ಹಾಫ್ ಸೆಂಚುರಿ; ಚಂದನವನದಲ್ಲಿ ನಾಲ್ಕು ತಿಂಗಳು ಭರ್ಜರಿ ಫ‌ಸಲು


Team Udayavani, Apr 22, 2022, 1:22 PM IST

vಹಾಫ್ ಸೆಂಚುರಿ; ಚಂದನವನದಲ್ಲಿ ನಾಲ್ಕು ತಿಂಗಳು ಭರ್ಜರಿ ಫ‌ಸಲು

ನಾಲ್ಕು ತಿಂಗಳು 50 ಪ್ಲಸ್‌ ಸಿನಿಮಾ.. – ಈ ಸಂಖ್ಯೆ ಕನ್ನಡ ಚಿತ್ರರಂಗಕ್ಕೆ ಭರವಸೆಯ ಸಂಕೇತದಂತೆ ಕಂಡರೆ ಅದರಲ್ಲಿ ತಪ್ಪಿಲ್ಲ. ಅದಕ್ಕೆ ಕಾರಣ ಈ ಹಿಂದಿನ ಎರಡು ವರ್ಷಗಳಲ್ಲಿ ಅನುಭವಿಸಿದ ಕಷ್ಟ-ನಷ್ಟ. 2022ರಲ್ಲಿ ಯಾವ ತೊಂದರೆಯೂ ಬಾರದಿರಲಿ ಎನ್ನುತ್ತಲೇ ಕನ್ನಡ ಚಿತ್ರರಂಗ ಚೇತರಿಕೆಯತ್ತ ಮುಖ ಮಾಡಿದೆ.

ಹೌದು, 2022ರಲ್ಲಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಈ ನಾಲ್ಕು ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಸಿಗುವುದು 50. ಈ ವಾರ (ಏ.22) ಬಿಡುಗಡೆಯಾಗುತ್ತಿರುವ ಒಂದು ಸಿನಿಮಾ ಹಾಗೂ ಮುಂದಿನ ವಾರ (ಏ.29) ಬಿಡುಗಡೆಯಾಗುತ್ತಿರುವ ಸಿನಿಮಾಗಳನ್ನು ಸೇರಿಸಿದರೆ ಸಂಖ್ಯೆ 50 ದಾಟುತ್ತದೆ.

ಕೋವಿಡ್‌ನಿಂದಾಗಿ ಕಳೆದೆರಡು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತ ಕಂಡಿತ್ತು. ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಜಾಗದಲ್ಲಿ 2020-21ರಲ್ಲಿ 80-90 ಸಿನಿಮಾಗಳಷ್ಟೇ ಬಿಡುಗಡೆಯಾಗಿದ್ದವು. ಆದರೆ, ಈ ವರ್ಷ ಮತ್ತೆ ಸಿನಿಮಾ ಬಿಡುಗಡೆಯ ಸಂಖ್ಯೆಯಲಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಮೂಲಕ 2022ರಲ್ಲಿ ಕನ್ನಡ ಚಿತ್ರರಂಗ ಕಲರ್‌ಫ‌ುಲ್‌ ಆಗಿಯೇ ಸಾಗುವ ನಿರೀಕ್ಷೆ ಇದೆ. ನಾಲ್ಕು ತಿಂಗಳಲ್ಲೇ 50 ಸಿನಿಮಾಗಳು ಬಿಡುಗಡೆಯಾಗಿವೆ.

ಇದನ್ನೂ ಓದಿ:ಕೆಜಿಎಫ್ 2 ಅಬ್ಬರದ ನಡುವೆ ಥಿಯೇಟರ್‌ ನಲ್ಲಿ ‘ಗಂಡುಲಿ’ ಘರ್ಜನೆ

ವರ್ಷ ಪೂರ್ಣಗೊಳ್ಳಲು ಇನ್ನೂ ಎಂಟು ತಿಂಗಳಿದೆ. ತಿಂಗಳಿಗೆ ಕನಿಷ್ಠ 15 ಸಿನಿಮಾವೆಂದುಕೊಂಡರೂ ಮುಂದಿನ 8 ತಿಂಗಳಲ್ಲಿ 120 ಸಿನಿಮಾಗಳು ಬಿಡುಗಡೆಯಾಗಲಿವೆ. ಅಲ್ಲಿಗೆ ಈ ವರ್ಷ 170ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಗಂತ ತಿಂಗಳಲ್ಲಿ ಹದಿನೈದು ಸಿನಿಮಾ ಗಳಷ್ಟೇ ಬಿಡುಗಡೆಯಾಗುತ್ತವೆ ಎನ್ನುವಂತಿಲ್ಲ. ಏಕೆಂದರೆ, ಫೆಬ್ರವರಿ ತಿಂಗಳಲ್ಲೇ 21 ಸಿನಿಮಾಗಳು ಬಿಡುಗಡೆಯಾಗಿವೆ. ಇದೇ ರೀತಿ ಮುಂದೆ ಬಿಡುಗಡೆ ಸಂಖ್ಯೆಯಲಿ ಏರಿಕೆಯಾದರೆ ವರ್ಷಾಂತ್ಯಕ್ಕೆ ಬಿಡುಗಡೆ ಸಂಖ್ಯೆ 200 ದಾಟಿದರೂ ಅಚ್ಚರಿಯಿಲ್ಲ. ಹಾಗೆ ನೋಡಿದರೆ ಈ ವರ್ಷದ ಮೊದಲ ತಿಂಗಳು ಜನವರಿಯನ್ನು ಕೋವಿಡ್‌ ಮೂರನೇ ಅಲೆ ನುಂಗಿ ಹಾಕಿತ್ತು. ಜನವರಿಯಲ್ಲಿ ಬಿಡುಗಡೆಯಾಗಿದ್ದು ಕೇವಲ 3 ಚಿತ್ರ.

