ಪಿಗ್ಮಿ ಡೆಪಾಸಿಟ್‌


Team Udayavani, Nov 18, 2019, 5:30 AM IST

money-matter

“ಹನಿ ಹನಿಗೂಡಿದರೆ ಹಳ್ಳ- ತೆನೆ ತೆನೆ ಕೂಡಿದರೆ ಬಳ್ಳ’ (Little drops of water make a mighty ocean)ಎನ್ನುವ ಗಾದೆಯ ಆಧಾರದ ಮೇಲೆ ಈ ಠೇವಣಿಯನ್ನು ಪ್ರಾರಂಭಿಸಲಾಗಿದೆ. ಈ ಠೇವಣಿಯ ಮಹಾಶಿಲ್ಪಿ, ದಿವಂಗತ ಡಾ. ಟಿ.ಎಂ.ಎ. ಪೈ ಅವರು, ಭಾರತದಲ್ಲಿ ಮೊತ್ತ ಮೊದಲು, 1928ರಲ್ಲಿ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಪಿಗ್ಮಿ ಠೇವಣಿಯನ್ನು ಪ್ರಾರಂಭಿಸಲಾಯಿತು. ಅಂದಿನ ನಾಲ್ಕಾಣೆ (ಇಂದಿನ ಇಪ್ಪತ್ತೈದು ಪೈಸೆ) ಈ ಖಾತೆಯ ಪ್ರಾರಂಭಿಕ ಠೇವಣಿಯಾಗಿತ್ತು (Initial Deposit). “ಉಳಿತಾಯ ಶ್ರೀಮಂತರಿಂದ ಮಾತ್ರ ಸಾಧ್ಯ. ಮಧ್ಯಮ ಅಥವಾ ಕೆಳವರ್ಗದವರಿಗೆ ಉಳಿತಾಯ ಮಾಡಲು ಸಾಧ್ಯವೇ ಇಲ್ಲ’ ಎನ್ನುವ ಮಾತನ್ನು ಹುಸಿ ಮಾಡಿ ತೋರಿಸಿದ ಪ್ರಪ್ರಥಮ ಬ್ಯಾಂಕು ಸಿಂಡಿಕೇಟ್‌ ಬ್ಯಾಂಕ್‌. ಪಿಗ್ಮಿ ಠೇವಣಿಯನ್ನು ಪರಿಚಯಿಸುವುದರ ಮುಖಾಂತರ, ಯಾವ ವ್ಯಕ್ತಿಯೂ ಬ್ಯಾಂಕು ಠೇವಣಿ ಹೊಂದಲು ಸಣ್ಣ ವ್ಯಕ್ತಿಯಾಗಲಾರ (No man is too small for bank account) ಎನ್ನುವ ಮೂಲತತ್ವವು ಈ ಠೇವಣಿಯಲ್ಲಿ ಅಡಕವಾಗಿದೆ. ಇಂದು ಹಲವು ಬ್ಯಾಂಕುಗಳು, ಮುಖ್ಯವಾಗಿ ಸಹಕಾರಿ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳು ಪಿಗ್ಮಿ ಠೇವಣಿ ಸಂಗ್ರಹಿಸುತ್ತಿವೆ. ಈ ಠೇವಣಿಯನ್ನು ಬೇರೆ ಬೇರೆ ಹಣಕಾಸು ಸಂಸ್ಥೆಗಳು ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತವೆ. ಆದರೂ, ಈ ಠೇವಣಿಯ ಮೂಲ ತತ್ವ ಒಂದೇ ಆಗಿರುತ್ತದೆ.

