ಲಾಕ್‌ಡೌನ್‌ ‘ಖುಷಿ’ಯಾಗಿದೆ. ಆದರೆ.. ರಿಲೀಸ್‌ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿ


Team Udayavani, Jun 18, 2021, 1:42 PM IST

kushee ravi

ಕಳೆದ ವರ್ಷದ ಆರಂಭದಲ್ಲಿ ತೆರೆಕಂಡ “ದಿಯಾ’ ಚಿತ್ರದ ಮೂಲಕ ಸಿನಿಪ್ರಿಯರ ದಿಲ್‌ ಗೆದ್ದ ನಟಿ ಖುಷಿ ರವಿ. “ದಿಯಾ’ ಬಳಿಕ ಒಂದರ ಹಿಂದೊಂದು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಯಶಸ್ವಿಯಾದ ಖುಷಿ ಕೈಯಲ್ಲಿ ಮೂರ್‍ನಾಲ್ಕು ಸಿನಿಮಾಗಳಿವೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಖುಷಿ ನಾಯಕಿಯಾಗಿ ಅಭಿನಯಿಸಿರುವ ಕನಿಷ್ಟ ಎರಡು ಸಿನಿಮಾಗಳಾದ್ರೂ ಬಿಡುಗಡೆಯಾಗಬೇಕಿತ್ತು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದ ಎಲ್ಲ ಕ್ಷೇತ್ರಗಳಂತೆ ಸಿನಿಮಾದಲ್ಲೂ ಲೆಕ್ಕಾಚಾರಗಳು ತಲೆಕೆಳಗಾಗಿ, ಥಿಯೇಟರ್‌ಗಳು ಬಂದ್‌ ಆಗಿರುವುದರಿಂದ, ಸದ್ಯ ಖುಷಿ ಅಭಿನಯದ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಎದುರು ನೋಡುತ್ತಿವೆ.

ಇದೇ ವೇಳೆ ಮಾತಿಗೆ ಸಿಕ್ಕ ನಟಿ ಖುಷಿ ರವಿ, “”ದಿಯಾ’ ಸಿನಿಮಾ ಆದಮೇಲೆ ಒಳ್ಳೆಯ ಪ್ರಾಜೆಕ್ಟ್ಗಳು ಸಿಕ್ಕಿವೆ. ಎಲ್ಲವೂ ಕೂಡ ಒಂದಕ್ಕಿಂತ ಒಂದು ಡಿಫ‌ರೆಂಟ್‌ ಆಗಿದೆ. ಲಾಕ್‌ಡೌನ್‌ ಇಲ್ಲದೆ ಥಿಯೇಟರ್‌ಗಳು ಓಪನ್‌ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಕನಿಷ್ಟ ಅವುಗಳಲ್ಲಿ ಒಂದೆರಡು ಸಿನಿಮಾಗಳಾದ್ರೂ ರಿಲೀಸ್‌ ಆಗಿರುತ್ತಿದ್ದವು. ಸದ್ಯಕ್ಕೆ ಕೋವಿಡ್‌ ಭಯದಿಂದ ಥಿಯೇಟರ್‌ಗಳು ಬಂದ್‌ ಆಗಿರೋದ್ರಿಂದ, ಅವು ಮತ್ತೆ ಯಾವಾಗ ರೀ-ಓಪನ್‌ ಆಗುತ್ತವೆಯೋ, ನಮ್ಮ ಸಿನಿಮಾಗಳು ಯಾವಾಗ ರಿಲೀಸ್‌ ಆಗುತ್ತದೆಯೋ ಗೊತ್ತಿಲ್ಲ. ನಾನು ಕೂಡ ಅದನ್ನೇ ಕಾಯುತ್ತಿದ್ದೇನೆ’ ಎನ್ನುತ್ತಾರೆ.

