ಹಿಡಿಂಬ- ಹಿಡಿಂಬೆ


Team Udayavani, Aug 10, 2017, 7:35 AM IST

hidimba.jpg

ಹಿಡಿಂಬ ಒಬ್ಬ ರಾಕ್ಷಸ. ಅವನಿಗೊಬ್ಬಳು ತಂಗಿಯಿದ್ದಳು. ಅವಳೇ ಹಿಡಿಂಬೆ. ಇವರಿಗೆ ಮಾಯಾವಿದ್ಯೆ ಗೊತ್ತಿತ್ತು. ಈ ಅಣ್ಣ-ತಂಗಿ ಅರಣ್ಯದಲ್ಲಿ ವಾಸವಿದ್ದರು. ಅರಣ್ಯಕ್ಕೆ ಬರುವ ಜನರನ್ನು ಕೊಂದು ತಿನ್ನುವುದೇ ಈ ರಾಕ್ಷಸರ ಕೆಲಸವಾಗಿತ್ತು.
ಪಗಡೆಯಾಟದಲ್ಲಿ ಸೋತ ಕಾರಣದಿಂದ ವನವಾಸ ಮತ್ತು ಅಜ್ಞಾತವಾಸದ ಶಿಕ್ಷೆಗೆ ಗುರಿಯಾದ ಪಾಂಡವರು, ಅಲೆಯುತ್ತ ಅಲೆಯುತ್ತ ಕಾಡಿಗೆ ಬಂದರು. ಬಹುದೂರ ನಡೆದಿದ್ದ ಕಾರಣದಿಂದ ಕುಂತಿ ಮತ್ತು ಪಾಂಡವರಿಗೆ ಹೆಜ್ಜೆ ಎತ್ತಿಡುವುದೇ ಕಷ್ಟವಾಯಿತು. ಭೀಮನು ಅವರೆಲ್ಲರನ್ನೂ ಎತ್ತಿಕೊಂಡು ಓಡಿದ. ಎಲ್ಲರಿಗೂ ಬಾಯಾರಿಕೆ. ಭೀಮನು ಅವರನ್ನು ಒಂದು ಮರದ ಕೆಳಗೆ ಕುಳ್ಳಿರಿಸಿ ಒಂದಿಷ್ಟು ನೀರನ್ನು ಉತ್ತರೀಯದಲ್ಲಿ ತಂದು ನೋಡುತ್ತಾನೆ! ಎಲ್ಲರೂ ಗಾಢವಾದ ನಿದ್ರೆಯಲ್ಲಿದ್ದಾರೆ. ಅರಮನೆಯಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗುತ್ತಿದ್ದವರ ಈಗಿನ ಸ್ಥಿತಿ ನೋಡಿ ಭೀಮನಿಗೆ ಕಣ್ಣಿನಲ್ಲಿ ನೀರುಕ್ಕಿತು. ತಾನು ನಿದ್ರೆ ಮಾಡದೆ ಎಚ್ಚರವಾಗಿ ಕುಳಿತು ಕಾವಲಿದ್ದನು.

ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಮರದ ಮೇಲೆ ಹಿಡಿಂಬನಿದ್ದನು. ಅವನಿಗೆ ಮನುಷ್ಯರ ವಾಸನೆ ಸಿಕ್ಕಿತು. ತನಗೆ ಆಹಾರ ಸಿಕ್ಕಿತೆಂದು ಸಂತೋಷದಿಂದ ತನ್ನ ತಂಗಿ ಹಿಡಿಂಬೆಯನ್ನು ಕೂಗಿ – “ಇಲ್ಲಿಂದ ಸ್ವಲ್ಪ ದೂರದಲ್ಲಿ ಮನುಷ್ಯರು ಇದ್ದಾರೆ. ಅವರು ಯಾರೆಂದು ನೋಡಿಕೊಂಡು ಬಾ’ ಎಂದ. ಭೀಮನನ್ನು ನೋಡುತ್ತಲೇ ಹಿಡಿಂಬೆಗೆ ಅವನನ್ನು ಮದುವೆಯಾಗಬೇಕೆಂದು ಆಸೆಯಾಯಿತು. ಸುಂದರ ಯುವತಿಯ ರೂಪ ಧರಿಸಿ ಅವನ ಬಳಿಗೆ ಹೋಗಿ ತಾನು ಯಾರು ಎಂದು ತಿಳಿಸಿ, “ನನ್ನ ಜೊತೆಗೆ ಬಾ, ನಾನು ಆಕಾಶದಲ್ಲಿ ಹೋಗಬಲ್ಲೆ, ಎಲ್ಲಿಯಾದರೂ ಸುಖವಾಗಿರೋಣ’ ಎಂದಳು.

