ನೆನಪಿನ ರಾಶಿಯ ತುಂಬಾ ನೀನೇ!


Team Udayavani, May 21, 2019, 6:00 AM IST

letter–lakshmikant-210-copy-copy

ಮುಸ್ಸಂಜೇಲಿ ಕಡಲಂಚಿನ ಕಲ್ಲು ಬೆಂಚಿಗೊರಗಿ ಒಂಟಿಯಾಗಿ ಅದೇನೋ ಯೋಚನೆಯಲ್ಲಿದ್ದೇನೆ. ನೆನಪಿನ ಲೋಕದ ಕದ ತೆರೆದರೆ, ಯಾರೊಂದಿಗೂ ಹಂಚಿಕೊಳ್ಳಲಾಗದ ಸಾವಿರ ನೆನಪುಗಳಿವೆ ಅಲ್ಲಿ. ಆ ನೆನಪುಗಳ ರಾಶಿಯ ತುಂಬೆಲ್ಲಾ ನೀನೇ ತುಂಬಿಕೊಂಡಿದ್ದೀಯ. ಬರೀ ನೀನು…

ಕಡಲ ರಾಶಿಯಿಂದ ಎದ್ದು ನನ್ನೆಡೆಗೆ ಬರುತ್ತಿರುವ ಅಲೆಗಳು, ಎದೆಯೊಳಗಿನ ಭಾವನೆಗಳ ಹೊಯ್ದಾಟಕ್ಕೆ ಹೆಚ್ಚುತ್ತಿರುವ ಹೃದಯ ಬಡಿತ… ಎರಡರ ಅಬ್ಬರವೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮನಸ್ಸು ಮತ್ತೆ ಕಾಲೇಜು ದಿನಗಳತ್ತ ಓಡುತ್ತಲಿದೆ…

ಅನಿಯಂತ್ರಿತವಾಗಿ ಬಿರಿಯುತ್ತಿದ್ದ ಒಲವ ಗುಲಾಬಿಯನ್ನು ಬಿರಿಯಗೊಡದೆ ನಾನು ಅನುಭವಿಸಿದ ನೋವು, ನನ್ನ ಪರಿಸ್ಥಿತಿ ನೋಡಿ ಗಾಬರಿಯಾದ ಗೆಳೆಯರು ಹುಡುಗಿ ಯಾರೆಂದು ಹರಸಾಹಸ ಪಟ್ಟಿದ್ದು, ನಿನ್ನ ಕಣ್ತಪ್ಪಿಸಲು ದಿನವೂ ಕಷ್ಟಪಡುತ್ತಿದ್ದ ನಾನು… ಏನೇನೆಲ್ಲಾ ಇವೆ ನೆನಪ ಬುಟ್ಟಿಯೊಳಗೆ.

ನಿನ್ನನ್ನು ನೇರವಾಗಿ ದಿಟ್ಟಿಸುವ ಧೈರ್ಯವಿಲ್ಲದೇ ಕಣ್ಣಕೊನೆಯಲ್ಲೇ ದಿನವೂ ನಿನ್ನನ್ನು ಗಮನಿಸುತ್ತಿದ್ದೆ. ಅಚಾನಕ್ಕಾಗಿ ನೀನು ನನ್ನೆಡೆಗೆ ನೋಡಿದಾಗ, ಮುಖ ತಿರುಗಿಸಿಬಿಡುತ್ತಿದ್ದೆ. ಉಹೂಂ, ಕಣ್ಣಲ್ಲಿ ಕಣ್ಣಿಡುವಷ್ಟು ಎದೆಗಾರಿಕೆ ಇರಲಿಲ್ಲ. ನಿನ್ನ ನೋಟದ ತೀಕ್ಷ್ಣತೆಗೆ ಮೂಛೆì ಹೋದೇನೆಂಬ ಭಯ! ಹೃದಯದಾಳದ ನವಿರಾದ ಭಾವತಂತುಗಳ ಮೀಟುವಿಕೆ ನಿನಗೆ ಕೇಳಿಸಿಬಿಟ್ಟರೆ? ಹಾಗಾಗಿಯೇ, ಅದುಮಿಟ್ಟ ಭಾವಗಳನ್ನು ಮರೆಮಾಚಲು ನಿನ್ನಿಂದ ಕಣ್ತಪ್ಪಿಸಿಕೊಳ್ಳುತ್ತಿದ್ದೆ.

