
18ರಿಂದ 25ರ ಕನಸು – ಕನವರಿಕೆ
Team Udayavani, Jul 14, 2017, 5:50 AM IST

ನಿರ್ದೇಶಕ ಸ್ಮೈಲ್ ಶ್ರೀನು ಈ ಹಿಂದೆ ‘ಬಳ್ಳಾರಿ ದರ್ಬಾರ್’ ಎಂಬ ಸಿನಿಮಾ ಮಾಡಿದ್ದರು. ಆ ಸಿನಿಮಾ ಜನರಿಗೆ ತಲುಪದ ಕಾರಣ ಸಿನಿಮಾ ಸದ್ದು ಮಾಡಲಿಲ್ಲ ಎಂಬುದನ್ನು ಶ್ರೀನು ಕೂಡಾ ಒಪ್ಪಿಕೊಳ್ಳುತ್ತಾರೆ. ಇಂತಿಪ್ಪ ಶ್ರೀನು ಈಗ ಹೊಸ ಸಿನಿಮಾದೊಂದಿಗೆ ಬಂದಿದ್ದಾರೆ. ಆ ಸಿನಿಮಾಕ್ಕೆ ಅವರಿಟ್ಟ ಹೆಸರು ’18 ರಿಂದ 25′. ಟೈಟಲ್ ಹೇಳಿದ ಮೇಲೆ ಇದೊಂದು ಲವ್ಸ್ಟೋರಿ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಚಿತ್ರದಲ್ಲಿ 18 ರಿಂದ 15 ವರ್ಷದೊಳಗೆ ನಡೆಯುವ ಘಟನೆಗಳನ್ನು ಶ್ರೀನು ಹೇಳಲು ಹೊರಟಿದ್ದಾರಂತೆ. ‘ಇದು ಯೂತ್ಫುಲ್ ಸಬ್ಜೆಕ್ಟ್. ಇವತ್ತಿನ ಜನರೇಶನ್ನ್ನು ಗಮನದಲ್ಲಿಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಯೂತ್ಸ್ಗೆಈ ಸಬ್ಜೆಕ್ಟ್ ಕಚಗುಳಿ ಇಟ್ಟಂತಿರುತ್ತದೆ. ಪ್ರೀತಿ, ಪ್ರೇಮ, ಅದರ ಒಳಿತು – ಕೆಡುಕುಗಳು ಕೂಡಾ ಇಲ್ಲಿ ಬಂದು ಹೋಗಲಿದೆ’ ಎಂದು ಸಿನಿಮಾ ಬಗ್ಗೆ ವಿವರ ನೀಡಿದರು ಶ್ರೀನು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಉದ್ದೇಶ ಅವರಿಗಿದೆ.
ಈ ಚಿತ್ರವನ್ನು ತುಮ್ಮಲಪಲ್ಲಿ ರಾಮಸತ್ಯನಾರಾಯಣ ನಿರ್ಮಿಸುತ್ತಿದ್ದಾರೆ. ತೆಲುಗಿನಲ್ಲಿ ಸುಮಾರು 100 ಸಿನಿಮಾಗಳನ್ನು ನಿರ್ಮಿಸಿರುವ ರಾಮಸತ್ಯನಾರಾಯಣ ಅವರಿಗೆ ಶ್ರೀನು ಮಾಡಿರುವ ಕಥೆ ಇಷ್ಟವಾಗಿ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರಂತೆ. ತುಂಬಾ ವರ್ಷಗಳಿಂದ ಕನ್ನಡದಲ್ಲಿ ಸಿನಿಮಾ ಮಾಡಬೇಕೆಂಬ ಆಸೆ ಅವರಲ್ಲಿತ್ತಂತೆ. ಅದೀಗ ಈಡೇರಿದೆ ಎನ್ನುತ್ತಾರೆ. ನಟ – ನಟಿಯರ ಮಾರ್ಕೇಟ್ ನೋಡಿಕೊಂಡು ತಾನು ಬಜೆಟ್ ಹಾಕುವುದರಿಂದ ತನಗೆ ಸಿನಿಮಾದಿಂದ ಹೆಚ್ಚಿನ ನಷ್ಟವೇನೂ ಆಗಿಲ್ಲ ಎನ್ನುವ ಅವರು, ಈ ಸಿನಿಮಾವನ್ನು ಲೆಕ್ಕಾಚಾರದ ಮೇಲೆಯೇ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಅಭಿರಾಮ್ ಹಾಗೂ ರಿಷಿತೇಜ ನಾಯಕರು. ಇಬ್ಬರು ಕೂಡಾ ಬಳ್ಳಾರಿ ಮೂಲದವರು. ಸ್ಮೈಲ್ ಶ್ರೀನು ಅವರ ನಟನಾ ಸ್ಕೂಲ್ನ ವಿದ್ಯಾರ್ಥಿಗಳು. ಈಗ ಈ ಸಿನಿಮಾ ಮೂಲಕ ನಾಯಕರಾಗುತ್ತಿದ್ದಾರೆ. ಇಬ್ಬರು ಇಲ್ಲಿ ಹುಡುಗಿ ಹಿಂದೆ ಬೀಳುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ಅಖೀಲಾ ಹಾಗೂ ವಿದ್ಯಾಶ್ರೀ ನಾಯಕಿಯರು. ಅಖೀಲಾ ಇಲ್ಲಿ ಬಬ್ಲಿ ಹುಡುಗಿಯಾಗಿ, ಪ್ರೀತಿಯಲ್ಲಿ ಬೀಳುವ ಪಾತ್ರದಲ್ಲಿ ಕಾಣಿಸಿಕೊಂಡರೆ, ವಿದ್ಯಾಶ್ರಿ ಅದಕ್ಕೆ ವಿರುದ್ಧವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಶಿವ ನಾಯ್ಡು ಛಾಯಾಗ್ರಹಣವಿದೆ.
– ರವಿಪ್ರಕಾಶ್ ರೈ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಿಂದೂಗಳು ಒಂದಾಗುವುದೇ ಎಲ್ಲದಕ್ಕೂ ಉತ್ತರ: ಡಾ| ಕಲ್ಲಡ್ಕ ಪ್ರಭಾಕರ್ ಭಟ್

ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಬಿಜೆಪಿ ತೊರೆದು ಜೆಡಿಎಸ್ ಸೇರಿದ ಚಳ್ಳಕೆರೆ ಮಾಜಿ ಶಾಸಕ

ಕಾಶ್ಮೀರ ಕುರಿತ ಹೇಳಿಕೆ; ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ವಿವೇಕ್ ಅಗ್ನಿಹೋತ್ರಿ

ಬಳ್ಳಾರಿಯಲ್ಲಿ ದೇವರಿಗಾಗಿ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ!!