ಆದರೆ ಎಲ್ಲರನ್ನೂ ಬಿಟ್ಟು ಹೋಗಲು ಭೀಮನು ಒಪ್ಪಲಿಲ್ಲ. ಅವರಿಬ್ಬರು ಮಾತಿನಲ್ಲಿ ತಲ್ಲೀನರಾಗಿದ್ದಾಗಲೇ, ತಂಗಿ ಬರುವುದು ತಡವಾಯಿತೆಂದು ಯೋಚಿಸಿ ಹಿಡಿಂಬನೇ ಅಲ್ಲಿಗೆ ಧಾವಿಸಿ ಬಂದ. ಅವನಿಗೆ, ತನ್ನ ತಂಗಿ ಸುಂದರ ಯುವತಿಯಾಗಿ ನಿಂತಿರುವುದನ್ನು ಕಂಡು ಆಕೆ ಭೀಮನನ್ನು ಒಲಿದಿದ್ದಾಳೆ ಎಂದು ಅರ್ಥವಾಯಿತು. ಅವಳನ್ನು ಕೊಲ್ಲುವೆನೆಂದು ಮುನ್ನುಗ್ಗಿದ ಅವನನ್ನು ಭೀಮನು ತಡೆದನು. ಘೋರವಾದ ಕಾಳಗ ನಡೆಯಿತು. ಮಲಗಿದ್ದವರಿಗೆ ಎಚ್ಚರವಾಗಿ ನೋಡುತ್ತಿದ್ದರು. ಅರ್ಜುನನು ನೆರವಿಗೆ ಬರುತ್ತೇನೆಂದರೆ ಭೀಮನು ಬೇಡವೆಂದನು. ಯುದ್ಧದಲ್ಲಿ ಭೀಮನು ಹಿಡಿಂಬನನ್ನು ಕೊಂದನು. ಹಿಡಿಂಬೆಯನ್ನು ಮಾತನಾಡಿಸಿದ ಕುಂತಿಗೆ ಅವಳು ತಾನು ಯಾರೆಂದು ಹೇಳಿ, ಭೀಮನನ್ನು ತನ್ನ ಜೊತೆಗೆ ನಾಲ್ಕಾರು ದಿನಗಳ ಕಾಲ ಕಳಿಸಿಕೊಡುವಂತೆ ಬೇಡಿಕೊಂಡಳು. ಕುಂತಿಯೂ ಅದಕ್ಕೆ ಒಪ್ಪಿದಳು. ಭೀಮ- ಹಿಡಿಂಬೆಯರ ಮಗನೇ ಮಹಾಶೂರ ಘಟೋತ್ಕಚ. ತನ್ನನ್ನು ಪಾಂಡವರು ನೆನೆದಾಗ ಅವರ ನೆರವಿಗೆ ಬರುವನೆಂದು ಹೇಳಿ ಹೋದನು. ಮಗನೊಂದಿಗೆ ಹಿಡಿಂಬೆಯೂ ಹೊರಟು ಹೋದಳು.

– ಪ್ರೊ. ಎಲ್‌. ಎನ್‌ ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.