ಅನ್ನದಾನಿ ಕಾಲಭೈರವ

ಶ್ರೀ ಆದಿ ಚುಂಚನಗಿರಿ ಕ್ಷೇತ್ರ ಮಂಡ್ಯ ಜಿಲ್ಲೆ

Team Udayavani, Sep 21, 2019, 5:05 AM IST

u-14

Sri Adichunchanagiri Mahasamsthana Math

ತ್ರಿವಿಧ ದಾಸೋಹ ನಡೆಸುತ್ತಿರುವ ನಾಡಿನ ಪ್ರಸಿದ್ಧ ಮಠಗಳಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಒಂದು. ಇಲ್ಲಿ ನೆಲೆಸಿರುವ ಶ್ರೀ ಕಾಲಭೈರವೇಶ್ವರ “ಅನ್ನದಾನಿ ಭೈರವ’ ಅಂತಲೇ ಖ್ಯಾತಿವೆತ್ತಿದ್ದಾನೆ. ಹಸಿದ ಹೊಟ್ಟೆಯಲ್ಲಿ ಬಂದವರಿಗೆ, ಹಾಗೇ ಕಳುಹಿಸಿದ ಉದಾಹರಣೆ, ಮಠದ ಇತಿಹಾಸದಲ್ಲಿ ಸಿಗುವುದಿಲ್ಲ.

ನಾಡಿನ ಮೂಲೆ ಮೂಲೆಯಲ್ಲೂ ಶ್ರೀ ಕಾಲಭೈರವೇಶ್ವರನ ಒಕ್ಕಲುತನದವರಿದ್ದಾರೆ. ನಿತ್ಯವೂ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಎಲ್ಲರಿಗೂ ಪ್ರಸಾದ ರೂಪದಲ್ಲಿ ಅನ್ನದಾಸೋಹವನ್ನು ಹಲವು ದಶಕಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ರೀಮಠದ ಹೆಗ್ಗಳಿಕೆ.

ನಿತ್ಯ ಎಷ್ಟು ಮಂದಿಗೆ ಊಟ?
ಪ್ರತಿದಿನ 4 ರಿಂದ 5 ಸಾವಿರ ಜನರು ಶ್ರೀ ಕಾಲಭೈರವೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಇರುತ್ತದೆ.
ಭಕ್ಷ್ಯ ಸಮಾಚಾರ
– ಬೆಳಗ್ಗಿನ ಉಪಾಹಾರಕ್ಕೆ ರೈಸ್‌ ಬಾತ್‌, ಉಪ್ಪಿಟ್ಟು, ಚಿತ್ರಾನ್ನ, ಇಡ್ಲಿ, ಪೊಂಗಲ್‌ ಸೇರಿದಂತೆ ವೈವಿಧ್ಯಮಯ ತಿಂಡಿಗಳು.
– ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರ್‌, ರಸಂ, ಮಜ್ಜಿಗೆ ಹಾಗೂ ಪಾಯಸ
– ರಾತ್ರಿ ಊಟಕ್ಕೆ ಅನ್ನ, ಸಾಂಬಾರ್‌, ರಸಂ, ಸಂಡಿಗೆ
– ವಿಶೇಷ ಸಂದರ್ಭದಲ್ಲಿ ಬೂಂದಿ, ಪಾಯಸ ಇರುತ್ತದೆ.

ಊಟದ ಸಮಯ
ಬೆಳಗ್ಗೆ: 8 - 11.30
ಮಧ್ಯಾಹ್ನ: 12.30- 3.30
ರಾತ್ರಿ: 7.30- 10
ಏನೇನು? ಎಷ್ಟೆಷ್ಟು?
ಏಕಕಾಲದಲ್ಲಿ ಸುಮಾರು 10 ಸಾವಿರ ಜನರಿಗೆ ಊಟ ತಯಾರಿಸಬಹುದಾದ ಸುಸಜ್ಜಿತ ಅಡುಗೆಶಾಲೆ ಇಲ್ಲಿದೆ. ಅನ್ನ, ಸಾಂಬಾರ್‌, ಪಾಯಸ, ರಸಂ ತಯಾರಿಕೆಗೆ ಪ್ರತ್ಯೇಕವಾದ ಬಾಯ್ಲರ್‌ ವ್ಯವಸ್ಥೆ ಇದೆ. ಅತ್ಯಾಧುನಿಕ ತಂತ್ರಜ್ಞಾನದ ಡಿಶ್‌ವಾಶ್‌ ವ್ಯವಸ್ಥೆ ಇದೆ. ಶನಿವಾರ ಮತ್ತು ಭಾನುವಾರದಂದು ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕನಿಷ್ಠ 50 ರಿಂದ 60 ಸಾವಿರ ಮುಟ್ಟುತ್ತದೆ. ಅಂದು ಅಡಕೆ ತಟ್ಟೆ ಮೂಲಕ ಬಫೆ ವ್ಯವಸ್ಥೆಯಲ್ಲಿ ಭೋಜನ ವಿತರಿಸಲಾಗುತ್ತದೆ.

