ರುಚಿತಾ ಕಾರಿಕೊಂಡ ಕತೆ…

ಅಡ್ಮಿನ್‌ ಸ್ಟೇಷನ್ನಿನ ಕತೆಗಳು

Team Udayavani, Apr 30, 2019, 6:20 AM IST

Josh-Admin

ನನ್ನ ತಂಗಿಯ ಮಗಳು ರುಚಿತಾ ಹರೆಯದ ಯುವತಿ. ಉತ್ಸಾಹದ ಬುಗ್ಗೆ. ಎಲ್ಲದರಲ್ಲಿಯೂ ಮುಂದೆ. ತನ್ನದೇ ವಾರಗೆಯ ಹುಡುಗಿಯರನ್ನು ಸೇರಿಸಿ ವಾಟ್ಸ್ಯಾಪ್‌ ಗ್ರೂಪ್‌ ಮಾಡಿದ್ದಳು. “ಯುವ ಅಡ್ಡಾ’ ಎಂದು ಆ ಗ್ರೂಪ್‌ಗೆ ಹೆಸರನ್ನೂ ಇಟ್ಟಿದ್ದಳು. ಈಕೆ ಅಪ್ಪಟ ಕನ್ನಡ ಪ್ರೇಮಿಯಾಗಿದ್ದರಿಂದ, ಆದಷ್ಟು ಕನ್ನಡದಲ್ಲಿಯೇ ಸಂದೇಶಗಳನ್ನು ಹಾಕಬೇಕೆಂದು ನಿಬಂಧನೆ ಹಾಕಿದ್ದಳು.

ಒಂದು ದಿನ ಬೆಳಗ್ಗೆ. ರುಚಿತಾ ತನ್ನ ಮೊಬೈಲನ್ನು ಕೈಗೆತ್ತಿಕೊಂಡು, ಯುವ ಅಡ್ಡಾದಲ್ಲಿನ ಮೆಸೇಜುಗಳ ಮೇಲೆ ಕಣ್ಣಾಡಿಸುತ್ತಿದ್ದಳು. ಎಲ್ಲವೂ ವಿಚಿತ್ರ ಮೆಸೇಜುಗಳೇ! “ರುಚಿತಾಗೆ ವಾಂತಿ ಆಯ್ತಂತೆ, ಹೌದೇನೇ?’, “ಏನೇ ರುಚಿ, ಕಾರಿಕೊಂಡೆಯಂತಲ್ಲ ಯಾಕೇ..?’, “ಆnಂ, ಒಂದೇ ಬಾರಿ ಆಗಿದ್ದೇನೇ? ಬಿಸಿ ನೀರಿಗೆ ನಿಂಬೆರಸ ಕಲಸಿ ಕುಡಿ, ಪಿತ್ತ ಆಗಿರಬೇಕು…’.

ರುಚಿತಾಗೆ ಭಯವಾಯಿತು. “ನನಗೇನೂ ಆಗಿಲ್ಲ… ಏನಿದರ ಅರ್ಥ?’ ಎಂದು ಮೆಸೇಜು ಕಳುಹಿಸಿ, ಮೇಲಿನಿಂದ ಕೆಳಕ್ಕೆ ಎಲ್ಲಾ ಸಂದೇಶಗಳನ್ನೂ ನೋಡುತ್ತಾ ಹೋದಳು. ಪಕ್ಕದ ಮನೆಯ ಶ್ರಾವಣಿ ಕಳಿಸಿದ ಸಂದೇಶ ಹೀಗಿತ್ತು…. “ನಿನ್ನೆ ಸಂಜೆ ರುಚಿತಾ ಕಾರಿಕೊಂಡಿದ್ದಾಳೆ’ ಅಂತ. ಅದಕ್ಕೇ ಇವರೆಲ್ಲರ ಪ್ರತಿಕ್ರಿಯೆ! ಆಗ ರುಚಿತಾಳಿಗೆ ಎಲ್ಲವೂ ಮನದಟ್ಟಾ­ಯಿತು…

“ಅಮ್ಮಾ ತಾಯಂದಿರಾ, ನಾನೇನೂ ಕಾರಿಕೊಂಡಿಲ್ಲ, ನಿನ್ನೆ ಸಂಜೆ ಹೊಸಾ ಫೋರ್ಡ್‌ ಕಾರು ಕೊಂಡಿದ್ದೇನೆ. ಈ ಮಹಾತಾಯಿ ಶ್ರಾವಣಿ ಕಾರ್‌, ಬದಲು ಕಾರಿ ಎಂದು ಟೈಪ್‌ ಮಾಡಿ ಸಂದೇಶ ಹಾಕಿದ್ದಾಳೆ’ ಎಂದು ಗ್ರೂಪ್‌ನಲ್ಲಿ ಗೀಚಿದಳು. ಮತ್ತರ್ಧ ಗಂಟೆಯಲ್ಲಿ ನಗುವ, ಹಂಗಿಸುವ ಇಮೇಜುಗಳಿಂದ ಅಡ್ಡಾ ಹೌಸ್‌ಫ‌ುಲ್‌ ಆಗಿತ್ತು!

ವಾಟ್ಸ್ಯಾಪ್‌ ಗ್ರೂಪ್‌ : ಎಸ್ಸೆಸ್ಸೆಲ್ಸಿ 2005 ಬ್ಯಾಚ್‌
ಗ್ರೂಪ್‌ ಅಡ್ಮಿನ್‌ : ಚಿದಾನಂದ

ನೀವು ವಾಟ್ಸ್ಯಾಪ್‌ ಗ್ರೂಪ್‌ನ ಅಡ್ಮಿನ್‌ ಆಗಿದ್ದರೆ, ನಿಮ್ಮ ಗುಂಪಿನಲ್ಲಿ ನಡೆದ ಪ್ರಸಂಗ, ನೀವು ಪಟ್ಟ ಫ‌ಜೀತಿಗಳನ್ನು ಸ್ವಾರಸ್ಯವಾಗಿ ನಮಗೆ ಬರೆದು ಕಳುಹಿಸಿ. ಪದಗಳ ಮಿತಿ 120-150 ಪದಗಳು.
ನಮ್ಮ ವಿಳಾಸ: [email protected]

– ಕೆ. ಲೀಲಾ ಶ್ರೀನಿವಾಸ, ಹರಪನಹಳ್ಳಿ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.