‘ಚೇರ್ಮನ್’ ಗಾದಿಗೆ ಹೊಸಬರ ಪೈಪೋಟಿ
Team Udayavani, Feb 24, 2023, 4:18 PM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ, ಅಪ್ಪಟ ಗ್ರಾಮೀಣ ಸೊಗಡಿನ ರಾಜಕೀಯ ಕಥಾಹಂದರ ಹೊಂದಿರುವ “ಚೇರ್ಮನ್’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. “ದಾಕ್ಷಾಯಿಣಿ ಬ್ಯಾನರ್’ ಅಡಿಯಲ್ಲಿ ಬಸವರಾಜ ಹಿರೇಮಠ “ಚೇರ್ಮನ್’ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.
ಇನ್ನು “ಚೇರ್ಮನ್’ ಸಿನಿಮಾದ ಹೆಸರೇ ಹೇಳುವಂತೆ, ಇದೊಂದು ಹಳ್ಳಿಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಮಾಡಲು ಯುವಕರು ಏನೆಲ್ಲ ಮಾಡುತ್ತಾರೆ. ಅವರಿಗೆ ಎದುರಾಗುವ ಸಮಸ್ಯೆ, ಸವಾಲುಗಳೇನು ಒಳ್ಳೆಯ “ಚೇರ್ಮನ್’ ಹೇಗಿರುತ್ತಾನೆ ಎಂಬುದರ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ರಾಜಕೀಯಕ್ಕೆ ಯುವಕರನ್ನು ಸೆಳೆಯುವ ವಿಷಯ ಹೊಂದಿರುವ ಈ ಸಿನಿಮಾದಲ್ಲಿ ಹಳ್ಳಿಯ ಯುವಕರ ಪ್ರೀತಿ-ಸ್ನೇಹ ಎಲ್ಲದರ ಅನಾವರಣವಾಗಲಿದೆ ಎಂಬುದು ಚಿತ್ರತಂಡದ ಮಾತು.
ನವ ಪ್ರತಿಭೆ ಮನು ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದು, ರಾಧಾ ಮತ್ತು ಹರ್ಷಲಾ ಹನಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬಲರಾಜವಾಡಿ, ಶಂಕರ್ ಪಾಟೀಲ್, ಶಿವಕುಮಾರ್ ಆರಾಧ್ಯ, ಗವಿ ವಸ್ತ್ರದ್, ಪ್ರೇಮಲತಾ, ಆಶಾ ನಾಯಕ್, ಮುತ್ತುರಾಜ್, ಸಿದ್ದು ನಾಲತವಾಡ, ಲಿಖೀತೇಶ್, ಅಲ್ಲಾಭಕ್ಷ, ಶಶಿ, ಬದ್ರಿನಾರಾಯಣ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