“ಕಳೆದ ಮೂರ್‍ನಾಲ್ಕು ವರ್ಷದಿಂದ ಸಿನಿಮಾಗಳಲ್ಲಿ ಹೆಚ್ಚು ಬಿಝಿಯಾಗಿದ್ದರಿಂದ, ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ನನ್ನ ಮಗಳು, ಗಂಡ ಹೀಗೆ ಫ್ಯಾಮಿಲಿಯಲ್ಲಿ ಎಲ್ಲರನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಆದ್ರೆ ಈ ಲಾಕ್‌ಡೌನ್‌ನಿಂದ ಸಿನಿಮಾ ಶೂಟಿಂಗ್‌ ಸೇರಿದಂತೆ ಬೇರೇನೂ ಆ್ಯಕ್ಟಿವಿಟಿಸ್‌ ಇಲ್ಲದಿದ್ದರಿಂದ, ಕಂಪ್ಲೀಟ್‌ ಮನೆಯಲ್ಲೇ ಲಾಕ್‌ ಆಗಬೇಕಾಯ್ತು. ಹೀಗಾಗಿ ಮನೆಯಲ್ಲಿ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯೋದಕ್ಕೆ ಅನುಕೂಲವಾಯ್ತು. ಆ ಮಟ್ಟಿಗೆ ಲಾಕ್‌ ಡೌನ್‌ನಿಂದ “ಖುಷಿ’ಯಾಗಿದೆ’ ಎನ್ನುತ್ತಾರೆ ಖುಷಿ.

“ಕೋವಿಡ್‌ ಭಯ ಹೆಚ್ಚಾಗಿದ್ದರಿಂದ, ಲಾಕ್‌ಡೌನ್‌ನಲ್ಲಿ ಎಲ್ಲರೂ ಅನಿವಾರ್ಯವಾಗಿ ಮನೆಯಲ್ಲಿರದೆ ಬೇರೆ ದಾರಿಯಿರಲಿಲ್ಲ. ಆದರೆ ನನ್ನ ಕೆಲಸ ಮತ್ತು ವೃತ್ತಿಯ ವಿಷಯಕ್ಕೆ ಬಂದಾಗ ಲಾಕ್‌ಡೌನ್‌ ಅಥವಾ ಮತ್ತಿತರ ಯಾವುದೋ ಕಾರಣಗಳಿಂದ ನಾನು ಮನೆಯಲ್ಲಿ ಹೆಚ್ಚು ಸಮಯ ಕುಳಿತುಕೊಂಡಿರಲು ಸಾಧ್ಯವಿಲ್ಲ. ಹಾಗಾಗಿ ಆದಷ್ಟು ಬೇಗ ಕೋವಿಡ್‌ ಭಯ ದೂರವಾಗಿ, ಲಾಕ್‌ಡೌನ್‌ ಕ್ಲಿಯರ್‌ ಆಗಲಿ. ಮೊದಲಿನಂತೆ ನಮ್ಮ ಕೆಲಸಗಳು ಶುರುವಾಗಲಿ ಎಂದು ಬಯಸುತ್ತೇನೆ’ ಎನ್ನುತ್ತಾರೆ ಖುಷಿ.

ಸದ್ಯ ಖುಷಿ ರವಿ ಅಭಿನಯದ “ನಕ್ಷೆ’, “ಸ್ಫೂಕಿ ಕಾಲೇಜ್‌’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದು, ಥಿಯೇಟರ್‌ ಗಳು ಓಪನ್‌ ಆಗುತ್ತಿದ್ದಂತೆ ರಿಲೀಸ್‌ ಆಗುವ ಯೋಚನೆಯಲ್ಲಿವೆ. ಇದರ ನಡುವೆ ಇನ್ನೂ ಪೃಥ್ವಿ ಅಂಬಾರ್‌ ನಾಯಕನಾಗಿರುವ ಹೊಸ ಚಿತ್ರದಲ್ಲೂ ಖುಷಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಲಾಕ್‌ಡೌನ್‌ ತೆರೆವಾಗುತ್ತಿದ್ದಂತೆ ಆ ಸಿನಿಮಾದ ಶೂಟಿಂಗ್‌ ಶುರುವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಖುಷಿ.

ಇನ್ನು ಈ ಲಾಕ್‌ಡೌನ್‌ನಲ್ಲಿ ಒಂದಷ್ಟು ಒಳ್ಳೆಯ ಸ್ಕ್ರಿಪ್ಟ್ ಕೇಳಿರುವ ಖುಷಿ, ಅದರಲ್ಲಿ ಕೆಲವೊಂದನ್ನು ಒಪ್ಪಿಕೊಂಡಿದ್ದು, ಆ ಸಿನಿಮಾಗಳು ಕೂಡ ಶೀಘ್ರದಲ್ಲಿಯೇ ಅನೌನ್ಸ್‌ ಆಗಬಹುದು ಎನ್ನುವ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.