ವ್ರೂಮ್ ವ್ರೂಮ್ : ಎಲೆಕ್ಟ್ರಿಕ್ ಕಾರಿಗೆ ಸಂಗೀತ ಸಂಯೋಜನೆ


Team Udayavani, May 4, 2020, 3:00 PM IST

ವ್ರೂಮ್ ವ್ರೂಮ್ : ಎಲೆಕ್ಟ್ರಿಕ್ ಕಾರಿಗೆ ಸಂಗೀತ ಸಂಯೋಜನೆ

ಜಗತ್ತು ಪರಿಸರಸ್ನೇಹಿ ಸಮಾಜವನ್ನು ಅಪ್ಪಿಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಹವಾಮಾನ ವೈಪರೀತ್ಯವನ್ನು ತಹಬದಿಗೆ ತರುವ ಪ್ರಯತ್ನದಲ್ಲಿ, ದೇಶಗಳು ತೊಡಗಿಸಿಕೊಳ್ಳಲಿವೆ. ಎಲೆಕ್ಟ್ರಿಕ್‌ ವಾಹನಗಳಿಂದಲೇ ಈ ಕೆಲಸ ಆರಂಭವಾಗಲಿದೆ.

ಭಾರತದಲ್ಲಿ, ಎಲೆಕ್ಟ್ರಿಕ್‌ ವಾಹನಗಳ ತಯಾರಿಗೆ ಪ್ರೋತ್ಸಾಹಕರ ವಾತಾವರಣ ಇದೆ. ಆ ಕಾರಣಕ್ಕೆ, ಕಳೆದ ಒಂದೆರಡು ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆಯಲ್ಲಿ ಏರಿಕೆ ಕಂಡಿವೆ. ಸೌಂಡ್‌ ಮುಖ್ಯ ಪೆಟ್ರೋಲ್/ ಡೀಸೆಲ್‌ ವಾಹನಗಳಿಗೂ, ಎಲೆಕ್ಟ್ರಿಕ್‌ ವಾಹನಗಳಿಗೂ ಅಜಗಜಾಂತರ. ಈ ವ್ಯತ್ಯಾಸಗಳಲ್ಲಿ ಮುಖ್ಯವಾದುದು, ವಾಹನದ ಸದ್ದು. ಪೆಟ್ರೋಲ್, ಡೀಸೆಲ್‌ ಎಂಜಿನ್‌ಗಳು ಹೊರಡಿಸುವ ಸದ್ದನ್ನು ಎಲೆಕ್ಟ್ರಿಕ್‌ ಕಾರು ಹೊರಡಿಸುವುದಿಲ್ಲ. ಒಳ್ಳೆಯದೇ ಆಯ್ತಲ್ಲ ಎಂದು ಮೊದಲ ನೋಟಕ್ಕೆ ಅನ್ನಿಸಬಹುದು. ಆದರೆ, ವಾಹನ ಚಾಲನೆ ಮಾಡುವಾಗ, ಶಬ್ದ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ, ಚಾಲಕರಿಗೆ ಕಾರು ಯಾವ ವೇಗದಲ್ಲಿ ಚಲಿಸುತ್ತಿದೆ ಎಂಬುದನ್ನು ಸುಲಭವಾಗಿ, ಸ್ಪೀಡೋಮೀಟರ್‌ ನೋಡದೆಯೇ ತಿಳಿಸುವುದು ಶಬ್ದ. ವಾಹನದ ಶಬ್ದ, ಚಾಲಕರಿಗೆ ಮಾತ್ರವಲ್ಲ, ಪಾದಾಚಾರಿಗಳಿಗೂ ವಾಹನದ ಬರುವಿಕೆಯನ್ನು ತಿಳಿಯಲು ಸಹಕಾರಿ. ಹೀಗಾಗಿ, ಎಲೆಕ್ಟ್ರಿಕ್‌ ವಾಹನಗಳಿಗೆ ಫೇಕ್‌ ಶಬ್ದವನ್ನು ಅಳವಡಿಸುವ ಪರಿಪಾಠ ಪ್ರಾರಂಭವಾಯಿತು.

ಫೇಕ್‌ ಶಬ್ದ ಅಂತಾರಾಷ್ಟ್ರೀಯ ಮಟ್ಟದ ಆಟೊಮೊಬೈಲ್‌ ಸಂಸ್ಥೆಗಳಾದ ಫೆರಾರಿ, ನಿಸ್ಸಾನ್‌, ತಮ್ಮ ಎಲೆಕ್ಟ್ರಿಕ್‌ ಕಾರುಗಳಲ್ಲಿ ನಕಲಿ ಶಬ್ದ ಅಳವಡಿಸುವ ಪ್ರಯೋಗಗಳನ್ನು ಕೈಗೊಂಡಿವೆ. ಈ ಸಾಲಿಗೆ ಬಿಎಂಡಬ್ಲ್ಯೂ ಕೂಡಾ ಸೇರಿದೆ. ಆದರೆ, ಬಿಎಂಡಬ್ಲ್ಯೂ ಮಿಕ್ಕ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದೆ.

ಅದು ತನ್ನ ಕಾನ್ಸೆಪ್ಟ್ ಕಾರೊಂದಕ್ಕೆ, ಹಾಲಿವುಡ್‌ನ‌ ಪ್ರಖ್ಯಾತ ಸಂಗೀತ ಸಂಯೋಜಕ ಹ್ಯಾನ್ಸ್ ಝಿಮ್ಮರ್‌ ಅವರಿಂದ ಶಬ್ದ ಸಂಯೋಜನೆ ಮಾಡಿಸಿದೆ. ಕಾನ್ಸೆಪ್ಟ್ ಕಾರು ಎಂದರೆ, ಭವಿಷ್ಯದಲ್ಲಿ ಬಿಡುಗಡೆಗೊಳ್ಳಲಿರುವ ಮಾದರಿ ಕಾರು ಎಂದರ್ಥ. ಹ್ಯಾನ್ಸ್ ಝಿಮ್ಮರ್‌ ಅವರು, ವೈಜ್ಞಾನಿಕ- ಕಾಲ್ಪನಿಕವೂ ಆದ ಸಿನೆಮಾಗಳ ಸಂಯೋಜಕರಾಗಿ ಹೆಸರು ಮಾಡಿದವರು. ಈಗ ಭವಿಷ್ಯದ ಕಾರುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿರುವುದು ಅಚ್ಚರಿಯೇ ಸರಿ. ಕಾರು ಸಂಗೀತದ ಕೊಂಡಿ- inyurl.com/yb3scqsh.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.