Share ಈಸ್‌ ಕೇರ್‌

ಕೋಟ್ಯಧಿಪತಿ ಹೇಳಿದ 5 ಕಿವಿಮಾತುಗಳು

Team Udayavani, Jul 1, 2019, 5:00 AM IST

lead-(1)

ಹಣವನ್ನು ಸುರಕ್ಷಿತವಾಗಿಡುವುದು ಮಾತ್ರವಲ್ಲದೆ, ಹೆಚ್ಚಿಸಲು ಶೇರು ಹೂಡಿಕೆ ಅತ್ಯುತ್ತಮ ವಿಧಾನ. ಹಣದ ಕುರಿತು ನಿಜಕ್ಕೂ ಕಾಳಜಿ, ಕೇರ್‌ ಉಳ್ಳವರು ಅದನ್ನು ಶೇರುಪೇಟೆಯಲ್ಲಿ ಹೂಡುತ್ತಾರೆ. ಇದು ಜಗತ್ತಿನ ಹಿರಿಯ ಹೂಡಿಕೆದಾರ ಕೋಟ್ಯಧಿಪತಿ ವಾರೆನ್‌ ಬಫೆಟ್‌ನ ಅನುಭವದ ಮಾತು. ಆತ ಹೇಳಿರುವ ಕಿವಿಮಾತುಗಳು ನಮಗೂ ಪಾಠವಾದೀತು.

ಬೆಳಗ್ಗಿನ ಉಪಾಹಾರಕ್ಕೆ ಹೋಟೆಲ್‌ಗೆ ಹೋದರೆ ಮೂರು ಡಾಲರ್‌ಗಿಂತ ಹೆಚ್ಚು ಖರ್ಚನ್ನು ಈತ ಮಾಡಲಾರ. ವಸ್ತುಗಳನ್ನು ಕೊಂಡಾಗ ಅದರ ಜತೆ ಸಿಗುವ ಡಿಸ್ಕೌಂಟ್‌ ಕೂಪನ್‌ಗಳನ್ನು ಜತನದಿಂದ ಕಾಪಿಟ್ಟುಕೊಂಡು ಬಳಸುವ ವ್ಯಕ್ತಿ ಈತ. 50ಕ್ಕೂ ಹೆಚ್ಚು ವರ್ಷಗಳ ಕಾಲ ಒಂದೇ ಮನೆಯಲ್ಲಿ ಕಳೆದಾತ ಇವ. ಈತನ ಬಳಿ ಸ್ಮಾರ್ಟ್‌ಫೋನ್‌ ಕೂಡಾ ಇಲ್ಲ. ಅಂಥ ವ.Âಕ್ತಿಯೊಬ್ಬ ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆಯ ಕುರಿತು ಜನಸಾಮಾನ್ಯರಿಗೆ ನೀಡಿರುವ ಟಿಪ್ಸ್‌ ಇಲ್ಲಿದೆ. ಸ್ಮಾರ್ಟ್‌ಫೋನ್‌ ಕೂಡಾ ಇಲ್ಲದ ವ್ಯಕ್ತಿಯೊಬ್ಬ ಟಿಪ್ಸ್‌, ಯಾರಿಗೆ ತಾನೇ ಉಪಯೋಗವಾದೀತು ಎಂದುಕೊಳ್ಳದಿರಿ. ಈತ 89.9 ಬಿಲಿಯನ್‌ ಡಾಲರ್‌, ಅಂದರೆ 8590 ಕೋಟಿ ಡಾಲರ್‌ ಸಂಪತ್ತಿನ ಒಡೆಯ. ಜಗತ್ತಿನ ಯಾವ ದೇಶದ ಅಧ್ಯಕ್ಷನೇ ಆದರೂ, ಪ್ರಧಾನಿಯೇ ಆದರೂ ವಾರೆನ್‌ ಬಫೆಟ್‌ ಹೇಳುವುದನ್ನು ಕೇಳುತ್ತಾರೆ.

