ಕಿನಾರೆಯಲ್ಲಿ ಕರಾವಳಿ ಬ್ಯೂಟಿ
Team Udayavani, Oct 6, 2017, 11:03 AM IST
“ಕಿನಾರೆ’ ಎಂಬ ಚಿತ್ರ ಆರಂಭವಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರತಂಡ ಚಿತ್ರದ ಒಂದು ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿದೆ.
ದೇವರಾಜ್ ಪೂಜಾರಿ ಈ ಚಿತ್ರದ ನಿರ್ದೇಶಕರು. ಅಷ್ಟಕ್ಕೂ “ಕಿನಾರೆ’ಯಲ್ಲಿ ಏನು ಹೇಳಲು ಹೊರಟಿದ್ದಾರೆಂದರೆ ಕರಾವಳಿ ಬ್ಯೂಟಿ ಎಂಬ ಉತ್ತರ ಬರುತ್ತದೆ. “ಸಾಮಾನ್ಯವಾಗಿ ಕರಾವಳಿ ಬ್ಯೂಟಿ ಎಂದಾಗ ಜನ ಕೇರಳದ ಬಗ್ಗೆ ಜನ ಮಾತನಾಡುತ್ತಾರೆ. ಆದರೆ, ಮಂಗಳೂರು, ಕುಂದಾಪುರ, ಉಡುಪಿ ಸೇರಿದಂತೆ ಇಲ್ಲಿ ಕರವಾಳಿ ಭಾಗ ಕೂಡಾ ಅದ್ಭುತ ಪ್ರಕೃತಿ ಸೊಬಗಿನಿಂದ ಕೂಡಿದೆ ಎಂಬ ಅಂಶವನ್ನು ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದೇನೆ. ಹಾಗಾಗಿ,
ಇಲ್ಲಿ ಕರಾವಳಿಯ ಸೊಬಗು, ಅಲ್ಲಿನ ಆಚಾರ-ವಿಚಾರದ ಜೊತೆಗೆ ಪ್ರಕೃತಿಯ ಸೌಂದರ್ಯ ಕೂಡಾ ಅನಾವರಣಗೊಳ್ಳಲಿದೆ’ ಎಂಬುದು ದೇವರಾಜ್ ಅವರ ಮಾತು. ಹಾಗಾದರೆ “ಕಿನಾರೆ’ಯಲ್ಲಿ ಪ್ರಕೃತಿ
ಸೌಂದರ್ಯ ಬಿಟ್ಟು ಇನ್ನೇನಿದೆ ಎಂದು ನೀವು ಕೇಳಿದರೆ ಅಲ್ಲೊಂದು ಲವ್ಸ್ಟೋರಿಯೂ ಸಿಗುತ್ತದೆ. ಈ ಚಿತ್ರದಲ್ಲಿ ವಿಭಿನ್ನವಾದ ಒಂದು ಲವ್ಸ್ಟೋರಿಯೂ ಇದೆಯಂತೆ. ಇಡೀ ಸಿನಿಮಾ ಬೇರೆ ರೀತಿ ಮೂಡಿಬಂದಿರೋದರಿಂದ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ದೇವರಾಜ್ ಅವರಿಗಿದೆ.
ಈ ಚಿತ್ರದಲ್ಲಿ ಸತೀಶ್ ರಾಜ್ ನಾಯಕರಾಗಿ ನಟಿಸಿದ್ದಾರೆ. ನಿರ್ದೇಶಕ ದೇವರಾಜ್ ಅವರ ಕೆಲಸಕ್ಕೆ ಅವರು μದಾ ಆಗಿದ್ದಾರೆ. ಅದು ಎಷ್ಟರ ಮಟ್ಟಿಗೆಂದರೆ ನಿರ್ದೇಶಕರ ಭವಿಷ್ಯ ನುಡಿಯುವ ಮಟ್ಟಿಗೆ. “ಮುಂದೊಂದು ದಿನ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ಗಳ ಲಿಸ್ಟ್ನಲ್ಲಿ ನಮ್ಮ ನಿರ್ದೇಶಕರು ಕೂಡಾ ಇರುತ್ತಾರೆ. ಅವರಿಗೆ ಆ ಸಾಮರ್ಥ್ಯವಿದೆ’ ಎಂದು ನಿರ್ದೇಶಕರ ಬಗ್ಗೆ ಮಾತನಾಡಿದರು ಸತೀಶ್. ಉಳಿದಂತೆ ಅವರ ಮಾತು ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳುವುದಕ್ಕೆ ಮೀಸಲಾಗಿತ್ತು. ಚಿತ್ರದಲ್ಲಿ ಗೌತಮಿ ಜಾಧವ್ ನಾಯಕಿ. ವಿಭಿನ್ನ ಕಥೆ ಹಾಗೂ ಪಾತ್ರದಲ್ಲಿ ನಟಿಸಿದ ಖುಷಿ ಹಂಚಿಕೊಂಡರು ಪೂರ್ಣಿಮಾ. ಚಿತ್ರದಲ್ಲಿ ವಿಲನ್ ಆಗಿ ಶಮಂತ್ ಶೆಟ್ಟಿ ನಟಿಸಿದ್ದಾರೆ. ಇಷ್ಟು ದಿನ ಮನೀಶ್ ಶೆಟ್ಟಿಯಾಗಿದ್ದ ಅವರು ಈಗ ಶಮಂತ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ನೀಡಿದ್ದಾರೆ.
ಚಿತ್ರದಲ್ಲಿ ಆರು ಹಾಡುಗಳಿದ್ದು, ಹೊಸ ಬಗೆಯಿಂದ ಕೂಡಿದೆ ಎಂಬುದು ಅವರ ಮಾತು. ಚಿತ್ರಕ್ಕೆ ಹಾಡು ಬರೆದ ವಿ.ನಾಗೇಂದ್ರ ಪ್ರಸಾದ್ಗೆ ನಿರ್ದೇಶಕರು ಕಥೆ ಹೇಳುವಾಗ, ತುಂಬಾ ಅನುಭವವಿರುವವರು ಮಾಡುವಂತಹ ಪಾತ್ರ ಎನಿಸಿತಂತೆ. ಆದರೆ, ಹೊಸಬರಾದರೂ ಚಿತ್ರಕ್ಕೆ ನ್ಯಾಯ ಒದಗಿಸಿರುವ ವಿಶ್ವಾಸ ಅವರಿಗಿದೆ. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ. ಕಥೆಗೆ ಪೂರಕವಾದ ಛಾಯಾಗ್ರಹಣವಿದೆ ಎಂಬುದು ಅವರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