ಬೆವರ ಹನಿಯ ಡ್ಯುಯೆಟ್ಟು : ಏನು ನಿನ್ನ ಬೆವರ ಹನಿಗಳ ಲೀಲೆ…


Team Udayavani, Apr 30, 2019, 6:20 AM IST

Josh-Bevaru

ಅರೆ! ನನಗೇನಾಯ್ತಪ್ಪಾ ಅಂತ ನೋಡಿಕೊಂಡರೆ ಮೈಯೆಲ್ಲ ಒದ್ದೆ. ಬೆವರು ಹನಿಗಳು ರಾಜ ರಾಣಿ, ರೋರರ್‌, ರಾಕೆಟ್‌ನಂತೆ ನಾ ಮುಂದು ತಾ ಮುಂದು ಎಂದು ಹರಿಯುತ್ತಿವೆೆ. ಬೇಸಿಗೆಯ ಸುಡು ಬಿಸಿಲಿನ ಕಾರಣ ವಿಪರೀತ ಬೆವರು. ಮೂಲತಃ ನಾನು ಮಧ್ಯಕರ್ನಾಟಕದವನು. ನನಗೆ ದಕ್ಷಿಣಕನ್ನಡದ ವಾತಾವರಣ ಹಿಡಿಸಲು ಬಹುಕಾಲವೇ ಬೇಕಾಯ್ತು…

ಮಾಗಿಯ ಚಳಿ ಮುಗಿದು, ಬೇಸಿಗೆಯ ಸೂರ್ಯ ಪ್ರತಾಪ ಬೀರುವ ಹೊತ್ತಿನಲ್ಲಿ ನಾನು ತರಗತಿಯಲ್ಲಿದ್ದೆ. ಬೆಳಗ್ಗೆ 11 ಗಂಟೆ ಇದ್ದಿರಬಹುದೇನೋ. ಲೆಕ್ಚರರ್‌ ಎಂದಿನಂತೆ ಸಹಜವಾಗಿ ತರಗತಿಯನ್ನು ಆರಂಭಿಸಿದರು. ಅವರ ಪಾಠದೊಳಗೆ ಇಡೀ ತರಗತಿ ಮುಳುಗಿತ್ತು. ಎದೆಯೊಳಗೆ ಏನೋ ಜರಿಹುಳು ಹರಿದ ಅನುಭವ. ಮೆಲ್ಲಗೆ ಮುಟ್ಟಿ ನೋಡಿಕೊಂಡೆ. ಏನೂ ಇರಲಿಲ್ಲ. ಸುಮ್ಮನಾದೆ.

ನಂತರ ಮರುದಿನವೂ ಮೈಯೊಳಗೆ ಇದೇ ಪುಳಕ. ಒಂಥರಾ ಕಚಗುಳಿ ಇಟ್ಟಂತೆ ಸರಸರ ನೀರು ಹರಿಯುವ ಅನುಭವ. ಅರೆ! ನನಗೇನಾಯ್ತಪ್ಪಾ ಅಂತ ನೋಡಿಕೊಂಡರೆ ಮೈಯೆಲ್ಲ ಒದ್ದೆ. ಬೆವರ ಹನಿಗಳು ರಾಜ ರಾಣಿ, ರೋರರ್‌, ರಾಕೆಟ್‌ನಂತೆ ನಾ ಮುಂದು ತಾ ಮುಂದೆ ಎಂದು ಹರಿಯುತ್ತಿವೆ. ಏಪ್ರಿಲ್‌ ತಿಂಗಳ ಸುಡು ಬಿಸಿಲಿನ ಕಾರಣ ವಿಪರೀತ ಬೆವರು. ಮೂಲತಃ ನಾನು ಮಧ್ಯಕರ್ನಾಟಕದವನು. ನನಗೆ ದಕ್ಷಿಣ ಕನ್ನಡದ ವಾತಾವರಣ ಹಿಡಿಸಲು ಬಹುಕಾಲವೇ ಬೇಕಾಯ್ತು.

