ರೇಡಿಯೋ ಖಗೋಳ ವಿಜ್ಞಾನ


Team Udayavani, Nov 1, 2018, 6:00 AM IST

b-2.jpg

ಗಣಿತ ಮತ್ತು ವಿಜ್ಞಾನವೆಂಬ ಕಬ್ಬಿಣದ ಕಡಲೆಗಳ ರುಚಿಯನ್ನು ಕನ್ನಡಿಗರಿಗೆ ಹತ್ತಿಸಿದವರು ಜಿ.ಟಿ. ನಾರಾಯಣ ರಾವ್‌. ಕ್ಲಿಷ್ಟಕರ ಅಂಕಿ ಅಂಶ, ಸೂತ್ರಗಳನ್ನು ನೀಡುವಾಗ, ಅದನ್ನು ನಮ್ಮ ಸುತ್ತಮುತ್ತಲ ಪರಿಸರದೊಂದಿಗೆ ತಾಳೆ ಹಾಕುತ್ತಾ ಅದನ್ನು ಸರಳೀಕರಿಸಿದ್ದು ಅವರ ಹೆಗ್ಗಳಿಕೆ.

ಕಾರ್ಲ್ ಗುತ್ತೆ ಜಾನ್ಸಿ (1905-50) ಅಮೆರಿಕದ ರೇಡಿಯೊ ಎಂಜಿನಿಯರ್‌. ಅಲ್ಲಿಯ ಪ್ರಸಿದ್ಧ ಬೆಲ್‌ ದೂರವಾಣಿ ಕಂಪನಿಯಲ್ಲಿ ಇವನೊಬ್ಬ ತಂತ್ರಕುಶಲಿ. ಆಗ ತಾನೇ ಕಾಲೇಜಿನಿಂದ ಹೊರಬಂದಿದ್ದ ಈ ಕೃಶಾಂಗನನ್ನು ಕಂಪನಿಯು ಗ್ರಾಹಕರ ದೂರವಾಣಿ ಮತ್ತು ರೇಡಿಯೊ ಉಪಕರಣಗಳಲ್ಲಿ ಗಲಭೆ ಉಂಟಾಗುವುದರ ಕಾರಣ ಮತ್ತು ನಿವಾರಣೆ ಶೋಧಿಸಲು ನಿಯೋಜಿಸಿತು (1932)

ಜಾನ್ಸಿ ದೂರದ ಒಂದು ಹಳ್ಳಿಗೆ ಹೋದ. ಅಲ್ಲಿ 30 ಮೀಟರ್‌ ಉದ್ದದ ಗ್ರಾಹಕತಂತು ಸ್ಥಾಪಿಸಿ ಅದು ಸಂಗ್ರಹಿಸಿದ ಅಲೆಗಳನ್ನು ರೇಡಿಯೊ ಉಪಕರಣದ ಮೂಲಕ ಧ್ವನಿಯಾಗಿ ಪರಿವರ್ತಿಸಿ ಆಲಿಸತೊಡಗಿದ. ಮಿಂಚು, ಉಲ್ಕೆ ಮುಂತಾದ ನೈಸರ್ಗಿಕ ಕಾರಕಗಳಿಂದಲೂ ಮನೆಮನೆಗಳ ವಿದ್ಯುದುಪಕರಣಗಳು, ವಿಮಾನದ ಹಾರಾಟ ಮುಂತಾದ ಮಾನವಕೃತ ಕಾರಕಗಳಿಂದಲೂ ಜನಿಸಿದ ರೇಡಿಯೊ ಗಲಭೆಗಳನ್ನು ಪ್ರತ್ಯೇಕವಾಗಿ ಗುರುತಿಸಿ ವಿಶ್ಲೇಷಿಸಲು ಹೂಟೆಹೂಡಿದ. ಈ ಅಧ್ಯಯನವನ್ನು ಆಧರಿಸಿ ಕಂಪನಿಯು, ದೂರವಾಣಿಯಲ್ಲಿಯೂ, ರೇಡಿಯೋದಲ್ಲಿಯೂ ಹಲವಾರು ಸುಧಾರಣೆಗಳನ್ನು ರೂಪಿಸಿತು.

ಆದರೆ, ಜಾನ್ಸಿಗೆ ಅರ್ಥವಾಗದ ಒಂದು ನೂತನ ಸಮಸ್ಯೆ ಜೊತೆಯಲ್ಲಿಯೇ ಬೆಳೆದು ನಿಂತಿತು. ಅದು ಅವನ ರೇಡಿಯೊದಿಂದ ನಿರಂತರವಾಗಿ ಹೊಮ್ಮುತ್ತಿದ್ದ ಹಿಸ್‌ ನಾದ. ನಿಮ್ಮ ರೇಡಿಯೋದ ಇಲ್ಲವೇ ಟಿವಿಯ ಗುಂಡಿ ಒತ್ತಿದ ಅಥವಾ ತಿರುಗಿಸಿದೊಡನೆ ಅದರಿಂದ, ವಿದ್ಯುತ್‌ ಸದ್ದು ಮಾಡುತ್ತ ಹರಿಯುತ್ತಿದೆಯೋ ಎನ್ನುವಂಥ, ಅಸ್ಪಷ್ಟ ನಾದ ಬಿತ್ತರವಾಗುವುದು ಸರಿಯಷ್ಟೆ. ಇದರ ನಿಜಕಾರಣ, ಯಂತ್ರ ರಚನೆಯಲ್ಲಿನ ಅಸಮರ್ಪಕತೆ. ಜಾನ್ಸಿ ಮೊದಲು ಹೀಗೆಯೇ ಊಹಿಸಿದ. ತನ್ನ ಉಪಕರಣಗಳನ್ನು ಪರಿಶೀಲಿಸಿದ, ಪರಿಷ್ಕರಿಸಿದ. ಆದರೂ ಮಲೆನಾಡಿನ ನೀರವ ವನದಲ್ಲಿ ದೂರದ ತೊರೆ ಹರಿಯುವಾಗ ಉಂಟಾಗುವಂಥ ಹಿಸ್‌ ನಾದ ಮಾಯಲಿಲ್ಲ. ಇದು ತನ್ನ ಪರಿಸರದಲ್ಲಿಯ ಯಾವುದೇ ವಿಧವಾದ ವಿದ್ಯುತ್‌ ಕ್ಷೋಭೆಯಿಂದಲೂ ಉಂಟಾದದ್ದಲ್ಲವೆಂದು ಖಚಿತಪಡಿಸಿಕೊಂಡ. 

