ಹಲಸು ಲಾಭ ಹುಲುಸು


Team Udayavani, May 14, 2018, 2:14 PM IST

halasu.jpg

ತುಮಕೂರು, ಗುಬ್ಬಿಯ ಸುತ್ತಮುತ್ತ  ಅಡಿಕೆ, ತೆಂಗು, ಮಾವಿನ ಕೃಷಿಯೇ ಹೆಚ್ಚು. ಆದರೆ ಈಗ ಒಂದಷ್ಟು ರೈತರು ಹಲಸಿನ ಕಡೆಗೆ ವಾಲಿದ್ದಾರೆ.  ತಾಲೂಕಿನ ಚೇಳೂರಿನಲ್ಲಿರುವ ರೈತ ಸಿದ್ಧರಾಜು, ರಾಷ್ಟ್ರೀಯ ತಳಿಸಂರಕ್ಷಕ ಪ್ರಶಸ್ತಿಯನ್ನು ಗಳಿಸಿರುವುದೂ ಕೂಡ ಇದಕ್ಕೆ ಸ್ಫೂರ್ತಿ ಇರಬಹುದು. ಈ ಹಲಸಿನ ತಳಿಯ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚಯಾಗಿತ್ತು. ಸಿದ್ದೇಶ್‌ ಕಂಡುಹಿಡಿದ ಈ ತಳಿಗೆ ಭಾರತೀಯ  ತೋಟಗಾರಿಕೆ ಸಂಶೋಧನಾ ಸಂಸ್ಥೆಯು ” ಸಿದ್ದು ಹಲಸು’ ಎಂದು ನಾಮಕರಣ ಮಾಡಿದ್ದು ಈ ಭಾಗದಲ್ಲಿ ಹಲಸಿನ ಕೃಷಿಗೆ ಪರೋಕ್ಷವಾಗಿ ಉತ್ಸಾಹ ತುಂಬಿಂದಂತಾಗಿದೆ. 

ರುದ್ರಾಕ್ಷಿ ಹಲಸು, ಹರಿಶಿಣ, ಕೆಂಪು ವರ್ಣದ ಹಲಸು, ಜಾಣಗೆರೆ, ಚಂದ್ರ ಹಲಸು,  ಶಿವಮೊಗ್ಗ ಹಳದಿ, ಮೇಣರಹಿತ ಹಲಸು,  ಶಿಡ್ಲಘಟ್ಟ, ಸಿಂಗಾಪುರ್‌, ಮದ್ದೂರ್‌ ಬಿಳಿ, ಲಾಲ್‌ಬಾಗ್‌, ಮಂಕಳಲೆ ಚಂದ್ರ ಹಲಸು, ಸುವರ್ಣಋತು ಹಲಸು, ಸದಾನಂದ, ಲಾಲ್‌ಬಾಗ್‌ ಮಧುರ, ತೂಬುಗೆರೆ ಚಂದ್ರಬುಕ್ಕೆ, ಚಂದ್ರ, ಹೇಮ ಚಂದ್ರ ಹಲಸು ಹೀಗೆ, ಹಲಸಿನ ತಳಿಯಲ್ಲೂ ಹಲವು ವಿಧಗಳಿವೆ. ಇವುಗಳಲ್ಲಿ  ಬಹುತೇಕ ತಳಿಗಳನ್ನು ಇಲ್ಲಿ ಬೆಳೆಯುತ್ತಾರೆ. 
  ಈ ಭಾಗದಲ್ಲಿ ರೈತರು ಹಲಸನ್ನು ಮಿಶ್ರ ಅಥವಾ ಬದುವಿನ ಬೆಳೆಯಾಗಿ ಬೆಳೆಯುತ್ತಾರೆ.  ಇಲ್ಲಿ ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ಬೆಳೆಸುವುದರಿಂದ  ಬೇಡಿಕೆ ಹೆಚ್ಚಿಗೆ ಇದೇ ಎನ್ನುತ್ತಾರೆ ರೈತ ದೊಡ್ಡನೆಟ್ಟಕುಂಟ ಡಿ.ರಾಜೇಶ್‌.

ಲಾಭ ಹೇಗೆ?
ರೈತರು  ಒಂದು ಹೆಕ್ಟೇರಿನಲ್ಲಿ ಅಂದಾಜು 100 ಮರಗಳನ್ನು ಬೆಳೆಸಬಹುದು.  ಇವು ನಾಲ್ಕು ಅಥವಾ ಐದು ವರ್ಷಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತದೆ.  ಕಸಿ ಮಾಡಿದ ಸಸಿಗಳಾದರೆ 3 ವರ್ಷಕ್ಕೆ ಕಾಯಿ ಬಿಡುತ್ತವೆ. 
 10 ವರ್ಷ ವಯಸ್ಸಾದ ಮರವು ಸುಮಾರು 100 ರಿಂದ 150 ಕಾಯಿಗಳನ್ನು ಬಿಡುತ್ತದೆ. ಒಂದು ಕಾಯಿಗೆ 100ರೂ. ಸಿಕ್ಕರೂ ಲಾಭವೋ ಲಾಭ.  

 ಹಲಸು, ಬಹುಬಳಕೆಯ ಹಣ್ಣು. ಇದರ ಚಿಪ್ಸ್‌ಗೆ  ಹೆಚ್ಚು ಬೇಡಿಕೆ ಇದೆ.  ಒಂದು ಕೆಜಿ ಚಿಪ್ಸ್‌ ಗೆ 400 ರೂ. ಬೆಲೆ ಇದೆ.  ನಾವು ಮಾಡುವ ಹಪ್ಪಳ ಮತ್ತು ಚಿಪ್ಸ್‌ ಅನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಸಾವಯವ ಕೃಷಿ ಮಾಡುತ್ತಿರುವ ಅಮ್ಮನಘಟ್ಟದ ಮಂಜುಳ. 

– ಕೆಂಪರಾಜು ಜಿ.ಆರ್‌.ಗುಬ್ಬಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.