ರುಚಿತಾ ಕಾರಿಕೊಂಡ ಕತೆ…
ಅಡ್ಮಿನ್ ಸ್ಟೇಷನ್ನಿನ ಕತೆಗಳು
Team Udayavani, Apr 30, 2019, 6:20 AM IST
ನನ್ನ ತಂಗಿಯ ಮಗಳು ರುಚಿತಾ ಹರೆಯದ ಯುವತಿ. ಉತ್ಸಾಹದ ಬುಗ್ಗೆ. ಎಲ್ಲದರಲ್ಲಿಯೂ ಮುಂದೆ. ತನ್ನದೇ ವಾರಗೆಯ ಹುಡುಗಿಯರನ್ನು ಸೇರಿಸಿ ವಾಟ್ಸ್ಯಾಪ್ ಗ್ರೂಪ್ ಮಾಡಿದ್ದಳು. “ಯುವ ಅಡ್ಡಾ’ ಎಂದು ಆ ಗ್ರೂಪ್ಗೆ ಹೆಸರನ್ನೂ ಇಟ್ಟಿದ್ದಳು. ಈಕೆ ಅಪ್ಪಟ ಕನ್ನಡ ಪ್ರೇಮಿಯಾಗಿದ್ದರಿಂದ, ಆದಷ್ಟು ಕನ್ನಡದಲ್ಲಿಯೇ ಸಂದೇಶಗಳನ್ನು ಹಾಕಬೇಕೆಂದು ನಿಬಂಧನೆ ಹಾಕಿದ್ದಳು.
ಒಂದು ದಿನ ಬೆಳಗ್ಗೆ. ರುಚಿತಾ ತನ್ನ ಮೊಬೈಲನ್ನು ಕೈಗೆತ್ತಿಕೊಂಡು, ಯುವ ಅಡ್ಡಾದಲ್ಲಿನ ಮೆಸೇಜುಗಳ ಮೇಲೆ ಕಣ್ಣಾಡಿಸುತ್ತಿದ್ದಳು. ಎಲ್ಲವೂ ವಿಚಿತ್ರ ಮೆಸೇಜುಗಳೇ! “ರುಚಿತಾಗೆ ವಾಂತಿ ಆಯ್ತಂತೆ, ಹೌದೇನೇ?’, “ಏನೇ ರುಚಿ, ಕಾರಿಕೊಂಡೆಯಂತಲ್ಲ ಯಾಕೇ..?’, “ಆnಂ, ಒಂದೇ ಬಾರಿ ಆಗಿದ್ದೇನೇ? ಬಿಸಿ ನೀರಿಗೆ ನಿಂಬೆರಸ ಕಲಸಿ ಕುಡಿ, ಪಿತ್ತ ಆಗಿರಬೇಕು…’.
ರುಚಿತಾಗೆ ಭಯವಾಯಿತು. “ನನಗೇನೂ ಆಗಿಲ್ಲ… ಏನಿದರ ಅರ್ಥ?’ ಎಂದು ಮೆಸೇಜು ಕಳುಹಿಸಿ, ಮೇಲಿನಿಂದ ಕೆಳಕ್ಕೆ ಎಲ್ಲಾ ಸಂದೇಶಗಳನ್ನೂ ನೋಡುತ್ತಾ ಹೋದಳು. ಪಕ್ಕದ ಮನೆಯ ಶ್ರಾವಣಿ ಕಳಿಸಿದ ಸಂದೇಶ ಹೀಗಿತ್ತು…. “ನಿನ್ನೆ ಸಂಜೆ ರುಚಿತಾ ಕಾರಿಕೊಂಡಿದ್ದಾಳೆ’ ಅಂತ. ಅದಕ್ಕೇ ಇವರೆಲ್ಲರ ಪ್ರತಿಕ್ರಿಯೆ! ಆಗ ರುಚಿತಾಳಿಗೆ ಎಲ್ಲವೂ ಮನದಟ್ಟಾಯಿತು…
“ಅಮ್ಮಾ ತಾಯಂದಿರಾ, ನಾನೇನೂ ಕಾರಿಕೊಂಡಿಲ್ಲ, ನಿನ್ನೆ ಸಂಜೆ ಹೊಸಾ ಫೋರ್ಡ್ ಕಾರು ಕೊಂಡಿದ್ದೇನೆ. ಈ ಮಹಾತಾಯಿ ಶ್ರಾವಣಿ ಕಾರ್, ಬದಲು ಕಾರಿ ಎಂದು ಟೈಪ್ ಮಾಡಿ ಸಂದೇಶ ಹಾಕಿದ್ದಾಳೆ’ ಎಂದು ಗ್ರೂಪ್ನಲ್ಲಿ ಗೀಚಿದಳು. ಮತ್ತರ್ಧ ಗಂಟೆಯಲ್ಲಿ ನಗುವ, ಹಂಗಿಸುವ ಇಮೇಜುಗಳಿಂದ ಅಡ್ಡಾ ಹೌಸ್ಫುಲ್ ಆಗಿತ್ತು!
ವಾಟ್ಸ್ಯಾಪ್ ಗ್ರೂಪ್ : ಎಸ್ಸೆಸ್ಸೆಲ್ಸಿ 2005 ಬ್ಯಾಚ್
ಗ್ರೂಪ್ ಅಡ್ಮಿನ್ : ಚಿದಾನಂದ
ನೀವು ವಾಟ್ಸ್ಯಾಪ್ ಗ್ರೂಪ್ನ ಅಡ್ಮಿನ್ ಆಗಿದ್ದರೆ, ನಿಮ್ಮ ಗುಂಪಿನಲ್ಲಿ ನಡೆದ ಪ್ರಸಂಗ, ನೀವು ಪಟ್ಟ ಫಜೀತಿಗಳನ್ನು ಸ್ವಾರಸ್ಯವಾಗಿ ನಮಗೆ ಬರೆದು ಕಳುಹಿಸಿ. ಪದಗಳ ಮಿತಿ 120-150 ಪದಗಳು.
ನಮ್ಮ ವಿಳಾಸ: [email protected]
– ಕೆ. ಲೀಲಾ ಶ್ರೀನಿವಾಸ, ಹರಪನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