ಆನೆಗೆ ಇಲಿಯನ್ನು ಕಂಡರೆ ಭಯವೇ?

ಕಣ್‌ ತೆರೆದು ನೋಡಿ!

Team Udayavani, May 9, 2019, 6:25 AM IST

Chinnari—Aane

ಇತ್ತೀಚಿಗೆ ಚಿತ್ರಮಂದಿರಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಹಾರುವ ಆನೆಯ ಚಿತ್ರವನ್ನು ನೋಡಿರಬಹುದು. ಡಿಸ್ನಿಯ ಈ ಹೊಸ ಚಿತ್ರದ ಹೆಸರು “ಡಂಬೋ’. ಅಗಲ ಕಿವಿಯ ಮುದ್ದು ಮುದ್ದಾದ ಆನೆ ಡಂಬೋ ಮಕ್ಕಳನ್ನು ಮಾತ್ರವಲ್ಲದೆ ದೊಡ್ಡವರನ್ನೂ ಮೋಡಿ ಮಾಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಆ ಸಿನಿಮಾದಲ್ಲಿ ಡಂಬೋ ಆನೆ, ಇಲಿಯನ್ನು ನೋಡಿ ಹೆದರಿಕೊಳ್ಳುವ ದೃಶ್ಯವೊಂದು ಬರುತ್ತದೆ.

ಅದನ್ನು ಕಂಡವರು “ಎಷ್ಟೇ ಆದರೂ ಅದು ಸಿನಿಮಾ. ವಾಸ್ತವದಲ್ಲಿ ಆನೆಗೆ ಇಲಿಯ ಭಯವಿರಲು ಸಾಧ್ಯವೇ ಇಲ್ಲ’ ಅಂತ ಅಂದುಕೊಂಡಿದ್ದೇ ಹೆಚ್ಚು. ಅದೂ ಅಲ್ಲದೆ ಇಲಿ ಗಣಪತಿಯ ವಾಹನವಲ್ಲವೆ?! ಅಷ್ಟೊಂದು ಆಪ್ತ ಸಂಬಂಧ ಹೊಂದಿರುವ ಆನೆಗೆ ಇಲಿಯ ಭಯ ನಿಜಕ್ಕೂ ಇದೆಯೇ? ಇದೆ. ಆನೆಗೆ ಇಲಿಯನ್ನು ಕಂಡರೆ ಭಯ ಇದೆ. ಗಾತ್ರದಲ್ಲಿ, ಶಕ್ತಿಯಲ್ಲಿ ಇಲಿಗಿಂತ ಸಾವಿರಾರು ಪಟ್ಟು ಮುಂದಿರುವ ಆನೆಗೆ ಇಲಿಯ ಭಯ ಏಕಿದೆ ಅಂದಿರಾ? ವಾಸ್ತವದಲ್ಲಿ ಆನೆಗೆ ಇಲಿಯೊಂದೇ ಅಲ್ಲ, ಪುಟ್ಟ ಗಾತ್ರದ, ಚುರುಕಾಗಿ ಅತ್ತಿತ್ತ ಓಡುವ ಯಾವುದೇ ಪ್ರಾಣಿ ಕಂಡರೂ ಭಯವಾಗುತ್ತದೆ.

ಕೈಗೆ ಸಿಕ್ಕದ, ಚುರುಕಾಗಿ ತನ್ನ ಕಾಲುಗಳ ಸಂದುಗಳಲ್ಲೆಲ್ಲಾ ಓಡಿ ತಪ್ಪಿಸಿಕೊಳ್ಳುವುದರಿಂದಲೇ ಇಲಿಯನ್ನು ಕಂಡರೆ ಆನೆಗೆ ಭಯ. ಆನೆಯ ಈ ಭಯದ ಹಿಂದೆ ತಾನು ಇಲಿಗೆ ಏನೂ ಮಾಡಲಾಗದೇ ಇರುವ ಹತಾಶೆಯೂ ಇದೆ.

