ಬೆಕ್ಕು ಕದ್ದು ಹಾಲು ಕುಡಿದರೆ, ಕುಡಿಯಲಿ ಬಿಡಿ!


Team Udayavani, Oct 25, 2018, 6:00 AM IST

cat.jpg

ಬೆಕ್ಕನ್ನು ಎಂದಾದರೂ ಹಿಡಿಯಲು ಪ್ರಯತ್ನಿಸಿದ್ದೀರಾ? ಅದು ನಿಮ್ಮ ಮನೆಯಲ್ಲಿ ಸಾಕಿದ ಬೆಕ್ಕಲ್ಲದೇ ಹೋದರೆ ಕೈಗೆ ಖಂಡಿತಾ ಸಿಕ್ಕದು. ಒಂದು ವಿಚಾರ ಅರ್ಥ ಮಾಡಿಕೊಂಡುಬಿಡಿ ಬೆಕ್ಕು ಕೈಗೆ ಸಿಕ್ಕಿತೆಂದರೆ ಅದು ನಿಮ್ಮ ಕೈಚಳಕದಿಂದಂತೂ ಖಂಡಿತಾ ಅಲ್ಲ. ಬೆಕ್ಕು ತಾನೇ ಸ್ವಯಿಚ್ಛೆಯಿಂದ ನಿಮ್ಮ ಕೈಗೆ ಬಂದುಬಿಟ್ಟಿದೆ. ಏಕೆಂದರೆ ಬೆಕ್ಕು ತುಂಬಾ ಚುರುಕು. 

ಮನುಷ್ಯರ ಕಿವಿಗೆ ಬೀಳದ ಸದ್ದು ಕೂಡಾ ಬೆಕ್ಕಿಗೆ ಕೇಳಿಸುತ್ತೆ. ಕಳ್ಳರನ್ನು ಬೆಕ್ಕಿಗೆ ಹೋಲಿಸುವುದು ಸುಮ್ಮನೆ ಅಲ್ಲ. ಸದ್ದಾಗದಂತೆ, ಯಾರ ಕಣ್ಣಿಗೂ ಕಾಣಿಸಿಕೊಳ್ಳದಂತೆ ತನ್ನ ಕೆಲಸ ಸಾಧಿಸಿಕೊಳ್ಳುವ ನೈಪುಣ್ಯತೆ ಅದಕ್ಕೆ ಕರತಲಾಮಲಕ! ಇದಕ್ಕೆ ಕಾರಣವೇನು ಗೊತ್ತಾ? ಬೆಕ್ಕಿನ ಕಿವಿಯಲ್ಲಿ 32 ನರಗಳಿವೆಯಂತೆ. ಆದ್ದರಿಂದಲೇ ಅವುಗಳ ಕಿವಿ ತುಂಬಾ ಸೂಕ್ಷ ಮತ್ತು ಅತೀವ ಸಾಮರ್ಥ್ಯ ಹೊಂದಿದೆ. ಗುಂಡು ಸೂಜಿ ಬಿದ್ದರೂ ಅದರ ಕಿವಿ ನಿಮಿರಿಬಿಡುತ್ತದೆ. 

ವಿಪರ್ಯಾಸ ಎಂದರೆ ಸುತ್ತಮುತ್ತಲಿನ ಮನೆಯವರಿಗೆ ಗೊತ್ತಾಗದಂತೆ ಬಾಗಿಲು ಮುರಿದು ಕಳ್ಳತನ ಮಾಡುವವರನ್ನು ಬೆಕ್ಕಿಗೆ ಹೋಲಿಸುತ್ತೇವೆ. ಅಡುಗೆ ಮನೆಯಿಂದ ಕದ್ದು ಹಾಲು ಕುಡಿದ ಕಳ್ಳ ಬೆಕ್ಕನ್ನು ಬಡಿಯುವಂತೆ ಕಳ್ಳರನ್ನು ಹಿಡಿದು ಬಡಿಯಬೇಕೆಂದುಕೊಳ್ಳುತ್ತೇವೆ. ಆದರೆ, ಜನರ ನಡುವೆಯೇ ಇದ್ದು, ರಾಜಾರೋಷವಾಗಿ ಓಡಾಡಿಕೊಂಡು, ನೋಡ ನೋಡುತ್ತಲೇ ಪಂಗನಾಮ ಹಾಕುವವರನ್ನು ಮಾತ್ರ ಶಿಕ್ಷಿಸುವುದಿರಲಿ, ಕಳ್ಳ ಎಂದು ಕರೆಯಲೂ ಹಿಂಜರಿಯುತ್ತೇವೆ. ಅದರ ಮುಂದೆ ಬೆಕ್ಕು ಕದ್ದು ಹಾಲು ಕುಡಿಯುವುದು ಏನೇನೂ ಅಲ್ಲ. ಇರಲಿ ಬಿಡಿ, ಅವೆಲ್ಲಾ ದೊಡ್ಡವರ ಸಮಾಚಾರ! ಮುಂದೊಂದು ದಿನ, ಯಾರದೇ ಮನೆಯ ಬೆಕ್ಕು ನಿಮ್ಮ ಮನೆಯಲ್ಲಿ ಕದ್ದು ಹಾಲು ಕುಡಿಯುತ್ತಿದ್ದರೆ ಛೂ ಎಂದು ಓಡಿಸದೆ ಅದಕ್ಕೊಂದು ಬಟ್ಟಲು ಹಾಲಿಡುತ್ತೀರಾ ಅಲ್ವಾ?

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.