ಟ್ರೇಲರ್ ನಲ್ಲಿ ಸದ್ದು ಮಾಡುತ್ತಿದೆ ‘ಹೊಂದಿಸಿ ಬರೆಯಿರಿ’


Team Udayavani, Feb 3, 2023, 1:05 PM IST

hondisi bareyiri kannada movie

“ಹೊಂದಿಸಿ ಬರೆಯಿರಿ’ ಚಿತ್ರ ತನ್ನ ವಿಭಿನ್ನ ಶೀರ್ಷಿಕೆ, ಹಾಡು, ಟೀಸರ್‌ ಜೊತೆಯಲ್ಲಿ ಭಿನ್ನ ಪ್ರಚಾರದ ಮೂಲಕ ಎಲ್ಲಡೆ ಮನೆಮಾತಾಗಿರುವ ಚಿತ್ರ. ಚಿತ್ರ ಬಿಡುಗೆಡೆ ಸನಿಹದಲ್ಲಿರುವ ಚಿತ್ರತಂಡ ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿದೆ. ನಿರ್ಮಾಪಕಿ ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌ “ಹೊಂದಿಸಿ ಬರೆಯಿರಿ’ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ಮಾತನಾಡಿ, “ಹೊಂದಿಸಿ ಬರೆಯಿರಿ ಅಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬಾಲ್ಯ. ಆದರೆ, ನಮ್ಮ ಚಿತ್ರ ಪರಿಸ್ಥಿತಿ ಬಂದಂತೆ ಜೀವನವನ್ನು ಸ್ವೀಕರಿಸಿಕೊಂಡು ಹೋಗಬೇಕು ಎಂಬುದನ್ನು ತಿಳಿಸುತ್ತದೆ. ಅದಕ್ಕೆ ಬದುಕು ಬಂದಂತೆ ಸ್ವೀಕರಿಸಿ ಎನ್ನುವ ಟ್ಯಾಗ್‌ ಲೈನ್‌ ನೀಡಿದ್ದೇವೆ. ಇದು ಐದು ಜನ ಸ್ನೇಹಿತರ 12 ವರ್ಷದ ಜರ್ನಿ. ಕಾಲೇಜು, ಕಾಲೇಜು ನಂತರದ ದಿನಗಳು, ಮದುವೆ ಕಥೆಯಲ್ಲಿ ಚಿತ್ರ ಸಾಗಲಿದೆ’ ಎಂದರು.

ನಟ ಪ್ರವೀಣ್‌ ಮಾತನಾಡಿ,”ಈ ಸಿನಿಮಾದ ನಿಜವಾದ ನಾಯಕ ನಿರ್ದೇಶಕ ಜಗನ್ನಾಥ್‌ ಅಂದರೆ ತಪ್ಪಾಗಲಾರದು. ಚಿತ್ರ ತುಂಬ ಸುಂದರವಾಗಿ ಮೂಡಿ ಬಂದಿದೆ. ಬಹುತಾರಾಗಣದ ಈ ಚಿತ್ರದಲ್ಲಿ ಅಭಿನಯಿಸಿದ್ದು ಒಂದು ಉತ್ತಮ ಅನುಭವ. ಫೆ 10 ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಎಲ್ಲರ ಸಹಕಾರ ಇರಲಿ’ ಅಂದರು.

ನಟ ನವೀನ್‌ ಮಾತನಾಡಿ, “ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ಚಿತ್ರದ ಆಶಯ. ಹೊಂದಿಸಿ ಬರೆಯಿರಿ ಸ್ನೇಹದ ಸುತ್ತ, ಸಂಬಂಧಗಳ, ಬಾಂಧ್ಯವಗಳ ಸುತ್ತ ಸಾಗುತ್ತದೆ. ಇನ್ನು ಈ ಚಿತ್ರ ಕೇವಲ ಒಂದು ವರ್ಗಕ್ಕೆ ಸಲ್ಲುತ್ತದೆ ಎಂದು ಹೆಸರಿಸಲು ಸಾಧ್ಯವಿಲ್ಲ. ಎಲ್ಲಾ ವಯೋಮಾನದವರೂ ನೋಡಬಹುದಾದ ಲೈಟ್‌ ಹಾರ್ಟೆಡ್‌ ಚಿತ್ರ ಎನ್ನಬಹುದು’ ಎಂದರು.