ಹೊಸಬರ ಮೆರವಣಿಗೆ: ಮುಂದಿನ ಎಂಟು ತಿಂಗಳಿನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದಕ್ಕೆ ಕಾರಣ ಸೆನ್ಸಾರ್‌ ಆಗಿ ಬಿಡುಗಡೆಗೆ ಕಾದು ಕುಳಿತಿರುವ ಸಿನಿಮಾಗಳು. ಕೋವಿಡ್‌ ಹಾಗೂ ಸ್ಟಾರ್‌ಗಳ ಸಿನಿಮಾ ಭಯದಿಂದ ಸೆನ್ಸಾರ್‌ ಆಗಿರುವ ಅನೇಕ ಸಿನಿಮಾಗಳು ಮೇ ನಂತರ ಬಿಡುಗಡೆಯಾಗಲಿವೆ. “ಆರ್‌ಆರ್‌ಆರ್‌’, “ಕೆಜಿಎಫ್-2′ ಎಂದು ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಾ ಬಂದ ಸಿನಿಮಾಗಳು ಈಗ ಬಿಡುಗಡೆಯಾಗಲಿವೆ. ಸ್ಟಾರ್‌ ಸಿನಿಮಾ ಬರುವ ವಾರದಲ್ಲಿ ರಿಲೀಸ್‌ ಸಂಖ್ಯೆ ಕಡಿಮೆಯಾಗಬಹುದೇ ಹೊರತು ಮಿಕ್ಕಂತೆ ಮುಂದಿನ ದಿನಗಳಲ್ಲಿ ಹೊಸಬರ ಮೆರವಣಿಗೆ ಜೋರಾಗಿಯೇ ಸಾಗಲಿದೆ.

ಭರವಸೆ ಮೂಡಿಸಿದ ವರ್ಷಾರಂಭ: ಕನ್ನಡ ಚಿತ್ರರಂಗಕ್ಕೆ ಈ ವರ್ಷಾರಂಭ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಬಿಡುಗಡೆಯಾದ ಎಲ್ಲಾ ಚಿತ್ರಗಳು ಗೆಲ್ಲದಿದ್ದರೂ ಗೆದ್ದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಿವೆ. “ಲವ್‌ ಮಾಕ್ಟೇಲ್‌-2′, “ಏಕ್‌ಲವ್ಯ’, “ಓಲ್ಡ್‌ ಮಾಂಕ್‌’, “ಜೇಮ್ಸ್‌’ … ಹೀಗೆ ಅನೇಕ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಇನ್ನು, ಇತ್ತೀಚೆಗೆ ಬಿಡುಗಡೆಯಾದ “ಕೆಜಿಎಫ್-2′ ಇಡೀ ವಿಶ್ವವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ. ಜೊತೆಗೆ ಮತ್ತಷ್ಟು ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ “ಕೆಜಿಎಫ್-2′ ದಾರಿ ಮಾಡಿಕೊಟ್ಟಿವೆ.

ಮತ್ತಷ್ಟು ಸಿನಿಮಾಗಳ ಮೇಲೆ ನಿರೀಕ್ಷೆ: ಈ ತಿಂಗಳಾಂತ್ಯದಿಂದ ಬಿಡುಗಡೆಯಾಗುತ್ತಿರುವ ಅನೇಕ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ. “ಶೋಕಿವಾಲ’, “ಅವತಾರ್‌ ಪುರುಷ’, “ಟಕ್ಕರ್‌’, “ತೋತಾಪುರಿ’, “ಕಸ್ತೂರಿ ಮಹಲ್‌’, “ಮೇಲೊಬ್ಬ ಮಾಯಾವಿ’, “ತೂತು ಮಡಿಕೆ’, “ಖಾಸಗಿ ಪುಟಗಳು’, “ಚೇಸ್‌’ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳು ನಾನಾ ಕಾರಣಗಳಿಗಾಗಿ ನಿರೀಕ್ಷೆ ಹುಟ್ಟಿಸಿವೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.