ಹಣೆಗೆ ತಿಲಕ ಏಕೆ ?
Team Udayavani, May 18, 2019, 10:52 AM IST
ಹಣೆಗೆ ತಿಲಕ ಇರಿಸಿಕೊಳ್ಳುವುದು ಹಿಂದೂ ಸಂಪ್ರದಾಯ. ಶ್ರೀಗಂಧ, ಅರಿಶಿನ, ಕುಂಕುಮ, ಹುತಾಬಸ್ಮ, ಆಂಗ್ರ ಅಕ್ಷ$ತೆಗಳಿಂದ ತಿಲಕ ಇತ್ತು ಕೊಳ್ಳಬಹುದಾಗಿದೆ. ಗಂಡಸರು, ಹೆಂಗಸರು ಎಂಬ ಭೇದವಿಲ್ಲದೆ ಹಿಂದೂಗಳು ತಿಲಕ ಇರಿಸಿಕೊಳ್ಳುವುದು ರೂಢಿ.
ಎರಡೂ ಹುಬ್ಬಿನ ಮದ್ಯದಿಂದ ಹಣೆಯ ಮಧ್ಯದವರೆಗೆ ಬೊಟ್ಟು ಇಟ್ಟುಕೊಳ್ಳ ಬಹುದು. ಯೋಗಶಾಸ್ತ್ರದ ಪ್ರಕಾರ ಈ ಭಾಗ ಶತಚಕ್ರಗಳಲ್ಲಿ ಒಂದಾದ ಆಜ್ಞಾ ಚಕ್ರವಿರುವ ಜಾಗ. ಈ ಸಿದ್ದಿಯ ಸಾಧನೆಗಾಗಿಯೋ ಎಂಬಂತೆ ಅಥವಾ ನಿರಂತರ ಈ ಭಾಗದ ಸ್ಪರ್ಶದಿಂದ ಸದಾ ಈ ವಿಷಯ ಜ್ಞಾಪಕದಲ್ಲಿ ಇರುವಂತೆ ಮತ್ತು ಅದರಿಂದ ಸಿದ್ಧಿಸುವಂತೆ ತಿಲಕ ಧರಿಸುವ ಕ್ರಮವನ್ನು ಹಿರಿಯರು ಮಾಡಿದ್ದಾರೆ.
ತಿಲಕಖರಣೆ ಮಂಗಳ ಸೂಚಕ. ಮುಖ ನೋಡಿ ಆಯಾ ಮನೆಯಲ್ಲಿ ಮಂಗಲವೋ ಅಮಂಗಲವೋ ತಿಳಿಯಬಹುದು. ಮನೆಯಲ್ಲಿ ದುಃಖದ ಸಂದರ್ಭ ಇದ್ದಾಗ, ಅಂಥ ಕಾರ್ಯಗಳು ನಡೆಯುವಾಗ ತಿಲಕವನ್ನು ಧರಿಸುವುದಿಲ್ಲ. ಬೇರೆ ಬೇರೆ ಸಂಪ್ರದಾಯದವರು ಆಯಾ ಸಂಪ್ರದಾಯಕ್ಕನುಸಾರವಾಗಿ ಉದ್ದವೋ, ಅದ್ದವೋ , ಮತ್ತಿತರ ರೀತಿಗಳಲ್ಲಿ ಬೊಟ್ಟು ಇಡುತ್ತಾರೆ. ದೇಹಗಳಲ್ಲಿ ಮುದ್ರೆಗಳನ್ನು ಧರಿಸುವುದಾಗಲಿ, ವಿವಿಧ ತಿಲಕಗಳನ್ನಿರಿಸುವುದಾಗಲಿ ವ್ಯವಹಾರದಲ್ಲಿ ಒಂದು ಪಂಥದ ಸೂಚಕವಾದರೂ, ಮೂಲದಲ್ಲಿ ವಿಶೇಷ ಅರ್ಥಗಳನ್ನು ಹೊಂದಿತ್ತು. ಆಯಾ ಪಂಥ ಸ್ಥಾಪಕರಿಗೆ ಇಂತಹ ಅನಿವಾರ್ಯತೆಗಳಿತ್ತೋ, ಇಲ್ಲವೋ ಗೊತ್ತಿಲ್ಲ. ದೇಹದ ಮೇಲೆ ಮುದ್ರೆ ಗುರುತುಗಳನ್ನು ನಾಮಗಳನ್ನು ಕಂಡಾಗ ಭಗವಂತನ ಸ್ಮರಣೆ ವ್ಯಕ್ತಿಗಾಗಬೇಕು. ಆತನ ಭಕ್ತನಾಗಿ, ಆತನಿಗಾಗಿ ನನ್ನ ಕರ್ತವ್ಯಗಳನ್ನು ನೆನಪಿಸಿಕೊಳ್ಳಲಿಗೊಸುಕರ ಈ ನಮ ಮುದ್ರೆಗಳನ್ನು ಧರಿಸಿ¨ªಾನೆ. ನಿಜವಾದ ಭಕ್ತ ನಾನಾಗಬೇಕು ಎಂದು ಅನಿಸಬೇಕು. ಭಸ್ಮ ಧಾರಣೆ ಮಾಡಿದವರಿಗೆ ಕಾಮನನ್ನು ಸುತ್ತು ಭಸ್ಮ ಮಡಿದ ಮುರಾರಿಯಾ ನೆನಪಾಗಿ ತಾವೂ ಕಾಮನೆಗಳನ್ನು ಜಯಿಸಲು ಯತ್ನಿಸಬೇಕು. ಶರೀರವು ಭಸ್ಮವಾಗತಕ್ಕ ಅಶಾಶ್ವತ ವಸ್ತು, ಶಾಶ್ವತವಾದ ಆತ್ಮಜ್ಞಾನ ನಮ್ಮ ಗುರಿ ಎಂಬರಿವು ಬರಬೇಕು ಎನ್ನುವುದು ಇದರ ಮರ್ಮ ಎಂದೆನಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