ಪಾಶುಪತ ಪ್ರಾಪ್ತಿಗೆ ಅರ್ಜುನನ ತಪಸ್ಸು

ಮಲೆಶಂಕರನ ಮಹಾಭಾರತ ಗೊತ್ತೇ?

Team Udayavani, Nov 30, 2019, 6:08 AM IST

paashupata

ಅರ್ಜುನನ ಬಹುದೊಡ್ಡ ಬಲವೇ ಪಾಶುಪತಾಸ್ತ್ರ. ಶಿವನ ಮೂಲಕ ಅದನ್ನು ಆತ ಪಡೆದಿದ್ದು ಎಲ್ಲಿ? ಮಲೆಶಂಕರನ ಹಿನ್ನೆಲೆಗೂ, ಈ ಪ್ರಶ್ನೆಗೂ ಭಕ್ತಿಯ ನಂಟಿದೆ. ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಮಲೆಶಂಕರ ಕ್ಷೇತ್ರದಲ್ಲಿ ಶಿವನು ಅರ್ಜುನನಿಗೆ ಪಾಶುಪತಾಸ್ತ್ರ ದಯಪಾಲಿಸಿದ ಎನ್ನುವುದು ಪೌರಾಣಿಕ ನಂಬಿಕೆ.

ಮಹಾಭಾರತ ಕಾಲದಲ್ಲಿ ಪರಶಿವನಿಂದ ಪಾಶುಪತಾಸ್ತ್ರ ಪಡೆಯಲು ಅರ್ಜುನ ತಪಸ್ಸು ಮಾಡಿದ ಸ್ಥಳ ಇದೆಂದು ಕಿರಾತಾರ್ಜುನ ಪ್ರಸಂಗದ ಕಥೆ ಇಲ್ಲಿನ ಸ್ಥಳ ಪುರಾಣವನ್ನು ಬಿಚ್ಚಿಡುತ್ತದೆ. ಅರ್ಜುನನ ಭಕ್ತಿ ಮತ್ತು ಶಕ್ತಿಯನ್ನು ಪರೀಕ್ಷಿಸಲು ಶಿವನು ಕಿರಾತ (ಶಬರ) ವೇಷ ಧರಿಸಿ ಪಾರ್ವತಿ ಸಹಿತ ಇಲ್ಲಿಗೆ ಬಂದನು. ಕಿರಾತ ವೇಷಧಾರಿ ಮತ್ತು ತಪಸ್ಸಿಗೆ ಕುಳಿತ ಅರ್ಜುನ ಏಕಕಾಲದಲ್ಲಿ ಹಂದಿಗೆ ಬಾಣ ಪ್ರಯೋಗಿಸಿದರು.

“ಬೇಟೆ ನನ್ನದೇ’ ಎಂದು ಇಬ್ಬರೂ ವಾದಿಸಿ, ಯುದ್ಧಕ್ಕೂ ಇಳಿದರು. ತನಗೆ ಸೋಲಾಗುವ ಸಂದರ್ಭ ಬಂದಾಗ, ಅರ್ಜುನ ಮರಳಿನಲ್ಲಿ ಸ್ಥಾಪಿಸಿ ಪೂಜಿಸುತ್ತಿದ್ದ ಶಿವಲಿಂಗಕ್ಕೆ ಹೂವಿನ ಹಾರ ಹಾಕಿ, ನಮಸ್ಕರಿಸುತ್ತಾನೆ. ಆ ಹಾರ ಕಿರಾತನ ಕೊರಳಿಗೆ ಬೀಳುತ್ತದೆ. ಇದರಿಂದ ಕಿರಾತನೇ ಶಿವನೆಂದು ಅರ್ಜುನನಿಗೆ ಮನದಟ್ಟಾಗಿ, ಶಿವನನ್ನು ಪೂಜಿಸುತ್ತಾನೆ. ಅದೇ ಶಿವ ಇಲ್ಲಿ ಉದ್ಭವಲಿಂಗವಾಗಿ ಹುಟ್ಟಿದನಂತೆ.