ಇಲ್ಲಿನ ವಾತಾವರಣ ನಿಜಕ್ಕೂ ಹಾರಿಬಲ್ ಯಾಕೆಂದರೆ, ಬೇಸಗೆಯಲ್ಲಿ ಸಹಿಸಲಸಾಧ್ಯ
ಧಗೆ. ಮಳೆಗಾಲದಲ್ಲಿ ಹುಚ್ಚು ಮಳೆ. ನಮ್ಮೂರಲ್ಲಿ ಹೀಗಲ್ಲ. ಮಳೆ, ಬಿಸಿಲು, ಚಳಿ ಎಲ್ಲವೂ ಸಮಾನವಾಗಿ ಇರುವ ಪರಿಸರ. ನಮ್ಮೂರಲ್ಲೂ ಬೇಸಗೆಯಲ್ಲಿ ಹೀಗೆಯೇ ಬಿಸಿಲಿರುತ್ತದೆ. ಆದರೆ, ಚರ್ಮ ಸುಟ್ಟು ಹೋಗುವಂಥ ಉರಿ ಬಿಸಿಲು, ಸಹಿಸಲಸಾಧ್ಯ ಧಗೆ ಇಲ್ಲ. ಇಲ್ಲಿ ಸುತ್ತಲೂ ದಟ್ಟ ಕಾಡು ಇರುವುದರಿಂದ ಸದಾ ತಂಪಿರುತ್ತದೆ ಎಂದು ಭಾವಿಸಿದ್ದೆ.

ಆದರೆ, ನನ್ನ ಯೋಚನೆಯೆಲ್ಲ ಬುಡಮೇಲಾಗಿದೆ. ಇಷ್ಟು ಧಗೆಗೆ ಕಾರಣ ಏನಿರಬಹುದು ಎಂದು ವಿಚಾರಿಸಿದ ನನಗೆ ತಿಳಿದುಬಂದಿದ್ದು ಒಂದು: ಇದು ಸಮುದ್ರಕ್ಕೆ ಸಮೀಪವಿರುವುದರಿಂದ ಮತ್ತು ಇಲ್ಲಿನ ಮಣ್ಣಿನ ವಿಶಿಷ್ಟ ಲಕ್ಷಣ ಎನ್ನುವುದು. ಇಲ್ಲಿ ಭೂಮಿ ಸೂರ್ಯನ ಶಾಖವನ್ನು ಹೀರಿಕೊಳ್ಳುವುದಿಲ್ಲ. ಹಾಗಾಗಿ ಬಿಸಿಲ ಧಗೆ ಹೆಚ್ಚು. ಅದು ಎಷ್ಟರಮಟ್ಟಿಗೆ ಎಂದರೆ ಬೇಸಿಗೆಯಲ್ಲಿ ಬೆಳಗ್ಗೆ 8 ಗಂಟೆಗಾಗಲೇ ಬೆವರ ಹನಿಗಳು ಮೈಯಿಂದ ಕಿತ್ತು ಬರುತ್ತಿರುತ್ತದೆ.

ಇನ್ನು ಮಧ್ಯಾಹ್ನದ ಪಾಡು ಆ ದೇವರಿಗೇ ಪ್ರೀತಿ. ಸಂಜೆ ಹೊತ್ತಿಗಾಗಲೇ ನನ್ನ ಪರಿಸ್ಥಿತಿ ಕುಕ್ಕರ್‌ನಲ್ಲಿ ಒಂದೆರಡು ವಿಸಿಲ್‌ಗೆ ಬೇಯುವ ತೊಗರಿ ಬೇಳೆಯಂತಾಗುತ್ತದೆ. ಇನ್ನು ರಾತ್ರಿ ಫ್ಯಾನ್‌ ತಿರುಗದಿದ್ದರೆ, ಸೆಖೆಯಿಂದ ನಿದ್ದೆ ಬರದೇ, ಬೋರಲು ಬಿದ್ದು - ಅಂಗಾತ ಬಿದ್ದು ನಾವೇ ತಿರುಗುತ್ತಿರುತ್ತೇವೆ.

