ಸೀತೆಯ ಸೆರಗು ಇಲ್ಲೇಕೆ ಬಂತು?


Team Udayavani, Jan 11, 2020, 5:42 AM IST

34

ರಾಮನು ಅವತಾರ ಪುರುಷನಾದರೂ ಅತಿಮಾನುಷ ಶಕ್ತಿ ತೋರ್ಪಡಿಸದೇ, ಸಾಮಾನ್ಯರಂತಿದ್ದವನು. ಹನುಮನೋ ಕಾಮರೂಪಿ. ಪರ್ವತಾಕಾರವಾಗಿಯೂ ಬೆಳೆಯಬಲ್ಲ, ಮರುಕ್ಷಣ ಅಣುವಿನಾಕಾರವೂ ಆಗಬಲ್ಲ. ರಾಮ- ಲಕ್ಷ್ಮಣರಿಬ್ಬರನ್ನೂ ಭುಜದ ಮೇಲೆ ಕೂರಿಸಿಕೊಂಡು ಹಾರುತ್ತ, ಸುಗ್ರೀವನ ಬಳಿ ಕರೆದೊಯ್ಯುತ್ತಾನೆ. ರಾಮ- ಸುಗ್ರೀವರು ಭೇಟಿಯಾದ ಸ್ಥಳವೇ ಋಷ್ಯಮೂಕ ಪರ್ವತ.

ಇಬ್ಬರೂ ರಾಜ್ಯಭ್ರಷ್ಟರಾಗಿ, ಪತ್ನಿಯಿಂದ ಅಗಲಿದ ಸಮಾನದುಃಖೀಗಳು. ಪರಸ್ಪರರಿಗೆ ಸಹಾಯ ಮಾಡುವುದಾಗಿ ವಚನ ಕೊಡುತ್ತಾರೆ. ಅದರಂತೆ, ರಾಮನು ವಾಲಿಯನ್ನು ಸಂಹರಿಸಿ, ಸುಗ್ರೀವನಿಗೆ ರಾಜ್ಯವನ್ನೂ ಪತ್ನಿ ರುವೆ‌ುಯನ್ನೂ ಮರಳಿಸುತ್ತಾನೆ. ಋಷ್ಯಮೂಕ ಪರ್ವತದಲ್ಲಿಯೇ ಆತನಿಗೆ ಪಟ್ಟಾಭಿಷೇಕವನ್ನೂ ಮಾಡುತ್ತಾನೆ. ಅದರ ನೆನಪಿಗಾಗಿ, ಅದೇ ಸ್ಥಳದಲ್ಲಿ ನಿರ್ಮಾಣವಾದದ್ದೇ ಹಂಪಿಯ ಕೋದಂಡರಾಮನ ಗುಡಿ. ಇಲ್ಲಿ ಹನುಮನ ಸ್ಥಾನದಲ್ಲಿ ಸುಗ್ರೀವನಿದ್ದಾನೆ.

ರಘುನಾಥ ಮಂದಿರ
ರಾಮನೇನೋ ತನ್ನ ವಾಗ್ಧಾನ ಪೂರೈಸಿದ. ಸುಗ್ರೀವ ರಾಜ್ಯ, ಪತ್ನಿ ಮರಳಿ ದೊರೆತ ಖುಷಿಯಲ್ಲಿ ಸುಖಲೋಲುಪನಾಗಿ ಮೈಮರೆತುಬಿಟ್ಟ. ಪತ್ನಿಯನ್ನು ಆದಷ್ಟು ಬೇಗ ಕರೆತರಬೇಕೆಂಬ ಆತುರದಲ್ಲಿದ್ದ ರಾಮ, ಸುಗ್ರೀವನ ಈ ನಡತೆಯಿಂದ ವ್ಯಥೆ, ಚಿಂತೆಗೊಳಗಾದ. ಆಗಲೇ ಚಾತುರ್ಮಾಸವೂ ಆರಂಭವಾಯಿತು. ತನ್ನ ಮುಂದಿನ ಯೋಜನೆಗಳಿಗಾಗಿ ಈಶ್ವರನ ಆಶೀರ್ವಾದ ಬಯಸಿ, ರಾಮನು ಶಿವಪೂಜೆ ವ್ರತ ಕೈಗೊಂಡ. ಜಪ-ತಪಗಳಲ್ಲಿ ಮುಳುಗಿದ. ಈ ಸಂದರ್ಭದ ನೆನಪಿಗಾಗಿ ನಿರ್ಮಾಣವಾದ್ದದೇ ಮೌಲ್ಯವಂತ ರಘುನಾಥ ಮಂದಿರ.

ಇಲ್ಲಿ ರಾಮನ ಕೈಯಲ್ಲಿ ಜಪಮಾಲೆ ಇರುವುದು, ವಿಶೇಷ. ಬಳಿಯಲ್ಲೇ ಅಂದು ಆತ ಪೂಜಿಸಿದ ಶಿವಲಿಂಗವಿದೆ. ಲಕ್ಷ್ಮಣ ಬಾಣ ಹೊಡೆದು, ನೀರು ಚಿಮ್ಮಿಸಿ ಪೂಜೆಗೆ ನೀರು ತಂದಿದ್ದನಂತೆ. ಗುಡಿಯ ಹಿಂದಿರುವ ನೀರನ್ನು ರಾಮ- ಲಕ್ಷ್ಮಣರ ದೋಣಿ ಎಂದು ಕರೆಯುತ್ತಾರೆ. ಆಗಲೇ ರಾಮ ದಶರಥನ ಶ್ರಾದ್ಧ ಮಾಡಿದ್ದನಂತೆ. ಅದರ ಕುರುಹಾಗಿ ಕಲ್ಲಿನ ಪಿಂಡಗಳನ್ನೂ ಇಲ್ಲಿ ನೋಡಬಹುದು.

