![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಬೆವರ ಹನಿಯ ಡ್ಯುಯೆಟ್ಟು : ಏನು ನಿನ್ನ ಬೆವರ ಹನಿಗಳ ಲೀಲೆ…
Team Udayavani, Apr 30, 2019, 6:20 AM IST
![Josh-Bevaru](https://www.udayavani.com/wp-content/uploads/2019/04/Josh-Bevaru-620x314.jpg)
ಅರೆ! ನನಗೇನಾಯ್ತಪ್ಪಾ ಅಂತ ನೋಡಿಕೊಂಡರೆ ಮೈಯೆಲ್ಲ ಒದ್ದೆ. ಬೆವರು ಹನಿಗಳು ರಾಜ ರಾಣಿ, ರೋರರ್, ರಾಕೆಟ್ನಂತೆ ನಾ ಮುಂದು ತಾ ಮುಂದು ಎಂದು ಹರಿಯುತ್ತಿವೆೆ. ಬೇಸಿಗೆಯ ಸುಡು ಬಿಸಿಲಿನ ಕಾರಣ ವಿಪರೀತ ಬೆವರು. ಮೂಲತಃ ನಾನು ಮಧ್ಯಕರ್ನಾಟಕದವನು. ನನಗೆ ದಕ್ಷಿಣಕನ್ನಡದ ವಾತಾವರಣ ಹಿಡಿಸಲು ಬಹುಕಾಲವೇ ಬೇಕಾಯ್ತು…
ಮಾಗಿಯ ಚಳಿ ಮುಗಿದು, ಬೇಸಿಗೆಯ ಸೂರ್ಯ ಪ್ರತಾಪ ಬೀರುವ ಹೊತ್ತಿನಲ್ಲಿ ನಾನು ತರಗತಿಯಲ್ಲಿದ್ದೆ. ಬೆಳಗ್ಗೆ 11 ಗಂಟೆ ಇದ್ದಿರಬಹುದೇನೋ. ಲೆಕ್ಚರರ್ ಎಂದಿನಂತೆ ಸಹಜವಾಗಿ ತರಗತಿಯನ್ನು ಆರಂಭಿಸಿದರು. ಅವರ ಪಾಠದೊಳಗೆ ಇಡೀ ತರಗತಿ ಮುಳುಗಿತ್ತು. ಎದೆಯೊಳಗೆ ಏನೋ ಜರಿಹುಳು ಹರಿದ ಅನುಭವ. ಮೆಲ್ಲಗೆ ಮುಟ್ಟಿ ನೋಡಿಕೊಂಡೆ. ಏನೂ ಇರಲಿಲ್ಲ. ಸುಮ್ಮನಾದೆ.
ನಂತರ ಮರುದಿನವೂ ಮೈಯೊಳಗೆ ಇದೇ ಪುಳಕ. ಒಂಥರಾ ಕಚಗುಳಿ ಇಟ್ಟಂತೆ ಸರಸರ ನೀರು ಹರಿಯುವ ಅನುಭವ. ಅರೆ! ನನಗೇನಾಯ್ತಪ್ಪಾ ಅಂತ ನೋಡಿಕೊಂಡರೆ ಮೈಯೆಲ್ಲ ಒದ್ದೆ. ಬೆವರ ಹನಿಗಳು ರಾಜ ರಾಣಿ, ರೋರರ್, ರಾಕೆಟ್ನಂತೆ ನಾ ಮುಂದು ತಾ ಮುಂದೆ ಎಂದು ಹರಿಯುತ್ತಿವೆ. ಏಪ್ರಿಲ್ ತಿಂಗಳ ಸುಡು ಬಿಸಿಲಿನ ಕಾರಣ ವಿಪರೀತ ಬೆವರು. ಮೂಲತಃ ನಾನು ಮಧ್ಯಕರ್ನಾಟಕದವನು. ನನಗೆ ದಕ್ಷಿಣ ಕನ್ನಡದ ವಾತಾವರಣ ಹಿಡಿಸಲು ಬಹುಕಾಲವೇ ಬೇಕಾಯ್ತು.
