ಮಹಾನಗರದ ಪುಟ್ಟ ಗಲ್ಲಿಯಲ್ಲಿ ಸಾಂಸ್ಕೃತಿಕ ಅನುಸಂಧಾನ


Team Udayavani, Feb 3, 2019, 12:30 AM IST

x-3.jpg

ಜಯಂತ ಕಾಯ್ಕಿಣಿಯವರ ನೋ ಪ್ರಸೆಂಟ್ಸ್‌ ಪ್ಲೀಸ್‌ ಕಥಾಸಂಕಲನ ದಕ್ಷಿಣ ಏಷ್ಯಾ ಸಾಹಿತ್ಯ ವಲಯಕ್ಕೆ ಮೀಸಲಾದ ಅಂತಾರಾಷ್ಟ್ರೀಯ ಪ್ರತಿಷ್ಠೆಯ ಡಿಎಸ್‌ಸಿ ಪ್ರಶಸ್ತಿಗೆ ಭಾಜನವಾಗಿದೆ. ಅದನ್ನು ಅನುವಾದಿಸಿದ ತೇಜಸ್ವಿನಿ ನಿರಂಜನ ಅವರ ಹಿನ್ನುಡಿಯ ಆಯ್ದ ಭಾಗ ಇಲ್ಲಿದೆ…

ಈ ಕಥೆಗಳ ಅನುವಾದಕ್ಕೆ ಕೈಯಿಕ್ಕು ವುದೆಂದರೆ ತೀರ ಸಾಮಾನ್ಯನೊಬ್ಬನ ಬದುಕಿನಲ್ಲಿ ಇರಬಹುದಾದ ದೈನಂದಿನದ ಸಂಭ್ರಮದೊಂದಿಗೆ ನಾವೂ ಒಂದಾಗುವುದು. ಜಯಂತ್‌ ಇದರಲ್ಲಿ ಎತ್ತಿದ ಕೈ. ಇರಬಹುದಾದ ದೈನಂದಿನದ ಸಂಭ್ರಮ ಎಂದೆ, ಆದರೆ ನಾನದನ್ನು ಬೇರಾವುದೇ ಅರ್ಥದಲ್ಲಿ ಕಾಣುತ್ತಿಲ್ಲ. ಅದೊಂದು ನಿರೂಪಣೆಯ ತಂತ್ರಗಾರಿಕೆ ಎಂದಷ್ಟೇ ನೋಡುತ್ತೇನೆ. ಇಲ್ಲಿನ ಯಾವತ್ತೂ ಕತೆಗಳಿಗೆ ಈ ಮಾತು ಸಲ್ಲುತ್ತದೆ. ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯನಾದ ವ್ಯಕ್ತಿ ಅಥವಾ ಸಂದರ್ಭ, ಕೆಲವೊಮ್ಮೆ ಎರಡೂ, ಇದ್ದಕ್ಕಿದ್ದಂತೆ ಈ ನಗರದೊಂದಿಗೆ ಕನೆಕ್ಟ್ ಆಗುವುದು, ವ್ಯಕ್ತಿ ಅಥವಾ ಸಂದರ್ಭದ ಆರ್ಡಿನರಿ ಎನ್ನುವ ಗುಣವೇ ಅದರ ಮಾಯಕ ಆಚಕರ್ಷಣೆಯಾಗಿ ಬದಲಾಗುವುದು ಇಲ್ಲಿನ ವಿಸ್ಮಯ.

