ಪಂಚತಂತ್ರ: ಎರಡು ತಲೆಯ ಹಕ್ಕಿ


Team Udayavani, Jan 19, 2020, 5:59 AM IST

meg-10

ಹಕ್ಕಿ ಒಂದು ರೂಪಕ, ಕಾವ್ಯ-ಶಾಸ್ತ್ರಗಳೆರಡರಲ್ಲಿಯೂ. ಮಾಂಡುಕ್ಯ ಉಪನಿಷತ್ತಿನಲ್ಲಿ ಎರಡು ಹಕ್ಕಿಗಳ ಕತೆ ಬರುತ್ತದೆ. ಒಂದು ಹಣ್ಣನ್ನು ತಿನ್ನುವ ಹಕ್ಕಿ, ಇನ್ನೊಂದು ಸುಮ್ಮನೆ ಅದನ್ನು ನೋಡುವ ಹಕ್ಕಿ. ದೇಹ-ಆತ್ಮಗಳ ಸಂಬಂಧಗಳ ಕುರಿತ ರೂಪಕಾತ್ಮಕ ಚಿತ್ರವಿದು. ಇದರ ಬಗ್ಗೆ ರವೀಂದ್ರನಾಥ ಠಾಕೂರ್‌, ಅರವಿಂದ ಘೋಷ್‌ ಮೊದಲಾದ ತಣ್ತೀಜ್ಞಾನಿಗಳು ವಿವಿಧ ಬಗೆಯ ವಿವರಣೆ ಕೊಟ್ಟಿದ್ದಾರೆ.

ಉಪನಿಷತ್ತಿನ ಕತೆಗೆ ಕಡಿಮೆ ಇಲ್ಲದಂತೆ ಪಂಚತಂತ್ರದಲ್ಲೊಂದು ಕತೆ ಬರುತ್ತದೆ. ಅದು ಎರಡು ತಲೆಯ ಹಕ್ಕಿಯ ಒಂದು ಕತೆ. ಎರಡು ತಲೆಯ ಹಕ್ಕಿಯೊಂದು ಮರದ ಮೇಲೆ ಕುಳಿತಿರುವಾಗ ನೀರಿನ ಮೇಲೆ ಹಣ್ಣೊಂದು ತೇಲುತ್ತಿರುವುದು ಕಾಣಿಸಿತು. ಹಣ್ಣೊಂದು ಅನಾಯಾಸವಾಗಿ ಸಿಗುವಾಗ ತಿನ್ನಬೇಕೆಂದು ಅನಿಸುವುದು ನಿಸರ್ಗ ಸಹಜ ಅಲ್ಲವೇ.

ಹಕ್ಕಿಯು ಹಾರಿ ಅದನ್ನು ಒಂದು ತಲೆಯ ಕೊಕ್ಕಿನಲ್ಲಿ ಕಚ್ಚಿಕೊಂಡಿತು. ಮರದಮೇಲೆ ಕುಳಿತು ಕೊಕ್ಕಿನಲ್ಲಿದ್ದ ಹಣ್ಣನ್ನು ತಿನ್ನಲಾರಂಭಿಸಿತು. ಆಗ ಎರಡನೆಯ ತಲೆಗೂ ಹಣ್ಣು ತಿನ್ನಬೇಕು ಎಂದು ಆಸೆಯಾಯಿತು. ತನಗೂ ಹಣ್ಣು ಕೊಡುವಂತೆ ಕೇಳಿತು. ಆಗ ಮೊದಲನೆಯ ತಲೆ, “”ಇದನ್ನು ನಾನು ಮೊದಲು ನೋಡಿದ್ದು. ಹಾಗಾಗಿ, ನಾನೇ ತಿನ್ನಲು ಯೋಗ್ಯ. ನಾನು ತಿಂದರೇನು, ನೀನು ತಿಂದರೇನು, ಸೇರುವುದು ಒಂದೇ ಹೊಟ್ಟೆಗೆ ತಾನೆ!” ಎಂದಿತು.