ಇಲ್ಲಿನ ವಾತಾವರಣ ನಿಜಕ್ಕೂ ಹಾರಿಬಲ್ ಯಾಕೆಂದರೆ, ಬೇಸಗೆಯಲ್ಲಿ ಸಹಿಸಲಸಾಧ್ಯ
ಧಗೆ. ಮಳೆಗಾಲದಲ್ಲಿ ಹುಚ್ಚು ಮಳೆ. ನಮ್ಮೂರಲ್ಲಿ ಹೀಗಲ್ಲ. ಮಳೆ, ಬಿಸಿಲು, ಚಳಿ ಎಲ್ಲವೂ ಸಮಾನವಾಗಿ ಇರುವ ಪರಿಸರ. ನಮ್ಮೂರಲ್ಲೂ ಬೇಸಗೆಯಲ್ಲಿ ಹೀಗೆಯೇ ಬಿಸಿಲಿರುತ್ತದೆ. ಆದರೆ, ಚರ್ಮ ಸುಟ್ಟು ಹೋಗುವಂಥ ಉರಿ ಬಿಸಿಲು, ಸಹಿಸಲಸಾಧ್ಯ ಧಗೆ ಇಲ್ಲ. ಇಲ್ಲಿ ಸುತ್ತಲೂ ದಟ್ಟ ಕಾಡು ಇರುವುದರಿಂದ ಸದಾ ತಂಪಿರುತ್ತದೆ ಎಂದು ಭಾವಿಸಿದ್ದೆ.
ಆದರೆ, ನನ್ನ ಯೋಚನೆಯೆಲ್ಲ ಬುಡಮೇಲಾಗಿದೆ. ಇಷ್ಟು ಧಗೆಗೆ ಕಾರಣ ಏನಿರಬಹುದು ಎಂದು ವಿಚಾರಿಸಿದ ನನಗೆ ತಿಳಿದುಬಂದಿದ್ದು ಒಂದು: ಇದು ಸಮುದ್ರಕ್ಕೆ ಸಮೀಪವಿರುವುದರಿಂದ ಮತ್ತು ಇಲ್ಲಿನ ಮಣ್ಣಿನ ವಿಶಿಷ್ಟ ಲಕ್ಷಣ ಎನ್ನುವುದು. ಇಲ್ಲಿ ಭೂಮಿ ಸೂರ್ಯನ ಶಾಖವನ್ನು ಹೀರಿಕೊಳ್ಳುವುದಿಲ್ಲ. ಹಾಗಾಗಿ ಬಿಸಿಲ ಧಗೆ ಹೆಚ್ಚು. ಅದು ಎಷ್ಟರಮಟ್ಟಿಗೆ ಎಂದರೆ ಬೇಸಿಗೆಯಲ್ಲಿ ಬೆಳಗ್ಗೆ 8 ಗಂಟೆಗಾಗಲೇ ಬೆವರ ಹನಿಗಳು ಮೈಯಿಂದ ಕಿತ್ತು ಬರುತ್ತಿರುತ್ತದೆ.
ಇನ್ನು ಮಧ್ಯಾಹ್ನದ ಪಾಡು ಆ ದೇವರಿಗೇ ಪ್ರೀತಿ. ಸಂಜೆ ಹೊತ್ತಿಗಾಗಲೇ ನನ್ನ ಪರಿಸ್ಥಿತಿ ಕುಕ್ಕರ್ನಲ್ಲಿ ಒಂದೆರಡು ವಿಸಿಲ್ಗೆ ಬೇಯುವ ತೊಗರಿ ಬೇಳೆಯಂತಾಗುತ್ತದೆ. ಇನ್ನು ರಾತ್ರಿ ಫ್ಯಾನ್ ತಿರುಗದಿದ್ದರೆ, ಸೆಖೆಯಿಂದ ನಿದ್ದೆ ಬರದೇ, ಬೋರಲು ಬಿದ್ದು - ಅಂಗಾತ ಬಿದ್ದು ನಾವೇ ತಿರುಗುತ್ತಿರುತ್ತೇವೆ.