ಇದುವರೆಗೆ ಯಾರೂ ನೋಡಿರದ ಜೀವಿ

ಭೂಮಿ ಮೇಲಿನ ಜೀವಿಗಳಲ್ಲಿ ಬಹುತೇಕವನ್ನು ಮನುಷ್ಯ ದಾಖಲಿಸಿದ್ದಾನೆ. ಹಾಗೆ ನೋಡಿದರೆ, ಸಾಗರ ಮನುಷ್ಯನ ಪಾಲಿಗೆ ಇನ್ನೂ ಕುತೂಹಲದ ಕಣಜ. ಮೊಗೆದಷ್ಟೂ ಹೊಸ ಹೊಸ ಸಂಗತಿಗಳನ್ನು ತೆಗೆದುಕೊಡುತ್ತಲೇ ಇರುತ್ತದೆ. ಇತ್ತೀಚಿಗೆ ಸಂಶೋಧಕರ ತಂಡವೊಂದು ಹಿಂದೂ ಮಹಾಸಾಗರದ ಅತ್ಯಂತ ಆಳವಾದ ಭಾಗಕ್ಕೆ ತೆರಳಿತ್ತು.

ಇದುವರೆಗೂ ಆ ಭಾಗಕ್ಕೆ ಯಾರೂ ಹೋಗಿದ್ದೇ ಇಲ್ಲ. ಹೀಗಾಗಿ, ಇದುವರೆಗೂ ಯಾರೂ ದಾಖಲಿಸದ ಸಮುದ್ರ ಜೀವಿಯೊಂದು ಅವರ ಕಣ್ಣಿಗೆ ಬಿದ್ದಿತ್ತು. ಆ ಜೀವಿಯ ದೇಹದಿಂದ ಸಪೂರವಾದ ಕೊಂಡಿಯೊಂದು ಉದ್ದಕ್ಕೆ ಬಿಡಿಸಿಕೊಳ್ಳುತ್ತಾ ಹೋಯಿತು. ಆ ಕೊಂಡಿಯ ತುದಿಯಲ್ಲಿ ಬಲೂನಿನ ಆಕಾರದ ರಚನೆ ಬಿಡಿಸಿಕೊಂಡಿತು. ಅದೆಲ್ಲವನ್ನೂ ಸಂಶೋಧಕರು ವಿಡಿಯೋದಲ್ಲಿ ರೆಕಾರ್ಡ್‌ ಮಾಡಿಕೊಂಡರು.

ಅಪರಿಚಿತ ಜೀವಿಯೊಂದರ ಸನಿಹಕ್ಕೆ ಹೋಗುವುದೆಂದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ. ಏಕೆಂದರೆ ಗುರುತುಪರಿಚಯವಿಲ್ಲದ ಸ್ಥಳದಲ್ಲಿ, ಇದುವರೆಗೆ ಯಾರೂ ನೋಡದ ಜೀವಿಯನ್ನು ಮುಟ್ಟಿದರೆ ಅದೇನು ಮಾಡುತ್ತದೆ ಎನ್ನುವುದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ.

ಅದಕ್ಕೆ ಪ್ರಕೃತಿ ಯಾವ ರೀತಿಯ ಆಯುಧವನ್ನು ದಯಪಾಲಿಸಿದೆಯೋ ಯಾರಿಗೆ ಗೊತ್ತು? ಹೀಗಾಗಿ ಸಂಶೋಧಕರು ಹಿಂದಿರುಗಿ ಬಂದಿದ್ದರು. “ಸಾಗರ ಎಂದಿಗೂ ಅಚ್ಚರಿ’ ಎಂಬ ಮಾತು ಕಾಲ ಕಾಲಕ್ಕೆ ಸಾಬೀತಾಗುತ್ತಲೇ ಇರುವುದು ಸುಳ್ಳಲ್ಲ!

— ಹರ್ಷವರ್ಧನ್‌ ಸುಳ್ಯ

Ad

ಟಾಪ್ ನ್ಯೂಸ್

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

DCF-Chakrapani

ಐದು ಹುಲಿಗಳ ಸಾವು ಪ್ರಕರಣ: ಎಂಎಂ ಹಿಲ್ಸ್‌ ಡಿಸಿಎಫ್ ಚಕ್ರಪಾಣಿ ಅಮಾನತು

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

arrested

ಬೊಳುವಾರು ಬಳಿ ತಲವಾರು ಪ್ರದರ್ಶನ: ಆರೋಪಿ ವಶಕ್ಕೆ

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

1-aa-aa-cong

‘ಶಕ್ತಿ-ಗ್ಯಾರಂಟಿ’ ಯಶಸ್ಸು: ವಿವಿಧೆಡೆ ಸಂಭ್ರಮ

DCF-Chakrapani

ಐದು ಹುಲಿಗಳ ಸಾವು ಪ್ರಕರಣ: ಎಂಎಂ ಹಿಲ್ಸ್‌ ಡಿಸಿಎಫ್ ಚಕ್ರಪಾಣಿ ಅಮಾನತು

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.