ಎರಡನೆಯ ತಲೆಗೆ ಮಾತು ಕಟ್ಟಿತು. ಬಾಯಿ ಚಪಲವನ್ನು ನಿಯಂತ್ರಿಸಿಕೊಂಡು ಸುಮ್ಮನಾಯಿತು.
ಮತ್ತೂಂದು ಸಲ ಇನ್ನೊಂದು ಹಣ್ಣು ನೀರಿನಲ್ಲಿ ತೇಲುತ್ತಿರುವುದು ಕಾಣಿಸಿತು. ಹಕ್ಕಿ ಅದನ್ನು ಎರಡನೆಯ ತಲೆಯಲ್ಲಿ ಎತ್ತಿಕೊಂಡು ಬಂದಿತು. ಆದರೆ, ಅದು ವಿಷಕಾರಿಯಾದ ಹಣ್ಣು. ಅದನ್ನು ಕುಕ್ಕಿ ತಿನ್ನುತ್ತಿರುವ ಎರಡನೆಯ ತಲೆಯನ್ನು ತಡೆದು ಮೊದಲನೆಯ ತಲೆ ಹೇಳಿತು, “”ಅದು ವಿಷಕಾರಿಯಾದ ಹಣ್ಣು. ತಿನ್ನಬೇಡ”
“”ಇದನ್ನು ಮೊದಲು ನೋಡಿದ್ದು ನಾನು. ಹಾಗಾಗಿ, ತಿನ್ನುವುದು ನಾನೇ. ತಿನ್ನಬಾರದು ಎನ್ನಲು ನೀನ್ಯಾರು?”
“”ಅಲ್ಲ… ಅದು ಸೇರುವುದು ಒಂದೇ ಹೊಟ್ಟೆಗಲ್ಲವೆ? ವಿಷ ಏರಿ ಸತ್ತರೆ?”
“”ಅದು ನನಗೆ ಗೊತ್ತಿಲ್ಲ. ನಾನು ತಿನ್ನುವುದು ತಿನ್ನುವುದೇ. ಈ ಹಿಂದೆ ಹಣ್ಣು ಕೊಡದೆ ನೀನೊಬ್ಬನೇ ತಿಂದಿದ್ದಿ. ಈಗ ನಾನು ತಿನ್ನುವಾಗ ನೀನು ಆಕ್ಷೇಪಿಸಬಾರದು” ಎಂದಿತು ಎರಡನೆಯ ತಲೆ.

“”ಬೇಡ, ಹಣ್ಣನ್ನು ತಿನ್ನಬೇಡ. ನೀನೊಬ್ಬನು ತಿಂದರೂ ನಾವಿಬ್ಬರೂ ಸಾಯುತ್ತೇವೆ” ಎಂದಿತು ಮೊದಲನೆಯ ತಲೆ.
ಆದರೆ ಹಣ್ಣು ತಿನ್ನುವ ಉತ್ಸಾಹದಲ್ಲಿ ಎರಡನೆಯ ತಲೆಗೆ ಯೋಚಿಸುವ ವ್ಯವಧಾನವೇ ಉಳಿದಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಮೊದಲನೆಯ ತಲೆ ತನಗೆ ಕೊಡದೇ ಹಣ್ಣು ತಿಂದಿತ್ತು.

“”ನೀನು ಆವತ್ತು ಮಾಡಿದ ತಪ್ಪಿಗೆ ಇವತ್ತು ಶಿಕ್ಷೆ ಅನುಭವಿಸಬೇಕು” ಎಂದದ್ದೇ ಎರಡನೆಯ ತಲೆ ಹಣ್ಣನ್ನು ಚಪ್ಪರಿಸಿಕೊಂಡು ತಿನ್ನಲು ಶುರು ಮಾಡಿತು.
ಹೊಟ್ಟೆಗೆ ಸೇರಿದ ಹಣ್ಣಿನಿಂದಾಗಿ ಹಕ್ಕಿಯ ದೇಹವಿಡೀ ವಿಷ ಆವರಿಸಿತು. ಕೆಟ್ಟ ವಿಚಾರಗಳಿಗೆ ಆ ತಲೆ, ಈ ತಲೆ ಎಂಬ ಭೇದವುಂಟೇ. ವಿಷವು ವ್ಯಾಪಿಸಲು ದೇಹದ ಆ ಭಾಗ ಈ ಭಾಗ ಎಂಬ ಭೇದವೂ ಇಲ್ಲ. ಹಕ್ಕಿಯೊಂದಿಗೆ ಎರಡೂ ತಲೆಗಳು ಸತ್ತು ಹೋದವು. ಕುಟುಂಬದ, ಸಮಾಜದ ಘಟಕಗಳು ಒಂದಕ್ಕೊಂದು ಪೂರಕವಾಗಿ ಇರಬೇಕೆಂಬುದನ್ನು ಸಾರುವ ಕತೆಯಿದು. ಒಬ್ಬರು ಹೇಳುವ ವಿಚಾರವನ್ನು ಮತ್ತೂಬ್ಬರು ತಾಳ್ಮೆಯಿಂದ ಆಲಿಸುವುದೇ ಒಳಿತಿನ ಲಕ್ಷಣ.

ಕೃಷ್ಣ

ಟಾಪ್ ನ್ಯೂಸ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Empowerment: ಬಾಳು ಬೆಳಗಿದ ಬಾಳೆ!

Empowerment: ಬಾಳು ಬೆಳಗಿದ ಬಾಳೆ!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.