ಊರಲ್ಲಿ ಹದವಾಗಿ ತಿಂದು ಬೆಳೆಸಿದ್ದ ಬೊಜ್ಜು ಮೂರೇ ತಿಂಗಳಿಗೆ ಕರಗಿ ನೀರಾಗಿ ಅಲ್ಲಲ್ಲ , ಬೆವರಾಗಿ ಹರಿದು ಹೋಯಿತು. ಇಲ್ಲಿನ ವಾತಾವರಣ, ಅಷ್ಟೊಂದು ಸ್ಟ್ರಾಂಗ್‌. ಅಂದಹಾಗೆ, ಇಲ್ಲಿನ ಜನರ ಆಹಾರ ಕ್ರಮ, ಜೀವನ ಶೈಲಿಯೂ ಇದಕ್ಕೆ ಪೂರಕವಾಗಿಯೇ ಇದೆ. ಇಲ್ಲಿ ಸಿಗುವ ದೊಡ್ಡ ಗಾತ್ರದ ಎಳನೀರು, ವಿವಿಧ ರೀತಿಯ ತಂಪು ಪಾನೀಯಗಳು ಜನರ ಜೀವನದ ಜೊತೆ ಹಾಸುಹೊಕ್ಕಾಗಿವೆ. ಬಹುತೇಕವಾಗಿ ಇಲ್ಲಿನ ಜನರು ಬಿಸಿಲ ಧಗೆಗೆ ಬೆಂದ ಮೈಮನಸ್ಸು ಹಗುರಾಗಲು ತಪ್ಪದೇ ರಾತ್ರಿ ಸ್ನಾನ ಮಾಡಿ ನೆಮ್ಮದಿಯ ನಿದ್ರೆಗೆ ಜಾರುತ್ತಾರೆ.

ಅದೇನೇ ಇರಲಿ, ನಮ್ಮೂರಲ್ಲಿ ಬೆಳಗ್ಗೆ ಜಾಗಿಂಗ್‌ ಮಾಡಿದಾಗ ಅಥವಾ ಜಿಮ್‌ನಲ್ಲಿ ವರ್ಕೌಟ್‌ ಮಾಡಿದಾಗ ಮಾತ್ರ ಬರುತ್ತಿದ್ದ ನನ್ನ ಬೆವರಿಗೆ ಒಂದು ರೀತಿಯ ಪ್ರತಿಷ್ಠೆಯ ಸ್ಥಾನವಿತ್ತು. ಆದರೆ, ಇಲ್ಲಿನ ಜನತೆಗೆ ಅದು ಉಸಿರಾಟದಷ್ಟೇ ಸಹಜವಾಗಿದೆ. ನಾನು ತುಳುನಾಡಿಗೆ ಬಂದು ಒಂದು ವರುಷ ಕಳೆದಿದೆ. ನನ್ನ ದೇಹದ ಬೆವರಷ್ಟೇ ಅಲ್ಲ, ಅಜ್ಞಾನವೆಂಬ ಬೆವರೂ ಯಾವ ಮುಲಾಜಿಲ್ಲದೇ ಹರಿದು, ಇಳಿದು ಹೋಗಿದೆ. ಹೊಸ ವಾತಾವರಣಕ್ಕೆ ದೇಹ, ಮನಸ್ಸು ಒಗ್ಗಿಕೊಂಡಿದೆ. ಕಷ್ಟಪಟ್ಟು ಬೆವರು ಹರಿಸಿ, ಶಿಕ್ಷಕನಾಗುತ್ತಿದ್ದೇನೆಂಬ ಸಾರ್ಥಕದ ಭಾವವಿದೆ.

– ಮಹೇಶ್‌ ಎಂ.ಸಿ., ಉಜಿರೆ

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.