ನಿನ್ನನ್ನು ಸಂಪರ್ಕಿಸುವ ಮಾರ್ಗ ಯಾವುದು?


Team Udayavani, Jul 30, 2019, 3:00 AM IST

nina-sampa

ನೀನು ಪತ್ರದೊಂದಿಗೆ ನನಗಾಗಿ ಎರಡು ಸಾಲುಗಳ ಕವನವನ್ನು ಗೀಚತೊಡಗಿದಾಗ, ನಾನು ಸುಮ್ಮನಾಗಲಿಲ್ಲ. ಅದಕ್ಕೆ ಉತ್ತರವೆಂಬಂತೆ, ನಿನಗಾಗಿ ಕವಿತೆ ಬರೆದೆ. ಪ್ರೀತಿಯ ಇವನೇ, ನಿನ್ನಂತೆ ಪ್ರೇಮಪತ್ರದ ಅಂಕಣವನ್ನು ಹವ್ಯಾಸಕ್ಕಾಗಿ ಬರೆಯುತ್ತಿದ್ದವಳು, ನಿನ್ನಪತ್ರಗಳನ್ನು ಓದಿ ಮನಸೋತೆ. ಅಂದಿನಿಂದ ನಾನು ಬರೆಯುವ ಪ್ರೇಮ ಪತ್ರಗಳು ನಿನಗಾಗೇ ಮೀಸಲಾದವು. ನೀನು ಕೂಡ ಅದಕ್ಕೆ ಸಮ್ಮತಿಯೆಂಬಂತೆ ಮುಂಚಿಗಿಂತ ಹೆಚ್ಚು ಅಂದವಾಗಿ ಪತ್ರಗಳನ್ನು ಬರೆಯಲು ಶುರು ಮಾಡಿದೆ.

ಎಲ್ಲಕ್ಕಿಂತ ಭಿನ್ನವೆಂಬಂತೆ ನಮ್ಮ ಪ್ರೀತಿ, ಪತ್ರದಲ್ಲೇ ಸಾಗಲು ಶುರುವಾಯಿತು. ಒಬ್ಬರನ್ನೊಬ್ಬರು ಕಾಣದೆ, ಭೇಟಿಯಾಗದೆ ನಮ್ಮದೇ ಕಲ್ಪನೆಯೆಂಬಂತೆ ಇಬ್ಬರೂ ಪತ್ರ ಬರೆಯತೊಡಗಿದೆವು. ನನ್ನ ಸ್ನೇಹಿತೆಯರ ಮುಂದೆ ನಮ್ಮ ಪ್ರೀತಿಯ ಬಗ್ಗೆ ಹೇಳಿದಾಗ ಅವರಿಗೇನೋ ಹೊಟ್ಟೆಕಿಚ್ಚು. ಆದರೂ, “ಎಷ್ಟು ಲಕ್ಕಿ ನೀನು, ಇಷ್ಟು ಚೆನ್ನಾಗಿ ಪತ್ರ ಬರೆಯೋ ಹುಡುಗ ಇನ್ನು ನಿನ್ನನ್ನು ಎಷ್ಟು ಪ್ರೇಮಿಸಬಹುದು’ ಎಂದೆಲ್ಲ ಹೇಳತೊಡಗಿದರು.

ನೀನು ಪತ್ರದೊಂದಿಗೆ ನನಗಾಗಿ ಎರಡು ಸಾಲುಗಳ ಕವನವನ್ನು ಗೀಚತೊಡಗಿದಾಗ, ನಾನು ಸುಮ್ಮನಾಗಲಿಲ್ಲ. ಅದಕ್ಕೆ ಉತ್ತರವೆಂಬಂತೆ, ನಿನಗಾಗಿ ಕವಿತೆ ಬರೆದೆ. ಪತ್ರದಲ್ಲೇ ನಾವಿಬ್ಬರೂ ಮೊದಲು ಭೇಟಿಯಾಗಿ, ಮದುವೆಯಾಗಿ, ಪ್ರೀತಿ ಲಹರಿ ಸಾಗುವ ಭಾವನೆಗಳು ಪ್ರಕಟವಾದವು.ರೇಖಾಗಣಿತ, ವಿಜ್ಞಾನ, ಪ್ರಕೃತಿ, ಕನ್ನಡಾಂಬೆ, ಸಿನಿಮಾತಾರೆ,ಆಭರಣಗಳು, ಪುಸ್ತಕ, ಗಣಕಯಂತ್ರ, ಅಡುಗೆ, ಕ್ರಿಕೆಟ್‌ ಹೀಗೆ ನಾನಾ ವಿಷಯಗಳನ್ನಿಟ್ಟುಕೊಂಡು ಪ್ರೇಮಪತ್ರ ಬರೆಯುತ್ತ, ಹರಿಯುತ್ತ ಸಾಗಿತ್ತು ನಮ್ಮ ಪ್ರೀತಿಯ ಕಾವ್ಯಧಾರೆ. ನಿನ್ನ ಹೆಸರು, ಹವ್ಯಾಸ, ಇತ್ಯಾದಿ ವಿಷಯಗಳನ್ನು ಬರೆಯುತ್ತಿದ್ದ ಎರಡು ಸಾಲುಗಳಲ್ಲಿ ಅಡಗಿಸಿ, ಪದಬಂಧ ಬಿಡಿಸುವುದನ್ನು ಕಲಿಸಿದೆ ನನಗೆ.

ಹೀಗೆ ಸಾಗುತ್ತಿದ್ದ ನಮ್ಮ ಪತ್ರ ವ್ಯವಹಾರ, ನಾಲ್ಕು ವಾರಗಳಿಂದ ನಿಂತಿದೆಯಲ್ಲ ಗೆಳೆಯ? ಪ್ರತಿ ಬಾರಿ ನಿನ್ನ ಪತ್ರ ಓದಲು ಹಾತೊರೆಯುತ್ತಿದ್ದ ಮನಸ್ಸು ಈಗ ಪತ್ರವಿಲ್ಲದೇ ಕಂಗಾಲಾಗಿದೆ. ನಿನ್ನನ್ನು ಸಂಪರ್ಕಿಸುವ ಬೇರೆ ವಿಧಾನವೇ ತಿಳಿಯದಾಗಿದೆ. ನಿನ್ನ ನಿಜವಾದ ಹೆಸರು, ವಿಳಾಸ, ಫೇಸ್‌ಬುಕ್‌ ಐಡಿ, ಇ ಮೇಲ್‌, ವಾಟ್ಸಾಪ್‌ ನಂಬರ್‌ ಯಾವುದನ್ನೂ ನಾನು ಅರಿಯೆ. ನಾನು ಬರೆದ ಹಿಂದಿನ ಎರಡು ಪತ್ರದಲ್ಲಿ ನನ್ನ ಮೊಬೈಲ್‌ ಸಂಖ್ಯೆಯನ್ನು ಕವನದ ಸಾಲಲ್ಲಿ ಅಡಗಿಸಿದ್ದೇನೆ. ಸಾಧ್ಯವಾದರೆ, ಒಂದು ಕರೆ ಮಾಡು.

ಇಂತಿ ನಿನ್ನ ಕರೆಗಾಗಿ ಕಾಯುತ್ತಿರುವ,
ಉಲೂಚಿ
* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.