ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!


Team Udayavani, Mar 30, 2021, 5:37 PM IST

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಮೊನ್ನೆ ದೊಡ್ಡಮ್ಮನ ಮಗಳು ತನ್ನ ಅಣ್ಣನ ಮದುವೆಯ ಲಗ್ನಪತ್ರಿಕೆ ಕೊಡಲು ಬಂದಿದ್ದಳು. ಅದರಲ್ಲಿ ನನ್ನ ಹೆಸರು ಹೀಗಿತ್ತು: “ಅಂಬ್ರೆಷ ಸಾಹೊ ಹಯಳ ಇವರಿಗೆ…’ ಅದನ್ನು ನೋಡಿದೊಡನೆ ತಲೆ ತಿರುಗುವದೊಂದೇ ಬಾಕಿ. ಎಂಜಿನಿಯರಿಂಗ್‌ ಮುಗಿಸಿರುವ ಆಕೆ ಇಷ್ಟು ತಪ್ಪು ತಪ್ಪಾಗಿ ಕನ್ನಡ ಬರೆದಿರುವ ಬಗ್ಗೆ ಬೇಸರವಾಯಿತು. ಅದನ್ನು ನನ್ನ ನೋಟದಿಂದಲೇ ಅರ್ಥ ಮಾಡಿಕೊಂಡ ಅವಳು- ಅಣ್ಣಾ, ಇಂಗ್ಲೀಷ್‌ನಲ್ಲಿ ಬರೆಯೋಣವೆಂದೆ. ನೀನು ಕನ್ನಡಪ್ರೇಮಿಯಾಗಿರುವುದರಿಂದ ನಿನಗೆ ಇಂಪ್ರಸ್‌ ಆಗಲಿಯೆಂದು ಹೀಗೆ ಬರೆದೆ, ತಪ್ಪಾಗಿದ್ದರೆ ಹೊಟ್ಟೆಯಲ್ಲಿ ಹಾಕಿಕೋ ಅಂದಳು.

ಪ್ರಾಥಮಿಕ ಹಂತದಿಂದಲೇ ಇಂಗ್ಲಿಷನ್ನೇ ಮೊದಲ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡವರಿಗೆ ಕನ್ನಡದ ಬಗ್ಗೆ ಅಲಕ್ಷ್ಯವಿರುತ್ತದೆ. ಪರಿಣಾಮ, ಮಕ್ಕಳ ಪಾಲಿಗೆ ಕನ್ನಡ ಎಂಬುದು ಕಬ್ಬಿಣದ ಕಡಲೆಯಾಗುತ್ತದೆ. ನನಗೆ ಅಜ್ಜನನೆನಪು ಬಿಟ್ಟೂ ಬಿಡದೆ ಕಾಡುವುದು ಈ ಸಂದರ್ಭದಲ್ಲಿಯೇ. ಅಪ್ಪಟ ಕನ್ನಡ ಪ್ರೇಮಿಯಾಗಿದ್ದ ಅಜ್ಜ, ತುಂಬಾ ಸ್ಪಷ್ಟವಾದಕನ್ನಡ ಮಾತಾಡುತ್ತಿದ್ದ. ರೇಡಿಯೋ ಆತನ ನೆಚ್ಚಿನ ಸಂಗಾತಿಯಾಗಿತ್ತು. ಹಗಲು-ರಾತ್ರಿಯೆನ್ನದೆ ಅದನ್ನು ಕಿವಿಗಚ್ಚಿಯೇ ಕೇಳುತಿದ್ದ. ಹಾಗಾಗಿಯೇ ಅವರ ಕನ್ನಡ ಉಚ್ಚಾರಣೆ ಶುದ್ಧವಾಗಿತ್ತು. ನಾವು ಕನ್ನಡ ಮಾತಾಡಲು, ಬರೆಯಲು ಕಲಿತದ್ದು ಅಜ್ಜನನ್ನು ನೋಡಿಯೇ.

ನನ್ನ ತಾತನ ಇನ್ನೊಂದು ವಿಶೇಷತೆ ಏನೆಂದರೆ, ಮನೆಖರ್ಚಿನ ವಿವರ ಬರೆದಿಡುವಾಗರಲ್ಲಾ ಕನ್ನಡದ ಅಂಕಿಗಳನ್ನೇ ಬಳಸುತಿದ್ದ. ಸಂಖ್ಯೆಗಳನ್ನು ಯಾವತ್ತೂ ಇಂಗ್ಲಿಷ್‌ನಲ್ಲಿಬರೆಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ಅವು ನಮಗೆ ಎಷ್ಟೋ ಬಾರಿ ಅರ್ಥವೇ ಆಗುತ್ತಿರಲಿಲ್ಲ. ಆರು ಮತ್ತು ಒಂಭತ್ತು ಅಂಕಿಗಳನ್ನು ಅರ್ಥ ಮಾಡಿಕೊಳ್ಳುವ ವಿಷಯವಾಗಿನಮಗೆ ತುಂಬಾ ಗೊಂದಲವಿತ್ತು. ಈ ವಿಷಯವಾಗಿ ಅದೆಷ್ಟು ಸಲ ಉಗಿಸಿಕೊಂಡಿದ್ದೆನೋ? ಈ ತೆರನಾಗಿ ಕನ್ನಡದ ಬಲವಾದ ಬುನಾದಿ ಬಿದ್ದಿದ್ದರಿಂದಲೇ ಈಗ ಕನ್ನಡವನ್ನು ಸ್ಪುಟವಾಗಿ, ತಪ್ಪಿಲ್ಲದೆ ಓದಿ ಬರೆಯಲು ಸಾಧ್ಯವಾಗಿದೆ.

 

-ಅಂಬ್ರೀಶ್‌ ಎಸ್‌. ಹೈಯ್ಯಾಳ್‌

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

Untitled-1

ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.