ಈ ಠೇವಣಿಯ ತತ್ವ ತುಂಬಾ ಸರಳ. ಎಲ್ಲಾ ವರ್ಗದವರೂ ಪಿಗ್ಮಿ ಠೇವಣಿ ಮಾಡಬಹುದು. ವಿಶೇಷವಾದ ಸಂಗತಿಯೇನೆಂದರೆ, ಈ ಖಾತೆಗೆ ಹಣ ಜಮಾ ಮಾಡಲು ಠೇವಣಿದಾರರು ಬ್ಯಾಂಕಿಗೆ ಹೋಗುವ ಅವಶ್ಯಕತೆ ಇಲ್ಲ. ಬ್ಯಾಂಕಿನ ಅಧಿಕೃತ ಏಜೆಂಟರು ಠೇವಣಿದಾರರ ಮನೆ ಬಾಗಿಲಿಗೆ, ಗ್ರಾಹಕರು ಹೇಳುವ ಸಮಯಕ್ಕೆ ಬಂದು ಕೊಟ್ಟಷ್ಟು ಪಿಗ್ಮಿ ಹಣ ಸ್ವೀಕರಿಸಿ, ತಕ್ಷಣವೇ ಸ್ವೀಕರಿಸಿದ್ದಕ್ಕೆ ರಶೀದಿ ಕೊಡುತ್ತಾರೆ. ಉಳಿತಾಯದ ದೃಷ್ಟಿಯಿಂದ ಪ್ರತಿ ದಿವಸ ಹಣ ಸಂಪಾದಿಸುವ ವ್ಯಕ್ತಿಗಳಿಗೆ (ಉದಾಹರಣೆಗಾಗಿ ವೈದ್ಯರು, ವಕೀಲರು, ಚಾರ್ಟರ್ಡ್‌ ಅಕೌಂಟೆಂಟ್ಸ್‌, ವ್ಯಾಪಾರಿಗಳು, ಸ್ವಂತ ಉದ್ಯೋಗ ಮಾಡುವವರು) “ಪಿಗ್ಮಿ ಠೇವಣಿ’ ಒಂದು ವರದಾನ. ದಿನಗೂಲಿ ಮಾಡುವವರು ಅಲ್ಪಸ್ವಲ್ಪ ಹಣವನ್ನು ಈ ಠೇವಣಿಯಲ್ಲಿ ತೊಡಗಿಸುತ್ತಾ ಬಂದಲ್ಲಿ, ವರ್ಷಾಂತ್ಯಕ್ಕೆ ಒಂದು ಉತ್ತಮ ಮೊತ್ತವನ್ನು ಪಡೆಯಬಹುದು.

ಹಲವು ಹಣಕಾಸು ಸಂಸ್ಥೆಗಳು ತಾವು ನೀಡಿರುವ ಸಾಲಕ್ಕನುಗುಣವಾಗಿ ಸಾಲಗಾರರಿಂದ ಪಿಗ್ಮಿ ಠೇವಣಿಯನ್ನು ಪ್ರಾರಂಭಿಸಲು ಸೂಚಿಸುತ್ತವೆ. ಹೀಗೆ ಸಂಗ್ರಹಿಸಿದ ಪಿಗ್ಮಿ ಹಣವನ್ನು ವರ್ಷದ ಅಂತ್ಯದಲ್ಲಿ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತವೆ.

ಒಂದು ಕುಟುಂಬದ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬರುವಲ್ಲಿ ಮಹಿಳೆಯರ ಪಾತ್ರ ಬಹು ದೊಡ್ಡದು. ಪಿಗ್ಮಿ ಠೇವಣಿಯ ಮೂಲ ತತ್ವದ ಸದುಪಯೋಗ ಪಡೆಯುವಲ್ಲಿ ಗೃಹಿಣಿಯರ ಸಹಕಾರ ಬಹಳ ಮುಖ್ಯ. ಇಂದು ಹಲವು ಗೃಹಿಣಿಯರು ಮನೆ ಖರ್ಚಿಗೆ ಕೊಟ್ಟ ಹಣದಲ್ಲಿ ಎಷ್ಟಾದರಷ್ಟು ಹಣ ಉಳಿಸಿ, ಗುಟ್ಟಾಗಿ ಪಿಗ್ಮಿ ತುಂಬುವುದನ್ನು ಕಾಣುತ್ತಿರುತ್ತೇವೆ. ಈ ಪ್ರವೃತ್ತಿ ಮುಖ್ಯವಾಗಿ ಪಿಗ್ಮಿಯ ಉಗಮ ಸ್ಥಾನವಾದ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ವರ್ಗಗಳ ಮಹಿಳೆಯರಲ್ಲಿ ಹಾಸುಹೊಕ್ಕಾಗಿದೆ ಹಾಗೂ ರಕ್ತಗತವಾಗಿದೆ. ಹೆಚ್ಚಿನ ವಿಷಯಗಳಲ್ಲಿ ದಕ್ಷಿಣಕನ್ನಡವೇ ಮುಂಚೂಣಿಯಲ್ಲಿ ಇರುವುದಕ್ಕೆ ಮುಖ್ಯವಾಗಿ ಅಲ್ಲಿನ ಮಹಿಳೆಯರ ಆರ್ಥಿಕ ಶಿಸ್ತೇ ಕಾರಣ. ಈ ಸಣ್ಣ ಉಳಿತಾಯದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಬಂಗಾರದ ಒಡವೆ, ಟಿ.ವಿ. ಫೋನ್‌ ಹಾಗೂ ಇತರೆ ಸೌಕರ್ಯಗಳನ್ನು ಹೊಂದಲು ಸಾಧ್ಯವಾಗುತ್ತದೆ.

– ಉದಯ್‌ ಪುರಾಣಿಕ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.