ಈ ಎರಡು ಗುಡಿಗಳೇನೋ ರಾಮಾಯಣದ ಸಂದರ್ಭ ಅನುಸರಿಸಿ ನಿರ್ಮಾಣಗೊಂಡವು. ಆದರೆ, ನಮ್ಮ ದೊರೆಗಳು ಹಂಪಿಯಲ್ಲಿ ಒಬ್ಬರಿಗಿಂತ ಮಿಗಿಲಾಗಿ ಇನ್ನೊಬ್ಬರು ಗುಡಿ ಕಟ್ಟಿ ತೊಡಗಿದ್ದರಷ್ಟೇ? ಹಾಗಾಗಿ, ಇಲ್ಲಿ ಮತ್ತೆ ಪಟ್ಟಾಭಿರಾಮನೂ ಬಂದ, ಹಜಾರ ರಾಮನೂ ಬಂದ. “ಎತ್ತೆತ್ತ ನೋಡಿದರತ್ತತ್ತ ರಾಮ’ ಎಂಬ ಉಡಿ ಹಂಪಿಗೆ ಸರಿಯಾಗಿ ಅನ್ವಯಿಸುತ್ತದೆ.

ಸೀತೆಯ ಸೆರಗು
ನೆರಿಗೆ, ನೆರಿಗೆಯಂತಿರುವ ಬಂಡೆಯ ದೊಡ್ಡ ಹಾಸುಗಲ್ಲು ಸ್ಥಳೀಯರ ಪ್ರಕಾರ “ಸೀತೆಯ ಸೆರಗು’. ಅರೇ! ಸೀತೆ ಎಲ್ಲಿ ಇಲ್ಲಿಗೆ ಬಂದಿದ್ದಳು ಎಂದು ನೀವು ತರ್ಕಿಸಬಹುದು. ಇಲ್ಲಿನವರ ಪ್ರಕಾರ ಸೀತೆಯ ಅಪಹರಣವಾದದ್ದು ಹಂಪಿಯಿಂದಲೇ.

ತಳ ಸಮುದಾಯದವರು ಹಾಡುವ, “ಕಾಗೆ ಹೊಡೆದವಗೆ ಮಗಳು’ ಎಂಬ ಹಾಡಿನ ಕೆಲ ನುಡಿಗಳನ್ನು ನೋಡಿ,

“ಮುಂದ್ಮುಂದೆ ರಾಮಣ್ಣ ಹಿಂಹಿಂದೆ ಲಕ್ಷ್ಮಣಾ
ನೆಟ್ಟಾ ನಡುವೀಲೊಬ್ಬ ಸೀತಮ್ಮಾನೆ ಣ ಮೂವರೂ
ಹಂಪೀಯ ದಾರೀಯ ಹಿಡಿದಾರಲ್ಲಾ ಣಣ

ನೆಡದೂ ನೆಡದೂ ಸೀತಮ್ಮ ಕಾಲೆರಡೂ ನೊಂದಾವೆ
ಹಂಗೂ ಕಾಲಿಗೆ ಗುರಳಿ ಎದ್ದಾವಲ್ಲಾ ಣಣ
ಅತ್ತಿಗೆ ಸೀತಮ್ಮ ಅನ್ಯಾಯದ ಮಾತೇಕೆ
ಹತ್ತು ಬಾರವ್ವಾ ನನ್ನ ಹೆಗಲ ಮ್ಯಾಲೆ ಣಣ

ಲಕ್ಷ್ಮಣನ ಸಹಾಯವನ್ನು ನಯವಾಗಿ ತಿರಸ್ಕರಿಸಿ, ಸೀತೆ ಕಾಲಿಗೆ ಗುಳ್ಳೆಗಳೆದ್ದಿದ್ದರೂ ನಡೆದೇ ಹಂಪಿಯ ಸೇರಿದಳೆಂದು ಹಾಡು ಮುಗಿಯುತ್ತದೆ.

ಹಜಾರ ರಾಮ

ಹಜಾರರಾಮ ಗುಡಿಯಲ್ಲಿ ವಿಗ್ರಹಗಳಿಲ್ಲದಿದ್ದರೇನು? ಹೊರಭಿತ್ತಿಯ ಮೇಲೆ ದಶರಥನ ಪುತ್ರಕಾಮೇಷ್ಟಿ ಯಾಗದಿಂದ ಮೊದಲ್ಗೊಂಡು ಇಡೀ ರಾಮಾಯಣದ ಪ್ರತಿ ದೃಶ್ಯವೂ ಮೂಡಿಬಂದಿದೆ. ಈ ರಾಮಶಿಲ್ಪಗಳು ಸಾವಿರ ಇದ್ದುದರಿಂದಲೋ ಏನೋ, ಈ ಗುಡಿಗೆ “ಹಜಾರ ರಾಮ’ ಎಂಬ ಹೆಸರು ಬಂದಿದೆ.

– ವಸುಂಧರಾ ದೇಸಾಯಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.