ಪಿತ್ರಾರ್ಜಿತ ಆಸ್ತಿ ನಿಮಗೆ ಇದೆಯೇ?
Team Udayavani, Apr 21, 2020, 1:17 PM IST
ನೀವು ಮನೆಯಲ್ಲೋ, ಆಫಿಸಲ್ಲೋ ಕೆಲಸ ಮಾಡುವಾಗ, ಆಗಾಗ ಪಿತ್ತ, ವಾಕರಿಕೆ ಬಂದ್ಹಂಗೆ ಆಗೋದು, ತಲೆನೋವು ಬಂದು ವಾಂತಿ ಮಾಡೋದು ಎಲ್ಲಾ ಆಗಿಬಿಡುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾದಂತೆ, ಇವೆಲ್ಲ ಮತ್ತಷ್ಟು ಹೆಚ್ಚಾಗುತ್ತವೆ. ಅಂಥ ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು, ಇಲ್ಲೊಂದಷ್ಟು ಟಿಪ್ಸ್ ಇದೆ. ಮೊದಲು ಜೀರಿಗೆಯನ್ನು ನೀರಿಗೆ ಹಾಕಿ, ಚೆನ್ನಾಗಿ ಕುದಿಸಿ.
ಅದಕ್ಕೆ ಸ್ವಲ್ಪ ಸಾವಯವ ಬೆಲ್ಲ ಹಾಕಿಕೊಂಡು, ಬಿಸಿ ಇರುವಾಗಲೇ ಒಂದು ಲೋಟ ಕುಡಿಯಿರಿ. ಪಿತ್ತಕ್ಕೆ ಜೀರಿಗೆ ರಾಮಬಾಣ. ಎಷ್ಟೇ ವಾಂತಿಯ ಲಕ್ಷಣ ಇದ್ದರೂ, ನಿಧಾನಕ್ಕೆ ಇಳಿದು ಹೋಗುತ್ತದೆ. ಪಿತ್ತದಿಂದ ಉಂಟಾಗುವ ತಲೆನೋವು ಕೂಡ, ಇದರಿಂದ ಗುಣವಾಗುತ್ತದೆ. ಈ ಪಿತ್ತದ ಇನ್ನೊಂದು ಮುಖ ಅಂದರೆ, ಹೊಟ್ಟೆ ನೋವು ಬರಿಸೋದು. ಇದಕ್ಕೆ ಜೀರಿಗೆ ಕೆಲಸ ಮಾಡೋಲ್ಲ. ಜಾಯಿಕಾಯಿ ಇರಲೇಬೇಕು. ಇದರಲ್ಲಿ ಔಷಧೀಯ ಗುಣಗಳು ಇವೆ. ಆಂಟಿ ಆಕ್ಸಿಡೆಂಟ್ನಿಂದಾಗಿ ಹೊಟ್ಟೆ ನೋವು ಬೇಗ ಗುಣವಾಗುತ್ತದೆ. ಹೊಟ್ಟೆ ನೋವು, ಅನಗತ್ಯವಾಗಿ ತಿಂದು ಉಂಟಾಗುವ ಅಜೀರ್ಣದಿಂದಲೂ ಬರಬಹುದು.
ಜಾಯಿಕಾಯಿಗೆ ಅಜೀರ್ಣವನ್ನು ಓಡಿಸುವ ತಾಕತ್ತು ಇದೆ. ಬಿ. ಕಾಂಪ್ಲೆಕ್ಸ್, ವಿಟಮಿನ್ “ಸಿ’ ಗುಣ ಇರುವುದರಿಂದ ಪಿತ್ತದಿಂದ ಉಂಟಾಗುವ ಸುಸ್ತು, ಹೊಟ್ಟೆನೋವಿನ ಬಳಲಿಕೆ ಯಾವುದೂ
ಆಗುವುದಿಲ್ಲ. ಪಿತ್ತದ ಇನ್ನೊಂದು ಮುಖ ಎಂದರೆ, ಕಫ ಕಟ್ಟುವುದು. ಇದು ಹೆಚ್ಚಾದರೆ, ಉಸಿರಾಡಲು ಕೂಡ ಆಗದಷ್ಟು ಕಾಡುತ್ತದೆ. ಹೀಗಾಗಿ, ಜಾಯಿಕಾಯಿ ಪೀಸ್ನ ಜೊತೆ, ಒಂದೇ ಒಂದು ಕಲ್ಲುಪ್ಪನ್ನು ಸೇರಿಸಿ ದವಡೆಯಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡಿದರೆ, ಕಫ ಹೋಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