ಭಕ್ತಿ ಎಂದರೆ ಅರಿವು, ಭಕ್ತಿ ಎಂದರೆ ಭರವಸೆ !


Team Udayavani, Jan 19, 2019, 12:30 AM IST

99.jpg

ಭಕ್ತನಾದವನಿಗೆ ಗುಣದೋಷಗಳ ಅರಿವಿರಬೇಕು. ಅಂತಃಕರಣದ ಶುದ್ಧಿ ಬಹುಮುಖ್ಯ. ನಿಜವಾದ ಭಕ್ತನು ಭಗವಂತನ ಕೃಪೆಗೆ ಹೇಗೆ ಪಾತ್ರನಾಗುತ್ತಾನೆ ಎಂಬುದಕ್ಕೆ ಭಕ್ತ ಮಾರ್ಕಾಂಡೇಯ, ಶಿವಭಕ್ತ ಕಣ್ಣಪ್ಪ ಮತ್ತು ಭಕ್ತ ಪ್ರಹ್ಲಾದನ ಕಥೆಗಳು ಸಾಕ್ಷಿ. ಏಕಲವ್ಯನ ಕಥೆಯೂ ವಿಭಿನ್ನವಾಗಿ ಭಕ್ತಿ ಅಥವಾ ಭರವಸೆಯನ್ನು ಹೇಳುವ ಕಥೆ. 

ಉದ್ಧವನ ಪ್ರಶ್ನೆಗೆ ಉತ್ತರಿಸುತ್ತಾ ಶ್ರೀಕೃಷ್ಣನು ಭಕ್ತನು ಹೇಗಿರುತ್ತಾನೆಂದು ಹೇಳಿದ್ದಾನೆ. ಶ್ರೀಕೃಷ್ಣ ಹೇಳಿದಂತೆ ಭಕ್ತನಾದವನು ಕೃಪೆಯ ಮೂರ್ತಿಯಾಗಿರುತ್ತಾನೆ. ಆತ ಯಾವ ಪ್ರಾಣಿಯಲ್ಲಿಯೂ ವೈರಭಾವವನ್ನು ಹೊಂದಿರುವುದಿಲ್ಲ. ಸತ್ಯವೇ ಅವನ ಜೀವಾಳವಾಗಿರುತ್ತದೆ. ಬಹುದೊಡ್ಡ ದುಃಖವನ್ನೂ ಆತ ಸಂತಸದಿಂದಲೇ ಸ್ವೀಕರಿಸುತ್ತಾನೆ. ಯಾವ ವಿಧದ ಪಾಪವಾಸನೆಯೂ ಅವನ ಮನಸ್ಸಿನಲ್ಲಿ ಹುಟ್ಟುವುದಿಲ್ಲ. ಅಲ್ಲದೆ ಆತ ಸಮದರ್ಶಿಯಾಗಿದ್ದು ಎಲ್ಲರಿಗೂ ಒಳಿತನ್ನೇ ಮಾಡುವವನಾಗಿರುತ್ತಾನೆ. ಆತನ ಬುದ್ಧಿಯನ್ನು ಕಾಮನೆಗಳು ನಿಯಂತ್ರಿಸುವುದಿಲ್ಲ. ಸಂಯಮಿಯೂ ಮೃದುಸ್ವಭಾವದವನೂ,  ಆಗಿರುತ್ತಾನೆ. ಸಂಗ್ರಹಪರಿಗ್ರಹಗಳಿಂದ ದೂರವಿರುತ್ತಾನೆ. ಮಿತವಾದ ಆಹಾರ ಸೇವನೆ ಮಾಡುವವನೂ ಶಾಂತಮನದವನೂ ಸ್ಥಿರವಾದ ಬುದ್ಧಿಯವನೂ ಆಗಿರುತ್ತಾನೆ. 

