ಬಾಂಬರ್‌ ಬಾವಲಿ!


Team Udayavani, Mar 30, 2021, 6:16 PM IST

Untitled-1

ಎರಡನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನಿಯಿಂದ ಅಮೆರಿಕೆಗೆ ಹಾರಿಹೋದ ಹಲವು ಯಹೂದಿ ವಿಜ್ಞಾನಿಗಳಲ್ಲಿ ಲೂಯಿ ಫೀಝರ್‌ ಕೂಡ ಒಬ್ಬ. ಈತ ಮೂಲತಃರಸಾಯನ ವಿಜ್ಞಾನಿ. ಪ್ರಕಾಂಡ ಪಂಡಿತ. ಅಮೆರಿಕದ ಸೇನೆಗಾಗಿ ಹಲವು ಸಂಶೋಧನೆಗಳಲ್ಲಿ ಭಾಗಿಯಾದ; ಹಲವು ಯುದೊœà ಪಕರಣಗಳನ್ನು ಮಾಡಿಕೊಟ್ಟ. ಜಪಾನಿನ ಮೇಲೆ ಯಾವೆಲ್ಲ ಬಗೆಯಲ್ಲಿ ದಾಳಿ ಮಾಡಬಹುದುಎಂಬ ವಿಚಾರದಲ್ಲಿ ಫೀಝರ್‌ನೂರಾರು ಉಪಯುಕ್ತಸಲಹೆಗಳನ್ನು ಅಮೆರಿಕನ್‌ ಸೇನೆಗೆ ನೀಡಿದ್ದ.

ಯಾವುದೋ ಸಂಶೋಧನೆಮಾಡುತ್ತಿದ್ದ ಸಮಯದಲ್ಲಿ ಒಂದುಅಂಶ ಅವನ ಗಮನಕ್ಕೆ ಬಂತು. ಅದೇನೆಂದರೆ ಕಡಿಮೆ ವಾಯುಸಾಂದ್ರತೆ ಇದ್ದಾಗ(ಅಂದರೆ ಗಾಳಿಯಲ್ಲಿ ಪ್ರಾಣವಾಯು ಅತಿ ವಿರಳವಾಗಿರುವ ಸಂದರ್ಭ) ಮತ್ತು ಅತಿ ಶೈತ್ಯದ ಸ್ಥಳದಲ್ಲಿ ಬಾವಲಿ ಸ್ತಬ್ಧಸ್ಥಿತಿಗೆ (ಡಾರ್ಮೆಂಟ್‌ ಸ್ಟೇಟ್‌) ಹೋಗುತ್ತದೆ. ಅಂದರೆ ಅದರ ಮೈ ನಿಶ್ಚಲವಾಗುತ್ತದೆ. ಉಸಿರಾಟ ಅತಿ ನಿಧಾನವಾಗುತ್ತದೆ. ರಕ್ತ ಪರಿಚಲನೆ ಇಲ್ಲವೇ ಇಲ್ಲವೇನೋ ಎಂಬಷ್ಟು ನಿಧಾನವಾಗುತ್ತದೆ. ಬಾಹ್ಯಚಟುವಟಿಕೆ ಗಳೆಲ್ಲವೂ ನಿಂತು ಹೋಗುತ್ತವೆ. ಇದು ಶಕ್ತಿ ವ್ಯಯವನ್ನು ತಡೆಯುವುದಕ್ಕಾಗಿ ಬಾವಲಿಯ ದೇಹವೇ ಮಾಡಿಕೊಳ್ಳುವ ಒಂದು ಸ್ವರಕ್ಷಣಾವ್ಯವಸ್ಥೆ. ಆಕ್ಸಿಜನ್‌ನ ಪ್ರಮಾಣ ವಾತಾವರಣದಲ್ಲಿ ಹೆಚ್ಚಾಗುತ್ತ ಬಂದಂತೆಲ್ಲ ಮತ್ತು ವಾತಾವರಣದ ಉಷ್ಣತೆಯು ಸಹಜ ಸ್ಥಿತಿಗೆ ಮರಳಿದಂತೆಲ್ಲ ಬಾವಲಿಗಳು ತಮ್ಮ ನಿಶ್ಚಲ ಸ್ಥಿತಿಯಿಂದ ಮತ್ತೆ ಸಹಜ ಸ್ಥಿತಿಗೆ ಮರಳುತ್ತವೆ.

ಫೀಝರ್‌ನ ಮಿದುಳು, ಬಾವಲಿಯ ಈ ದೇಹಗುಣವನ್ನು ಯುದ್ಧದಲ್ಲಿ ಏಕೆ ಬಳಸಬಾರದುಎಂದು ಯೋಚಿಸಿತು! ಅದೇನೆಂದರೆ ಬಾವಲಿಗಳನ್ನುಸಮುದ್ರಮಟ್ಟದಿಂದ ಅತಿ ಎತ್ತರಕ್ಕೆ ತೆಗೆದುಕೊಂಡುಹೋಗುವುದು. ಅವು ಸ್ತಬ್ಧಸ್ಥಿತಿಗೆ ಜಾರಿದ ಮೇಲೆ ಅವುಗಳ ದೇಹಕ್ಕೆ ಬಾಂಬ್‌ಗಳನ್ನು ಅಳವಡಿಸುವುದು. ಅವನ್ನು ತೆಗೆದುಕೊಂಡು ಹೋಗಿ ಜಪಾನಿನವಾಯುಮಂಡಲದಲ್ಲಿ ಉದುರಿಸುವುದು! ಗಾಳಿಯಲ್ಲಿಹಾರುತ್ತ ಹಾರುತ್ತ, ಕೆಳಕೆಳಗೆ ಬಂದಂತೆಲ್ಲ ಅವುಸ್ತಬ್ಧಸ್ಥಿತಿಯಿಂದ ಹೊರಕ್ಕೆ,ಸಹಜಸ್ಥಿತಿಗೆ ಬರುತ್ತವೆ. ಅವು ರೆಕ್ಕೆಗಳನ್ನು ಬೀಸಿಕೊಂಡುಹಾರತೊಡಗಿದ ಕೂಡಲೇ ಬಾಂಬ್‌ಗಳ ಪಿನ್‌ತೆರೆಯಲ್ಪಟ್ಟು, ಬಾಂಬ್‌ಸಿಡಿಯುತ್ತದೆ. ಹೀಗೆ ಮಾಡಿಜಪಾನಿನ ಹಲವುನಗರಗಳಲ್ಲಿ ಧ್ವಂಸ ಕಾರ್ಯ ನಡೆಸಬಹುದು ಎಂಬುದು ಫೀಝರ್‌ನ ತಂತ್ರವಾಗಿತ್ತು.