ನಿರೂಪಣೆಯಲ್ಲಿ ಈ ಸೀದಾ ಸಾದಾ ಆರ್ಡಿನರಿ ಗುಣವನ್ನು ಕಾಪಾಡಿಕೊಂಡೇ, ಇನ್ನೂ ಅದೊಂದರಿಂದಲೇ ನಿಭಾಯಿಸುವುದು ಸಾಧ್ಯವೇ ಇಲ್ಲ ಎನ್ನುವವರೆಗೂ ಅದನ್ನು ಚಲಾವಣೆಯಲ್ಲಿಟ್ಟು, ತದನಂತರ ಅನುವಾದವೇ ಓದುಗನನ್ನು ಪೊರೆಯಬೇಕೆನ್ನುವಂತೆ ಕೊಂಡೊಯ್ಯುವುದು ನನಗೊಂದು ಸವಾಲೇ ಆಗಿತ್ತು. ಎಲ್ಲಿ ರೂಪಕಗಳ ಮಾಯಕಜಾಲ ಕಥಾನಕದ ಒಡಲೊಳಗೆ ತೂರಿಕೊಂಡು ತನ್ನದೇ ಆದ ಮಾಂತ್ರಿಕ ಲೋಕವೊಂದನ್ನು ಕಟ್ಟುವುದಕ್ಕೆ ಸುರುವಿಟ್ಟುಕೊಳ್ಳುತ್ತದೋ ಆಗ ಬೇರೆ ಬೇರೆ ಪಾತ್ರಗಳ ಸಾಮಾನ್ಯತನವೇ ಅಪೂರ್ವ ಹೊಳಪಿನಿಂದ ಬೆಳಗುವುದು ಕಾಣುತ್ತೇವೆ. ಇದನ್ನು ನೀವು ಅನುವಾದದಲ್ಲಿ ತರಬೇಕಾದರೆ ಸೂಕ್ತವಾದ ಪದಗಳಿಗಾಗಿ ತಡಕಾಡಬೇಕಾಗುತ್ತದೆ.

ನಾನು ವೃತ್ತಿಪರ ಅನುವಾದಕಿಯೇನಲ್ಲ ಮತ್ತು ನಾನು ಹಾಗೆ ಅನುವಾದವನ್ನು ಕೈಗೆತ್ತಿಕೊಳ್ಳುವ ಪೈಕಿಯಲ್ಲ. ಯಾವುದು ನನಗೆ ನನ್ನದೇ ಎಂಬಂತೆ ದಕ್ಕುವುದೋ ಮತ್ತು ಯಾವುದರಲ್ಲಿ ನನಗೆ ನನ್ನನ್ನೇ ಕಂಡುಕೊಳ್ಳಲು ಸಾಧ್ಯವಾಗುತ್ತೋ ಅಂಥದ್ದನ್ನಷ್ಟೇ ನಾನು ಅನುವಾದಿಸಿಯೇನು. ಜಯಂತರ ಕತೆಗಳೊಂದಿಗೆ ನನಗೆ ಸದಾ ಅಂಥ ಒಂದು ತಾದಾತ್ಮé ಸಾಧ್ಯವಾಗಿತ್ತು. ಆ ಕತೆಗಳ ತಾಂತ್ರಿಕ ನೈಪುಣ್ಯಕ್ಕಾಗಿಯೂ, ಮುಂಬೈಯೊಂದಿಗೆ ಆ ಕತೆಗಳಿಗಿರುವ ನಂಟಿನಿಂದಾಗಿಯೂ ಅವುಗಳಲ್ಲಿ ನಾನು ನನ್ನನ್ನೇ ಕಾಣುತ್ತಿ¨ªೆ. 1970ರಷ್ಟು ಹಿಂದೆಯೇ ಅವರ ಕವಿತೆಗಳ ಅನುವಾದಕ್ಕೆ ತೊಡಗಿದಾಗಿನಿಂದಲೂ ನನಗೆ ಈ ಬಗೆಯ ತಾದಾತ್ಮé, ಅಂದರೆ ಸ್ವತಃ ಕವಿತೆ ಬರೆಯುವಾಗ ಸಾಧ್ಯವಾಗುವಂಥ ಒಂದು ತನ್ಮಯತೆ, ನನ್ನ ಅನುವಾದಕ್ಕೂ ಸಿದ್ಧಿಸಿದ್ದು ಗಮನಕ್ಕೆ ಬಂದಿತ್ತು. ಜಯಂತ್‌ ಮೂಲತಃ ಕವಿ, ಗದ್ಯಕ್ಕೆ ಹೊರಳಿದ ಕವಿ. ನುಡಿಕಟ್ಟು ಮತ್ತು ಆಕೃತಿ ಎರಡರಲ್ಲೂ ಆಧುನಿಕ ಕನ್ನಡ ಕಾವ್ಯ ತನ್ನದಾಗಿಸಿಕೊಂಡ ಗುಣವೇ ಅವರ ಕಥನದಲ್ಲೂ ಉಳಿದು ಬಂದಿರುವುದನ್ನು ನಾವು ಕಾಣಬಹುದು. ನನ್ನ ಅನುವಾದ ಇದನ್ನು ಕಾಪಿಟ್ಟುಕೊಂಡು ಬಂದಿದೆ ಎಂದು ಭಾವಿಸುತ್ತೇನೆ.  ಈ ಗದ್ಯಾನುವಾದದ ಉದ್ದಕ್ಕೂ ಕವಿತೆಗಳ ಅನುವಾದದ ಕಾಲದ ಒಂದು ಅನುಸಂಧಾನವೇನಿತ್ತು, ಅದು ಹೊಸ ಅನುವಾದದೊಂದಿಗೆ ನಿತ್ಯಸಂವಾದದಲ್ಲಿದ್ದು ಅದನ್ನು ಪೊರೆದಿದೆ.