– ಇದೊಂದು ದೀರ್ಘ‌ ಕಾಲದ ಆಟ
ಹೂಡಿಕೆ ಎನ್ನುವುದು ನೂರು ಮೀಟರ್‌ ರೇಸ್‌ ಅಲ್ಲ. ಅದು ಮುಗಿಯದ ಮ್ಯಾರಾಥಾನ್‌ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಷೇರುಗಳನ್ನು ಮನಸ್ಸಿಗೆ ತೋಚಿದಾಗ ಮಾರುವುದು, ಕೊಳ್ಳುವುದು ಮಾಡುತ್ತಿದ್ದರೆ ಜೂಜಾಟಕ್ಕೂ ಹೂಡಿಕೆಗೂ ವ್ಯತ್ಯಾಸವೇ ಇರುವುದಿಲ್ಲ. ಆದರೆ ಶೇರು ಮಾರುಕಟ್ಟೆ ಎನ್ನುವುದು ಜೂಜಿನ ಅಡ್ಡೆಯಲ್ಲ. ಇಲ್ಲಿ ಯಶಸ್ಸು ಪಡೆಯಲು ಅತೀವ ತಾಳ್ಮೆ ಮತ್ತು ಬುದ್ಧಿವಂತಿಕೆ ಬೇಕಾಗುತ್ತದೆ. ಹತ್ತರಿಂದ ಮೂವತ್ತು ವರ್ಷಗಳವರೆಗಾದರೂ ಕಾಯುವ ವ್ಯವಧಾನವಿರಬೇಕು.

– ವಿವಿಧತೆ ಮತ್ತು ಅನೇಕತೆಯಲ್ಲಿ ಲಾಭವಿದೆ
ನಮ್ಮ ಹಣವನ್ನು ಹೆಚ್ಚು ಸುರಕ್ಷಿತವಾಗಿಡಬೇಕೆಂದರೆ ಒಂದೇ ಕಡೆ ಹಣ ಹೂಡಬಾರದು. ಒಂದಕ್ಕಿಂತ ಹೆಚ್ಚು ಕಂಪನಿಗಳ ಮೇಲೆ ಹೂಡಿಕೆ ಮಾಡಬೇಕು. ವಿವಿಧ ಕಂಪನಿಗಳ ಮೇಲೆ ಹಣ ಹೂಡಿದಷ್ಟೂ ರಿಸ್ಕ್ ಕಡಿಮೆಯಾಗುತ್ತಾ ಸಾಗುತ್ತದೆ. ಅಲ್ಲದೆ ತಿಂಗಳು ಬಿಟ್ಟು ತಿಂಗಳು, ವರ್ಷ ಬಿಟ್ಟು ವರ್ಷ ಹೀಗೆ ವಿವಿಧ ಸಮಯಗಳಲ್ಲಿ ಹಣ ಹೂಡುವುದರಿಂದಲೂ ಹಣದ ಸುರಕ್ಷತೆ ಹೆತ್ತುತ್ತದೆ.

– ಸ್ಟಾಕ್‌ಗಳು ಬಾಂಡ್‌ಗಳಿಗಿಂತ ಒಂದು ಕೈ ಮೇಲು
ನಮ್ಮ ಉಳಿತಾಯದ ಹಣದಿಂದ ನಾವು ಭೂಮಿ ಕೊಳ್ಳಬಹುದು, ಮನೆ ಕೊಳ್ಳಬಹುದು, ಬಾಂಡ್‌ ಕೊಳ್ಳಬಹುದು. ಎಲ್ಲಕ್ಕಿಂತ ಒಳ್ಳೆಯ ನಡೆಯೆಂದರೆ ಯಾವುದೇ ಸಂಸ್ಥೆಯ ಶೇರುಗಳನ್ನು ಕೊಳ್ಳುವುದು. ಏಕೆಂದರೆ, ಉದಾಹರಣೆಗೆ 10 ವರ್ಷಗಳ ಬಾಂಡ್‌ ಕೊಂಡರೆ ಅದರಿಂದ ದೊರೆಯುವ ಲಾಭದ ಮೊತ್ತ ಬೆಳೆಯುವುದಿಲ್ಲ, ಅದು ಸೀಮಿತವಾದುದು ಕೂಡಾ. ಆದರೆ ಶೇರುಗಳು ಹಾಗಲ್ಲ.

