Ardhambardha Premakathe; ಹೊಸ ಜನರೇಶನ್ ನ ಪ್ರೇಮ್ ಕಹಾನಿ…


Team Udayavani, Dec 1, 2023, 10:34 AM IST

ardhambardha premakathe

ಕಿರುತೆರೆಯ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಜನಪ್ರಿಯ ಜೋಡಿಯಾಗಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ದಿವ್ಯಾ ಉರುಡುಗ ಮತ್ತು ಅರವಿಂದ್‌ ಜೋಡಿ ಈಗ ತೆರೆಮೇಲೂ ಒಟ್ಟಿಗೆ ಬರುತ್ತಿದ್ದಾರೆ. ಹೌದು, ದಿವ್ಯಾ-ಅರವಿಂದ್‌ ಜೋಡಿಯ ಹೊಸ ಸಿನಿಮಾ “ಅರ್ಧಂಬರ್ಧ ಪ್ರೇಮಕಥೆ’ ಇಂದು ತೆರೆಗೆ ಬರುತ್ತಿದೆ. ಇದೇ ವೇಳೆ ಮಾತಿಗೆ ಸಿಕ್ಕ ದಿವ್ಯಾ ಉರುಡುಗ ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ

ನಿಮ್ಮ ಪ್ರಕಾರ “ಅರ್ಧಂಬರ್ಧ ಪ್ರೇಮಕಥೆ’ ಅಂದ್ರೇನು?

ಇದು ಇಂದಿನ ಜನರೇಶನ್‌ ಸಿನಿಮಾ. ಇವತ್ತು ಸಂಬಂಧಗಳು ತುಂಬ ಫಾಸ್ಟ್‌ ಆಗಿ ಬೆಸೆದುಕೊಳ್ಳುತ್ತದೆ, ಅಷ್ಟೇ ಫಾಸ್ಟ್‌ ಆಗಿ ಕಡಿದುಕೊಳ್ಳುತ್ತದೆ. ಅದೇ ವಿಷಯವನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇಲ್ಲಿ ಲವ್‌, ರೊಮ್ಯಾನ್ಸ್‌, ಜರ್ನಿ, ಇಂದಿನ ಜನರೇಶನ್‌ ನಲ್ಲಿರುವ ತಳಮಳ, ಗೊಂದಲ ಎಲ್ಲದರ ಚಿತ್ರಣವಿದೆ. ಇಲ್ಲಿ ಯಾವುದೂ ಕಂಪ್ಲೀಟ್‌ ಅನಿಸುವುದಿಲ್ಲ. ಹಾಗಾಗಿ ಇದು ಇಂದಿನ ಜನರೇಶನ್‌ನ ನಾಟುವಂಥ “ಅರ್ಧಂಬರ್ಧ ಪ್ರೇಮಕಥೆ’

 ಈ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?

“ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದಲ್ಲಿ ನನ್ನದು ತುಂಬ ಟಿಪಿಕಲ್‌ ಆಗಿರುವಂಥ ಪಾತ್ರ. ದರಲ್ಲಿ ನಾನು ಸಣ್ಣ ಸಣ್ಣ ವಿಷಯವನ್ನೂ ದೊಡ್ಡದು ಮಾಡುವಂಥ, ಸಣ್ಣ ಸಮಸ್ಯೆಗಳನ್ನೂ ದೊಡ್ಡದಾಗಿ ನೋಡುವಂಥ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನಮ್ಮ ಸುತ್ತಮುತ್ತ ಆಗಾಗ್ಗೆ ನೋಡುವಂಥ, ನೋಡಿದವರಿಗೆ “ಈ ಹುಡುಗಿ ಜೊತೆ ಕಷ್ಟ..’ ಎನಿಸುವಂಥ ಪಾತ್ರ ನನ್ನದು.

ಸಿನಿಮಾದಲ್ಲಿ ನಿಮ್ಮ ಹಾಗೂ ಅರವಿಂದ್‌ ಕೆಮಿಸ್ಟ್ರಿ ಬಗ್ಗೆ ಏನಂತೀರಾ?