ನಾವಿಬ್ಬರೂ ಸೇರಿಯೇ ಕತೆಗಳನ್ನು ಆಯ್ದೆವು, ಆದರೆ ನಾನು ನನ್ನ ಇಷ್ಟದ ಕತೆಗಳನ್ನು ಈ ಪಟ್ಟಿಗೆ ತರಲು ಯತ್ನಿಸುತ್ತಲೇ ಇ¨ªೆ. ಕೆಲವು ಅನುವಾದಿತ ಪ್ರಕಟಿತ ಕತೆಗಳನ್ನು ಕೂಡ ಮರು-ಅನುವಾದ ಮಾಡುವುದರ ಬಗ್ಗೆ ನಮ್ಮಲ್ಲಿ ಒಂದು ಚರ್ಚೆಯೂ ನಡೆಯಿತು. ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ ಮತ್ತು ಮೋಗ್ರಿಯ ಸತ್ಸಂಗ ಆ ಕತೆಗಳು. ಈ ಮೂರು ಕತೆಗಳಿಲ್ಲದ ಜಯಂತರ ಯಾವುದೇ ಆಯ್ದ ಕಥಾಸಂಕಲನವೊಂದನ್ನು ಕಲ್ಪಿಸುವುದು ಕೂಡ ಸಾಧ್ಯವಿಲ್ಲ. ಹಾಗಾಗಿ ಈ ಸಂಕಲನದ ಭಾಷೆ ಮತ್ತು ಶೈಲಿಯೊಂದಿಗೆ ಹೊಂದುವಂತೆ ಈ ಮೂರು ಕತೆಗಳನ್ನು ಕೂಡ ಮತ್ತೂಮ್ಮೆ ಅನುವಾದಿಸುವ ಸ್ವಾತಂತ್ರ್ಯವನ್ನು ನಾನು ತೆಗೆದುಕೊಂಡಿದ್ದೇನೆ. ಈ ಅನುವಾದವನ್ನು ಬೇರೆ ಬೇರೆ ಕಡೆಗಳಲ್ಲಿ ಕೂತು ಮಾಡಿದ್ದೇನೆ, ಹಲವನ್ನು ಮುಂಬಯಿಯÇÉೇ ಇದ್ದು ಮಾಡಿದ್ದೇನೆ. ಆಗಾಗ ಮುಂಬಯಿಗೆ ಹೋಗಿ ಬರುತ್ತ ಅಲ್ಲಿದ್ದು ಅನುವಾದ ಮಾಡುವುದರಲ್ಲಿ ಏನೋ ಒಂದು ಥ್ರಿಲ್‌ ಇತ್ತು. ಅಲ್ಲಿ ಲೋಕಲ್‌ ಟ್ರೈನಿನಲ್ಲಿ ಪ್ರಯಾಣಿಸುತ್ತ ಇದ್ದಕ್ಕಿದ್ದಂತೆ ಏನೋ ಹೊಳೆದು ಜಯಂತರಿಗೊಂದು ಎಸ್ಸೆಮ್ಮೆಸ್‌ ಮಾಡಿದರೆ ತಕ್ಷಣವೇ ಅವರಿಂದ ಪ್ರತ್ಯುತ್ತರ ಬರುತ್ತಿತ್ತು. ಫ್ಲೋರಾ ಫೌಂಟೇನಿನ ಬಳಿಯೋ, ಗೇಟ್‌ವೇ ಬಳಿಯೋ, ಒಪೆರಾಹೌಸ್‌ ಹತ್ತಿರವೋ, ತೀರ ಒಳಗೊಳಗಿನ ಗಲ್ಲಿಯೊಳಗೋ ಸುತ್ತುತ್ತಿದ್ದಾಗ ಜಯಂತರ ಪಾತ್ರಗಳ ಕಣ್ಣಿನಿಂದ ಅವೆಲ್ಲವನ್ನು ನೋಡುವಂತಾಗುತ್ತಿತ್ತು. 

