ಪುರಾಣ ಕತೆ: ಅಜಾಮಿಳ


Team Udayavani, May 25, 2017, 10:43 AM IST

ajamila.jpg

ಕನ್ಯಾ ಕುಬjದಲ್ಲಿ ಅಜಾಮಿಳ ಎಂಬ ಬ್ರಾಹ್ಮಣನಿದ್ದ. ಅಜಾಮಿಳ ವೇದಗಳನ್ನು ಓದಿದ್ದ, ಆಚಾರಶೀಲ, ದೈವಭಕ್ತ. ಒಂದು ದಿನ ಅವನು ಹೂವು, ಹಣ್ಣು, ಸಮಿತ್ತುಗಳನ್ನು ತರಲು ಕಾಡಿಗೆ ಹೋದ. ಅಲ್ಲಿ ಚೆಲುವೆಯೊಬ್ಬಳನ್ನು ನೋಡಿದ. ಅವಳು ವಿಪರೀತ ಹೆಂಡ ಕುಡಿದಿದ್ದಳು. ಅವಳ ಜೊತೆಗೆ ಒಬ್ಬ ಯುವಕ. ಅವನೂ ಮೈಮರೆಯುವಷ್ಟು ಹೆಂಡ ಕುಡಿದಿದ್ದ. ಇಬ್ಬರೂ ಹುಚ್ಚುಹುಚ್ಚಾಗಿ ಕುಣಿಯುತ್ತಿದ್ದರು. ಅವಳನ್ನು ನೋಡಿ ಅಜಾಮಿಳ ಆಕರ್ಷಿತನಾದ. ಅಂದಿನಿಂದ ಅವನಿಗೆ ಅವಳ ಪ್ರೀತಿಯನ್ನು ಪಡೆಯುವುದೇ ಮುಖ್ಯವಾಯಿತು.

ಅವಳಿಗೆ ಅಜಾಮಿಳ ಒಂದಿಷ್ಟು ಉಡುಗೊರೆಗಳನ್ನು ಕೊಟ್ಟ. ಅವಳು ಹೇಳಿದಂತೆ ಕೇಳಿದ. ಅವಳಿಗಾಗಿ ಹಣ ಖರ್ಚು ಮಾಡಿದ. ಕಡೆಗೆ ಅವಳು ಅವನಿಗೆ ಒಲಿದಳು. ಅವಳ ಒಡನಾಟದಲ್ಲಿ ಅವನಿಗೆ ಉಳಿದುದೆಲ್ಲ ಮರೆಯಿತು. ದೇವರ ಧ್ಯಾನ, ಪೂಜೆ, ಪುಣ್ಯಗ್ರಂಥಗಳ ಅಧ್ಯಯನ… ಎಲ್ಲವನ್ನೂ ಬಿಟ್ಟು ಅವಳ ಜತೆಗೆ ಕಾಲ ಕಳೆದ. ಅವರಿಗೆ ಹತ್ತು ಮಕ್ಕಳು. ಕಡೆಯ ಮಗನ ಹೆಸರು ನಾರಾಯಣ. ಈ ಮಗನೆಂದರೆ ಅಜಾಮಿಳನಿಗೆ ಪ್ರಾಣ. ತಾನೇ ಅವನಿಗೆ ಊಟ ಮಾಡಿಸುವನು, ಮಲಗಿಸುವನು, ಅವನೊಡೆಯೇ ಮಾತು, ಅವನೊಡನೆಯೇ ಆಟ.

ಅಜಾಮಿಳನಿಗೆ ಮುಪ್ಪು ಬಂದಿತು. ಆದರೂ ಹೆಂಡತಿ ಮತ್ತು ನಾರಾಯಣನ ಮೋಹ ಕಡಿಮೆ ಆಗಲಿಲ್ಲ. ಅವನ ಮರಣ ಕಾಲ ಬಂದಿತು. ಯಮದೂತರು ಅವನ ಮುಂದೆ ನಿಂತರು. ಅಜಾಮಿಳನು ಹೆದರಿ ಗಡಗಡ ನಡುಗಿದ. ಮಗನನ್ನು ಸ್ಮರಿಸಿಕೊಂಡು “ನಾರಾಯಣ’ ಎಂದು ಕೂಗಿದ. ಕೂಡಲೇ ಶ್ರೀಮನ್ನಾರಾಯಣನ ದೂತರು ಪ್ರತ್ಯಕ್ಷರಾದರು. ಅಜಾಮಿಳನ ಜೀವವನ್ನು ಕೊಂಡೊಯ್ಯುವುದರಲ್ಲಿದ್ದ ಯಮದೂತರನ್ನು ತಡೆದರು. “ಇವನನ್ನು ನರಕಕ್ಕೆ ಕರೆದೊಯ್ದು, ಶಿಕ್ಷೆಗೆ ಗುರಿಪಡಿಸುತ್ತೇವೆ. ನೀವು ಯಾರು ನಮ್ಮ ಕೆಲಸಕ್ಕೇಕೆ ಅಡ್ಡಿಪಡಿಸುತ್ತೀರಿ?’ ಎಂದು ಯಮದೂತರು ಕೇಳಿದರು.