ಅದೇ ವೇಳೆ ಇನ್ನೊಂದು ಆಶ್ಚರ್ಯಕರ ಸಂಗತಿ ಅವನ ಲಕ್ಷ್ಯ ಸೆಳೆಯಿತು. ಹಿಸ್‌ನಾದದ ಉಗಮಸ್ಥಾನ ಆಕಾಶದಲ್ಲಿ ಚಲಿಸುತ್ತಿದೆ. ಸೂರ್ಯನೊಡನೆ ಮೂಡಿ ಮೇಲೇರಿ ಕೆಳಗಿಳಿದು ಕಂತುತ್ತಿದೆ! ಸಹಜವಾಗಿ ಜಾನ್ಸಿ ತೀರ್ಮಾನಿಸಿದ- ಸೂರ್ಯನೇ ಈ “ರೇಡಿಯೋ ಸಂಗೀತ’ದ ಆಕರ ಎಂದು. ಆದರೆ, ನಿಸರ್ಗ ಇವನ ಜೊತೆ ಕಣ್ಣಾಮುಚ್ಚಾಲೆ ಆಟ ಆಡತೊಡಗಿತು. ದಿನಗಳೆದಂತೆ ಹಿಸ್‌ ನಾದದ ಆಕರ ಸೂರ್ಯನ ಜೊತೆ ತಪ್ಪು ಕಾಲು ಇಡುತ್ತಿತ್ತು. ಅದು ಸೂರ್ಯನಿಗಿಂತ ಮೊದಲು ಮೂಡಿ, ಮೊದಲು ಕಂತುತ್ತಿತ್ತು. ವಾಸ್ತವವಾಗಿ ಇಲ್ಲಿ ಸೂರ್ಯನೇ ತಪ್ಪುಗಾರ. ಅತಿ ದೂರದ ಸ್ಥಿರ ನಕ್ಷತ್ರ ಚಿತ್ರಗಳನ್ನು ಕುರಿತಂತೆ ಸೂರ್ಯ ದಿನದಿಂದ ದಿನಕ್ಕೆ 4 ಮಿನಿಟುಗಳಷ್ಟು ನಿಧಾನವಾಗಿ ಮೂಡಿ ಮುಳುಗುತ್ತದೆ. ಅಂದಮೇಲೆ, ಹಿಸ್‌ನಾದದ ಮೂಲ ಸ್ಥಿರ ನಕ್ಷತ್ರ ವಲಯದಲ್ಲಿ- ನಿರ್ದಿಷ್ಟವಾಗಿ ಆಕಾಶಗಂಗೆಯಲ್ಲಿ ಇದೆಯೆಂದು ಜಾನ್ಸಿ ನಿಗಮಿಸಿದ (deduced) ಆಕಾಶಗಂಗೆಯ ಅಸಂಖ್ಯಾತ (4*10 11) ನಕ್ಷತ್ರಗಳ ಸಾಮೂಹಿಕ ಗಾನವೇ ಈ ಹಿಸ್‌ನಾದ. ಹೀಗೆ ಆರಂಭವಾಯಿತು ರೇಡಿಯೊ ಖಗೋಳ ವಿಜ್ಞಾನ (1932-33) ನಕ್ಷತ್ರವನ್ನು ಕಾಣುವುದು ಮಾತ್ರವಲ್ಲ, ಕೇಳುವುದು ಕೂಡ ಸಾಧ್ಯವಿದೆ ಎಂದು ಆಗ ವೇದ್ಯವಾಯಿತು. 

ದೃಗ್ಗೊಚರ ನಕ್ಷತ್ರಗಳು ಪ್ರಸರಿಸುವ ಬೆಳಕನ್ನು ಸಂಗ್ರಹಿಸಿ ಲಂಬಿಸುವ ಉಪಕರಣ ದೃಗೂªರದರ್ಶಕ. ಇದು ಆಕಾಶವನ್ನು ನೋಡುವ ಕಣ್ಣು! ದೃಗ್ಗೊಚರ ರೇಡಿಯೊ ನಕ್ಷತ್ರಗಳು ಪ್ರಸರಿಸುವ ರೇಡಿಯೊ ಅಲೆಗಳನ್ನು ಸಂಗ್ರಹಿಸಿ ಲಂಬಿಸುವ ಉಪಕರಣ ರೇಡಿಯೊ ದೂರದರ್ಶಕ. ಇದು ಆಕಾಶವನ್ನು ಆಲಿಸುವ ಕಿವಿ!

-ಜಿ.ಟಿ.ನಾರಾಯಣ ರಾವ್‌
(“ಗಣಿತಗಗನಗಮನ’ ಪುಸ್ತಕದಿಂದ ಆಯ್ದ ಭಾಗ)

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.