ದೇಗುಲದ ಹಿಂಭಾಗದಲ್ಲಿ ಎತ್ತದ ಪರ್ವತ ಇರುವುದರಿಂದ “ಮಲೆಯ ಶಂಕರ’ ಎಂಬ ಹೆಸರು ಈ ಕ್ಷೇತ್ರಕ್ಕೆ ಬಂತು. ದೇಗುಲದ ಮುಂದೆಯೇ ಎರಡು ಶಾಸನಗಳಿವೆ. ಐತಿಹಾಸಿಕ ಕಾಲ ಘಟ್ಟದಲ್ಲಿ ವೀರನೋರ್ವ ನಾಡಿಗಾಗಿ ಹೋರಾಡಿ ಪ್ರಾಣ ತ್ಯಜಿಸಿದ ವರ್ಣನೆ ಇದರಲ್ಲಿದೆ. ವಿಜಯನಗರದ ಅರಸರು, ಬೆಳಗುತ್ತಿ ನಾಯಕರು, ಕೆಳದಿ ಅರಸರು ಮತ್ತು ಮೈಸೂರು ಒಡೆಯರು ಈ ದೇಗುಲಕ್ಕೆ ಭಕ್ತಿಯಿಂದ ಪೂಜಿಸಿ, ದಾನ ದತ್ತಿ ನೀಡಿರುವ ಉಲ್ಲೇಖಗಳಿವೆ.

ಇಲ್ಲೊಂದು ವಿಶಿಷ್ಟ ಕೊಳವಿದೆ. ವರ್ಷವಿಡೀ ನೀರು ಇಲ್ಲಿ ಉಕ್ಕಿ ಹರಿಯುವುದರಿಂದ, ಇಲ್ಲಿ ಗಂಗೆಯ ಆವಾಸವಿದೆ ಎನ್ನಲಾಗಿದೆ. 1988ರಲ್ಲಿ ಕಲ್ಲು, ಸಿಮೆಂಟ್‌ ಮತ್ತು ಕಾಂಕ್ರೀಟ್‌ ಬಳಸಿ, ಆಕರ್ಷಕ ವಿನ್ಯಾಸದಲ್ಲಿ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗಿದೆ.

ಇಲ್ಲಿನ ನೂರಾರು ಕುಟುಂಬಗಳಿಗೆ ಮಲೆಯ ಶಂಕರನೇ ಮನೆದೇವರು. ತೆರೆದ ಬಾವಿ ಮತ್ತು ಕೊಳವೆ ಬಾವಿ ತೆಗೆಸುವಾಗ ಜಲಪ್ರಾಪ್ತಿಗಾಗಿ, ಮಳೆಗಾಗಿ ಈತನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ವಿವಾಹ, ಸಂತಾನಪ್ರಾಪ್ತಿ ಮತ್ತು ರೋಗಹರಣಕ್ಕಾಗಿಯೂ ಭಕ್ತಾದಿಗಳು ಹರಕೆ ಹೊರುತ್ತಾರೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಪಂಚಕ್ಷೇತ್ರಗಳಾದ ಮಲೆಶಂಕರ, ಗುಳುಗುಳಿ ಶಂಕರ, ಹೆಬ್ಬಿಗೆ ಶಂಕರ, ಅಲಸೆ ಶಂಕರ ಮತ್ತು ಕೋಡೂರು ಶಂಕರ- ಇವುಗಳನ್ನು ಒಂದೇ ದಿನ, ಸೂರ್ಯೋದಯದಿಂದ ಸೂರ್ಯಾಸ್ತದೊಳಗೆ ದರ್ಶನ ಮಾಡಿದರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಸ್ಥಳೀಯರ ನಂಬಿಕೆ.

ದರುಶನಕೆ ದಾರಿ…: ಶಿವಮೊಗ್ಗ ಸಮೀಪದ ಆಯನೂರಿನಿಂದ ಹಣಗೆರೆಕಟ್ಟೆಯತ್ತ ಸಾಗುವ ದಾರಿಯಲ್ಲಿ 12 ಕಿ.ಮೀ. ಸಾಗಿದರೆ, ಮಲೆಶಂಕರ ಕ್ಷೇತ್ರ ಸಿಗುತ್ತದೆ.

* ಎನ್‌.ಡಿ. ಹೆಗಡೆ ಆನಂದಪುರಂ

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.