ಭಗವಂತನ ಮೇಲೆ ಭರವಸೆಯನ್ನಿರಿಸಿಕೊಂಡು ಆತ್ಮತಣ್ತೀ ಚಿಂತನೆಯಲ್ಲಿ ಕಾಲ ಕಳೆಯುತ್ತಾನೆ. ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮತ್ಸರವೆಂಬ ಆರು ವೈರಿಗಳನ್ನು ಗೆದ್ದವನಾಗಿರುತ್ತಾನೆ. ಪರರಿಂದ ಸನ್ಮಾನವನ್ನು ಬಯಸದವನೂ ಪರರನ್ನು ಸ್ವತಃ ಸನ್ಮಾನಿಸುವವನೂ ಆಗಿರುತ್ತಾನೆ. ಎಲ್ಲರ ಜೊತೆಗೂ ಮಿತ್ರತೆಯ ವ್ಯವಹಾರವನ್ನು ಮಾಡುವವನಾಗಿರುತ್ತಾನೆ. ಗುಣ ಯಾವುದು? ದೋಷ ಯಾವುದು? ಎಂಬುದನ್ನು ಅರಿತವನಾಗಿರುತ್ತಾನೆ. ಅವನ ಅಂತಃಕರಣವು ಶುದ್ಧವಾಗಿರುತ್ತದೆ. ಸದಾ ಭಕ್ತಿಯ ಪ್ರವಾಹ ಅವನಲ್ಲಿ ಹೆಚ್ಚುತ್ತಲೇ ಇರುತ್ತದೆ. 

ಎಲ್ಲ ಕರ್ಮಗಳನ್ನು ಭಗವಂತನಿಗೆ ಅರ್ಪಿಸಿ, ಶರಣಾಗತನಾಗುತ್ತಾನೆ. ಭಗವಂತನು ಯಾರು? ಎಷ್ಟು ದೊಡ್ಡವನು? ಹೇಗಿದ್ದಾನೆ? ಎಂಬುದನ್ನು ತಿಳಿಯಲಿ ಅಥವಾ ತಿಳಿಯದೇ ಇರಲಿ, ಆದರೆ ಅನನ್ಯ ಭಾವದಿಂದ ಭಗವಂತನನ್ನು ಭಜಿಸುವವರೇ ಪರಮಭಕ್ತರಾಗಿರುತ್ತಾರೆ. ಇವು ಭಕ್ತನು ಹೇಗಿರಬೇಕು? ನಿಜವಾದ ಭಕ್ತಿ ಯಾರಲ್ಲಿ ಇರುತ್ತದೆ ಎಂಬುದನ್ನು ಹೇಳುತ್ತವೆ. ಹೀಗೆ ಪರಮಾತ್ಮನು ಭಕ್ತನ ರೂಪವನ್ನು ಹೇಳಿದ್ದಾನೆ.