ಯಾಕಂದ್ರೆ, ಈ ಪ್ರೀತಿಯ ಸಸಿ ಮರವಾಗಿ ಬೆಳೆದು, ಫ‌ಲ ಕೊಡುವುದಿಲ್ಲ ಎಂಬ ಅರಿವು ನನಗಿತ್ತು. ಆದರೂ ಅದ್ಯಾಕೋ ನಿನ್ನ ಕಣ್ಣೋಟದಲ್ಲಿ, ಎದೆ ಮೀಟುವ ಉತ್ಕಟ ಒಲವಿನ ಸೆಳೆತವಿತ್ತು. ತರಗತಿಯೊಳಗೆ ಹೆಜ್ಜೆಯಿಟ್ಟ ಕೂಡಲೇ ನಿನ್ನ ಮುಖ ಕಂಡರೆ, ನಿನ್ನ ಧ್ವನಿ ಕಿವಿಗೆ ಬಿದ್ದರೆ ಮನಸ್ಸಿಗೆ ಅದೇನೋ ತೃಪ್ತಿ. ಮರುಕ್ಷಣವೇ, ಸಮಾಜದ ನೂರಾರು ಕಟ್ಟಳೆಗಳ ಅರಿವಿದ್ದ ಮನಸ್ಸು, ಬುದ್ಧಿ ಎಚ್ಚೆತ್ತುಕೊಳ್ಳುತ್ತಿತ್ತು. ಎಳೆ ಚಿಗುರನ್ನು ಹೆಮ್ಮರವಾಗುವ ಮೊದಲೇ ಚಿವುಟಬೇಕೆಂಬ ಅರಿವಾಗಿ, ಒಲವ ಹೂವು ಅರಳುವ ಮುನ್ನವೇ ಹೃದಯದ ಕದ ಮುಚ್ಚಿಬಿಡುತ್ತಿದ್ದೆ.

ಬೇಡ, ಈ ಸಲಿಗೆ ಬೇಡ. ಪ್ರೀತಿ-ಪ್ರೇಮದ ಹುಚ್ಚಾಟಕ್ಕೆ ನನ್ನೊಂದಿಗೆ ಇರುವ ಉಸಿರುಗಳ ಬಲಿ ಕೊಡಲಾರೆ ಅಂತ ಗಟ್ಟಿ ಮನಸ್ಸು ಮಾಡಿ, ನಿರ್ಭಾವುಕನಾಗಿ ಎದೆಯೊಳಗೆ ಹಾರುತ್ತಿದ್ದ ಪತಂಗದ ರೆಕ್ಕೆ ಕತ್ತರಿಸಿದ್ದೆ. ಒಡಲಾಳದಲಿ ಹುಟ್ಟಿದ ಭಾವಗಳನ್ನೆಲ್ಲಾ ಕೈಯಾರೆ ಉಸಿರುಗಟ್ಟಿಸಿ, ನಿರ್ಲಿಪ್ತನಾಗಿ ನಡೆದು ಬಂದಿದ್ದೆ.

ಇದೆಲ್ಲಾ ನಡೆದು ಎಷ್ಟೋ ವರ್ಷಗಳಾಗಿವೆ. ಆದರೂ, ನಿನ್ನನ್ನು ಮರೆಯುವುದು ಸಾಧ್ಯವಾಗಿಲ್ಲ. ಹಳೆಯ ನೆನಪುಗಳೆಲ್ಲ ಹಳೆಯ ಗಾಯಗಳಂತೆ, ಹಿತವಾದ ನೋವು ನೀಡುತ್ತಿವೆ. ಆ ನೋವಿನಲ್ಲೇ ಒಂಥರಾ ಸುಖವಿದೆ…

-ಲಕ್ಷ್ಮೀಕಾಂತ್‌ ಎಲ್‌.ವಿ.

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.