರ್ಜುನ. 

ಕೃಷಿಯಿಂದ ಆದಾಯವೂ ಇದೆ.  ಅಭಿವೃದ್ಧಿ ಸಾಧ್ಯ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ತಮಗಿರುವ 15 ಎಕರೆ ಜಮೀನಿನಲ್ಲಿ 3 ಬೋರ್‌ವೆಲ್‌ಗ‌ಳನ್ನು ಕೊರೆಸಿ, ವಿವಿಧ ರೀತಿಯ ಪರ್ಯಾಯ ಬೆಳೆಗಳನ್ನು ಬೆಳೆಯುತ್ತಾ, ಪ್ರತಿ ವರ್ಷ ಲಕ್ಷಾಂತರ ರೂ ಆದಾಯ ಗಳಿಸುತ್ತಿದ್ದಾರೆ. 

ಮಲ್ಲಿಕಾರ್ಜನ ಓದಿರುವುದು ಹತ್ತನೇ ತರಗತಿ. ಅವರ ಮುಂದೆ ಸಾಕಷ್ಟು ಅವಕಾಶಗಳಿದ್ದರೂ ತಂದೆಯವರ ಮೂಲ ವೃತ್ತಿ ಒಕ್ಕಲುತನವೇ ಅವರನ್ನು ಆಕರ್ಷಿಸಿತು. ಊರಿನ ರೈತರಿಗೆ ವಿವಿಧ ನೂತನ ತಳಿಗಳನ್ನು ಪರಿಚಯಿಸಿದರು.

ಕಾಟನ್‌ ಸೀಡ್ಸ್‌, ಕಲ್ಲಂಗಡಿ ಸೀಡ್ಸ್‌, ಚಿಲ್ಲಿ ಸೀಡ್ಸ್‌ ಗಳನ್ನ ಪ್ರಾರಂಭಿಸಿ ಲಕ್ಷಾಂತರ ರೂ.ಆದಾಯ ಗಳಿಸಿ, ಗಾಮದ ಇತರ ರೈತರಿಗೂ ಬೆಳೆಗಳ ಪರಿಚಯ ಮಾಡಿಸಿದರು. ಇವರನ್ನು ಹಿಂಬಾಲಿಸಿದ ಅದೇಷ್ಟೋ ರೈತರು ಒಳ್ಳೆ ಆದಾಯ ಗಳಿಸುತ್ತಿದ್ದಾರೆ. ಸ್ವತಃ ಇವರೇ ಮಾಹಿತಿ ನೀಡುವ ಮಾಹಿತಿದಾರರಾಗಿ, ರೈತರಿಗೆ ಹೀಗೂ ಬೆಳೆಯಬಹುದೆಂದು ತೋರಿಸಿಕೊಟ್ಟರು.

ಪ್ರಸ್ತುತ ಹೂಕೋಸು, ಎಲೆಕೋಸು, ನುಗ್ಗೆಕಾಯಿ ಬೆಳೆಗಳನ್ನು ಬೆಳೆಯುವುದರೊಂದಿಗೆ, ಈರುಳ್ಳಿ, ಶೇಂಗಾ, ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ ಹಾಗೂ ತರಕಾರಿಗಳನ್ನ ಬೆಳೆಯುತ್ತಾರೆ.  ರೈತರ ಸಲಹೆಗಾರನಾಗಿ, ಸುತ್ತಲಿನ ಗ್ರಾಮದ ಯಾರೇ ರೈತರು ಕರೆದರೂ, ಮಾಹಿತಿ ಕೇಳಿದರೂ ಮುಕ್ತ ಮನಸಿನಿಂದ ಬೆಳೆಗಳ ಬಗ್ಗೆ,  ಕೀಟ ಬಾಧೆ  ಬಗ್ಗೆ ಮಾಹಿತಿ ನೀಡುತ್ತಾರೆ. ಸಮಯ ಇದ್ದರೆ ಇತರೆ ರೈತರ ಹೊಲಗಳಿಗೆ ಹೋಗಿ ಕೆಲಸ ಮಾಡುತ್ತಿದ್ದರು.   

ಮೂರು ಎಕರೆ ಜಮೀನಿನಲ್ಲಿ ವಾರ್ಷಿಕ ಬೆಳೆಯಾದ ನುಗ್ಗೆ ಬೆಳೆಯನ್ನು ಬೆಳೆದಿದ್ದು, ನಾಲ್ಕು ಎಕರೆ ಈರುಳ್ಳಿ, ನಾಲ್ಕು ಎಕರೆ ತೊಗರಿ, ಎರಡು ಎಕರೆ ಹೂಕೋಸು ಬೆಳೆದಿದ್ದಾರೆ.

ಬೆಳೆದ ಬೆಳೆಗಳಿಗೆ ಕೆಲವೊಮ್ಮೆ ಸರಿಯಾದ ಬೆಲೆ ಸಿಗದಿದ್ದಾಗಲೂ ಚಿಂತಿಸಿದವರಲ್ಲ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿದ್ದಾಗ ಆದಾಯ ಕಡಿಮೆ ಆಗಬಹುದು.  ಆದರೆ ನಷ್ಟವಂತೂ ಆಗಲ್ಲ. ತೀರಾ ಹಿಂದುಳಿದ ಪ್ರದೇಶದಲ್ಲಿ 50 ಸಾವಿರ ಆದಾಯ ತೆಗೆಯದೇ ಕಷ್ಟ ಅಂತಹುದರಲ್ಲಿ ವಾರ್ಷಿಕ 6 ರಿಂದ 8 ಲಕ್ಷ ಆದಾಯ ತೆಗೆಯುವ ಮಲ್ಲಿಕಾರ್ಜುನ 
ಭೂಮಿತಾಯಿ ವಿಚಾರದಲ್ಲಿ ಲಾಭ ನಷ್ಟದ ಲೆಕ್ಕಾಚಾರಮಾಡಬಾರದು ಯಾಕಂದ್ರೆ ಭೂಮಿತಾಯಿ ನಂಬಿದವರಿಗೆ ಪ್ರತಿಫ‌ಲ ಸಿಕ್ಕೇ ಸಿಗುತ್ತೆ. ಈ ಕ್ಷೇತ್ರದಲ್ಲಿರುವ ನೆಮ್ಮದಿ ಬೇರಾವ ಕ್ಷೇತ್ರದಲ್ಲಿಯೂ ಸಿಗೋಲ್ಲ. ಇಲ್ಲಿ ನಾವೇ ಮಾಲೀಕರು, ಯಾರ ಹಂಗೂ ನಮಗಿರುವುದಿಲ್ಲ. ಆದರೆ ಶ್ರಮ ವಹಿಸಿ ಕೆಲಸಮಾಡಬೇಕು ಎನ್ನುತ್ತಾರೆ.

– ಅಮರೇಶ ಕುರಿ ಹೊಮ್ಮಿನಾಳ

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.