2022 ಸ್ಟಾರ್ ಧಮಾಕಾ! ಮುಂಚೂಣಿ ನಟರ ದರ್ಶನ ಭಾಗ್ಯ


Team Udayavani, Jul 22, 2022, 12:53 PM IST

2022 ಸ್ಟಾರ್ ಧಮಾಕಾ! ಮುಂಚೂಣಿ ನಟರ ದರ್ಶನ ಭಾಗ್ಯ

ಒಂದು ಕಡೆ ಸ್ಟಾರ್‌ ಸಿನಿಮಾ, ಮತ್ತೂಂದು ಕಡೆ ಹೊಸಬರ ಸಿನಿಮಾ, ಸೋಲು -ಗೆಲುವು, ಲಾಭ-ನಷ್ಟ… ಈ ಲೆಕ್ಕಾಚಾರದಲ್ಲೇ 2022ರ ಏಳು ತಿಂಗಳು ಮುಗಿಯುತ್ತಾ ಬಂದಿದೆ. ಹಾಗಂತ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆಯಲ್ಲೇನೂ ಕಡಿಮೆಯಾಗಿಲ್ಲ. ವಾರವಾರ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಲೇ ಇವೆ. ಇದು ಈ ವರ್ಷದ ವಿಶೇಷ ಕೂಡಾ. ಈ ವರ್ಷ ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತೂಂದು ಅಂಶವೆಂದರೆ ಸ್ಟಾರ್‌ಗಳ ಸಿನಿಮಾ.  ಈ ವರ್ಷ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್‌ಗಳು ಕೂಡಾ ತೆರೆಮೇಲೆ ದರ್ಶನ ಕೊಡುತ್ತಿದ್ದಾರೆ.

ಒಂದಷ್ಟು ಸ್ಟಾರ್‌ಗಳ ಈ ಸಿನಿಮಾ ಈ ಏಳು ತಿಂಗಳಲ್ಲಿ ಬಿಡುಗಡೆಯಾದರೆ ಇನ್ನು ಉಳಿದ ಸ್ಟಾರ್‌ ನಟರ ಚಿತ್ರಗಳು ಮುಂದಿನ ಐದು ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು 2022ರ ಸಿನಿ ವಿಶೇಷಗಳಲ್ಲಿ ಒಂದು. ಈ ಹಿಂದಿನ ಕೆಲವು ವರ್ಷಗಳನ್ನು ಗಮನಿಸಿದರೆ ಅನೇಕ ಸ್ಟಾರ್‌ಗಳ ಸಿನಿಮಾ ಆ ವರ್ಷದಲ್ಲಿ ಬಿಡುಗಡೆಯಾಗಿಲ್ಲ. ಈ ಮೂಲಕ ಅವರ ಅಭಿಮಾನಿಗಳು ಕೂಡಾ “ನಮ್ಮ ಬಾಸ್‌ ಸಿನಿಮಾ ಈ ವರ್ಷ ಬರಲೇ ಇಲ್ಲ’ ಎಂದು ಬೇಸರ ಮಾಡಿಕೊಂಡಿದ್ದೂ ಇದೆ. ಆದರೆ, 2022ರಲ್ಲಿ ಆ ಬೇಸರಕ್ಕೆ ಅವಕಾಶವೇ ಇಲ್ಲ. ಎಲ್ಲಾ ಸ್ಟಾರ್‌ ನಟರ ಚಿತ್ರಗಳು ಈ ವರ್ಷ ತೆರೆಮೇಲೆ ಬರುತ್ತಿದೆ.

2022ರಲ್ಲಿ ತೆರೆಗೆ ಬಂದ ಹಾಗೂ ಬರುತ್ತಿರುವ ಸ್ಟಾರ್‌ ಸಿನಿಮಾಗಳ ಕುರಿತು ಲೆಕ್ಕ ಹಾಕುತ್ತಾ ಹೋದರೆ ನಿಮಗೆ ಅಲ್ಲಿ “ಸ್ಟಾರ್‌ ಜಾತ್ರೆ’ ಕಣ್ಮುಂದೆ ಬರುತ್ತದೆ. ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಸುದೀಪ್‌, ದರ್ಶನ್‌, ವಿಜಯ್‌, ಧ್ರುವ, ಗಣೇಶ್‌, ರಕ್ಷಿತ್‌ ಶೆಟ್ಟಿ, ಉಪೇಂದ್ರ, ರವಿಚಂದ್ರನ್‌, ಜಗ್ಗೇಶ್‌, ರಿಷಭ್‌, ಧನಂಜಯ್‌, ಕೃಷ್ಣ … ಇವರೆಲ್ಲರೂ ಈ ವರ್ಷ ತೆರೆಮೇಲೆ ದರ್ಶನ ನೀಡಿದ್ದಾರೆ, ನೀಡಲಿದ್ದಾರೆ.

ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಪುನೀತ್‌ರಾಜ್‌ಕುಮಾರ್‌ ನಟನೆಯ “ಜೇಮ್ಸ್‌’ ಚಿತ್ರ ಮಾರ್ಚ್‌ನಲ್ಲಿ ತೆರೆಕಂಡಿದ್ದು, ಈಗ ಅವರ ಕನಸಿನ “ಗಂಧದ ಗುಡಿ’ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. ಇದರ ಜೊತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ “ಲಕ್ಕಿಮ್ಯಾನ್‌’ ಆಗಸ್ಟ್‌ನಲ್ಲಿ ತೆರೆಕಾಣಲಿದೆ.

ಶಿವರಾಜ್‌ಕುಮಾರ್‌ ಅವರ “ಬೈರಾಗಿ’ ಚಿತ್ರ ಈಗಾಗಲೇ ತೆರೆಕಂಡಿದ್ದು, ಅವರದ್ದೇ ನಿರ್ಮಾಣದ “ವೇದಾ’ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಅಲ್ಲಿಗೆ ಈ ವರ್ಷ ಶಿವಣ್ಣ ನಟನೆಯ ಎರಡು ಸಿನಿಮಾ ತೆರೆಕಂಡಂತಾಗುತ್ತದೆ. ಇನ್ನು, ಸುದೀಪ್‌ ಅವರ “ವಿಕ್ರಾಂತ್‌ ರೋಣ’ ಜು.28ಕ್ಕೆ ತೆರೆಕಂಡರೆ, ದರ್ಶನ್‌ ನಟನೆಯ “ಕ್ರಾಂತಿ’ ಕೂಡಾ ಈ ವರ್ಷವೇ ತೆರೆಗೆ ಬರಲಿದ್ದ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿವೆ.

ಇದನ್ನೂ ಓದಿ:ಗುಮ್ಮ ಬಂದ ಗುಮ್ಮ! ‘ವಿಕ್ರಾಂತ್‌ ರೋಣ’ ಮತ್ತೊಂದು ಹಾಡು ಬಂತು

ದುನಿಯಾ ವಿಜಯ್‌ ನಟನೆಯ “ಭೀಮ’ ಚಿತ್ರದ ಚಿತ್ರೀಕರಣ ಜೋರಾಗಿ ಸಾಗುತ್ತಿದ್ದು, ಈ ವರ್ಷಾಂತ್ಯಕ್ಕೆ ತೆರೆಗೆ ಬಂದರೆ, ಧ್ರುವ ನಟನೆಯ “ಮಾರ್ಟಿನ್‌’, ಗಣೇಶ್‌ ನಟನೆಯ “ಗಾಳಿಪಟ-2′, ರಕ್ಷಿತ್‌ ಶೆಟ್ಟಿ “ಸಪ್ತಸಾಗರದಾಚೆ ಎಲ್ಲೋ’ ಚಿತ್ರಗಳು ಈಗಾಗಲೇ ಬಿಡುಗಡೆಯ ತಯಾರಿ ಮಾಡಿಕೊಂಡಿವೆ. ಇನ್ನು, ಉಪೇಂದ್ರ ನಟನೆಯ “ಕಬ್ಜ’ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ತೊಡಗಿದ್ದು, ಈ ವರ್ಷವೇ ತೆರೆಗೆ ಬರಲಿದೆ. ಇದರ ಜೊತೆಗೆ ರವಿಚಂದ್ರನ್‌ ನಟನೆ, ನಿರ್ದೇಶನದ “ರವಿ ಬೋಪಣ್ಣ’, ಜಗ್ಗೇಶ್‌ ನಾಯಕರಾಗಿರುವ “ತೋತಾಪುರಿ’, “ರಾಘವೇಂದ್ರ ಸ್ಟೋರ್’, ರಿಷಭ್‌ “ಕಾಂತಾರ’, ಧನಂಜಯ್‌ “ಮಾನ್ಸೂನ್‌ ರಾಗ’, “ಜಮಾಲಿಗುಡ್ಡ’ ಚಿತ್ರಗಳು ತೆರೆಕಾಣಲಿವೆ.

ಇದು ಈ ವರ್ಷದ ಲೆಕ್ಕಾಚಾರವಾದರೆ ಮುಂದಿನ ವರ್ಷ ಅಂದರೆ 2023ರಲ್ಲಿ ಇದೇ ರೀತಿ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ತೆರೆಕಾಣುತ್ತವೆ ಎಂದು ಹೇಳುವಂತಿಲ್ಲ. ಏಕೆಂದರೆ ಅನೇಕ ಸ್ಟಾರ್‌ ನಟರ ಹೊಸ ಸಿನಿಮಾಗಳು ಇನ್ನೂ ಸೆಟ್ಟೇರಿಯೇ ಇಲ್ಲ.ಆದರೆ, ಈ ವರ್ಷ ಮಾತ್ರ ಕನ್ನಡ ಚಿತ್ರರಂಗ ಕಲರ್‌ಫ‌ುಲ್‌ ಆಗಿ ಸಾಗಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

 ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.