ನಟಿ ಐಶಾನಿ ಶೆಟ್ಟಿ ಮಾತನಾಡಿ, “ಚಿತ್ರದಲ್ಲಿ ಸನಿಹಾ ಎಂಬ ಪಾತ್ರ ಮಾಡಿದ್ದೇನೆ. ಕಥೆ ಸುಂದರವಾಗಿದೆ, ಸಿನಿಮಾ ನೋಡಿದಾಗ ಪ್ರೇಕ್ಷಕರಿಗೆ ನಾವು ಕಾಣೋಲ್ಲ, ಬದಲಾಗಿ ಪಾತ್ರಗಳು ಕಾಣುತ್ತದೆ. ಎದೆ ತುಂಬಿ ಬರುತ್ತದೆ. ಎಲ್ಲ ಭಾವನೆಗಳು ಅನುಭವಕ್ಕೆ ಬರುತ್ತದೆ. ಹೊಂದಿಸಿ ಬರೆಯಿರಿ ಚಿತ್ರ ಫೀಲ್‌ಗ‌ುಡ್‌ ಸಿನಿಮಾವಾಗಿ ಮನಸ್ಸಿಗೆ ಹತ್ತಿರವಾಗುತ್ತದೆ’ ಎಂದರು,

ಚಿತ್ರದಲ್ಲಿ ಪ್ರವೀಣ್‌ ತೇಜ್, ನವೀನ್‌ ಶಂಕರ್‌, ಶ್ರೀ ಮಹಾದೇವ್‌, ಅನಿರುದ್ಧ ಆಚಾರ್ಯ ನಾಯಕಿಯ ರಾದ ಐಶಾನಿ ಶೆಟ್ಟಿ, ಸಂಯುಕ್ತಾ ಹೊರನಾಡು, ಭಾವನಾ ರಾವ್‌, ಅರ್ಚನಾ ಜೋಯಿಸ್‌, ಅರ್ಚನಾ ಕೊಟ್ಟಿಗೆ ಸೇರಿದಂತೆ ಅನೇಕರು ನಟಿಸಿದ್ದಾರೆ. ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶನದ ಚಿತ್ರಕ್ಕೆ ಜಗನ್ನಾಥ್‌ ಹಾಗೂ ಅವರ ಸ್ನೇಹಿತರ ಬಳಗದ “ಸಂಡೇ ಸಿನಿಮಾಸ್‌’ ಬ್ಯಾನರ್‌ನ ನಿರ್ಮಾಣವಿದೆ.

ವಾಣಿ ಭಟ್ಟ

ಟಾಪ್ ನ್ಯೂಸ್

6-desiswara

ನೆರಳಿನಾಸರೆಯಲ್ಲಿ….

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

1-sad-sadsad

ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್‌,6 ಜನ ಅರೆಸ್ಟ್

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

rani ram

ರಾಣಿ ರಾಂಪಾಲ್‌ರಿಂದ ಹಾಕಿ ಕ್ರೀಡಾಂಗಣ: ‘ರಾಣಿ ಗರ್ಲ್ಸ್‌ ಹಾಕಿ ಟರ್ಫ್‌ʼ ಎಂದು ಮರುನಾಮಕರಣ

ugadi

ಆಚರಣೆ ರೀತಿ ಬೇರೆಯಾದರೂ ಸಾರುವ ತಣ್ತೀ ಮಾತ್ರ ಒಂದೇ…



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Komal new film undenama

ಮತ್ತೆ ಪ್ರೇಕ್ಷಕರೆದುರು ಕೋಮಲ್; ಏ.14ಕ್ಕೆ ಉಂಡೆನಾಮ ಚಿತ್ರ ಬಿಡುಗಡೆ

TDY-6

ʼಉರಿಗೌಡ ಮತ್ತು ನಂಜೇಗೌಡʼ ಸಿನಿಮಾ ನಿರ್ಮಾಣ ಕೈಬಿಟ್ಟ ಸಚಿವ ಮುನಿರತ್ನ

TEQUILA movie

ಹಾಡಿ ಕುಣಿಯಲು ಟಕೀಲಾ ರೆಡಿ

ಪ್ರವೀಣ್ ಕುಮಾರ್ ‘ದೇಸಾಯಿ’ ಚಿತ್ರಕ್ಕೆ ಮುಹೂರ್ತ

ಪ್ರವೀಣ್ ಕುಮಾರ್ ‘ದೇಸಾಯಿ’ ಚಿತ್ರಕ್ಕೆ ಮುಹೂರ್ತ

ಏಪ್ರಿಲ್‌ 7ಕ್ಕೆ ಪೆಂಟಗನ್‌ ತೆರೆಗೆ; ಗುರುದೇಶಪಾಂಡೆ ನಿರ್ಮಾಣ

ಏಪ್ರಿಲ್‌ 7ಕ್ಕೆ ಪೆಂಟಗನ್‌ ತೆರೆಗೆ; ಗುರುದೇಶಪಾಂಡೆ ನಿರ್ಮಾಣ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

6-desiswara

ನೆರಳಿನಾಸರೆಯಲ್ಲಿ….

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

1-sad-sadsad

ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್‌,6 ಜನ ಅರೆಸ್ಟ್

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.