ಮರೆಯಲಾಗದ ಇತಿಹಾಸ ಪರೀಕ್ಷೆ


Team Udayavani, Apr 18, 2017, 3:45 AM IST

pareekshe.jpg

ನಾನು ಚೀಟಿ ಮಾಡಿಟ್ಟುಕೊಂಡಿದ್ದು ವ್ಯರ್ಥವಾಗಲಿಲ್ಲ ಎಂದು ಖುಷಿಯಲ್ಲಿ ತೆರೆದೆ. ಅದನ್ನು ನೋಡಿಕೊಂಡು ಕದ್ದು ಬರೆಯಲು ಹೊರಟಾಗ ಶಿಕ್ಷಕರು ಬಳಿ ಬಂದು ನಿಂತರು. 

ಪಿಯುಸಿ ಓದುತ್ತಿದ್ದ ಕಾಲವದು. ಎಲ್ಲರ ದ್ವೇಷ ಕಟ್ಟಿಕೊಂಡು ಕಲಾ ವಿಭಾಗಕ್ಕೆ ಪ್ರವೇಶ ಪಡದುಕೊಂಡಿದ್ದೆ. ಎಲ್ಲಾ ಅಧ್ಯಾಪಕರುಗಳು ನನ್ನ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು. ತೆಗೆದುಕೊಂಡ ಭಂಡ ಧೈರ್ಯಕ್ಕಾದರೂ ನಾನು ಏನಾದರೂ ಸಾಧಿಸಬೇಕಿತ್ತು. ದಿನ ಕಳೆಯುತ್ತಿದ್ದಂತೆ ಪರೀಕ್ಷೆ ಹತ್ತಿರ ಬಂತು. ಬೆಳಗಾದರೆ ಇತಿಹಾಸದ ಪರೀಕ್ಷೆ. ಗತಕಾಲದ ಘಟನೆಗಳನ್ನು ಕೇಳಲು ಏನೋ ಕುತೂಹಲ. ಆದರೆ, ಅದನ್ನು ಇಸವಿ ಸಹಿತ ನೆನಪಿಡಬೇಕೆಂದರೆ ಅಂಗಿಯೊಳಗಡೆ ಇರುವೆ ಬಿಟ್ಟುಕೊಂಡ ಹಾಗೆ. ಅಧ್ಯಾಪಕರುಗಳ ನಿರೀಕ್ಷೆ ಮತ್ತು ಮಹತ್ವಾಕಾಂಕ್ಷೆ ಎರಡೂ ಸೇರಿ ಅಂಕ ಹೆಚ್ಚು ತೆಗೆಯಲೇಬೇಕಾಗಿತ್ತು. ಆದರೆ ಉತ್ತರ ನೆನಪಾಗಬೇಕಲ್ಲಾ!

ಪರೀಕ್ಷೆ ಹಾಲ್‌ಗೆ ಇನ್ನೇನು ಹೋಗುತ್ತಿದ್ದೆ. ಪಠ್ಯದಲ್ಲಿ ಪುಣ್ಯಾತ್ಮ ನೆಪೋಲಿಯನ್‌ನ ಜೀವನಗಾಥೆಯನ್ನು ನೆನಪಿಟ್ಟುಕೊಳ್ಳಬೇಕಾದ ಸಂಕಷ್ಟ. ಆತನ ದಂಡಯಾತ್ರೆಯಷ್ಟೇ ಉದ್ದ ಉದ್ದದ ಸಾಲುಗಳು. ನೆಪೋಲಿಯನ್‌ ಯಾರ ಜೊತೆ ಹೋರಾಡಿದ? ಯಾರ ಜೊತೆ ಒಪ್ಪಂದ ಮಾಡಿಕೊಂಡ? ಆಮೇಲೆ ಏನಾದ? ಎಲ್ಲವನ್ನು ನೆನಪಿಟ್ಟುಕೊಳ್ಳಬೇಕಿತ್ತು. ಪರೀಕ್ಷೆಗೆ ಖಂಡಿತವಾಗಿ ಬಂದೇ ಬರುವ ಪ್ರಶ್ನೆ ಎಂಬುದು ಗೊತ್ತಿತ್ತು. ಅದಕ್ಕೇ ಒಂದಷ್ಟು ಮುಖ್ಯಾಂಶಗಳನ್ನು ಒಂದು ಹಾಳೆ ಮೇಲೆ ಬರೆದುಕೊಂಡು ಪರೀûಾ ಕೊಠಡಿಯ ಒಳಹೊಕ್ಕೆ. ನನ್ನ ಅನುಮಾನದಂತೆಯೇ ಆ ಪ್ರಶ್ನೆ ಬಂದಿತ್ತು.

ನಾನು ಚೀಟಿ ಮಾಡಿಟ್ಟುಕೊಂಡಿದ್ದು ವ್ಯರ್ಥವಾಗಲಿಲ್ಲ ಎಂದು ಖುಷಿಯಲ್ಲಿ ತೆರೆದೆ. ಅದನ್ನು ನೋಡಿಕೊಂಡು ಕದ್ದು ಬರೆಯಲು ಹೊರಟಾಗ ಶಿಕ್ಷಕರು ಬಳಿ ಬಂದು ನಿಂತರು. ನನಗೆ ಪೆಚ್ಚಾಯಿತು. ಅವರು ನನ್ನನ್ನು ಮತ್ತು ಚೀಟಿಯನ್ನು ನೋಡಿ ಹೇಳಿದ್ದು ಒಂದೇ ಮಾತು: “ನೀನು ನಿನಗಾಗಿ ಓದು, ಬೇರೆಯವರನ್ನು ಮೆಚ್ಚಿಸಲು ಓದಬೇಡ’ ಎಂದು. ಅಲ್ಲಿಗೆ ನನ್ನ ಬುದ್ಧಿಗೆ ಹಿಡಿದಿದ್ದ ಗ್ರಹಣ ದೂರವಾಗಿ ಬೆಳಕು ಪಸರಿಸಿದಂತಾಯಿತು. ಆ ಶಿಕ್ಷಕರು ಉತ್ತರ ಪತ್ರಿಕೆ ಕಿತ್ತುಕೊಂಡು ನನ್ನನ್ನು ತರಗತಿಯಿಂದ ಹೊರ ಕಳಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನಾನು ಆ ಶಿಕ್ಷಕರ ಬಳಿ ತೆರಳಿ ಕ್ಷಮೆ ಕೇಳಿ, ಅವರ ಮುಂದೆಯೇ ಕಾಪಿ ಚೀಟಿ ದೂರ ಎಸೆದು ಪರೀಕ್ಷೆ ಬರೆಯಲು ಬಂದು ಕುಳಿತೆ. ಅದೇ ಕೊನೆ, ಮತ್ತೆಂದೂ ಕಾಪಿ ಹೊಡೆಯುವ ಯೋಚನೆ ನನ್ನ ಹತ್ತಿರ ಸುಳಿಯಲಿಲ್ಲ.

– ಪದ್ಮಶ್ರೀ ಭಟ್ಟ ಕೊಪ್ಪದಗದ್ದೆ, ಶಿರಸಿ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.