ನೀನೆಷ್ಟು ಹುಡುಕಿದರೂ ನಾನು ಸಿಗುವುದಿಲ್ಲ…


Team Udayavani, May 14, 2019, 6:00 AM IST

9

ಒಂದು ತಿಳಿಸಂಜೆ ಪಾರಿಜಾತದಂತೆ ಆಕಸ್ಮಿಕವಾಗಿ ಕಂಡವಳು ನೀನು. ಮೊದಲ ನೋಟದಲ್ಲೇ ನನ್ನ ಮನದಲ್ಲಿ ಪ್ರೀತಿಯ ಅಮೃತಧಾರೆಯನ್ನು ಹರಿಸಿಬಿಟ್ಟೆ. ಮೊದಲೊಂದು ಸಲ ನಿನ್ನನ್ನು ಎಲ್ಲೋ ನೋಡಿದ್ದೆನಾದರೂ, ನೀನು ನನ್ನ ಜೂನಿಯರ್‌ ಅಂತ ಗೊತ್ತಾಗಿದ್ದು ಮಾತ್ರ ಕಾಲೇಜು ಮುಗಿಯಲು ಇನ್ನೇನು ಮೂವತ್ತು ದಿನ ಇದೆ ಅನ್ನುವಾಗ.

ಕೊನೆಯ ಆ ಒಂದು ತಿಂಗಳು ಹೇಗಿತ್ತು ಗೊತ್ತಾ? ಆಗಷ್ಟೇ ನನ್ನ ಮನದಲ್ಲಿ ಪ್ರೀತಿಯನ್ನು ಚಿಗುರೊಡೆಸಿದ್ದೆ ನೀನು. ಕುಂತರೂ- ನಿಂತರೂ ನಿನ್ನದೇ ಧ್ಯಾನ. ಮನೆಯಲ್ಲಿ ಜಾತಿ-ಗೋತ್ರದ ಕಟ್ಟುಪಾಡು ಇದೆ ಅಂತ ಗೊತ್ತಿದ್ದರೂ, ನಿನ್ನ ಸ್ನೇಹ ಪಡೆದು, ನಿನ್ನವನಾಗಲೇ ಬೇಕು ಅಂತ ಹಠಕ್ಕೆ ಬಿದ್ದಿದ್ದೆ. ಆದರೆ, ನಿನ್ನನ್ನು ಮಾತನಾಡಿಸುವ ಧೈರ್ಯ ಮಾತ್ರ ಇರಲಿಲ್ಲ.

ಈ ಚಡಪಡಿಕೆಯಲ್ಲೇ ದಿನಗಳು ಕಳೆದವು. ಪರೀಕ್ಷೆಗಳೂ ಮುಗಿದವು. “ಹೇಡಿ ನೀನು’ ಅಂತ ನನಗೆ ನಾನೇ ಬೈದುಕೊಂಡು ಸುಮ್ಮನಾಗಿದ್ದೆ. ಅದೊಂದು ದಿನ, ಕಾಲೇಜಿಗೆ ಸಂಬಂಧಪಟ್ಟ ಯಾವುದೋ ಪಿಡಿಎಫ್ ನೋಡುವಾಗ ಅದರಲ್ಲಿ ನಿನ್ನ ಹೆಸರು ಕಾಣಿಸಿತು. ಅದರ ಮುಂದೆಯೇ ನಿನ್ನ ಅಡ್ರೆಸ್‌ ಮತ್ತು ಫೋನ್‌ ನಂಬರ್‌! ಮರುಭೂಮಿಯಲ್ಲಿ ಗಂಗಾಜಲ ಸಿಕ್ಕಷ್ಟು ಖುಷಿಯಾಯ್ತು. ತಕ್ಷಣವೇ ನಿನಗೊಂದು ಮೆಸೇಜ್‌ ಮಾಡಿದೆ. ಪರಸ್ಪರ ಪರಿಚಯವಿರದ ಕಾರಣ, ಗೆಳೆತನ ಮೂಡಲು ಸ್ವಲ್ಪ ದಿನವೇ ಬೇಕಾಯ್ತು.