“ಬಿಗ್‌ಬಾಸ್‌’ ನಲ್ಲಿ ನನ್ನ ಮತ್ತು ಅರವಿಂದ್‌ ಅವರ ಪರ್ಫಾರ್ಮೆನ್ಸ್‌ ಬಗ್ಗೆ ಬಹುತೇಕರು ನೋಡಿರುತ್ತಾರೆ. ಈ ಸಿನಿಮಾದ ವಿಷಯಕ್ಕೆ ಬಂದಾಗ ನಮ್ಮಿಬ್ಬರ ಕೆಮಿಸ್ಟ್ರಿ ಸ್ಕ್ರೀನ್‌ ಮೇಲೆ ಬೇರೆ ಥರದಲ್ಲೇ ಕಾಣುತ್ತದೆ. ನಮ್ಮಿಬ್ಬರ ನಡುವೆ ಇರುವ ಕೆಮಿಸ್ಟ್ರಿಯನ್ನು ಇನ್ನಷ್ಟು ಬಿಲ್ಡ್‌ ಮಾಡಿ ನಿರ್ದೇಶಕ ಅರವಿಂದ್‌ ಕೌಶಿಕ್‌ ಹೊಸ ರೀತಿಯಲ್ಲಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಒಳ್ಳೆಯ ಪಾತ್ರ ಮತ್ತು ಸಿನಿಮಾದ ನಾವಿಬ್ಬರೂ ಆಡಿಯನ್ಸ್‌ ಮುಂದೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಖಂಡಿತವಾಗಿಯೂ ನೋಡಿದವರಿಗೆ, ನಮ್ಮಿಬ್ಬರ ಪಾತ್ರಗಳು, ಕೆಮಿಸ್ಟ್ರಿ ಎರಡೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ.

 “ಅರ್ಧಂಬರ್ಧ ಪ್ರೇಮಕಥೆ’ ಚಿತ್ರೀಕರಣ ಅನುಭವ ಹೇಗಿತ್ತು?

ನನ್ನನ್ನು “ಹುಲಿರಾಯ’ ಸಿನಿಮಾದ ಮೂಲಕ ನಿರ್ದೇಶಕ ಅರವಿಂದ್‌ ಕೌಶಿಕ್‌ ಅವರೇ ಬಿಗ್‌ ಸ್ಕ್ರೀನ್‌ಗೆ ಪರಿಚಯಿಸಿದ್ದರು. ಈಗ ಎರಡನೇ ಬಾರಿಗೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಈ ಸಿನಿಮಾದಲ್ಲಿ ಸಿಕ್ಕಿದೆ. ಈ ಹಿಂದೆ “ಹುಲಿರಾಯ’ ಸಿನಿಮಾದಲ್ಲಿ ಕೆಲಸ ಮಾಡಿದ್ದ ಬಹುತೇಕರ ಜೊತೆ ಈ ಸಿನಿಮಾದಲ್ಲೂ ಕೆಲಸ ಮಾಡಿದ್ದಾರೆ. ಹಾಗಾಗಿ ಎಲ್ಲರೂ ಎಲ್ಲರೂ ಪರಿಚಿತರಾಗಿದ್ದರು. ಒಂದು ಫ್ಯಾಮಿಲಿ ವಾತಾವರಣದಲ್ಲಿ ಇಡೀ ಸಿನಿಮಾ ಮುಗಿಸಿದ್ದೆವು. ಎಲ್ಲರೂ ಅವರವರ ಕೆಲಸವನ್ನು ತುಂಬಾ ಚೆನ್ನಾಗಿ “ದಿ ಬೆಸ್ಟ್‌’ ಎನ್ನುವಂತೆ ಮಾಡಿದ್ದಾರೆ.

“ಅರ್ಧಂಬರ್ಧ ಪ್ರೇಮಕಥೆ’ ಯ ಮೇಲೆ ನಿಮ್ಮ ನಿರೀಕ್ಷೆ ಎಷ್ಟಿದೆ?

ಪ್ರತಿ ಬಾರಿ ಸಿನಿಮಾ ರಿಲೀಸ್‌ ಆಗೂವಾಗಲೂ ಒಂದು ಎಕ್ಸೆ„ಟ್‌ಮೆಂಟ್‌ ಇದ್ದೇ ಇರುತ್ತದೆ. ಅಂಥದ್ದೇ ಎಕ್ಸೆ„ಟ್‌ ಮೆಂಟ್‌ “ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದ ಮೇಲೂ ಇದೆ. ಸಿನಿಮಾ ನೋಡಿದವರಿಗೆ ಕಣ್ಣು ತಂಪಾಗುತ್ತದೆ, ಮನಸ್ಸು ಹಗುರಾಗುತ್ತದೆ ಎಂಬುದು ನನ್ನ ಭಾವನೆ. ಪ್ರಮೋಶನ್ಸ್‌ ವೇಳೆ ಸಿನಿಮಾಕ್ಕೆ ಆಡಿಯನ್ಸ್‌ ಕಡೆಯಿಂದ ನಮ್ಮ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್‌ ಸಿಗುತ್ತಿದೆ. ಜನ ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಒಳ್ಳೆಯ ಸಪೋರ್ಟ್‌ ಸಿಗುತ್ತಿದೆ. “ಅರ್ಧಂಬರ್ಧ ಪ್ರೇಮಕಥೆ’ ಆಡಿಯನ್ಸ್‌ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.