“ನಾವು ವಿಷ್ಣುವಿನ ಸೇವಕರು. ಈತ ಪಾಪಗಳನ್ನು ಮಾಡಿದ್ದಾನೆ, ನಿಜ. ಆದರೆ, ಮರಣಕ್ಕೆ ಮೊದಲು ಶ್ರೀಮನ್ನಾರಾಯಣನ ಹೆಸರನ್ನು ಸ್ಮರಿಸಿದ್ದಾನೆ. ಇವನನ್ನು ನರಕಕ್ಕೆ ಕರೆದೊಯ್ಯಲಾಗದು’ ಎಂದರು. ಯಮದೂತರಿಗೂ, ಶ್ರೀಮನ್ನಾರಾಯಣನ ದೂತರಿಗೂ ದೊಡ್ಡ ಚರ್ಚೆ ನಡೆಯಿತು. ಯಮದೂತರು, “ಈತ ಕಡೆಗೆ ಕರೆದದ್ದು ಶ್ರೀಮನ್ನಾರಾಯಣನನ್ನು ಅಲ್ಲ, ತನ್ನ ಮಗ ನಾರಾಯಣನನ್ನು’ ಎಂದು ವಾದಿಸಿದರು. ವಿಷ್ಣುದೂತರು, “ಹೇಗೇ ಆಗಲಿ, ಅವನು ವಿಷ್ಣುವಿನ ಹೆಸರನ್ನು ಸ್ಮರಿಸಿದ್ದಾನೆ. ಆದುದರಿಂದ ಅವನ ಪಾಪಗಳೆಲ್ಲ ಪರಿಹಾರವಾಗಿವೆ. ನಿಮ್ಮ ಪ್ರಭುವಾದ ಯಮಧರ್ಮರಾಯನನ್ನು ಕೇಳಿ ತಿಳಿದುಕೊಳ್ಳಿ’ ಎಂದರು.

ಯಮದೂತರು ಅಜಾಮಿಳನನ್ನು ಬಿಟ್ಟು ತಮ್ಮ ಪ್ರಭುವಿನ ಬಳಿಗೆ ಹೋಗಿ ನಡೆದಿದ್ದನ್ನು ವಿವರಿಸಿದರು. ಯಮಧರ್ಮನು, “ಒಂದು ಬಾರಿ ಶ್ರೀಮನ್ನಾರಾಯಣನ ಹೆಸರನ್ನು ಹೇಳಿದರೆ ಮನುಷ್ಯನ ಪಾಪಗಳೆಲ್ಲ ಪರಿಹಾರವಾಗುತ್ತವೆ’ ಎಂದ.

ಯಮದೂತರಿಗೂ ವಿಷ್ಣುದೂತರಿಗೂ ನಡೆದ ಸಂಭಾಷಣೆಯನ್ನು ಅಜಾಮಿಳನು ಕೇಳಿದ. ಅವನಿಗೆ ನಾಚಿಕೆ ಆಯಿತು. ಪಶ್ಚಾತ್ತಾಪವಾಯಿತು. ಸಂಸಾರವನ್ನು ಬಿಟ್ಟು ದೂರ ಹೋಗಿ, ಗಂಗಾ ನದಿಯ ತೀರದಲ್ಲಿ ಭಗವಂತನ ಧ್ಯಾನ, ತಪಸ್ಸುಗಳಲ್ಲಿ ನಿರತನಾದ. ವಿಷ್ಣುದೂತರು ಬಂದು ಅವನನ್ನು ವೈಕುಂಠಕ್ಕೆ ಕರೆದುಕೊಂಡು ಹೋದರು.

– ಎಲ್‌. ಎಸ್‌. ಶೇಷಗಿರಿ ರಾವ್‌
(“ಕಿರಿಯರ ಭಾಗವತ’ ಪುಸ್ತಕದಿಂದ)

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.