ಹೂವು ಆಕಾಶವೆಲ್ಲ ನಂದೆಂದಿತು!


Team Udayavani, Apr 5, 2018, 11:39 AM IST

2-b..jpg

ನಾವು ನಮ್ಮ ಸುತ್ತಮುತ್ತ, ಹೂದೋಟದಲ್ಲಿ ಅಥವಾ ಕಾಡಿನಲ್ಲಿ ಹೂವುಗಳನ್ನು ನೋಡಿಯೇ ಇರುತ್ತೇವೆ. ಅವು ಮುಷ್ಠಿ ಗಾತ್ರದಷ್ಟು ಮಾತ್ರ ಇದ್ದಿರುತ್ತವೆ. ಕೆಲವೇ ಕೆಲವು ಅಪರೂಪದ ಹೂವುಗಳು ಮಾತ್ರ ಅದಕ್ಕಿಂತ ದೊಡ್ಡದಾಗಿ ಬೆಳೆಯುತ್ತವೆ. ಇಲ್ಲಿಯ ತನಕ ಅತಿ ದೊಡ್ಡ ಹೂವುಗಳು ಸುಮಾತ್ರಾ ಮತ್ತು ಇಂಡೋನೇಷ್ಯಾದಲ್ಲಿ ಮಾತ್ರ ಬೆಳೆಯುತ್ತದೆ ಎಂದು ಮಕ್ಕಳಿಗೆ ವರ್ಣಿಸುತ್ತಿದ್ದೆವು. ಆದರೆ ಈಗ ನಾವು ದೈತ್ಯ ಹೂವನ್ನು ನೋಡಿಬರಲು ವಿದೇಶಗಳಿಗೆ ಹೋಗಬೇಕಾಗಿಲ್ಲ. ನಮ್ಮ ನೆರೆಯ ಕೇರಳ ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಅದನ್ನು ಬೆಳೆದಿದ್ದಾರೆ. ಅಷ್ಟೇ ಅಲ್ಲ, ಅದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಗಾತ್ರದ ಹೂವು ಎಂಬ ಖ್ಯಾತಿಗೆ ಪಾತ್ರವಾಗಿದೆ.

ನಮ್ಮಲ್ಲಿಗೆ ಬಂದ ಕತೆ
ಈ ಹೂವಿನ ವೈಜ್ಞಾನಿಕ ಹೆಸರು ಅಮೋರ್‌ಫೋಫ‌ಲ್ಲಸ್‌ ಟಿಟಾನಮ್‌. ಟೈಟಾನ್‌ ಅರಮ್‌ ಎಂಬ ಹೆಸರೂ ಇದೆ. ಕೇರಳದ ಅಲೆಪ್ಪಿ ಜಿಲ್ಲೆಯ ಉತ್ತರ ವಯನಾಡಿನ ಗುರುಕುಲ ಬೊಟಾನಿಕಲ್‌ ಅಭಯಾರಣ್ಯದಲ್ಲಿ ಈ ಹೂವಿರುವುದು. ಇದರ ಹಿಂದೊಂದು ಅಚ್ಚರಿಯ ಕತೆಯಿದೆ. ಒಂಭತ್ತು ವರ್ಷಗಳ ಹಿಂದೆ ವಿದೇಶದಿಂದ ತಂದ ಅದರ ಬೀಜವನ್ನು ಬಿತ್ತಿ ನೀರೆರೆದು ಗೊಬ್ಬರ ಹಾಕಿ ಬೆಳೆಸಲಾಗಿತ್ತು. ಸುದೀರ್ಘ‌ ಸಮಯದ ಬಳಿಕ ಅದು ಈಗ ಮೊದಲ ಬಾರಿ ಹೂವನ್ನು ಅರಳಿಸಿ ನಿಂತಿದೆ. ಇಂಡೋನೇಷ್ಯಾದಲ್ಲಿ ಇದನ್ನು “ಬುಂಗಾ’ ಎಂದು ಕರೆಯುತ್ತಾರೆ. ಅದರರ್ಥ ಮೃತ ದೇಹದ ಹೂವು ಎಂದು. 

ಆಕರ್ಷಕವಲ್ಲದ ಸಂಗತಿ
ಈ ಹೂವು ದೈತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಗತ್ತಿನ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುವ ಈ ಹೂವಿನಲ್ಲಿ ಒಂದು ಆಕರ್ಷಕವಲ್ಲದ ಸಂಗತಿ ಇದೆ ಎಂದರೆ ನಂಬುತ್ತೀರಾ? ಅದುವೇ ಅದರ ವಾಸನೆ. ಸಾಮಾನ್ಯವಾಗಿ ಹೂವು ಎಂದರೆ ಮೊದಲು ನೆನಪಾಗುವುದು ಅದರ ಸುಗಂಧ. ಆದರೆ ಈ ದೈತ್ಯ ಹೂವು ಸೂಗಂಧ ಬೀರುವುದಿಲ್ಲ. ಬದಲಾಗಿ ದುರ್ಗಂಧವನ್ನು ಬೀರುತ್ತದೆ. ಬಣ್ಣ ಕಂಡು ಮರುಳಾಗಿ ಮೂಸಲು ಹೋದರೆ ದುರ್ಗಂಧ ಬೀರುವ ಅದು ಜೀರುಂಡೆಯಂತಹ ಕೀಟಗಳು ಮತ್ತು ಜೇನುನೊಣಗಳನ್ನು ಬಹಳ ಆಕರ್ಷಿಸುತ್ತದೆ.

ಎತ್ತೆತ್ತರ ಬಾನೆತ್ತರ
ಈ ಹೂವು ನೆಲದಿಂದ ಅಳೆದರೆ ಹತ್ತು ಅಡಿ ಎತ್ತರವಾಗುತ್ತದೆ. ಅದರ ಸುತ್ತಳತೆ ಮೂರು ಮೀಟರ್‌ಗಿಂತ ಹೆಚ್ಚಿದೆ. ಹೂವಿಗಿಂತ ಮೇಲೆ ಐದು ಅಡಿ ಎತ್ತರ ಅದರ ಪರಾಗದ ದಂಡು ಇರುತ್ತದೆ. ಎಲೆಗಳು ಹದಿನಾರು ಅಡಿ ಅಗಲ, ಇಪ್ಪತ್ತು ಅಡಿ ಉದ್ದವಿರುತ್ತದೆ. ಗಿಡ ಹೂ ಬಿಟ್ಟ ಮೇಲೆ ಎರಡರಿಂದ ಮೂರು ವರ್ಷ ಬದುಕಿ ಹೂ ಕೊಡುತ್ತದೆ. ಅರಳಿದ ಹೂ ಎರಡು ದಿನಗಳ ಬಳಿಕ ಕೊಳೆತು ಹೋಗುತ್ತದೆ. ಐವತ್ತು ಕಿಲೋಗಿಂತ ಅಧಿಕ ಭಾರವಿರುವ ಸುವರ್ಣ ಗೆಡ್ಡೆಯಂತಹ ಬೀಜದಿಂದ ಇದರ ವಂಶಾಭಿವೃದ್ಧಿ ಮಾಡುತ್ತಾರೆ. ಹೂವು ಕೊನೆಗೆ ಮುಸುಕಿನ ಜೋಳದಂತಿರುವ ಹಣ್ಣಾಗಿ ಬದುಕು ಮುಗಿಸುತ್ತದೆ. 

 ಪ. ರಾಮಕೃಷ್ಣ ಶಾಸ್ತ್ರಿ 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.