ಒಂಟೆ- ಕುದುರೆ ರೇಸ್
Team Udayavani, Jan 31, 2019, 12:30 AM IST
ಕುದುರೆ ಮತ್ತು ಒಂಟೆ ಒಳ್ಳೆಯ ಗೆಳೆಯರಾಗಿದ್ದವು. ಜೊತೆಯಾಗಿ ಆಹಾರ ಹುಡುಕಿ ತಿನ್ನುತ್ತಿದ್ದವು. ಒಮ್ಮೆ ಕುದುರೆಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. “ನಮ್ಮಿಬ್ಬರಲ್ಲಿ ಯಾರು ಹೆಚ್ಚು?’ ಎಂದು ಅದು ಒಂಟೆಯನ್ನ ಕೇಳಿತು. ಅದಕ್ಕೆ ಒಂಟೆ “ಕುದುರೆಯಣ್ಣ, ನಾವಿಬ್ಬರೂ ಸಮಾನರಲ್ಲವೇ?’ ಎಂದು ಹೇಳಿತು. ಆ ಮಾತಿನಿಂದ ಕುದುರೆಗೆ ಸಮಾಧಾನವಾಗಲಿಲ್ಲ. ಆನೆಯನ್ನು ಕೇಲೋಣವೆಂದು ಕುದುರೆ ಒತ್ತಾಯ ಮಾಡಿತು.
ಆನೆಯು ಸ್ವಲ್ಪ ಹೊತ್ತು ಯೋಚಿಸಿ “ತಮ್ಮಂದಿರಾ, ಯಾರು ಹೆಚ್ಚು ಎಂದು ಸುಮ್ಮನೆ ಹೇಳುವುದು ಸರಿಯಲ್ಲ. ನಿಮ್ಮಿಬ್ಬರಿಗೆಎರಡು ಬಾರಿ ಓಟದ ಸ್ಪರ್ಧೆ ಏರ್ಪಡಿಸೋಣ. ನಂತರ ತೀರ್ಮಾನಿಸೋಣ’ ಎಂದು ಸಲಹೆ ನೀಡಿತು. ಸ್ನೇಹಿತರಿಬ್ಬರೂ ಒಪ್ಪಿಕೊಂಡರು.
ಗದ್ದೆಯಲ್ಲಿ ಓಟ ಶುರುವಾಯಿತು. ಕುದುರೆ ವೇಗವಾಗಿ ಓಡಿ ಮೊದಲು ಗುರಿ ಮುಟ್ಟಿತು. ಓಟದ ಸ್ಪರ್ಧೆಯಲ್ಲಿ ಗೆದ್ದ ಕುದುರೆಯು ಜಂಭದಿಂದ “ನೋಡಿದಿರಾ? ನಾನೇ ಗೆದ್ದೆ. ಈಗ ಗೊತ್ತಾಯಿತೇ, ಯಾರು ಹೆಚ್ಚು ಶಕ್ತಿವಂತರೆಂದು’ ಎಂದು ಬೀಗಿತು. ಆಗ ಆನೆಯು “ಕುದುರೆಯಣ್ಣ ಇನ್ನೂ ಒಂದು ಪಂದ್ಯ ಬಾಕಿ ಇದೆ. ನಂತರ ಹೇಳಬಹುದು ಯಾರು ಶಕ್ತಿವಂತರೆಂದು’ ಎಂದಿತು.
ಎರಡನೇ ಓಟದ ಸ್ಪರ್ಧೆಯನ್ನು ಆನೆ ಮರಳಿನಲ್ಲಿ ಆಯೋಜಿಸಿತು. ಈ ಬಾರಿ ಕುದುರೆಗೆ ಮಿಳಿನ ಮೇಲೆ ಓಡಲಾಗಲೇ ಇಲ್ಲ. ಒಂಟೆಯೇ ಸರಾಗವಾಗಿ ಓಡಿ ಗೆದ್ದುಬಿಟ್ಟಿತು. ಸೋತ ಕುದುರೆಗೆ ತನ್ನ ತಪ್ಪಿನ ಅರಿವಾಯಿತು. ಅದು ಆನೆ ಮತ್ತು ಒಂಟೆಯ ಹತ್ತಿರ ಕ್ಷಮೆ ಕೇಳಿತು. ಆನೆ “ನಿಮ್ಮಲ್ಲಿ ಯಾರೂ, ಹೆಚ್ಚು ಶಕ್ತಿವಂತರಲ್ಲ ಯಾರೂ ಬಲಹೀನರೂ ಅಲ್ಲ. ಪ್ರತಿಯೊಬ್ಬರಲ್ಲೂ ಅವರದೇ ಆದ ವಿಶೇಷತೆಯಿರುತ್ತದೆ. ಗೆಳೆತನದ ಆನಂದವನ್ನು ಹಂಚಿಕೊಂಡು ಬಾಳಿರಿ’ ಎಂದು ಹೇಳಿತು. ಕುದುರೆ ಮತ್ತು ಒಂಟೆ ಆನೆಗೆ ಧನ್ಯವಾದಗಳನ್ನು ತಿಳಿಸಿದವು.
ಉಮ್ಮೆ ಕೆ. ಅಸ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