ಒಂದು ದಿನ ನೀನು- “ಹೇ, ನೀನು ಕೊಂಕಣಿಯಲ್ವಾ? ನಾನೂ ಕೊಂಕಣಿ ಕಲೀಬೇಕು. ಹೇಳಿ ಕೊಡೋ’ ಅಂದಾಗ ಅದೆಷ್ಟು ಖುಷಿಪಟ್ಟಿದ್ದೆ ಗೊತ್ತಾ?

ಕೊಂಕಣಿಯಲ್ಲಿ ನಾನು ಹೇಳಿದ್ದನ್ನು ನೀನು ಅದಿನ್ನೇನೋ ಅರ್ಥ ಮಾಡಿಕೊಂಡು, ಏನೇನೋ ವಾಕ್ಯ ಮಾಡ್ತಿದ್ದೆ. ಆದರೂ, ಪ್ರತಿ ರಾತ್ರಿ ಮುದ್ದು ಮುದ್ದಾಗಿ “ಜಾವಣ ಜಾಲೆ?’ (ಊಟಾ ಆಯ್ತಾ?) ಅಂತ ಕೇಳ್ತಿದ್ದೆ ನೋಡು, ಅಷ್ಟೇ ಸಾಕಾಗಿತ್ತು ನನಗೆ.

ನಿಜ ಹೇಳ್ತೀನಿ, ನಿನ್ನನ್ನು ಹೃದಯದ ಗುಡಿಯಲ್ಲಿ ದೇವರಂತೆ ಆರಾಧಿಸಿದ್ದೆ. ನಿನ್ನನ್ನು ಪ್ರೀತಿಸುತ್ತಿರೋ ವಿಷಯವನ್ನು ಕೆಲವೇ ದಿನಗಳಲ್ಲಿ ಹೇಳುವವನಿದ್ದೆ. ಆದ್ರೆ, ಆ ರಾತ್ರಿ ನೀನು ಕಳುಹಿಸಿದ ಮೆಸೇಜ್‌ ನನ್ನ ಕನಸಿನ ಕೋಟೆಯನ್ನು ಹೊತ್ತಿ ಉರಿಸಿಬಿಟ್ಟಿತು. ಅವತ್ತು ನೀ ಕಳಿಸಿದ್ದೆ- “ನನ್ನ ಡಿಗ್ರಿ ಮುಗಿತಾ ಬಂತು. ಎಂಗೆ ಮದವೆ ಫಿಕ್ಸ್ ಆಗಿದ್ದು, ಮಾಣಿ ಸಿ.ಎ ಮಾಡ್ತಿದ್ದ’. ಅದನ್ನೋದಿದ ಮೇಲೆ ನಿನಗೆ ಮೆಸೇಜ್‌ ಮಾಡುವ ಧೈರ್ಯ ಬರಲಿಲ್ಲ ನನಗೆ. ಪ್ರೀತಿಯನ್ನು ಹೇಳದೆಯೂ ಉಳಿಯಾಗಲಿಲ್ಲ. ಆದರೆ, ವಿಷಯ ಗೊತ್ತಾದ ಮೇಲೆ ನೀನು ನನ್ನ ನಂಬರ್‌ ಅನ್ನು ಬ್ಲಾಕ್‌ ಮಾಡಿ ದೂರ ಹೋದೆ.

ಹೋಗು… ಏನೂ ಬೇಜಾರಿಲ್ಲ ನನಗೆ. ನನ್ನ ಪ್ರೀತಿ ಶಾಂತ ಸರೋವರ ಅಂದುಕೊಂಡಿದ್ದೆ. ಆದರೆ ಅದು ಹುಚ್ಚು ಹೊಳೆ. ಆ ಹೊಳೆಯ ಸುಳಿಯಲ್ಲಿ ಕೊಚ್ಚಿ ಹೋಗಿರುವೆ ನಾನು. ನೀನಾಗಿಯೇ ಹುಡುಕಿದರೂ ನಾನು ಸಿಗುವುದಿಲ್ಲ.

– ಎಂ. ನಾಗಪ್ಪ ಪ್ರಭು, ಅಂಕೋಲಾ

Ad

ಟಾಪ್ ನ್ಯೂಸ್

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.