ಭೋಜನ ಶಾಲೆ ಹೇಗಿದೆ?
ಶ್ರೀಕ್ಷೇತ್ರದಲ್ಲೇ ಅನ್ನಪೂರ್ಣೇಶ್ವರಿ ನಿಲಯವಿದೆ. ಸುಸಜ್ಜಿತ ಭೋಜನ ಶಾಲೆಯಲ್ಲಿ ಒಟ್ಟಿಗೆ 500 ಮಂದಿ ಒಟ್ಟಿಗೆ ಕುಳಿತು ಊಟ ಮಾಡಬಹುದು. ಊಟಕ್ಕೆ ಟೇಬಲ್‌ ಹಾಗೂ ಕುರ್ಚಿ ವ್ಯವಸ್ಥೆ ಇದೆ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅವರೆಲ್ಲರಿಗೂ ಭೋಜನ ವ್ಯವಸ್ಥೆ ಅಲ್ಲದೇ, ಕ್ಷೇತ್ರದ ಸಂಸ್ಕೃತ ಪಾಠಶಾಲೆ ಹಾಗೂ ವಸತಿ ನಿಲಯದ ಸುಮಾರು 300 ಮಕ್ಕಳಿಗೆ ನಿತ್ಯವೂ ಉಪಾಹಾರ ಮತ್ತು ಊಟವನ್ನು ನೀಡಲಾಗುತ್ತಿದೆ.

ಕ್ಷೇತ್ರಕ್ಕೆ ಬರುವ ಭಕ್ತರು, ಹಸಿವಿನಿಂದ ಹೋಗಬಾರದು. ಇದೇ ನಮ್ಮ ಮಠದ ಮೂಲ ಉದ್ದೇಶ. ಅನ್ನಸಂತರ್ಪಣೆಯ ನಿತ್ಯದ ಯಶಸ್ಸಿನ ಹಿಂದೆ, ಸಹಸ್ರಾರು ದಾನಿಗಳ ಕೊಡುಗೆ ಇದೆ. ಕ್ಷೇತ್ರದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದದಿಂದ, ಅನ್ನದಾಸೋಹ ನಿರ್ವಿಘ್ನವಾಗಿ ನಡೆಯುತ್ತಿದೆ.
– ಶ್ರೀ ಪ್ರಸನ್ನನಾಥ ಸ್ವಾಮೀಜಿ, ಕಾರ್ಯದರ್ಶಿ, ಆದಿ ಚುಂಚನಗಿರಿ ಮಠ

ಸಂಖ್ಯಾ ಸೋಜಿಗ
18- ಕ್ವಿಂಟಲ್‌ ಅಕ್ಕಿ ಬಳಕೆ
300- ಮಕ್ಕಳಿಗೆ (ಹಾಸ್ಟೆಲ್‌) ನಿತ್ಯವೂ ಭೋಜನ ವ್ಯವಸ್ಥೆ
500- ಮಂದಿ ಏಕಕಾಲದಲ್ಲಿ ಭೋಜನ ಸ್ವೀಕರಿಸುವ ವ್ಯವಸ್ಥೆ
520- ಕಿಲೊ ತರಕಾರಿ ಅವಶ್ಯ
5000- ಮಂದಿಗೆ ನಿತ್ಯ ಅನ್ನಸಂತರ್ಪಣೆ
10,000- ಮಂದಿಗೆ ಏಕಕಾಲಕ್ಕೆ ಅಡುಗೆ ತಯಾರಿ ಸಾಮರ್ಥ್ಯ
60,000- ಭಕ್ತರು ವಾರಾಂತ್ಯದಲ್ಲಿ ಆಗಮನ

– ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.