ಸರಿ, ಪ್ರಯೋಗಕ್ಕೆಸಿದ್ಧವಾಯಿತು ಅಮೆರಿಕದಸೇನೆ. ಬಾವಲಿಗಳನ್ನುದೊಡ್ಡ ಮಟ್ಟದಲ್ಲಿ ಹಿಡಿದು ತರಲಾಯಿತು. ಅವನ್ನುವಿಮಾನಗಳಲ್ಲಿ ಅತಿ ಎತ್ತರಕ್ಕೆಕೊಂಡೊಯ್ಯಲಾಯಿತು.ನಿಶ್ಚಲಗೊಂಡ ಅವುಗಳ ರೆಕ್ಕೆ,ಹೊಟ್ಟೆಗಳಿಗೆಲ್ಲ ಬಾಂಬ್‌ ಕಟ್ಟಲಾಯಿತು. ಅವು ರೆಕ್ಕೆಬಡಿಯುತ್ತ ಹಾರತೊಡಗಿದೊಡನೆ ಬಾಂಬುಗಳುಸಿಡಿಯುವಂತೆ ವ್ಯವಸ್ಥೆ ಮಾಡಲಾಯಿತು. ನ್ಯೂಮೆಕ್ಸಿಕೋದ ಮರುಭೂಮಿಯಲ್ಲಿ ಈ ಪ್ರಥಮಪ್ರಯೋಗ ನಡೆಯಿತು. ಮರುಭೂಮಿಯಲ್ಲಿ ಮಾಡಿದಪ್ರಯೋಗ ಬಹುತೇಕ ಯಶಸ್ವಿ ಏನೋ ಆಯಿತು. ಆದರೆ,ಸ್ತಬ್ಧಸ್ಥಿತಿಯಿಂದ ಸಹಜಸ್ಥಿತಿಗೆ ಮರಳಿದ ಬಾವಲಿಗಳುನೇರ, ಅಮೆರಿಕದ ಮಿಲಿಟರಿ ನೆಲೆಯತ್ತಲೇ ಹಾರಾಡಿ, ಆನೆಲೆಯನ್ನು ಪೂರ್ತಿ ಧ್ವಂಸ ಮಾಡಿ, ಇಡೀ ಯೋಜನೆಗೇಒಂದು ದೊಡ್ಡ (ಅ)ಶುಭಂ ಬರೆದವು! ಈದುರಂತಪ್ರಯೋಗದ ನೆನಪಿಗಾಗಿ ಫೀಝರ್‌, ತನ್ನಆಫೀಸಿನಲ್ಲಿ ಒಂದು ಬೈಹುಲ್ಲು ತುಂಬಿಸಿಟ್ಟ ಬಾವಲಿಯಪ್ರತಿಕೃತಿಯನ್ನು ಗೋಡೆಗೆ ನೇತು ಹಾಕಿದ್ದ. ಇದೇನು?ಎಂದು ಕೇಳಿದವರಿಗೆಲ್ಲ ಅದೊಂದು ದೊಡ್ಡ ಕಥೆ ಎಂದು ನಗುತ್ತ ತನ್ನ ಅನುಭವ ಕಥನ ಶುರು ಮಾಡುತ್ತಿದ್ದ.­

 

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ರಾಮನಗರದಲ್ಲಿ ಸಿಡಿಲು ಸಹಿತ ವರುಣನ ಅಬ್ಬರ… 4ಮೇಕೆ ಸಾವು, ಮೂವರಿಗೆ ಗಾಯ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

chChamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

DHONI JADEJA IPL FINAL

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್‌… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?

ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…

New Delhi: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…

Maharashtra; ಕಾಂಗ್ರೆಸ್​ ಸಂಸದ ಬಾಲು ಧನೋರ್ಕರ್ ನಿಧನ

Maharashtra; ಕಾಂಗ್ರೆಸ್​ ಸಂಸದ ಬಾಲು ಧನೋರ್ಕರ್ ನಿಧನ

Nashik: ಕಾರು ನದಿಗೆ ಉರುಳಿ ಒಂದೇ ಕುಟುಂಬದ ಮೂವರ ಸಾವು; ಆರು ಮಂದಿಗೆ ಗಾಯ

Nashik: ಕಾರು ನದಿಗೆ ಉರುಳಿ ಒಂದೇ ಕುಟುಂಬದ ಮೂವರ ಸಾವು; ಆರು ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

Untitled-1

ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ರಾಮನಗರದಲ್ಲಿ ಸಿಡಿಲು ಸಹಿತ ವರುಣನ ಅಬ್ಬರ… 4ಮೇಕೆ ಸಾವು, ಮೂವರಿಗೆ ಗಾಯ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

chChamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

DHONI JADEJA IPL FINAL

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್‌… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?

ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…

New Delhi: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…