ಆನೆಗೆ ಇಲಿಯನ್ನು ಕಂಡರೆ ಭಯವೇ?

ಕಣ್‌ ತೆರೆದು ನೋಡಿ!

Team Udayavani, May 9, 2019, 6:25 AM IST

Chinnari—Aane

ಇತ್ತೀಚಿಗೆ ಚಿತ್ರಮಂದಿರಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಹಾರುವ ಆನೆಯ ಚಿತ್ರವನ್ನು ನೋಡಿರಬಹುದು. ಡಿಸ್ನಿಯ ಈ ಹೊಸ ಚಿತ್ರದ ಹೆಸರು “ಡಂಬೋ’. ಅಗಲ ಕಿವಿಯ ಮುದ್ದು ಮುದ್ದಾದ ಆನೆ ಡಂಬೋ ಮಕ್ಕಳನ್ನು ಮಾತ್ರವಲ್ಲದೆ ದೊಡ್ಡವರನ್ನೂ ಮೋಡಿ ಮಾಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಆ ಸಿನಿಮಾದಲ್ಲಿ ಡಂಬೋ ಆನೆ, ಇಲಿಯನ್ನು ನೋಡಿ ಹೆದರಿಕೊಳ್ಳುವ ದೃಶ್ಯವೊಂದು ಬರುತ್ತದೆ.

ಅದನ್ನು ಕಂಡವರು “ಎಷ್ಟೇ ಆದರೂ ಅದು ಸಿನಿಮಾ. ವಾಸ್ತವದಲ್ಲಿ ಆನೆಗೆ ಇಲಿಯ ಭಯವಿರಲು ಸಾಧ್ಯವೇ ಇಲ್ಲ’ ಅಂತ ಅಂದುಕೊಂಡಿದ್ದೇ ಹೆಚ್ಚು. ಅದೂ ಅಲ್ಲದೆ ಇಲಿ ಗಣಪತಿಯ ವಾಹನವಲ್ಲವೆ?! ಅಷ್ಟೊಂದು ಆಪ್ತ ಸಂಬಂಧ ಹೊಂದಿರುವ ಆನೆಗೆ ಇಲಿಯ ಭಯ ನಿಜಕ್ಕೂ ಇದೆಯೇ? ಇದೆ. ಆನೆಗೆ ಇಲಿಯನ್ನು ಕಂಡರೆ ಭಯ ಇದೆ. ಗಾತ್ರದಲ್ಲಿ, ಶಕ್ತಿಯಲ್ಲಿ ಇಲಿಗಿಂತ ಸಾವಿರಾರು ಪಟ್ಟು ಮುಂದಿರುವ ಆನೆಗೆ ಇಲಿಯ ಭಯ ಏಕಿದೆ ಅಂದಿರಾ? ವಾಸ್ತವದಲ್ಲಿ ಆನೆಗೆ ಇಲಿಯೊಂದೇ ಅಲ್ಲ, ಪುಟ್ಟ ಗಾತ್ರದ, ಚುರುಕಾಗಿ ಅತ್ತಿತ್ತ ಓಡುವ ಯಾವುದೇ ಪ್ರಾಣಿ ಕಂಡರೂ ಭಯವಾಗುತ್ತದೆ.

ಕೈಗೆ ಸಿಕ್ಕದ, ಚುರುಕಾಗಿ ತನ್ನ ಕಾಲುಗಳ ಸಂದುಗಳಲ್ಲೆಲ್ಲಾ ಓಡಿ ತಪ್ಪಿಸಿಕೊಳ್ಳುವುದರಿಂದಲೇ ಇಲಿಯನ್ನು ಕಂಡರೆ ಆನೆಗೆ ಭಯ. ಆನೆಯ ಈ ಭಯದ ಹಿಂದೆ ತಾನು ಇಲಿಗೆ ಏನೂ ಮಾಡಲಾಗದೇ ಇರುವ ಹತಾಶೆಯೂ ಇದೆ.