– ಹೂಡಿಕೆಗೆ ರಾಹುಕಾಲ ಗುಳಿಕ ಕಾಲ ಇರುವುದಿಲ್ಲ
ಶೇರುಗಳನ್ನು ಕೊಳ್ಳಲು ಒಳ್ಳೆಯ ಸಮಯ ಅಂತ ಇರುವುದಿಲ್ಲ. ಯಾವುದೇ ಸಂಸ್ಥೆಯ ಶೇರು ಮುಂದಿನ ಹತ್ತು ವರ್ಷಗಳಲ್ಲಿ ಲಾಭದಾಯಕ ಸ್ಥಾನದಲ್ಲಿರುತ್ತದೆ ಎಂದು ನಿಮಗೆ ಬಲವಾಗಿ ಅನ್ನಿಸಿದರೆ, ಒಳ್ಳೆಯ ಸಮಯ ನೋಡಿ ಕೊಳ್ಳುತ್ತೇನೆ ಎನ್ನುವುದು ಮೂರ್ಖತನ. “ಈಗಲೇ’ ಎನ್ನುವುದು ಇಲ್ಲಿನ ಮೂಲ ಮಂತ್ರ.

– ಎಮೋಷನಲ್‌ ಆದರೆ ಏಟು ಬೀಳುತ್ತೆ
ಕೆಲ ಮಂದಿ ಶೇರುಗಳನ್ನು ಕೊಳ್ಳಲೇಬಾರದು ಅನ್ನುತ್ತಾರೆ. ಅವರು ಎಂಥವರೆಂದರೆ, ತಾವು ಕೊಂಡಿರುವ ಶೇರಿನ ಬೆಲೆ ಕುಸಿತ ಕಂಡಾಗಲೆಲ್ಲಾ ಚಡಪಡಿಸಿ, ಒಂದು ಕಣ್ಣಿನಲ್ಲಿ ಅಳುವವರು. ಅವರು ಅದೇ ಗುಂಗಿನಲ್ಲಿ ಶೇರುಗಳನ್ನು ಮಾರಿಬಿಡುತ್ತಾರೆ ಕೂಡಾ. ಹೀಗಾಗಿ, ಮಾರುಕಟ್ಟೆಯ ವಿಷಯದಲ್ಲಿ ಭಾವುಕತೆ ಇರಬಾರದು. ಎಂಥಾ ಪರಿಸ್ಥಿತಿ ಬಂದರೂ ಕಲ್ಲುಬಂಡೆಯಂತೆ ನಿಲ್ಲಬೇಕು. ಎಮೋಷನಲ್‌ ಆದರೆ ನಷ್ಟ ಕಟ್ಟಿಟ್ಟ ಬುತ್ತಿ.

ಹರಿಣಿ

ಟಾಪ್ ನ್ಯೂಸ್

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

5-vitla

Vitla: ಬೈಕ್ ಸೇತುವೆಗೆ ಢಿಕ್ಕಿ; 40 ಅಡಿ ಆಳದ ನದಿಗೆ ಬಿದ್ದ ಸವಾರ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

ಯತ್ನಾಳ

Vijayapura; ಡಿಸಿಎಂ ಸ್ಥಾನಕ್ಕೆ ಶಾಮನೂರು ಬೇಡಿಕೆ ಸೂಕ್ತ: ಶಾಸಕ ಯತ್ನಾಳ

ramesh jigajinagi

Vijayapura; ಜೆಡಿಎಸ್ ಹೊಂದಾಣಿಕೆಯಿಂದ ಬಲ ಬಂದಿದೆ: ಸಂಸದ ಜಿಗಜಿಣಗಿ

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು…

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

6-mundagodu

Mundgod: ಗಾಂಜಾ ಮಾರಾಟ; ಆರೋಪಿ ಬಂಧನ

Yadagiri; ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

Yadagiri; ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

5-vitla

Vitla: ಬೈಕ್ ಸೇತುವೆಗೆ ಢಿಕ್ಕಿ; 40 ಅಡಿ ಆಳದ ನದಿಗೆ ಬಿದ್ದ ಸವಾರ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.