ಸ್ವತಃ ಮುಂಬಯಿಗೆ ಹೊರಗಿನವಳಾಗಿದ್ದು ಜಯಂತರು ಹೊಂದಿರುವ ಅದೇ ಪ್ರೀತಿ ಮತ್ತು ಕೌತುಕ ಬರೆದ ದೃಷ್ಟಿಯಿಂದಲೇ ಅದನ್ನು ಕಾಣುವುದು ನನಗೂ ಸಾಧ್ಯವಾಗಿರಬೇಕು. ನಿರಂತರವಾಗಿ ಬಂದು ಹೋಗಿ ಮಾಡುವ ಈ ಮಂದಿ ಕೂಡ ವಲಸೆ ಹಕ್ಕಿಗಳೇ. ಈ ಕತೆಗಳೊಂದಿಗೆ ನನಗಿರುವ ಒಂದು ನಂಟಿಗೆ ಈ ಎಳೆಯೂ ಇದೆ. ಇಲ್ಲಿ ಬರುವ ಪಾತ್ರಗಳು ಕೂಡ ಮುಂಬಯಿ ಎಂಬ ಮಾಯಾನಗರಿಯಲ್ಲಿ ಅದು ಹೇಗೋ ಬಂದು ಸೇರಿಕೊಂಡ ಬಹುತೇಕ ಔಟ್‌ವರ್ಡ್‌ ಪಾತ್ರಗಳೇ. ಮಹಾನಗರಕ್ಕೆ ಇದು ನನ್ನ ಹುಟ್ಟೂರು ಎನ್ನುವ ಮಕ್ಕಳಿಲ್ಲ. ಆದರೂ ಅದು ತನ್ನ ಮಡಿಲಿಗೆ ಬಂದವರನ್ನೆಲ್ಲ ತಾಯಿಯಂತೆ ಸಂತೈಸುತ್ತದೆ! ಮೂಲ ಕೃತಿಕಾರ ಮತ್ತು ಅನುವಾದಕಿಯ ನಡುವಿನ ಒಂದು ಹೊರಗಿನವರಾಗಿದ್ದೂ ಒಳಗಿನವರಾದ, ಒಳಗಿದ್ದೂ ಹೊರಗಿನವರಾಗಿ ಉಳಿದ ಸಂಬಂಧದ ಬಂಧ ಈ ಅನುವಾದದ ಅನುಸಂಧಾನಕ್ಕೂ ನೆರವಾಗಿದೆ.

ತೇಜಸ್ವಿನಿ ನಿರಂಜನ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.