ಹಾಗಾಗಿ, ಭಕ್ತನಾಗುವುದು ಅಷ್ಟು ಸುಲಭವಲ್ಲ. ಭಕ್ತಿ ಎಂಬುದು ಒಂದು ಬಗೆಯ ಭರವಸೆಯೂ ಹೌದು; ಅರಿವೂ ಹೌದು. ಏಕೆಂದರೆ, ಭಕ್ತನಾದವನಿಗೆ ಗುಣದೋಷಗಳ ಅರಿವಿರಬೇಕು. ಅಂತಃಕರಣದ ಶುದ್ಧಿ ಬಹುಮುಖ್ಯ. ನಿಜವಾದ ಭಕ್ತನು ಭಗವಂತನ ಕೃಪೆಗೆ ಹೇಗೆ ಪಾತ್ರನಾಗುತ್ತಾನೆ ಎಂಬುದಕ್ಕೆ ಭಕ್ತ ಮಾರ್ಕಾಂಡೇಯ, ಶಿವಭಕ್ತ ಕಣ್ಣಪ್ಪ ಮತ್ತು ಭಕ್ತ ಪ್ರಹ್ಲಾದನ ಕಥೆಗಳು ಸಾಕ್ಷಿ$. ಏಕಲವ್ಯನ ಕಥೆಯೂ ವಿಭಿನ್ನವಾಗಿ ಭಕ್ತಿ ಅಥವಾ ಭರವಸೆಯನ್ನು ಹೇಳುವ ಕಥೆ. ದ್ರೋಣಾಚಾರ್ಯರು ಏಕಲವ್ಯನಿಗೆ ಗುರುವಾಗಲು ಒಪ್ಪದಿದ್ದಾ ಗ, ಅವರ ಮಣ್ಣಿನಮೂರ್ತಿಯನ್ನು ಮಾಡಿಕೊಂಡು ಅದನ್ನೇ ಭಕ್ತಿಯಿಂದ ಪೂಜಿಸಿ, ಅವರ ಕೃಪೆಯಿಂದಲೇ ಬಿಲ್ಲುವಿದ್ಯೆಯನ್ನು ಕಲಿತುಕೊಂಡ ಕಥೆ. ಇದು ಭಕ್ತಿಯ ಪರಾಕಾಷ್ಠೆಯನ್ನು ಸೂಚಿಸುತ್ತದೆ. ದ್ರೋಣರು ಅಲ್ಲಿ ಇಲ್ಲದೇ ಇದ್ದರೂ, ಇದ್ದಾರೆ ಎಂಬ ಅವನ ಶ್ರದ್ಧೆಭಕ್ತಿಯಿಂದಾಗಿಯೇ ಆತ ಅರ್ಜುನನನ್ನೂ ಮೀರಿಸುವ ಬಿಲ್ಲುಗಾರನಾಗಿಬಿಟ್ಟಿದ್ದ. ಇಂಥ ಏಕಾಗ್ರತೆಯ ಭಕ್ತಿ ನಮ್ಮಲ್ಲಿ ಹುಟ್ಟಬೇಕು. ಏಕಲವ್ಯನಂತೆ ನಾವು ಕೂಡ ಮೂರ್ತಿಗಳÇÉೇ ದೇವರನ್ನು ಕಂಡವರು. ಹಾಗಾಗಿ, ಭಕ್ತಿ ಹುಟ್ಟಬೇಕಾದರೆ ಮೊತ್ತಮೊದಲು ಆ ಮೂರ್ತಿಯಲ್ಲಿ ನಮ್ಮಿಷ್ಟದ ದೇವರು ಇ¨ªಾನೆಂಬುದನ್ನು ನಮ್ಮ ಮನಸ್ಸು ನಂಬಬೇಕು. ಆಗ ಭಕ್ತಿ ಹುಟ್ಟುತ್ತದೆ.

ಇನ್ನು ಭಕ್ತನಾಗುವುದೆಂದರೆ ಶೀಕೃಷ್ಣ ಹೇಳಿದಂತೆ ದುರ್ಗುಣಗಳನ್ನು ಬಿಡಬೇಕು, ಚಿತ್ತಶುದ್ಧಿಯಾಗಬೇಕು. ಇಡಿಯ ಜಗತ್ತನ್ನೇ ಪ್ರೀತಿಸಬೇಕು. ಕಾಮನೆಗಳನ್ನು ತೊರೆದು ಯಾವುದನ್ನೂ ಬಯಸದ ಭಕ್ತಿ ನಮ್ಮದಾಗಬೇಕು. ಭಜಿಸು ಎಂದರೆ ತ್ಯಜಿಸು ಎಂದೇ ಅರ್ಥ. ಶರಣಾಗತನಾಗುವಾಗ ನಮ್ಮೊಳಗಿನ ಎÇÉಾ ಬಯಕೆಗಳನ್ನು ತ್ಯಜಿಸಿ ನೋವಿಗೆ ಕುಗ್ಗದೆ, ನಲಿವಿಗೆ ಹಿಗ್ಗದೆ ಸಮಭಾವ ಮತ್ತು ಚರಾಚರ ಜೀವಿಗಳಲ್ಲಿ ಸಮಾನತೆಯನ್ನು ಕಾಣುವುದರಿಂದ ಮನಸ್ಸು ಶಾಂತವಾಗಿದ್ದು ನಿಜಭಕ್ತನಾಗಲು ಸಾಧ್ಯ. ಅಂಥ ಭಕ್ತಿ, ಜಗತ್ತಿನ ಶಕ್ತಿಯೂ ಆಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ.

ವಿಷ್ಣು ಭಟ್‌ ಹೊಸ್ಮನೆ 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.