ಇದುವರೆಗೆ ಯಾರೂ ನೋಡಿರದ ಜೀವಿ

ಭೂಮಿ ಮೇಲಿನ ಜೀವಿಗಳಲ್ಲಿ ಬಹುತೇಕವನ್ನು ಮನುಷ್ಯ ದಾಖಲಿಸಿದ್ದಾನೆ. ಹಾಗೆ ನೋಡಿದರೆ, ಸಾಗರ ಮನುಷ್ಯನ ಪಾಲಿಗೆ ಇನ್ನೂ ಕುತೂಹಲದ ಕಣಜ. ಮೊಗೆದಷ್ಟೂ ಹೊಸ ಹೊಸ ಸಂಗತಿಗಳನ್ನು ತೆಗೆದುಕೊಡುತ್ತಲೇ ಇರುತ್ತದೆ. ಇತ್ತೀಚಿಗೆ ಸಂಶೋಧಕರ ತಂಡವೊಂದು ಹಿಂದೂ ಮಹಾಸಾಗರದ ಅತ್ಯಂತ ಆಳವಾದ ಭಾಗಕ್ಕೆ ತೆರಳಿತ್ತು.

ಇದುವರೆಗೂ ಆ ಭಾಗಕ್ಕೆ ಯಾರೂ ಹೋಗಿದ್ದೇ ಇಲ್ಲ. ಹೀಗಾಗಿ, ಇದುವರೆಗೂ ಯಾರೂ ದಾಖಲಿಸದ ಸಮುದ್ರ ಜೀವಿಯೊಂದು ಅವರ ಕಣ್ಣಿಗೆ ಬಿದ್ದಿತ್ತು. ಆ ಜೀವಿಯ ದೇಹದಿಂದ ಸಪೂರವಾದ ಕೊಂಡಿಯೊಂದು ಉದ್ದಕ್ಕೆ ಬಿಡಿಸಿಕೊಳ್ಳುತ್ತಾ ಹೋಯಿತು. ಆ ಕೊಂಡಿಯ ತುದಿಯಲ್ಲಿ ಬಲೂನಿನ ಆಕಾರದ ರಚನೆ ಬಿಡಿಸಿಕೊಂಡಿತು. ಅದೆಲ್ಲವನ್ನೂ ಸಂಶೋಧಕರು ವಿಡಿಯೋದಲ್ಲಿ ರೆಕಾರ್ಡ್‌ ಮಾಡಿಕೊಂಡರು.

ಅಪರಿಚಿತ ಜೀವಿಯೊಂದರ ಸನಿಹಕ್ಕೆ ಹೋಗುವುದೆಂದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ. ಏಕೆಂದರೆ ಗುರುತುಪರಿಚಯವಿಲ್ಲದ ಸ್ಥಳದಲ್ಲಿ, ಇದುವರೆಗೆ ಯಾರೂ ನೋಡದ ಜೀವಿಯನ್ನು ಮುಟ್ಟಿದರೆ ಅದೇನು ಮಾಡುತ್ತದೆ ಎನ್ನುವುದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ.

ಅದಕ್ಕೆ ಪ್ರಕೃತಿ ಯಾವ ರೀತಿಯ ಆಯುಧವನ್ನು ದಯಪಾಲಿಸಿದೆಯೋ ಯಾರಿಗೆ ಗೊತ್ತು? ಹೀಗಾಗಿ ಸಂಶೋಧಕರು ಹಿಂದಿರುಗಿ ಬಂದಿದ್ದರು. “ಸಾಗರ ಎಂದಿಗೂ ಅಚ್ಚರಿ’ ಎಂಬ ಮಾತು ಕಾಲ ಕಾಲಕ್ಕೆ ಸಾಬೀತಾಗುತ್ತಲೇ ಇರುವುದು ಸುಳ್ಳಲ್ಲ!

— ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.