ಊರಲ್ಲಿ ಹದವಾಗಿ ತಿಂದು ಬೆಳೆಸಿದ್ದ ಬೊಜ್ಜು ಮೂರೇ ತಿಂಗಳಿಗೆ ಕರಗಿ ನೀರಾಗಿ ಅಲ್ಲಲ್ಲ , ಬೆವರಾಗಿ ಹರಿದು ಹೋಯಿತು. ಇಲ್ಲಿನ ವಾತಾವರಣ, ಅಷ್ಟೊಂದು ಸ್ಟ್ರಾಂಗ್. ಅಂದಹಾಗೆ, ಇಲ್ಲಿನ ಜನರ ಆಹಾರ ಕ್ರಮ, ಜೀವನ ಶೈಲಿಯೂ ಇದಕ್ಕೆ ಪೂರಕವಾಗಿಯೇ ಇದೆ. ಇಲ್ಲಿ ಸಿಗುವ ದೊಡ್ಡ ಗಾತ್ರದ ಎಳನೀರು, ವಿವಿಧ ರೀತಿಯ ತಂಪು ಪಾನೀಯಗಳು ಜನರ ಜೀವನದ ಜೊತೆ ಹಾಸುಹೊಕ್ಕಾಗಿವೆ. ಬಹುತೇಕವಾಗಿ ಇಲ್ಲಿನ ಜನರು ಬಿಸಿಲ ಧಗೆಗೆ ಬೆಂದ ಮೈಮನಸ್ಸು ಹಗುರಾಗಲು ತಪ್ಪದೇ ರಾತ್ರಿ ಸ್ನಾನ ಮಾಡಿ ನೆಮ್ಮದಿಯ ನಿದ್ರೆಗೆ ಜಾರುತ್ತಾರೆ.
ಅದೇನೇ ಇರಲಿ, ನಮ್ಮೂರಲ್ಲಿ ಬೆಳಗ್ಗೆ ಜಾಗಿಂಗ್ ಮಾಡಿದಾಗ ಅಥವಾ ಜಿಮ್ನಲ್ಲಿ ವರ್ಕೌಟ್ ಮಾಡಿದಾಗ ಮಾತ್ರ ಬರುತ್ತಿದ್ದ ನನ್ನ ಬೆವರಿಗೆ ಒಂದು ರೀತಿಯ ಪ್ರತಿಷ್ಠೆಯ ಸ್ಥಾನವಿತ್ತು. ಆದರೆ, ಇಲ್ಲಿನ ಜನತೆಗೆ ಅದು ಉಸಿರಾಟದಷ್ಟೇ ಸಹಜವಾಗಿದೆ. ನಾನು ತುಳುನಾಡಿಗೆ ಬಂದು ಒಂದು ವರುಷ ಕಳೆದಿದೆ. ನನ್ನ ದೇಹದ ಬೆವರಷ್ಟೇ ಅಲ್ಲ, ಅಜ್ಞಾನವೆಂಬ ಬೆವರೂ ಯಾವ ಮುಲಾಜಿಲ್ಲದೇ ಹರಿದು, ಇಳಿದು ಹೋಗಿದೆ. ಹೊಸ ವಾತಾವರಣಕ್ಕೆ ದೇಹ, ಮನಸ್ಸು ಒಗ್ಗಿಕೊಂಡಿದೆ. ಕಷ್ಟಪಟ್ಟು ಬೆವರು ಹರಿಸಿ, ಶಿಕ್ಷಕನಾಗುತ್ತಿದ್ದೇನೆಂಬ ಸಾರ್ಥಕದ ಭಾವವಿದೆ.
– ಮಹೇಶ್ ಎಂ.ಸಿ., ಉಜಿರೆ
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.